ಫುಕೆತ್‌ ಪುಳಕ, ಮೋದಿ ಪ್ಲಾಗಿಂಗ್‌ ಮತ್ತು ಭಕ್ತರು Vs ಗುಲಾಮರ ಕೆಸರೆರೆಚಾಟ

ಫುಕೆತ್‌! ಈ ಪದವೇ ಹೇಳುವುದಕ್ಕೂ ಮತ್ತು ಕೇಳುವುದಕ್ಕೂ ಒಂದು ರೀತಿ ಮಜವಾಗಿದೆ. ಇದು ಸುಂದರ ಐಲ್ಯಾಂಡ್‌. ಈ ಹೆಸರನ್ನು ಹಲವರು ಕೇಳಿರುತ್ತಾರೆ. ಕೆಲವರಾದರೂ ನೋಡಿರುತ್ತಾರೆ. ಥೈಲ್ಯಾಂಡ್‌ ದೇಶದ 32 ಮನಸೂರೆಗೊಳ್ಳುವ ದ್ವೀಪಗಳ ಪೈಕಿ ಫುಕೆತ್‌ ಮನಮೋಹಕ ದ್ವೀಪಪ್ರಾಂತ್ಯ ಹಾಗೂ ಈ ಎಲ್ಲ ದ್ವೀಪಗಳಿಗಿಂತ ದೊಡ್ಡದು. ಒಟ್ಟು ವಿಸ್ತೀರ್ಣ ಎಷ್ಟು ಅಂತೀರಾ, ಕೇವಲ 576 ಚದರ ಕಿಲೋಮೀಟರ್‌. ಉತ್ತರದಿಂದ ದಕ್ಷಿಣಕ್ಕೆ ಉದ್ದ 48 ಕಿ.ಮೀ. ಪೂರ್ವದಿಂದ ಪಶ್ಚಿಮಕ್ಕೆ 21 ಕಿ.ಮೀ. ದ್ವೀಪದ ಕಾಯಂ ನಿವಾಸಿಗಳ ಸಂಖ್ಯೆ ಮೂರೂ ಮುಕ್ಕಾಲು ಲಕ್ಷಕ್ಕಿಂತ ಸ್ವಲ್ಪ ಜಾಸ್ತಿ.

ನಮ್ಮ ಕರ್ನಾಟಕದ ಕೆಲ ತಾಲೂಕುಗಳು ಕೂಡ ವಿಸ್ತಾರ ಮತ್ತು ಜನಸಂಖ್ಯೆಯಲ್ಲಿ ಇದಕ್ಕಿಂತ ದೊಡ್ಡದಾಗಿವೆ. ಇಂಥ ಸುಂದರ ಫುಕೆತ್‌ನ ಪ್ರಾಕೃತಿಕ ಸೌಂದರ್ಯ ಕಣ್ತುಂಬಿಕೊಳ್ಳಲು ಪ್ರಪಂಚದ ನಾನಾ ಭಾಗಗಳಿಂದ ವಾರ್ಷಿಕವಾಗಿ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಒಂದು ಕೋಟಿ ಮೀರಿರಬಹುದು. ಏಕೆಂದರೆ 2015ರ ಅಧಿಕೃತ ಅಂಕಿಸಂಖ್ಯೆ ಪ್ರಕಾರ ಆ ವರ್ಷ 93 ಲಕ್ಷ ಪ್ರವಾಸಿಗರು ಅಲ್ಲಿಗೆ ಭೇಟಿ ನೀಡಿದ್ದರು. ಈ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಫುಕೆತ್‌ನ ಶೇ.50ರಷ್ಟು ಜನರಿಗೆ ಪ್ರವಾಸೋದ್ಯಮವೇ ಜೀವನಾಧಾರ. ಥೈಲ್ಯಾಂಡ್‌ನ ಜಿಡಿಪಿಗೆ ಪುಟ್ಟ ಫುಕೆತ್‌ನ ಕೊಡುಗೆ ಶೇ.11! ಫುಕೆತ್‌ ಅಂದರೆ ಅಚ್ಚುಕಟ್ಟು.

