ಪೌರತ್ವ ಕಾಯಿದೆ : ಅಪಾಯ ಬಿತ್ತಿ ಬೆಳೆದ ಅರ್ಧಸತ್ಯಗಳು ಜತನದಿಂದ ಕಾಪಾಡಿಕೊಂಡು ಬಂದ ಮತೀಯ ಸಾಮರಸ್ಯಕ್ಕೆ ಪೆಟ್ಟು, ದೇಶದ ಪ್ರತಿಷ್ಠೆಗೆ ಘಾಸಿ ಮಾಡಿದ ಅಶಾಂತಿ ಭಾರತದ ಜನತಂತ್ರಾತ್ಮಕ ಗಣರಾಜ್ಯ ಎಂದೂ ಕೂಡ ಬನಾನಾ ರಿಪಬ್ಲಿಕ್ ಆಗಲು ಸಾಧ್ಯವೇ ಇಲ್ಲ. ಈ ಅದಮ್ಯ ಆತ್ಮವಿಶ್ವಾಸಕ್ಕೆ ಕಾರಣ ನಮ್ಮ ಶ್ರೇಷ್ಠ ಸಂವಿಧಾನ. ಜಗತ್ತಿನ 220 ದೇಶಗಳ ಪೈಕಿ 180 ಪ್ರಜಾತಂತ್ರ ದೇಶಗಳಲ್ಲಿರುವ ಶ್ರೇಷ್ಠ ಮಾದರಿಗಳನ್ನು ಅಧ್ಯಯನ ನಡೆಸಿ, ರೂಪುಗೊಂಡಿರುವ ಸರ್ವಶ್ರೇಷ್ಠವಾದ ಸಂವಿಧಾನ ನಮ್ಮದು. ಹಾಗಾಗಿ ಇದು ಇಡೀ ಜಗತ್ತಿನಲ್ಲೇ ಅತ್ಯಂತ […]
Read More
ವೃತ್ತಿಪರತೆಯ ರುಜುವಾತಿಗೆ ರಸ್ತೆಗಳನ್ನು ನೋಡಿದರೆ ಸಾಕು! ರಸ್ತೆಯೆಂದರೆ ನಾಗರಿಕತೆಯ ಸಂಕೇತ ಎಂದ ಅರಸು ಮಾತು ನಮಗೆ ಅರ್ಥವಾಗುವುದು ಯಾವಾಗ..? ಕೆಲವೊಂದು ವ್ಯಕ್ತಿಗಳೇ ಹಾಗೆ! ಅವರಿಗೆ ಅವರೇ ಸಾಠಿ. ಅಂಥವರಿಗೆ ಪರ್ಯಾಯ ಸೃಷ್ಟಿಸುವುದು ಅಸಾಧ್ಯ ಮಾತು. ಅಟಲ್ ಬಿಹಾರಿ ವಾಜಪೇಯಿ, ರಾಮಕೃಷ್ಣ ಹೆಗಡೆ, ದೇವೇಗೌಡರು, ಯಡಿಯೂರಪ್ಪ, ನಿತಿನ್ ಗಡ್ಕರಿ ಅವರನ್ನು ನೋಡಿದಾಗ ಈ ಹೇಳಿಕೆ ಎಷ್ಟು ಸಮಂಜಸ, ಪ್ರಾಕ್ಟಿಕಲ್ ಎಂಬುದು ಮನದಟ್ಟಾಗುತ್ತದೆ. ಮುತ್ಸದ್ದಿ(ಸ್ಟೇಟ್ಸ್ಮನ್)ತನದ ಪ್ರಸ್ತಾಪ ಬಂದರೆ ದಿವಂಗತ ವಾಜಪೇಯಿ ಅವರನ್ನು ಬಿಟ್ಟು ಬೇರೆ ಹೆಸರು ಕಣ್ಣಮುಂದೆ ಬರಲು ಸಾಧ್ಯವೇ ಇಲ್ಲ. […]
Read More
