ಮೇ 3 ಹತ್ತಿರ ಬರುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ಈ ಮೊದಲು ಹೇಳಿದಂತೆ ನಮ್ಮ ಲಾಕ್ಡೌನ್ ಅಂದು ಕೊನೆಗೊಳ್ಳಬೇಕು. ಆದರೆ ನಾವು ಲಾಕ್ಡೌನ್ ತೆರವಿಗೆ ಸಂಪೂರ್ಣ ಸಜ್ಜಾಗಿದ್ದೇವಾ? ಮೇ 3ರಂದು ಲಾಕ್ಡೌನ್ ಭಾಗಶಃ ತೆರವಾಗಬಹುದು ಎಂದೇ ಎಲ್ಲರ ನಂಬಿಕೆ. ಶಾಲೆಗಳು, ಕಾಲೇಜುಗಳು ಕಾರ್ಯಾರಂಭಿಸಬಹುದು. ಆದರೆ ಬಾರ್ಗಳು, ಮಾಲ್ಗಳು, ಥಿಯೇಟರ್ಗಳು ಓಪನ್ ಆಗಲಿಕ್ಕಿಲ್ಲ. ಬಹಳ ಬೇಗನೆ ಲಾಕ್ಡೌನ್ ತೆರವು ಮಾಡಿದರೆ ಅದರ ಪರಿಣಾಮ ಸೋಂಕು ಅಧಿಕಗೊಂಡು ಸಾವಿರಾರು ಮಂದಿ ಸಾಯಬಹುದು. ಬಹಳ ತಡವಾಗಿ ತೆರವು ಮಾಡಿದರೂ ಆರ್ಥಿಕತೆಗೆ ಹೆಚ್ಚಿನ […]
Read More
ಅಮೆರಿಕ, ಜಪಾನ್ ಸೇರಿ ಅನೇಕ ರಾಷ್ಟ್ರಗಳು ಚೀನಾದ ಅವಲಂಬನೆಯನ್ನು ಗಣನೀಯವಾಗಿ ಕಡಿತಗೊಳಿಸಲು ನಿರ್ಧರಿಸಿವೆ. ಕೋವಿಡ್-19 ಬಿಕ್ಕಟ್ಟು ಚೀನಾಗೆ ದುಬಾರಿಯಾಗಿ ಪರಿಣಮಿಸುವ ನಿರೀಕ್ಷೆ ಇದೆ. ಇಂಥ ಸನ್ನಿವೇಶದಲ್ಲಿ ಚೀನಾಕ್ಕೆ ಪರ್ಯಾಯವಾಗಿ ಭಾರತ ಹೊಸ ಅವಕಾಶಗಳನ್ನು ತನ್ನದಾಗಿಸಿಕೊಂಡು, ಗಣನೀಯ ಬೆಳವಣಿಗೆಯನ್ನು ಸಾಧಿಸುವ ನಿರೀಕ್ಷೆ ಇದೆ. ವಿಶ್ವದ ಬಹುತೇಕ ರಾಷ್ಟ್ರಗಳು ಚೀನಾವನ್ನು ‘ಜಗತ್ತಿನ ಉತ್ಪಾದನೆಯ ಕಾರ್ಖಾನೆ’ ಎಂದು ಸಂತಸದಿಂದ ಕರೆಯುತ್ತಿತ್ತು. ನಾನಾ ರಾಷ್ಟ್ರಗಳು ಚೀನಾದ ಅಗ್ಗದ ಮಾಲುಗಳಿಂದ ಸಂಸ್ಕರಿತ, ಉತ್ತಮ ದರ್ಜೆಯ ಪ್ರಾಡಕ್ಟ್ಗಳ ತನಕ ಎಲ್ಲವನ್ನೂ ಸ್ವೀಕರಿಸುತ್ತಿತ್ತು. ವ್ಯಾಪಾರದ ಮೂಲಕ ಚೀನಾ […]
Read More
