ಒಂದೆಡೆ ರಾಜಧಾನಿ ದಿಲ್ಲಿಯ ರಾಜಬೀದಿಗಳಲ್ಲಿ ರೈತ ಪ್ರತಿಭಟನೆಗಳು ಜೋರಾಗಿ ನಡೆಯುತ್ತಿದ್ದರೆ, ಅದರ ಬೆನ್ನಲ್ಲೇ ರೈತ ಹೋರಾಟವನ್ನು ಬೆಂಬಲಿಸುವ ಮತ್ತು ಇಡೀ ಹೋರಾಟವನ್ನೇ ಗೇಲಿ ಮಾಡುವ ಪರ ವಿರೋಧದ ಬೌದ್ಧಿಕ (?) ಸಮರ ಎಂದಿನಂತೆ ಸಾಮಾಜಿಕ ಜಾಲತಾಣದಲ್ಲಿ ತೀವ್ರಗೊಂಡಿದೆ. ಎಫ್ಬಿ, ಟ್ವಿಟರ್, ವಾಟ್ಸ್ಯಾಪ್ಗಳಲ್ಲಿ ಹರಿದಾಡುತ್ತಿರುವ ಮೀಡಿಯಾ ಪೋಸ್ಟ್ಗಳು ಹಾಗೂ ವಿಡಿಯೋಗಳು ಕೂಡ ರೈತ ಚಳವಳಿಯಷ್ಟೇ ಪ್ರಮುಖವಾಗಿ ಗಮನ ಸೆಳೆಯುತ್ತಿವೆ. ಅಂತಹ ಕೆಲ ಉದಾಹರಣೆಗಳನ್ನು ಮೊದಲು ಗಮನಿಸೋಣ. ಉದಾಹರಣೆ ಒಂದು: ದಿಲ್ಲಿ ರೈತ ಪ್ರತಿಭಟನೆ ವೇಳೆ ಪಿಎಫ್ಐ ಕಾರ್ಯಕರ್ತನೊಬ್ಬ ಸಿಖ್ […]
Read More
ಭಾರತದ ಬ್ಯಾಂಕಿಂಗ್ ವಲಯದಲ್ಲಿ ಏನು ನಡೆಯುತ್ತಿದೆ? ಬ್ಯಾಂಕಿಂಗ್ ವಿಷಯದಲ್ಲಿ ಕನಿಷ್ಠ ತಿಳಿವಳಿಕೆ ಉಳ್ಳವರೆಲ್ಲರೂ ಕೇಳಿಕೊಳ್ಳುತ್ತಿರುವ ಅಚ್ಚರಿಯ ಪ್ರಶ್ನೆ ಇದು. ಅದರಲ್ಲೂ ಸ್ವದೇಶಿ, ಸ್ವಾವಲಂಬನೆ, ಸ್ವ ಶಕ್ತಿಯ ಆಶಯಗಳನ್ನೇ ಹೊಂದಿರುವ ಆತ್ಮನಿರ್ಭರತೆ ಕುರಿತು ಚರ್ಚೆ ನಡೆಯುತ್ತಿರುವ ವೇಳೆಯಲ್ಲೇ ಹಣಕಾಸಿನ ಮುಗ್ಗಟ್ಟಿಗೆ ಸಿಲುಕಿದ್ದ ಲಕ್ಷ್ಮೇವಿಲಾಸ ಬ್ಯಾಂಕನ್ನು ಸಿಂಗಾಪುರ ಮೂಲದ ಡಿಬಿಎಸ್ಗೆ ಏಕಾಏಕಿ ಹಸ್ತಾಂತರ ಮಾಡಲಾಗಿದೆ. ಎಲ್ಲಿಯ ಆತ್ಮನಿರ್ಭರತೆ ಎಂಬ ಘೋಷಣೆ? ಅದೆಲ್ಲಿಯ ವಿದೇಶಿ ಬ್ಯಾಂಕಿನ ಆಕರ್ಷಣೆ? ಈ ಎಲ್ಲವೂ ತಳಮಳವನ್ನು ಮತ್ತಷ್ಟು ಹೆಚ್ಚು ಮಾಡಿದೆ. ಇಕಾನಮಿಕ್ ಡೆವಲಪ್ಮೆಂಟ್ ಬೋರ್ಡ್ ಎಂಬುದು […]