ಭಾರತದ ಮಟ್ಟಿಗೆ ಗುಡ್ ಗವರ್ನನ್ಸ್ ಪದಪ್ರಯೋಗವನ್ನು ಅಧಿಕೃತವಾಗಿ ಪರಿಚಯ ಮಾಡಿ ಆರು ವರ್ಷ ಕಳೆದಿದೆ. 2014ರ ಡಿಸೆಂಬರ್ 23ರಂದು ನರೇಂದ್ರ ಮೋದಿ ನೇತೃತ್ವದ ಎನ್ಡಿಎ-1 ಸರಕಾರ ಪಂಡಿತ್ ಮದನಮೋಹನ ಮಾಳವೀಯ ಹಾಗೂ ಮಾಜಿ ಪ್ರಧಾನಿ, ಮಹಾನ್ ಮುತ್ಸದ್ದಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ದೇಶದ ಅತ್ಯುನ್ನತ ಪುರಸ್ಕಾರವಾದ ಭಾರತ ರತ್ನ ಪ್ರಶಸ್ತಿ ಘೋಷಿಸಿತು. ಅದೇ ವೇಳೆ ಸರಕಾರ ಇನ್ನೊಂದು ಮಹತ್ವದ ತೀರ್ಮಾನ ಪ್ರಕಟಿಸಿತು. ಅದೇ ಗುಡ್ ಗವರ್ನನ್ಸ್ ಡೇ. ಎ.ಬಿ.ವಾಜಪೇಯಿ ಅವರ ಹುಟ್ಟಿದ ದಿನವಾದ ಡಿ.25ನ್ನು ಗುಡ್ […]
Read More
ಇತ್ತೀಚಿನ ಕೆಲ ರೇಪ್ ಪ್ರಕರಣಗಳನ್ನು ಉಲ್ಲೇಖಿಸಿ ರಾಹುಲ್ ಗಾಂಧಿ ರೇಪ್ ಇನ್ ಇಂಡಿಯಾ ಎಂಬ ಹೊಸ ಘೋಷವಾಕ್ಯ ಮೊಳಗಿಸಿದ್ದಾರೆ. ಹಾಗೆಯೇ ಸಂಸತ್ತಿನ ಒಪ್ಪಿಗೆ ಪಡೆದ ಪೌರತ್ವ ತಿದ್ದುಪಡಿ ಕಾಯಿದೆ ವಿವಾದದ ಸ್ವರೂಪಕ್ಕೆ ತಿರುಗುತ್ತಿದೆ. ಈ ಎರಡು ಮಹತ್ವದ ವಿಷಯಗಳ ತುಲನಾತ್ಮಕ ಅವಲೋಕನ ಇಲ್ಲಿದೆ. ಹೈದರಾಬಾದ್ನ ಪಶುವೈದ್ಯೆ ಮೇಲಿನ ಅತ್ಯಾಚಾರ ಘಟನೆ ದೇಶವನ್ನು ಬೆಚ್ಚಿ ಬೀಳಿಸಿದೆ. ಅತ್ಯಾಚಾರ ಎಸಗಿದ ಕಿರಾತಕರನ್ನು ಕಠಿಣಾತಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು ಇಡೀ ದೇಶವೇ ಏಕ ಕಂಠದಿಂದ ಆಗ್ರಹಿಸಿದೆ. ಹಾಗಂದ ಮಾತ್ರಕ್ಕೆ ವಿಚಾರಣಾಧೀನ ಕೈದಿಗಳಾಗಿರುವ […]
Read More
ಫುಕೆತ್! ಈ ಪದವೇ ಹೇಳುವುದಕ್ಕೂ ಮತ್ತು ಕೇಳುವುದಕ್ಕೂ ಒಂದು ರೀತಿ ಮಜವಾಗಿದೆ. ಇದು ಸುಂದರ ಐಲ್ಯಾಂಡ್. ಈ ಹೆಸರನ್ನು ಹಲವರು ಕೇಳಿರುತ್ತಾರೆ. ಕೆಲವರಾದರೂ ನೋಡಿರುತ್ತಾರೆ. ಥೈಲ್ಯಾಂಡ್ ದೇಶದ 32 ಮನಸೂರೆಗೊಳ್ಳುವ ದ್ವೀಪಗಳ ಪೈಕಿ ಫುಕೆತ್ ಮನಮೋಹಕ ದ್ವೀಪಪ್ರಾಂತ್ಯ ಹಾಗೂ ಈ ಎಲ್ಲ ದ್ವೀಪಗಳಿಗಿಂತ ದೊಡ್ಡದು. ಒಟ್ಟು ವಿಸ್ತೀರ್ಣ ಎಷ್ಟು ಅಂತೀರಾ, ಕೇವಲ 576 ಚದರ ಕಿಲೋಮೀಟರ್. ಉತ್ತರದಿಂದ ದಕ್ಷಿಣಕ್ಕೆ ಉದ್ದ 48 ಕಿ.ಮೀ. ಪೂರ್ವದಿಂದ ಪಶ್ಚಿಮಕ್ಕೆ 21 ಕಿ.ಮೀ. ದ್ವೀಪದ ಕಾಯಂ ನಿವಾಸಿಗಳ ಸಂಖ್ಯೆ ಮೂರೂ ಮುಕ್ಕಾಲು […]
