ಗಡಿಯಲ್ಲಿ ಭಾರತ ಹಿಡಿತ

– ಪೂರ್ವ ಲಡಾಖ್ ಸಂಘರ್ಷದ ಮಧ್ಯೆ ಸೇತುವೆ ಪೂರ್ಣ – ಯುದ್ಧ ವಿಮಾನಗಳ ಹಾರಾಟ | ಚೀನಾಕ್ಕೆ ಪಾಠ ಕಲಿಸದೇ ಬಿಡಲ್ಲ: ಮೋದಿ ಲಡಾಖ್: ಪೂರ್ವ ಲಡಾಖ್‌ನಲ್ಲಿ ಚೀನಾ ಸೇನೆಯಿಂದ ಗಡಿ ಕ್ಯಾತೆ ಮುಂದುವರಿದಿರುವ ಮಧ್ಯೆಯೇ, ಭಾರತೀಯ ಸೇನೆಯ ಎಂಜಿನಿಯರಿಂಗ್ ವಿಭಾಗ ಸದ್ದಿಲ್ಲದೆ ಗಲ್ವಾನ್ ನದಿಗೆ 60 ಮೀಟರ್ ಉದ್ದನೆಯ ಸೇತುವೆ ನಿರ್ಮಾಣ ಕಾಮಗಾರಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಇದರೊಂದಿಗೆ ಈ ಸೂಕ್ಷ್ಮ ಪ್ರದೇಶದ ಮೇಲೆ ಭಾರತ ತನ್ನ ಹಿಡಿತವನ್ನು ಮತ್ತಷ್ಟು ಬಲಪಡಿಸಿದಂತಾಗಿದೆ. ಇದರ ಮಧ್ಯೆ ಭಾರತದ ಯುದ್ಧ […]

Read More

ಸ್ವತಂತ್ರ ಟಿಬೆಟನ್ನು ಕಬಳಿಸುವ ಚೀನಾ ಹುನ್ನಾರ

– ಹಿಮಾಲಯದ ದಳ್ಳುರಿ – ಭಾಗ 2  ‘‘ಅನ್ಯ ಜನತೆಯ ಮೇಲೆ ಯಾರೇ ಯುದ್ಧ ಸಾರಲಿ, ಹಾಗೆ ಮಾಡುವವರು ಅರೆ ಹುಚ್ಚರಾಗಿರುತ್ತಾರೆ’’- ಇದೊಂದು ಹಳೆಯ ಚೀನೀ ಗಾದೆ. ಆಕ್ರಮಣವೇ ರಾಷ್ಟ್ರೀಯ ಪ್ರವೃತ್ತಿಯಾದ ಒಂದು ದೇಶದಲ್ಲಿ ಅಂಥ ಗಾದೆ ಮಾತು ಹುಟ್ಟಿದ್ದೂ ಆಶ್ಚರ್ಯವೇ. ಈಗಿನ ಚೀನೀಯರಿಗಂತೂ ಅದರ ನೆನಪು ಕೂಡಾ ಇದ್ದಂತಿಲ್ಲ. ಈ ‘ಅರೆ-ಹುಚ್ಚರು’ 1950ರಲ್ಲಿ ಅನ್ಯರ ಮೇಲೆ ಯುದ್ಧ ಸಾರಿದರು. ತನ್ನ ಕಾಲು ಭಾಗದಷ್ಟು, ಸುಮಾರು ಪಶ್ಚಿಮ ಯೂರೋಪಿನಷ್ಟು ವಿಸ್ತಾರವುಳ್ಳ ಒಂದು ನೆರೆದೇಶದ ಕೇವಲ ಮೂವತ್ತು ಲಕ್ಷ […]

Read More

ಚೀನಾ ಗಡಿಯಲ್ಲಿ ಗುಂಡು ಹಾರಲಿಲ್ಲವೇಕೆ?