ನಮ್ಮ ಕರ್ನಾಟಕದ ಕೆಲ ತಾಲೂಕುಗಳು ಕೂಡ ವಿಸ್ತಾರ ಮತ್ತು ಜನಸಂಖ್ಯೆಯಲ್ಲಿ ಇದಕ್ಕಿಂತ ದೊಡ್ಡದಾಗಿವೆ. ಇಂಥ ಸುಂದರ ಫುಕೆತ್‌ನ ಪ್ರಾಕೃತಿಕ ಸೌಂದರ್ಯ ಕಣ್ತುಂಬಿಕೊಳ್ಳಲು ಪ್ರಪಂಚದ ನಾನಾ ಭಾಗಗಳಿಂದ ವಾರ್ಷಿಕವಾಗಿ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಒಂದು ಕೋಟಿ ಮೀರಿರಬಹುದು. ಏಕೆಂದರೆ 2015ರ ಅಧಿಕೃತ ಅಂಕಿಸಂಖ್ಯೆ ಪ್ರಕಾರ ಆ ವರ್ಷ 93 ಲಕ್ಷ ಪ್ರವಾಸಿಗರು ಅಲ್ಲಿಗೆ ಭೇಟಿ ನೀಡಿದ್ದರು. ಈ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಫುಕೆತ್‌ನ ಶೇ.50ರಷ್ಟು ಜನರಿಗೆ ಪ್ರವಾಸೋದ್ಯಮವೇ ಜೀವನಾಧಾರ. ಥೈಲ್ಯಾಂಡ್‌ನ ಜಿಡಿಪಿಗೆ ಪುಟ್ಟ ಫುಕೆತ್‌ನ ಕೊಡುಗೆ ಶೇ.11! ಫುಕೆತ್‌ ಅಂದರೆ ಅಚ್ಚುಕಟ್ಟು.

ವರ್ಷದ 12 ತಿಂಗಳೂ ಜಗತ್ತಿನ ನಾನಾ ದೇಶಗಳ ಜನರಿಂದ ಗಿಜಿಗುಡುವ ಫುಕೆತ್‌ನಲ್ಲಿ ಹೊಟೇಲುಗಳು ಮನಬಂದಂತೆ ಚಾರ್ಜ್‌ ಮಾಡುವುದಿಲ್ಲ. ಸ್ವಚ್ಛ ಮತ್ತು ಸುರಕ್ಷಿತ ಹೊಟೇಲ್‌ ರೂಮುಗಳು ಕೈಗೆಟಕುವ ದರದಲ್ಲೇ ಸಿಗುತ್ತವೆ. ಫುಕೆತ್‌ನ ಮೂಲನಿವಾಸಿಗಳಿಗೆ ಪ್ರವಾಸಿಗರೇ ದೇವರು, ಪ್ರವಾಸಿಗರದ್ದೇ ಧ್ಯಾನ. ಫುಕೆತ್‌ ದ್ವೀಪದಾದ್ಯಂತ ಪೊಲೀಸ್‌ ಕಣ್ಗಾವಲನ್ನು ಕೇಳಲೇಬೇಡಿ. ಇತ್ತೀಚೆಗೆ ಅಲ್ಲಿಗೆ ಹೋಗಿ, ಉಳಿದು, ನೋಡಿ ಕಣ್ತುಂಬಿಕೊಂಡು ಬಂದ ಆತ್ಮೀಯರೊಬ್ಬರು ಒಂದೇ ಗುಕ್ಕಿಗೆ ಇಷ್ಟೆಲ್ಲವರ್ಣನೆ ಮಾಡುತ್ತಿದ್ದರು. ನಾನು ಮೌನವಾಗಿ ಕೇಳಿಸಿಕೊಳ್ಳುತ್ತಿದ್ದೆ. ಕೇಳಿದ್ದನ್ನು ಖಾತರಿ ಮಾಡಿಕೊಳ್ಳಲು, ಇನ್ನಷ್ಟು ಮತ್ತಷ್ಟು ತಿಳಿದುಕೊಳ್ಳಲು ಜಾಲತಾಣದಲ್ಲಿ ಫುಕೆತ್‌ನ್ನು ಜಾಲಾಡಿದೆ. ನೋಡುತ್ತ ಹೋದಾಗ ಅಲ್ಲಿಗೆ ಹೋಗಿ ಬಂದವರು ಹೇಳಿದ್ದು ಅಲ್ಪ, ಹೇಳಬೇಕಾದ್ದು ಅಧಿಕ ಅಂತ ಅನ್ನಿಸಿತು.