Read More
ನಮ್ಮ ಸಂವಿಧಾನದಲ್ಲಿ ಅಡಕವಾಗಿರುವ ‘ಧರ್ಮ ನಿರಪೇಕ್ಷತೆ’ ಮತ್ತು ‘ಸೆಕ್ಯುಲರ್’ ಎಂಬ ಎರಡು ಪದಗಳು ಅತಿ ಹೆಚ್ಚು ಚರ್ಚೆಗೊಳಪಟ್ಟಿರುವುದು ಗೊತ್ತೇ ಇದೆ. ರಾಜಕೀಯ ಮತ್ತು ಧರ್ಮದ ಸಂಬಂಧದ ವಿಷಯದಲ್ಲಿಆರಂಭವಾದ ಈ ಚರ್ಚೆ ರಾಜಕೀಯದಲ್ಲಿ ಧರ್ಮ ಇರಬೇಕೇ ಅಥವಾ ಧರ್ಮದಲ್ಲಿ ರಾಜಕೀಯದಲ್ಲಿ ಇರಬೇಕೇ ಎಂಬ ಜಿಜ್ಞಾಸೆಗೂ ಕಾರಣವಾಗಿದೆ. ಸಂವಿಧಾನದಲ್ಲಿ ಉಲ್ಲೇಖಿತ ಧರ್ಮ ನಿರಪೇಕ್ಷತೆಯನ್ನು ಸೆಕ್ಯುಲರಿಸಂ(ಜಾತ್ಯತೀತತೆ)ಗೆ ಸಂವಾದಿಯಾಗಿಸಿದ್ದೂ ಇದೆ. ಇರಲಿ, ಇಲ್ಲಿಧರ್ಮನಿರಪೇಕ್ಷತೆ ಎಂದರೆ ಧರ್ಮ ಬಿಡಬೇಕು ಎಂತಲೋ ಅಥವಾ ಸೆಕ್ಯುಲರಿಸಂ ಎಂದರೆ ಜಾತಿ ತ್ಯಾಗ ಮಾಡು, ಜಾತಿ ವಿನಾಶಕ್ಕೆ ಹೋರಾಡು ಎಂತಲೋ […]
Read More
ಹೀಗೊಂದು ಕಥೆ…ಸಾವಿಲ್ಲದ ಮನೆಯಿಂದ ಸಾಸಿವೆ ಕಾಳು ತೆಗೆದುಕೊಂಡು ಬಾ ಎಂದು ಬುದ್ಧ ಕಿಸಾಗೌತಮಿಗೆ ಹೇಳಿದ ಕಥೆಯ ರೀತಿಯಲ್ಲಿರುವ ಇನ್ನೊಂದು ಕಥೆಯಿದು. ಒಂದಾನೊಂದು ಕಾಲದಲ್ಲಿ ಬಲೇ ಪ್ರಖ್ಯಾತನಾದ ಓರ್ವ ರಾಜ ಇದ್ದ. ಅಧಿಕಾರ, ಐಶ್ವರ್ಯ, ಆರೋಗ್ಯ ಎಲ್ಲವೂ ಅವನಲ್ಲಿ ಇತ್ತು. ಅಪಾರ ಪ್ರಜಾ ಬೆಂಬಲವೂ ಇತ್ತು. ವಿರೋಧಿಗಳಿಗೂ ಆತನೆಂದರೆ ಒಂದು ತೆರನಾದ ಭಯ. ಕಾಲಕಾಲಕ್ಕೆ ಮಳೆ ಬೆಳೆ ಆಗಿ ರಾಜ್ಯ ಸುಭಿಕ್ಷ ವಾಗಿತ್ತು. ಇಷ್ಟಾದರೂ ರಾಜನಿಗೆ ನೆಮ್ಮದಿ ಎಂಬುದಿರಲಿಲ್ಲ. ಸದಾ ದುಃಖ, ಕೊರಗಿನಲ್ಲೇ ಇರುತ್ತಿದ್ದ. ಮನೋ ಸಂತೋಷ ಅರಸಿಕೊಂಡು […]
Read More