ನಲವತ್ತು ವರ್ಷಗಳಿಂದ ಈಚೆಗೆ ಗಲ್ವಾನ್‌ ಪ್ರಕರಣ ನಡೆಯುವವರೆಗೆ ಭಾರತ- ಚೀನಾ ಗಡಿಯಲ್ಲಿ ಒಂದೇ ಒಂದು ಗುಂಡು ಹಾರಿಲ್ಲ, ಒಬ್ಬನೇ ಒಬ್ಬ ಯೋಧ ಮೃತಪಟ್ಟಿಲ್ಲ. ಇದಕ್ಕೆ ಕಾರಣವಾಗಿರುವುದು ಮೂರು ಒಪ್ಪಂದಗಳು. ಚೀನಾ ಈಗ ಈ ಮೂರೂ ಒಪ್ಪಂದಗಳನ್ನು ಸಾರಾ ಸಗಟಾಗಿ ಉಲ್ಲಂಘಿಸಿದೆ. ಯಾವುವೀ ಮೂರು ಒಪ್ಪಂದ? 1993ರ ಒಪ್ಪಂದ ಭಾರತ ಹಾಗೂ ಚೀನಾದ ಗಡಿ ಭದ್ರತೆಯ ವಿಚಾರದಲ್ಲಿ ಮೊದಲ ಬಾರಿ ಏರ್ಪಟ್ಟ ಒಪ್ಪಂದ 1993ರದ್ದು. ಈ ಒಪ್ಪಂದಕ್ಕೆ ಸಹಿ ಹಾಕಿದವರು ಆಗಿನ ಭಾರತ ಪ್ರಧಾನಿ ಪಿ.ವಿ. ನರಸಿಂಹರಾವ್‌. ಇದಕ್ಕೂ […]

Read More

ಹಿಮಾಲಯದ ದಳ್ಳುರಿ

ಕನ್ನಡದ ಖ್ಯಾತ ಕಾದಂಬರಿಕಾರ ನಿರಂಜನ ಅವರು ಬರೆದ ‘ಹಿಮಾಲಯದ ದಳ್ಳುರಿ’ ಕೃತಿ ಭಾರತ ಮತ್ತು ಚೀನಾ ಸಂಘರ್ಷದ ಇತಿಹಾಸವನ್ನು ದಾಖಲಿಸಿರುವ ಒಂದು ಆಕರಗ್ರಂಥ. ಚೀನಾ ದೇಶ ಭಾರತದ ಮೇಲೆ ದುರಾಕ್ರಮಣ ನಡೆಸುತ್ತಿದ್ದ ಸಂದರ್ಭದಲ್ಲಿಯೇ (1962ರ ನವೆಂಬರ್‌ 15) ಈ ಪುಸ್ತಕ ಪ್ರಕಟವಾಗಿತ್ತು. ವಿಜಯ ಕರ್ನಾಟಕಕ್ಕಾಗಿ ಇದರ ಸಂಗ್ರಹ ನಿರೂಪಣೆ ಸುಧೀಂದ್ರ ಹಾಲ್ದೊಡ್ಡೇರಿ. – ನಿರಂಜನ ಹತ್ತೊಂಬತ್ತನೆಯ ಶತಮಾನದಲ್ಲಿ ಭಾರತವನ್ನು ಬ್ರಿಟಿಷರು ಆಕ್ರಮಿಸಿದಾಗ, ಕಾಶ್ಮೀರದಿಂದ ಬರ್ಮಾದವರೆಗೂ ತಮ್ಮ ಗಡಿಯನ್ನು ಅವರು ಭದ್ರಗೊಳಿಸಿದರು. ಲಡಾಖ್‌ ಪ್ರದೇಶದಲ್ಲಿ ಆ ಮೊದಲೇ ಗಡಿಯ […]