ಇದು ಅಲ್ಲಿನ ಪ್ರವಾಸೋದ್ಯಮದ ಕತೆ. ಇಲ್ಲಿನದ್ದು ಹೇಗಿದೆ. ಅದಕ್ಕೆ ಒಂದೇ ಒಂದು ಅಂಶವನ್ನು ತಾಳೆ ಹಾಕಿ ನೋಡಿದರೆ ಸಾಕು. ಪುಟ್ಟ ದ್ವೀಪ ಫುಕೆತ್‌ಗೆ ವಾರ್ಷಿಕ ಸರಾಸರಿ 93 ಲಕ್ಷ ವಿದೇಶಿ ಪ್ರವಾಸಿಗರು ಭೇಟಿ ನೀಡಿದರೆ, ಭೌಗೋಳಿಕವಾಗಿ ಫುಕೆತ್‌ಗಿಂತ ನೂರಾರು ಪಟ್ಟು ದೊಡ್ಡದಾಗಿರುವ ಭಾರತಕ್ಕೆ ಭೇಟಿ ನೀಡುವ ವಿದೇಶ ಪ್ರವಾಸಿಗರ ಸಂಖ್ಯೆ ಅಬ್ಬಬ್ಬಾ ಅಂದರೆ 89 ಲಕ್ಷ ಮಾತ್ರ. ಹಾಗಾದರೆ ಭಾರತದಲ್ಲಿ ಸುಂದರ ಸಾಗರತಟಗಳಿಲ್ಲವೆ? ಸ್ವಚ್ಛಂದವಾಗಿ ವಿಹರಿಸಲು ದ್ವೀಪಗಳಿಲ್ಲವೆ? ಭಾರತದಲ್ಲಿರುವ ಪರ್ವತಶ್ರೇಣಿಗಳು, ಗಿರಿಕಂದರಗಳು, ಮರುಭೂಮಿ, ಸಪಾಟಾದ ಮೈದಾನಗಳು, ನದಿಗಳು ತೊರೆಗಳು, ಜಲಪಾತಗಳು, ಗೊಂಡಾರಣ್ಯಗಳು, ಗುಡಿಗೋಪುರಗಳು, ಅರಮನೆಗಳು, ಗುರುಮನೆಗಳು, ಗುಹೆಗಳು, ಅಷ್ಟೇ ಏಕೆ ನಮ್ಮ ಸಂಸತ್‌ ಭವನದಿಂದ ವಿಧಾನಸೌಧದವರೆಗೆ ಎಲ್ಲವೂ ಅದ್ಭುತ ಮತ್ತು ಅಚ್ಚರಿಗಳೇ. ಹಾಗೆ ನೋಡಿದರೆ ಭಾರತ ಸರ್ವಋುತುಗಳ ಪ್ರವಾಸಿ ತಾಣ. ಆದರೆ ಅವನ್ನು ಹೊರಜಗತ್ತಿಗೆ ತೆರೆದಿಡುವಲ್ಲಿ, ಆಧುನಿಕ ಭಾಷೆಯಲ್ಲಿಹೇಳುವುದಾದರೆ ಮಾರ್ಕೆಟಿಂಗ್‌ ಮಾಡುವಲ್ಲಿ ನಾವು ಸೋತಿದ್ದೇವೆ.