Read More
ಎನ್ ಆರ್ ಸಂತೋಷ್ ಆತ್ಮಹತ್ಯೆ ಯತ್ನದ ಕಾರಣ ಏನು? ಖಾಸಗೀ ಶಾಲೆಗಳು ಆನ್ ಲೈನ್ ಪಾಠ ಶುರು ಮಾಡ್ತಾವಾ? ದೇಶದ ಜಿಡಿಪಿ ಗತಿ!! ದೆಹಲಿಯಲ್ಲಿ ರೈತ ಪ್ರತಿಭಟನೆ ಅಬ್ಬರ ಮೆಹಬೂಬಾ ಮತ್ತೆ ಗೃಹಬಂಧಕ್ಕೆ ಒಳಗಾಗಿದ್ದು.. ಬಂಗಾಳದಲ್ಲಿ ಮಮತಾ ಬೆಂಬಲಿಗರ ರಾಜೀನಾಮೆ ಪರ್ವ ಕೋವಿಡಗ ಗುಣ ಆಗಿದೆ ಅಂತ ಬೀಗಬೇಡಿ ಪ್ಲೀಸ್ ಸ್ವದೇಶಿ ಲಕ್ಷ್ಮೀವಿಲಾಸ ಬ್ಯಾಂಕ್ ವಿದೇಶಿ ಬ್ಯಾಂಕ್ ತೆಕ್ಕೆಗೆ ಹೋಗಿದ್ದೇಕೆ?
Read More
ಟ್ಯಾಬ್ಲಾಯ್ಡ್ ಪತ್ರಿಕೋದ್ಯಮಕ್ಕೆ ಹೊಸ ದಿಕ್ಕು ತೋರಿದ ರವಿ ಬೆಳಗೆರೆ ಸಿನಿಮಾ, ಕಿರುತೆರೆಯಲ್ಲೂ ಮಿಂಚು ಹರಿಸಿದವರು. ಕಪ್ಪು ಬಿಳುಪು ಸುಂದರಿ ಹಾಯ್ ಬೆಂಗಳೂರಿನಿಂದ ಹುಟ್ಟಿದ ಹಣದಿಂದ ಪ್ರಾರ್ಥನಾ ಶಾಲೆ ಕಟ್ಟಿದ ಅವರ ಬದುಕು ಮಾತ್ರ ಸದಾ ಕಲರ್ಫುಲ್ಅಕ್ಷರಗಳ ಘಮ ಅವಳಿ ವ್ಯಕ್ತಿತ್ವ ಸಮಾಗಮ ಹರಿಪ್ರಕಾಶ್ ಕೋಣೆಮನೆನನಗೆ ಪಿ. ಲಂಕೇಶ್ ಅವರನ್ನು ಪ್ರತ್ಯಕ್ಷವಾಗಿ ನೋಡಲಾಗಲಿಲ್ಲ. ಆದರೆ ಲಂಕೇಶ್ ಪತ್ರಿಕೆಯನ್ನು, ಅವರ ಪುಸ್ತಕಗಳನ್ನು ಓದಿರುವೆ. ಲಂಕೇಶ್ ಅವರು ಅಪರೂಪದ ಒಳನೋಟ ಹೊಂದಿದ್ದ ಲೇಖಕರಾಗಿದ್ದರು. ಅವರ ಬರಹಗಳಿಗೆ ಒಂದು ತಾತ್ವಿಕತೆ ಇತ್ತಾದರೂ, ಪತ್ರಕರ್ತ […]
Read More