Read More

ಗಲ್ವಾನ್‌ ಸೇಡಿಗೆ ಭಾರತ ಬಲವಾನ್

ಈಗ ಎಲ್ಲರ ಮನದಲ್ಲಿ ಇರೋ ಪ್ರಶ್ನೆ ಎರಡೇ- ಮುಂದೇನು? ಈಗ ಯಾಕೆ ಈ ಸಂಘರ್ಷ ನಡೆಯಿತು? ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನವನ್ನು ವಿದೇಶಾಂಗ ತಜ್ಞರು ಮಾಡುತ್ತಿದ್ದಾರೆ. ಅಣ್ವಸ್ತ್ರ ಹೊಂದಿರುವ ಎರಡು ಪ್ರಬಲ ರಾಷ್ಟ್ರಗಳು ಹೀಗೆ ಅನಪೇಕ್ಷಿತ ಸಂದರ್ಭದಲ್ಲಿ ಕಾದಾಟಕ್ಕಿಳಿದಿರುವುದು ದಿಗಿಲಿಗೆ ಕಾರಣವಾಗಿದೆ. ಆದರೆ, ಚೀನಾದಲ್ಲಿ ಕೋವಿಡ್‌ 19 ವೈರಸ್‌ ಪತ್ತೆಯಾದ ನಂತರ ಚೀನಾದ ನಡವಳಿಕೆಯನ್ನು ವಿಶ್ಲೇಷಿಸಿದರೆ ನಮ್ಮೆಲ್ಲ ಅನುಮಾನಗಳಿಗೆ ಪರಿಹಾರ ದೊರೆಯಬಹುದು. ಕಳೆದ ಕೆಲವು ತಿಂಗಳಿಂದ ಅನೇಕ ಆಕ್ರಮಣಕಾರಿ ನಡೆಗಳನ್ನು ಚೀನಾ ಪ್ರದರ್ಶಿಸಿದೆ. ಹಾಂಕಾಂಗ್‌ನಲ್ಲಿ ಅಸ್ತಿತ್ವದಲ್ಲಿದ್ದ […]

Read More

ಯೋಧರ ಬಲಿದಾನಕ್ಕೆ ಪ್ರತೀಕಾರ

– ಭಾರತ ಶಾಂತಿ ಪ್ರಿಯ, ಆದರೆ ಕೆದಕಿದರೆ ಸಹಿಸಲ್ಲ – ಚೀನಾಗೆ ಪ್ರಧಾನಿ ಮೋದಿ ಖಡಕ್‌ ವಾರ್ನಿಂಗ್‌ – ತನ್ನ ಯೋಧರ ಸಾವಿನ ಸಂಖ್ಯೆ ಮುಚ್ಚಿಡುತ್ತಿರುವ ಡ್ರ್ಯಾಗನ್‌ ಹೊಸದಿಲ್ಲಿ: ಲಡಾಖ್‌ ಗಡಿಯಲ್ಲಿ ಹುತಾತ್ಮರಾದ ಭಾರತೀಯ ಯೋಧರ ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ. ಭಾರತ ಶಾಂತಿ ಪ್ರಿಯ ದೇಶ ನಿಜ. ಆದರೆ ಪ್ರಚೋದಿಸಿದರೆ ಮುಟ್ಟಿ ನೋಡಿಕೊಳ್ಳುವಂತೆ ದಿಟ್ಟ ಉತ್ತರ ನೀಡುವ ಸಾಮರ್ಥ್ಯ‌ ನಮಗಿದೆ. ಅದು ಎಂಥದ್ದೇ ಸಂದರ್ಭವಾದರೂ ಸರಿ. ಈ ವಿಚಾರದಲ್ಲಿ ಯಾರಿಗೂ ಅನುಮಾನ ಬೇಡ… ಇದು ಯುದ್ಧೋನ್ಮಾದಿ ಚೀನಾಗೆ […]