ನಮ್ಮ ಪ್ರವಾಸಿ ತಾಣಗಳು ಒಂದರ್ಥದಲ್ಲಿ ಅನಾಥವಾಗಿವೆ. ಬಹಳಷ್ಟು ಕಡೆಗಳಲ್ಲಿಓಡಾಡುವುದಕ್ಕೆ ರಸ್ತೆಗಳಿಲ್ಲ. ಉಳಿದುಕೊಳ್ಳಲು ಸುಸಜ್ಜಿತ ವ್ಯವಸ್ಥೆಗಳಿಲ್ಲ. ಅಮೂಲ್ಯ ಜೀವಕ್ಕೆ, ವಸ್ತು ಒಡವೆಗಳಿಗೆ ಸುರಕ್ಷತೆಯಿಲ್ಲ. ಸಾವಿರ ಸಾವಿರ ಸಂಖ್ಯೆಯಲ್ಲಿರುವ ನಮ್ಮ ಪ್ರವಾಸಿ ತಾಣಗಳಿಗೆ ಭೇಟಿ ಕೊಡಲು ಮಿನಿಮಮ್‌ ಸವಲತ್ತು ಕಲ್ಪಿಸಿದರೆ ಆ ತಾಣಗಳು ಉದ್ಯೋಗ ಕೊಡುತ್ತವೆ. ಹಣ ಗಳಿಕೆ ಮಾಡಿಕೊಡುತ್ತವೆ. ನಮ್ಮ ದೇಶದ ಗೌರವ, ಘನತೆ ಮತ್ತು ಆಕರ್ಷಣೆಯನ್ನು ಮುಗಿಲೆತ್ತರಕ್ಕೆ ತಲುಪಿಸುತ್ತವೆ. ಹಾಗಾದರೆ ಈಗ ಹೇಳಿ ಪ್ರವಾಸೋದ್ಯಮ ಖಾತೆ ಅನ್‌ ಇಂಪಾರ್ಟೆಂಟಾ? ಸಚಿವರಾದವರು ಖಾತೆಗೆ ಇಂಪಾರ್ಟೆನ್ಸ್‌ ತಂದು ಕೊಡಬೇಕು, ಅದು ಅವರ ಜವಾಬ್ದಾರಿ. ಮನಸ್ಸು ಮಾಡಿದರೆ ಪ್ರವಾಸೋದ್ಯಮ ಸಚಿವರು ಹೊರಜಗತ್ತಿಗೆ ರಾಜ್ಯದ, ದೇಶದ ರಾಯಭಾರಿಗಳಾಗಬಹುದು. ಅವಕಾಶ ಅಷ್ಟು ದೊಡ್ಡದಾಗಿದೆ.

ಕಳೆದ ಸ್ವಾತಂತ್ರ್ಯೋತ್ಸವದ ದಿನ ಕೆಂಪುಕೋಟೆ ಮೇಲಿಂದ ಪ್ರಧಾನಿ ಮೋದಿ ಮಾಡಿದ ಭಾಷಣವನ್ನು ಕೇಳಿದ್ದೇವೆ. ಚಪ್ಪಾಳೆ ತಟ್ಟಿದ್ದೇವೆ. ಆ ಭಾಷಣದಲ್ಲಿ ಪ್ರಧಾನಿ ಮೋದಿ ಮುಂದಿನ 2022ರ ಒಳಗೆ ದೇಶದ ಪ್ರತಿಯೊಬ್ಬ ಪ್ರಜೆ ದೇಶದೊಳಗಿನ 15 ಪ್ರವಾಸಿ ತಾಣಗಳನ್ನು ಸಂದರ್ಶಿಸಬೇಕು ಎಂದು ಹೇಳಿದರು. ಜನರು ಪ್ರವಾಸಿ ತಾಣಗಳನ್ನು ಸಂದರ್ಶಿಸಬೇಕು ಎಂದರೆ ಸರಕಾರಗಳೂ ಆ ಕಡೆ ಗಮನ ಕೊಡಬೇಕು ಅಂತ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲವಲ್ಲ. ದೇಶದಲ್ಲಿ 25 ರಾಜ್ಯಗಳಲ್ಲಿ ಬಿಜೆಪಿ ಸರಕಾರಗಳಿವೆ. ಅವಾದರೂ ಪ್ರಧಾನಿಯ ಮಾತನ್ನು ಕೇಳಿಸಿಕೊಳ್ಳಬೇಕಲ್ಲ. ಪ್ರಧಾನಿ ಗುರಿ ನಿಗದಿ ಮಾಡಿ ಮೂರು ತಿಂಗಳು ಕಳೆಯುತ್ತ ಬಂತು. ಯಾವುದಾದರೂ ಒಂದು ರಾಜ್ಯ ಸರಕಾರ ಸ್ಪಂದಿಸಿದ ಉದಾಹರಣೆ ಸಿಗಲಿಲ್ಲ.