ಒಂದು ಕಡೆ ಹೊರಗೆ ಬಂದರೆ ಕೊರೊನಾ ವೈರಸ್ನ ಭಯ. ಇನ್ನೊಂದು ಮನೆಯೊಳಗೇ ಇದ್ದರೂ ಆನ್ಲೈನ್ನಲ್ಲಿ ವಂಚಕರ ಸುಲಿಗೆಗೆ ತುತ್ತಾಗುವ ಆತಂಕ. ಇದು ಪ್ರಜೆಗಳ ಸದ್ಯದ ಸ್ಥಿತಿ! ಚೀನಾ ಮೂಲದ ‘ಜೂಮ್’ ಎಂಬ ಆ್ಯಪ್ ಅನ್ನು ಬಳಸುವವರು ಅದನ್ನು ಕೈಬಿಡುವುದು ಅಥವಾ ಹುಷಾರಾಗಿರುವುದು ಅಗತ್ಯ ಎಂದು ಕೇಂದ್ರ ಸರಕಾರ ಸೂಚಿಸಿದೆ. ಜೂಮ್ನ ಹಲವು ಭಾರತೀಯ ಬಳಕೆದಾರರ ಪಾಸ್ವರ್ಡ್ಗಳು ಹ್ಯಾಕ್ ಆಗಿರುವುದು ಹಾಗೂ ಕಾನ್ಫರೆನ್ಸ್ ಕರೆಯ ನಡುವೆ ಹ್ಯಾಕ್ ಆಗಿರುವುದು ಕಂಡುಬಂದ ನಂತರ ಸರಕಾರದ ಈ ಸೂಚನೆ ಬಂದಿದೆ. ಜೂಮ್ನ […]
Read More
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಘೋಷಿಸಿದ ಮೂರು ವಾರಗಳ ಲಾಕ್ಡೌನ್ ಅನ್ನು ಭಾರತ ಮುಗಿಸಿದೆ. ಮೇ 3ರವರೆಗೆ ಮತ್ತೆ ವಿಸ್ತರಿಸಲಾಗಿದೆ. ಈ ನಡುವೆ, ಲಾಕ್ಡೌನ್ನಿಂದ ಭಾರತಕ್ಕೆ ಆದ ಪ್ರಯೋಜನ ಏನು? ಲಾಕ್ಡೌನ್ ಮಾಡದಿದ್ದರೆ ಏನಾಗುತ್ತಿತ್ತು? ಮೂರು ವಾರಗಳಿಂದ ಲಾಕ್ಡೌನ್ ಅನುಭವಿಸುತ್ತಿರುವ ಭಾರತ ಮತ್ತೂ ಹದಿನೆಂಟು ದಿನಗಳ ಲಾಕ್ಡೌನ್ಗೆ ಒಳಪಟ್ಟಿದೆ. ಈ ಅವಧಿಯಲ್ಲಿ, ಹೊಸ ಕೋವಿಡ್-19 ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ. ಕೇರಳ ಕೊರೊನಾ ವೈರಸ್ನ್ನು ತಡೆಗಟ್ಟುವುದು ಹೇಗೆ ಎಂಬುದಕ್ಕೆ ಮಾದರಿಯಾಗಿ ಕಾರ್ಯ ನಿರ್ವಹಿಸಿದೆ. ಮಧ್ಯಪ್ರದೇಶ, ಮಹಾರಾಷ್ಟ್ರಗಳಲ್ಲಿ ಲಾಕ್ಡೌನ್ […]
Read More
– ಸುಧೀಂದ್ರ ಹಾಲ್ದೊಡ್ಡೇರಿ ವೈರಸ್ಗಳಿಗೆ ಯಾವುದೇ ಜಾತಿ, ಮತ, ಪಂಥ, ದೇಶ, ಭಾಷೆಗಳ ಹಂಗಿರುವುದಿಲ್ಲ. ಅಂತೆಯೇ ಬಡವ, ಧನಿಕನೆಂಬ ಭೇದ-ಭಾವವೂ ಇಲ್ಲ. ತಾವು ಹೊಕ್ಕ ಜೀವಿ ಗಂಡೋ ಹೆಣ್ಣೋ ಎಂದು ಗುರುತಿಸುವ ಶಕ್ತಿ ಇಲ್ಲ. ಹಾಗಿದ್ದ ಮೇಲೆ ನಮ್ಮ ದೇಶಕ್ಕಿಂತಲೂ ಹೆಚ್ಚಿನ ಸುಶಿಕ್ಷಿತ ಮಂದಿ ಇರುವ, ನಮಗಿಂತಲೂ (ಬಹುಶಃ) ಪೌಷ್ಟಿಕ ಆಹಾರ ಸೇವಿಸುವ, ಒಳ್ಳೆಯ ಆರೋಗ್ಯ ವ್ಯವಸ್ಥೆ ಇರುವ ದೇಶಗಳೇಕೆ ಕೊರೋನಾ ವೈರಸ್ಗಳ ಹೊಡೆತಕ್ಕೆ ನಮಗಿಂತಲೂ ಹೆಚ್ಚು ನಲುಗುತ್ತಿವೆ ಎಂಬ ಪ್ರಶ್ನೆ ನಮ್ಮೆಲ್ಲರನ್ನೂ ಕಾಡುವುದು ಸಹಜ. ಒಟ್ಟಾರೆ […]