Read More

ನೀಚ ತಂತ್ರದ ಮೊರೆ ಹೋದ ಚೀನಾ

– ಗುಂಡೇಟಿನ ಬದಲು ಕಲ್ಲೇಟಿನ ತಂತ್ರ ಬಳಕೆ | ದೊಣ್ಣೆ, ತಂತಿಗಳಿಂದ ಸುತ್ತಿದ ಬಾಲ್ ಸಹ ಚೀನೀಯರ ಅಸ್ತ್ರ! ಹೊಸದಿಲ್ಲಿ: ಚೀನಾ ಸೇನೆ ಇತ್ತೀಚಿನ ದಿನಗಳಲ್ಲಿ ಭಾರತೀಯ ಪಡೆಗಳ ಮೇಲೆ ಆಕ್ರಮಣ ನಡೆಸಲು ನೈತಿಕತೆ ಮರೆತು ಉಗ್ರರಂತೆ ಕೀಳುಮಟ್ಟದ ತಂತ್ರಗಾರಿಕೆಗಳನ್ನು ಬಳಸುತ್ತಿದೆ. ಕಳೆದ ತಿಂಗಳು ಸಿಕ್ಕಿಂ ಗಡಿಯಲ್ಲಿ ಉಭಯ ದೇಶಗಳ ಸೈನಿಕರ ನಡುವೆ ಮಾರಾಮಾರಿಯಾದಾಗಲೂ ಕಲ್ಲು, ದೊಣ್ಣೆಗಳನ್ನು ಬಳಸಲಾಗಿತ್ತು. ಸೋಮವಾರ ರಾತ್ರಿ ಗಲ್ವಾನ್ ಕಣಿವೆಯಲ್ಲಿ ನಡೆದ ಸಂಘರ್ಷದಲ್ಲಿಯೂ ಒಂದೇ ಒಂದು ಗುಂಡು ಹಾರಿಲ್ಲ. ಬದಲಿಗೆ ಕಲ್ಲು ತೂರಾಟ […]

Read More

ದುಷ್ಟ ಚೀನಾಗೆ ತಿರುಗೇಟು

– ಭಾರತ-ಚೀನಾ ಗಡಿಯಲ್ಲಿ ಯೋಧರ ಸಂಘರ್ಷ – ಕರ್ನಲ್ ಸಹಿತ 20 ಯೋಧರು ಹುತಾತ್ಮ – ಯುದ್ಧೋನ್ಮಾದಕ್ಕೆ ಭಾರತ ದಿಟ್ಟ ಉತ್ತರ, ಚೀನಾದ 43 ಸೈನಿಕರೂ ಬಲಿ – ಡ್ರ್ಯಾಗನ್ ವಿರುದ್ಧ ದೇಶಾದ್ಯಂತ ಜನಾಕ್ರೋಶ ಹೊಸದಿಲ್ಲಿ: ಭಾರತ-ಚೀನಾ ಗಡಿಯಲ್ಲಿ ಸಂಘರ್ಷ ತಾರಕಕ್ಕೇರಿದೆ. ಪೂರ್ವ ಲಡಾಖ್‌ನ ಗಲ್ವಾನ್ ಕಣಿವೆ ಗಡಿಯಲ್ಲಿ ಸೋಮವಾರ ರಾತ್ರಿ ಉಭಯ ದೇಶಗಳ ಯೋಧರ ನಡುವೆ ನಡೆದ ಘರ್ಷಣೆಯಲ್ಲಿ ಭಾರತದ ಕರ್ನಲ್ ಸಮೇತ 20 ಯೋಧರು ಹುತಾತ್ಮರಾಗಿದ್ದಾರೆ ಎಂದು ಸೇನೆ ತಿಳಿಸಿದೆ. ಘರ್ಷಣೆಯಲ್ಲಿ ಸ್ಥಳದಲ್ಲೇ ಮೂವರು […]