ಪ್ಲಾಗಿಂಗ್‌ ಚಳವಳಿಯ ಸೂಕ್ಷ್ಮತೆ
ಪ್ಲಾಕ್‌ ಅನ್ನುವುದು ಸ್ವಿಸ್‌ ಪದ. Plock ಅನ್ನು Pick ಎಂಬುದಕ್ಕೆ ಸಂವಾದಿಯಾಗಿ ಸ್ವಿಜರ್ಲೆಂಡಿನಲ್ಲಿ ಬಳಸುತ್ತಾರೆ. ಬೊಜ್ಜು ಕರಗಿಸುವುದಕ್ಕಾಗಿ ಸಮುದ್ರದ ದಂಡೆಯ ಮೇಲೆ ನಡೆಯುತ್ತ ಸಮುದ್ರ ತನ್ನ ಒಡಲಿಂದ ಹೊರಹಾಕಿದ ಕಸಕಡ್ಡಿ, ಪ್ಲಾಸ್ಟಿಕ್‌ ಇತ್ಯಾದಿ ತ್ಯಾಜ್ಯವನ್ನು ಹೆಕ್ಕಿ ಗುಡ್ಡೆ ಹಾಕಿ ಸ್ವಚ್ಛ ಮಾಡುವುದು ಪ್ಲಾಗಿಂಗ್‌ ಎಂದು ಪ್ರಸಿದ್ಧವಾಯ್ತು. ಈಗ ಪ್ಲಾಗಿಂಗ್‌ ಅಮೆರಿಕದಲ್ಲಿ ಜನಪ್ರಿಯವಾಗಿದೆ. ಮೆಕ್ಸಿಕೋದಲ್ಲಿ ನಾಲ್ಕು ಸಾವಿರ ಜನ ಏಕಕಾಲಕ್ಕೆ ಪ್ಲಾಗಿಂಗ್‌ ಮಾಡಿ ವಿಶ್ವದಾಖಲೆ ಬರೆದರು ಎಂದು ವರದಿ ಹೇಳಿದೆ. ಹಾಗೆ ಪ್ಲಾಗಿಂಗ್‌ ಮಾಡುವ ಒಂದು ತಂಡ ಮುಂಬೈ ಸಮುದ್ರ ತೀರದಲ್ಲಿ ಇತ್ತೀಚಿನ ವರ್ಷಗಳಲ್ಲಿ ಸಕ್ರಿಯವಾಗಿದೆ. ಅದೊಂದು ಚಳವಳಿಯಾಗಿದೆ. ಆದರೆ ಅದು ಅಷ್ಟೊಂದು ಸುದ್ದಿ ಆಗಿರಲಿಲ್ಲ.