Read More
ಭಾರತವೂ ಸೇರಿದಂತೆ ಹೆಚ್ಚಿನ ಎಲ್ಲ ದೇಶಗಳು ತಮ್ಮ ಪ್ರಜೆಗಳಲ್ಲಿ ಕೋವಿಡ್ ಸೋಂಕಿತರ ಮೇಲೆ ನಿಗಾ ಇಡಲು ಹಾಗೂ ಸೋಂಕು ಶಂಕಿತರನ್ನು ಪತ್ತೆ ಹಚ್ಚಲು ನಾನಾ ನಿಗಾ ವ್ಯವಸ್ಥೆಗಳನ್ನು ರೂಪಿಸಿಕೊಂಡಿವೆ. ಅಂಥ ನಿಗಾ ವ್ಯವಸ್ಥೆಗಳ ಮೇಲೊಂದು ನೋಟ ಇಲ್ಲಿದೆ. ಕರ್ನಾಟಕ ಸರಕಾರದ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಅವರು ಮೊನ್ನೆ ಒಂದು ಡ್ಯಾಶ್ಬೋರ್ಡ್ ಬಿಡುಗಡೆ ಮಾಡಿದರು. ಇದರ ಕೆಲಸ, ರಾಜ್ಯದಾದ್ಯಂತ ಇರುವ ಕೋವಿಡ್ ಸೊಂಕಿತರು, ಶಂಕಿತರು ಹಾಗೂ ಚಿಕಿತ್ಸೆ ಕುರಿತ ಪೂರ್ಣ ವಿವರ ನೀಡುವುದು. ಇದರ ಜೊತೆಗೆ, ಕೊರೊನಾ […]
Read More
– ಮುಂದುವರಿದ ಕೊರೊನಾ ಸೋಂಕು, ಸಾವಿನ ಸರಣಿ ಅರ್ಥ ವ್ಯವಸ್ಥೆಗೇ ಆಪತ್ತು – ಉದ್ಯೋಗ ನಷ್ಟ ಇಲ್ಲವೇ ಸಂಬಳ ಕಡಿತ ಸಾಧ್ಯತೆ – ಬಡ ಮತ್ತು ಮಧ್ಯಮ ವರ್ಗದ ಜನರ ಜೀವನ ನಿರ್ವಹಣೆಗೆ ಎದುರಾಗಲಿದೆ ಸವಾಲು – ಕಠಿಣ ಬಜೆಟ್ ಸೂತ್ರವೇ ಸದ್ಯಕ್ಕಿರುವ ದಾರಿ – ಎ ಕೃಷ್ಣ ಭಟ್, ಬೆಂಗಳೂರು ಮಹಾಮಾರಿ ಕೊರೊನಾದ ಹೊಡೆತಕ್ಕೆ ಇಡೀ ಜಗತ್ತೇ ತತ್ತರಿಸಿದೆ. ಕೊರೊನಾ ಕೇವಲ ಆರೋಗ್ಯ ಸಮಸ್ಯೆಯಲ್ಲ. ಅರ್ಥ ವ್ಯವಸ್ಥೆಯನ್ನು ಬುಡಮೇಲುಗೊಳಿಸಿರುವ ಈ ರೋಗ ಸಾಮಾಜಿಕವಾಗಿಯೂ ಹಲವು ಸವಾಲುಗಳನ್ನು […]
Read More
ಚೀನಾದ ಕೊರೊನಾ ಹೀರೊ - ಕೇಶವ ಪ್ರಸಾದ್ ಬಿ ಚೀನಾದ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಕಳೆದ ಫೆಬ್ರವರಿಯಲ್ಲಿ ಕೊರೊನಾ ವೈರಸ್ ವಿರುದ್ಧ ಹೋರಾಟದಲ್ಲಿ ತಮ್ಮನ್ನು ತಾವೇ ‘‘ಸುಪ್ರೀಂ ಕಮಾಂಡರ್’’ ಎಂದು ಬೆನ್ನು ತಟ್ಟಿಕೊಂಡಿದ್ದರು. ಆದರೆ ನಿಜಕ್ಕೂ ಅಲ್ಲಿನ ಜನರ ಮನಗೆದ್ದ ಸಮರ ಸೇನಾನಿ ಅವರಲ್ಲ, ಬದಲಿಗೆ 83 ವರ್ಷದ ವೈದ್ಯ ಜಾಂಗ್ ನಾನ್ಶಾನ್! ಇದಕ್ಕೆ ಕಾರಣಗಳೂ ಹಲವು. ಅವರು ಕೇವಲ ಹಿರಿಯ ವೈದ್ಯರಲ್ಲ, ಜ್ಞಾನ ವೃದ್ಧ, ಸತ್ಯನಿಷ್ಠ ಎಂಬ ಮಾತಿದೆ. ಜತೆಗೆ ಚೀನಾದ ನ್ಯಾಶನಲ್ ಪೀಪಲ್ಸ್ ಕಾಂಗ್ರೆಸ್ನ […]
Read More
ಕಣ್ಣಿಗೆ ಕಾಣದ ಶತ್ರುವಿನ ಮುಂದೆ ಸಂಘಟಿತ ಭಾರತೀಯ ಎಲ್ಲರಿಗಿಂತ ಮೊದಲು ಎಚ್ಚೆತ್ತುಕೊಂಡ ಭಾರತದ ಲಾಕ್ಡೌನ್ ನಿರ್ಧಾರ ಮೆಚ್ಚುಗೆ ಪಡೆದಿದೆ ಕೊರೊನಾ ಎಂಬ ಮಾರಕ ಸೋಂಕು ಜನರ ಜೀವವನ್ನೇ ಹಿಂಡಿ ಹಿಪ್ಪೆ ಮಾಡುತ್ತಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಈಗ ನಾವು ಪಾಲಿಸುತ್ತಿರುವ ಸಾಮಾಜಿಕ ಅಂತರ, ಸ್ವಚ್ಛತೆಯ ಶಿಸ್ತು, ಅನಿವಾರ್ಯ ಮನೆವಾಸ, ಏಕಾಂಗಿತನ (ಕ್ವಾರಂಟೈನ್)- ಈ ಎಲ್ಲವೂ ನಿಶ್ಚಿತವಾಗಿ ನಮಗೊಂದು ದೊಡ್ಡ ಪಾಠವಾಗಲಿದೆ. ಇದು ನಮ್ಮ ಜೀವನ ಕ್ರಮ ಮತ್ತು ಆಲೋಚನಾ ವಿಧಾನದಲ್ಲಿ ಅಗಾಧ ಬದಲಾವಣೆ ತರಬೇಕಿದೆ. ಆಗ ಮಾತ್ರ […]
Read More
ತನ್ನ ಸಾಮ್ರಾಜ್ಯವಾದ ವಿಸ್ತರಣೆಗೆ ಭಾರತವೇ ದೊಡ್ಡ ಅಡ್ಡಿ ಎಂಬುದು ಚೀನಾದ ಅಸಮಾಧಾನ. ಹೀಗಾಗಿ ಲಭ್ಯ ವೇದಿಕೆಗಳನ್ನೆಲ್ಲ ಬಳಸಿಕೊಂಡು ಭಾರತಕ್ಕೆ ತಲೆನೋವು ತರುವುದು ಅದರ ಕಾರ್ಯತಂತ್ರ. ಆದರೆ ಭಾರತ ಬದಲಾಗಿದೆ ಎಂಬ ಸ್ಪಷ್ಟ ಸಂದೇಶ ಡೋಕ್ಲಂ ಬಿಕ್ಕಟ್ಟಿನ ಸಂದರ್ಭದಲ್ಲಿ ರವಾನೆಯಾಗಿದೆ. ಇನ್ನೇನು ಭಾರತದ ಮೇಲೆ ಚೀನಾ ಯುದ್ಧ ನಡೆಸಿಯೇಬಿಟ್ಟಿತು ಎಂಬ ಸ್ಥಿತಿ ನಿರ್ಮಾಣ ಆದಾಗಲೂ ಪ್ರಧಾನಿ ನರೇಂದ್ರ ಮೋದಿ ಯಾಕೆ ಮೌನ ಮುರಿಯಲಿಲ್ಲ? ಚೀನಾದ ಸತತ ತರ್ಲೆಗಳಿಗೆ ಬಹಿರಂಗ ಉತ್ತರ ಕೊಡುವುದಕ್ಕೆ ಅವರೇಕೆ ಮುಂದಾಗಲಿಲ್ಲ ಎಂಬ ಪ್ರಶ್ನೆಗಳಿಗೆ ಈಗ […]
Read More