ಕೊರೊನಾ ಕಾಲದ ಅತಿದೊಡ್ಡ ಚುನಾವಣೆ ಎನ್ನಬಹುದಾದ ಬಿಹಾರ ವಿಧಾನಸಭೆಯ ಸಾರ್ವತ್ರಿಕ ಚುನಾವಣೆ ಹಾಗೂ ಕರ್ನಾಟಕ, ಮಧ್ಯಪ್ರದೇಶ ಉಪ ಚುನಾವಣೆಗಳ ಬಗ್ಗೆಯೇ ರಾಜಕೀಯ ಆಸಕ್ತರ ನಡುವೆ ಮಾತು-ಕತೆ, ಚರ್ಚೆ ನಡೆಯುತ್ತಿದೆ. ಕೋವಿಡ್ ಸಂತ್ರಸ್ತರಿಗೂ ಮತ ಚಲಾಯಿಸುವ ಹಕ್ಕು ನೀಡಿಕೆ, ಚುನಾವಣಾ ಪ್ರಚಾರ ಶೈಲಿಯನ್ನು ತುಸು ಬದಲಿಸಿರುವುದು ಸೇರಿದಂತೆ 10 ಪ್ರಮುಖ ಬದಲಾವಣೆಗಳೊಂದಿಗೆ ಚುನಾವಣೆಯನ್ನು ನಡೆಸಲು ಗಟ್ಟಿ ನಿರ್ಧಾರವನ್ನು ಮಾಡಿದ್ದ ಕೇಂದ್ರ ಚುನಾವಣಾ ಆಯೋಗ, ಆ ಪ್ರಯತ್ನದಲ್ಲಿ ಒಂದು ಹೆಜ್ಜೆಯನ್ನು ಈಗಾಗಲೇ ದಿಟ್ಟವಾಗಿಯೇ ಇಟ್ಟಿದೆ. ಕೊರೊನಾ ಆತಂಕದ ನಡುವೆಯೂ ಬಿಹಾರದಲ್ಲಿ […]
Read More
ಸ್ಥಳೀಯ ನಾಯಕತ್ವವನ್ನು ಮರೆತು ಹೈಕಮಾಂಡ್ ಪಾಳೇಗಾರಿಕೆ ಮೆರೆದವರು ದುಷ್ಪಲ ಉಂಡಿದ್ದಾರೆ, ನೋಡಿ ಪಾಠ ಕಲಿಯೋಣ ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಂಬಂಧ, ಪ್ರಾದೇಶಿಕ ಭಾಷೆಗಳ ಮೇಲೆ ಹಿಂದಿ, ಇಂಗ್ಲಿಷ್ ಭಾಷೆಗಳ ಪಾರಮ್ಯ, ದಿಲ್ಲಿಕೇಂದ್ರಿತ ಹೈಕಮಾಂಡ್ ಸಂಸ್ಕೃತಿಯಂಥ ವಿಷಯಗಳು ಚರ್ಚೆಯ ಸಂಗತಿಗಳಾಗುತ್ತಿರುವ ಹೊತ್ತಲ್ಲಿ, ಎಂದಿನಂತೆ ಪ್ರತ್ಯೇಕತೆಯ ಸೊಲ್ಲುಗಳು, ತಾರತಮ್ಯ ನೀತಿಯ ಬಗೆಗಿನ ಬೇಸರದ ಬೇಗುದಿ ಅಲ್ಲಲ್ಲಿವ್ಯಕ್ತವಾಗುತ್ತಿವೆ. ಇದು ಸಹಜ. ಆದರೆ, ಇಂಥಾ ಸಂಗತಿಗಳನ್ನು ಸೂಕ್ಷ್ಮವಾಗಿ ಗಮನಿಧಿಸಬೇಕು. ಈ ಎಲ್ಲಆಕ್ರೋಶ, ಬೇಗುದಿಗಳ ನೆಲೆ, ಅವುಗಳ ಉದ್ದೇಶ ಒಂದೇ ಆಗಿರುವುದಿಲ್ಲ. […]
Read More
ವಿಸ್ತಾರ… ಭಾರತದೊಂದಿಗೆ ಚೀನಾದ ಕದನೋತ್ಸಾಹದ ಒಳಗುಟ್ಟೇನು? ಶತ್ರುವಿನ ವಿರುದ್ಧ ಇಡೀ ದೇಶ ಒಗ್ಗಟ್ಟಾಗಿ ನಿಂತರೆ, ಅದಕ್ಕಿಂತ ಮಿಗಿಲಾದ ಶಕ್ತಿ ಮತ್ತೊಂದಿಲ್ಲ– ಹರಿಪ್ರಕಾಶ ಕೋಣೆಮನೆಯುದ್ಧ ಸಲ್ಲದು ಎಂಬ ವಿವೇಕ ಜಗತ್ತನ್ನು ಆಳಲಿ ಎಂದು ಹಾರೈಸುತ್ತಲೇ, ಭಾರತ ಮತ್ತು ಚೀನಾದ ನಡುವೆ ಯುದ್ಧದ ಕಾರ್ಮೋಡ ಕವಿದಿದೆ ಎಂಬ ಮಾತಿನಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ ಎಂಬುದನ್ನು ಒಪ್ಪಿಕೊಂಡುಬಿಡೋಣ. ಭಾರತದ ವಿರುದ್ಧ ಎರಡನೇ ಬಾರಿಗೆ ಪೂರ್ಣಪ್ರಮಾಣದ ಯುದ್ಧ ಮಾಡುವ ಉನ್ಮಾದದಲ್ಲಿರುವ ಚೀನಾ ಎರಡು ಹೆಜ್ಜೆ ಮುಂದಿಟ್ಟು ಒಂದು ಹೆಜ್ಜೆ ಹಿಂದಕ್ಕೆ ಇಡುತ್ತಿದೆ. ಎರಡು […]
Read More
– ಹರಿಪ್ರಕಾಶ್ ಕೋಣೆಮನೆ. ಬೆಂಗಳೂರಿನಲ್ಲಿ ನಡೆದ ಪ್ರಣಬ್ ಮುಖರ್ಜಿ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿದ್ದ ರಾಜ್ಯದ ಕೆಲವು ಹಿರಿಯ ಕಾಂಗ್ರೆಸ್ ಮುಖಂಡರು, ‘‘ಎಲ್ಲವೂ ಸರಿ. ಆದರೆ, ಪ್ರಣಬ್ ದಾ ಅವರು ಆರ್ಎಸ್ಎಸ್ ಸಭೆಗೆ ಹೋಗಿದ್ದೇಕೆ?,’’ ಎಂಬ ಮಾತನ್ನು ಆಡುವ ಮೂಲಕ, ಪ್ರಣಬ್ ಅವರ ನಿಲುವನ್ನೇ ಅನುಮಾನದಲ್ಲಿ ನೋಡಿದ್ದಾರೆ. ಜೀವನವಿಡಿ ಕಾಂಗ್ರೆಸ್ ಹಾಗೂ ಸಮಾಜವಾದಿ ಸಿದ್ಧಾಂತದ ಕಟ್ಟಾ ಅನುಯಾಯಿಯಾಗಿ ಬಾಳಿ ಬದುಕಿ ಹೋದ ಪ್ರಣಬ್ ಮುಖರ್ಜಿ ರಾಜಕೀಯ ವಲಯದಲ್ಲಿ ಅಜಾತಶತ್ರು ಎಂದೇ ಪರಿಗಣಿತರಾಗಿದ್ದರು. ಸೈದ್ಧಾಂತಿಕ ಭಿನ್ನತೆಯೊಂದಿಗೆ ಬೆರೆಯುವ ಮೂಲಕವೂ […]
Read More