ಮೊನ್ನೆ ಪ್ರಧಾನಿ ಮೋದಿ ಮಾಮಲ್ಲಪುರಂನ ತೀರದಲ್ಲಿ ಮುಂಜಾನೆ ನಡಿಗೆ ವೇಳೆ ಮಾನವ ಚೆಲ್ಲಿದ ತ್ಯಾಜ್ಯವನ್ನು ಹೆಕ್ಕಿ ಸ್ವಚ್ಛ ಮಾಡಿ, ತಾನು ಪ್ಲಾಗಿಂಗ್‌ ಮಾಡಿದೆ ಎಂದು ಟ್ವೀಟ್‌ ಮಾಡಿದ್ದು ಸಂಜೆಯಾಗುವುದರೊಳಗೆ ಇಡೀ ಜಗತ್ತಿಗೆ ದೊಡ್ಡ ಸುದ್ದಿ ಆಯಿತು. ಮೋದಿ ಮಾಡಿದ್ದು, ಅವರು ಐದು ವರ್ಷಗಳ ಹಿಂದೆ ಆರಂಭಿಸಿದ ಸ್ವಚ್ಛ ಭಾರತ ಅಭಿಯಾನದ ಮುಂದುವರಿದ ಭಾಗವಾಗಿತ್ತು ಅಷ್ಟೆ. ಮಸುಕಾಗತೊಡಗಿದ್ದ ಸ್ವಚ್ಛ ಭಾರತ ಅಭಿಯಾನಕ್ಕೆ ಇತ್ತೀಚಿನ ಅವರ ಪ್ಲಾಗಿಂಗ್‌ ಒಂದು ಹೊಸ ಹೊಳಪನ್ನು ತಂದು ಕೊಟ್ಟಿತು. ಇದನ್ನು ಗ್ರಹಿಸದ ‘ಭಕ್ತರು’ ಮತ್ತು ‘ಗುಲಾಮರು’ ಎಂಬ ಸ್ವಘೋಷಿತ ಎರಡು ಗುಂಪಿನ(ಆ ಎರಡು ಗುಂಪಿನವರು ಪರಸ್ಪರ ಟೀಕೆಗೆ ಇಟ್ಟುಕೊಂಡಿರುವ ಹಣೆಪಟ್ಟಿ) ಜನರು ಸೋಷಿಯಲ್‌ ಮೀಡಿಯಾಗಳಲ್ಲಿ ಕಾರಿಕೊಂಡವು.

‘ಭಕ್ತರು’ ಕ್ಲೇಮ್‌ ಮಾಡುವಂತೆ ಮೋದಿ ಸ್ಪಾಂಟೇನಿಯಸ್‌ ಆಗಿ, ಪ್ಲಾನಿಂಗ್‌ ಇಲ್ಲದೆ ಪ್ಲಾಗಿಂಗ್‌ ಮಾಡಿದರಾ? ಅದೂ ಸುಳ್ಳು. ‘ಗುಲಾಮರು’ ಆರೋಪಿಸುವಂತೆ ಮಾಮಲ್ಲಪುರಂನ ಸಮುದ್ರ ತಟದಲ್ಲಿ ತಾವೇ ಚೆಲ್ಲಿಕೊಂಡ ಖಾಲಿ ಬಾಟಲಿ, ಕಸ-ಕಡ್ಡಿಯನ್ನು ಹೆಕ್ಕುವ ಪೋಸ್‌ ಕೊಟ್ಟರಾ ಮೋದಿ? ಅದೂ ಸುಳ್ಳು. ಮೋದಿ ವಿರೋಧಿಗಳು ಪ್ಲಾಗಿಂಗ್‌ ವಿಡಿಯೋಗಳನ್ನು ರಿವೈಂಡ್‌ ಮಾಡಿ, ವಿಶೇಷ ಕ್ಯಾಮೆರಾಗಳನ್ನು ಅರೇಂಜ್‌ ಮಾಡಿ ಶೂಟ್‌ ಮಾಡುತ್ತಿರುವಂಥ ಫೋಟೋಗಳನ್ನು ಫೋಟೊಶಾಪಲ್ಲಿ ಸೃಷ್ಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ತಮ್ಮ ದಡ್ಡತನ ಪ್ರದರ್ಶನ ಮಾಡಿದರು. ಹಾಗೆ ಮಾಡಿದ್ದರ ಪರಿಣಾಮ ಏನು? ‘ಭಕ್ತರು’ ಮೋದಿ ಪ್ರತಿಷ್ಠೆಗೆ ಭಂಗ ತಂದರೆ, ‘ಗುಲಾಮರು’ ವಿಶ್ವಾಸಾರ್ಹ ಟೀಕೆಗಳನ್ನೂ ಮುಂದೆ ಅನುಮಾನದಿಂದಲೇ ನೋಡಬೇಕಾದ ಅವಾಂತರ ಸೃಷ್ಟಿಸಿಕೊಂಡರು.