Read More

ಚೀನಾವನ್ನು ಕಟ್ಟಿ ಹಾಕೋಣ – ಆರ್ಥಿಕ, ರಾಜತಾಂತ್ರಿಕ ಮಾರ್ಗವೇ ಸೂಕ್ತ

ಐದು ವಾರಗಳಿಂದ ಪೂರ್ವ ಲಡಾಖ್ ಗಡಿಯಲ್ಲಿ ನಿಂತಿದ್ದ ಭಾರತ ಮತ್ತು ಚೀನಾ ಸೇನಾಪಡೆಗಳು ಹಿಂದೆ ಸರಿಯುತ್ತಿದ್ದ ಹೊತ್ತಿನಲ್ಲಿಯೇ ಸಂಘರ್ಷ ಭುಗಿಲೆದ್ದಿದ್ದು, ಕರ್ನಲ್ ಸೇರಿದಂತೆ 20 ಯೋಧರು ಹುತಾತ್ಮರಾಗಿದ್ದಾರೆ ಎಂದು ಹೇಳಲಾಗಿದೆ. ಗಡಿ ಸಂಘರ್ಷ ಶಮನಗೊಳಿಸಲು ರಾಜತಾಂತ್ರಿಕ ಮತ್ತು ಸೇನಾಧಿಕಾರಿಗಳ ಮಟ್ಟದಲ್ಲಿ ಮಾತುಕತೆ ನಡೆಯುತ್ತಿದ್ದ ಸಂದರ್ಭದಲ್ಲಿಯೇ ಮತ್ತೆ ಉದ್ವಿಗ್ನತೆ ತಲೆದೋರಿರುವುದು ಗಡಿ ಬಿಕ್ಕಟ್ಟನ್ನು ಮತ್ತಷ್ಟು ಜಟಿಲಗೊಳಿಸಿದೆ. ಚೀನಾ ಭಾರತದ ಜೊತೆಗೆ ಗಡಿಯ ವಿಚಾರದಲ್ಲಿ ನಿತ್ಯ ರಂಪಾಟ ಮಾಡಿಕೊಂಡೇ ಬರುತ್ತಿದೆ. ಜೊತೆಗೆ, ಪಾಕಿಸ್ತಾನ ಮತ್ತು ನೇಪಾಳದಂಥ ರಾಷ್ಟ್ರಗಳನ್ನೂ ಭಾರತದ ವಿರುದ್ಧ […]

Read More

ಆರ್ಥಿಕ ಸ್ವಾವಲಂಬನೆಗೆ ಸ್ವದೇಶಿ ಮಂತ್ರ

– ಎನ್‌.ರವಿಕುಮಾರ್‌. ಇಂದು ದೇಶಗಳ ಮಧ್ಯೆ ನಡೆಯುತ್ತಿರುವುದು ಆರ್ಥಿಕ ಯುದ್ಧ. ಭಾರತ ಮತ್ತು ಚೀನಾ ದೇಶಗಳ ಮಧ್ಯೆ ನಡೆಯುತ್ತಿರುವುದು ಕೂಡ ಭೌಗೋಳಿಕ ಯುದ್ಧವಲ್ಲ; ಈ ಆರ್ಥಿಕ ಯುದ್ಧವೇ. ಚೀನಾ ಮೌನವಾಗಿ ನಡೆಸಿರುವ ಆರ್ಥಿಕ ಅಕ್ರಮಣ ನಮ್ಮ ಜನರ ಗಮನಕ್ಕೆ ಬರುತ್ತಿಲ್ಲ. ಭಾರತದಂತೆ ಚೀನಾ ಕೂಡ ಕೃಷಿ ಪ್ರಧಾನವಾಗಿತ್ತು. 70ರ ದಶಕದ ನಂತರ ಅದು ಉತ್ಪಾದನಾ ಶಕ್ತಿಯಾಗಿ ಬದಲಾವಣೆಯಾಯಿತು. ಇಂದು ಜಗತ್ತಿನ ಆರ್ಥಿಕ ಶಕ್ತಿ ಅಮೆರಿಕ ನಂತರ ಸ್ಥಾನ ಚೀನಾದ್ದು. ಇಂದು ಚೀನಾದ ಜಿಡಿಪಿ ಭಾರತದ 3ರಷ್ಟಿದೆ. ಚೀನಾದ […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top