ಪ್ರತಿಪಕ್ಷದಲ್ಲೂ ಕೇಳಿಬಂತು ರಾಮನೇ ರಾಷ್ಟ್ರೀಯ ಏಕತೆಯ ಸಂಕೇತ ಎಂಬ ಒಕ್ಕೊರಲ ದನಿ – ಹರಿಪ್ರಕಾಶ್ ಕೋಣೆಮನೆ. ‘‘ಶ್ರೀ ರಾಮನ ಗುಣಸಂಪನ್ನತೆಯು ಇಡೀ ಭರತ ಖಂಡಕ್ಕೆ ಏಕತೆಯ ಸಂದೇಶವನ್ನು ಸಾರಿತ್ತು. ಭಾರತವಷ್ಟೇ ಏಕೆ, ಇಡೀ ವಿಶ್ವದ ನಾಗರಿಕತೆಯಲ್ಲಿ ರಾಮನ ಹೆಜ್ಜೆಗುರುತುಗಳನ್ನು ಅಳಿಸಲಾಗದು. ಶ್ರೀರಾಮ ಎಲ್ಲರಿಗೂ ಸೇರಿದವನು. ಆತ ಮರ್ಯಾದಾ ಪುರುಷೋತ್ತಮನೇ ಹೌದು…,’’ -ಕಾಂಗ್ರೆಸ್ನ ವರಿಷ್ಠ ಮುಖಂಡರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ರಾಮಭಜನೆ ಮಾಡುತ್ತಿರುವ ಪರಿ ಇದು. ನಿಸ್ಸಂದೇಹವಾಗಿ ಇದೊಂದು ಒಳ್ಳೆಯ ಬೆಳವಣಿಗೆ. ಅಜಮಾಸು ಮೂವತ್ತು ವರ್ಷಗಳ ನಂತರ ಕಾಂಗ್ರೆಸ್ನ […]
Read More
ತಳ ಸಮುದಾಯದಿಂದ ಬಂದು ಮೇಲ್ಮನೆ ಸೇರಿದ ಶಾಂತಾರಾಮ ಸಿದ್ದಿ ಹಿಂದಿದೆ ನಿಸ್ವಾರ್ಥ ಸೇವೆಯ ಚರಿತ್ರೆ – ಹರಿಪ್ರಕಾಶ ಕೋಣೆಮನೆ. ಇತ್ತೀಚೆಗೆ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ರಾಯಚೂರು ಜಿಲ್ಲೆಯ ಅಶೋಕ ಗಸ್ತಿ, ಬೆಳಗಾವಿ ಜಿಲ್ಲೆಯ ಈರಣ್ಣ ಕಡಾಡಿ, ಕರ್ನಾಟಕ ವಿಧಾನ ಪರಿಷತ್ತಿಗೆ ಹೊಸದಾಗಿ ನಾಮನಿರ್ದೇಶನಗೊಂಡಿರುವ ಸಾಯಬಣ್ಣ ತಳವಾರ್ ಹಾಗೂ ಬುಡಕಟ್ಟು ಸಮದಾಯದ ಶಾಂತಾರಾಮ್ ಸಿದ್ದಿ ಅವರ ಆಯ್ಕೆ ವಿಚಾರದಲ್ಲಿ ಒಂದು ರೀತಿಯ ಸದಭಿಪ್ರಾಯ ಸಾರ್ವತ್ರಿಕ ವಲಯದಲ್ಲಿ ಮೂಡಿದೆ. ಶಾಸನ ಸಭೆಗಳಲ್ಲಿ , ಅಧಿಕಾರದ ಆಯಕಟ್ಟಿನ ತಾಣಗಳಲ್ಲಿ ಸರ್ವರಿಗೂ ಪ್ರಾತಿನಿಧ್ಯ […]
Read More