ಸೋಷಿಯಲ್‌ ಮೀಡಿಯಾದಲ್ಲಿಆ್ಯಕ್ಟಿವ್‌ ಆಗಿರುವ ಮಂದಿ ಈ ಸಂಗತಿಗಳನ್ನು ಸೂಕ್ಷ್ಮವಾಗಿ ಗಮನಿಸುವುದು ಒಳಿತು. ನ್ಯೂಟ್ರಲ್‌ ಅಭಿಪ್ರಾಯ ಏನು ಗೊತ್ತಾ? ಮೊದಲನೆಯದ್ದು, ಮಾಮಲ್ಲಪುರಂ ಪ್ಲಾಗಿಂಗ್‌ ಸ್ವಚ್ಛ ಭಾರತ ಅಭಿಯಾನಕ್ಕೆ ಇನ್ನೊಂದಿಷ್ಟು ವೇಗ ತಂದುಕೊಡಲು ಮಾಡಿದ ಸುಂದರ ಪ್ಲಾನ್‌ ಎಂದು ಮೋದಿ ಖುಲ್ಲಂಖುಲ್ಲ ಹೇಳಿಬಿಡಬೇಕಿತ್ತು. ಆಗ ಎಲ್ಲ ಚರ್ಚೆ ಕೆಸರೆರಚಾಟಗಳಿಗೆ ತೆರೆ ಬೀಳುತ್ತಿತ್ತು. ಎರಡನೆಯದ್ದು ಅಕ್ಟೋಬರ್‌ 2ರಂದು ಪ್ಲಾಸ್ಟಿಕ್‌ ನಿಷೇಧ ಮಾಡಿ ಮತ್ತೆ ಪ್ಲಾಗಿಂಗ್‌ ಸಂದರ್ಭದಲ್ಲಿ ತ್ಯಾಜ್ಯ ಹೆಕ್ಕಲು ಪ್ಲಾಸ್ಟಿಕ್‌ ಕವರ್‌ ಬಳಸಬಾರದಿತ್ತಲ್ಲವೇ? ಇಷ್ಟೆ ಬೇರೇನೂ ಇಲ್ಲ!

ಇನ್ನು ನಿಜ ಜೀವನದಲ್ಲಿ ಸ್ವಚ್ಛ ಭಾರತ ಅಭಿಯಾನದ ಪರಿಣಾಮವನ್ನು ನಾನೇ ಸ್ವತಃ ಕಂಡಿದ್ದೇನೆ. ಮಧ್ಯರಾತ್ರಿ ಶಿವಮೊಗ್ಗದ ಬಸ್‌ಸ್ಟಾಂಡಿನಲ್ಲಿ ಪುಟ್ಟ ಮಗುವೊಂದು ಚಾಕಲೇಟ್‌ ತಿಂದು ಕವರ್‌ ನೆಲಕ್ಕೆಸೆದಾಗ ಹಾಗೆ ಬಿಸಾಕಬಾರದು ಮಗು, ಮೋದಿ ಅಂಕಲ್‌ ನೋಡುತ್ತಿದ್ದಾರೆಂದು ಹೇಳಿದ್ದು ಎಂದೂ ಮರೆಯದ ಪ್ರಸಂಗ. ಇದು ಸ್ವಚ್ಛ ಭಾರತ ಅಭಿಯಾನದ ದೃಷ್ಟಿಯಿಂದ ಕಾಣುವ ಬಾಹ್ಯ ಪರಿಣಾಮ. ಉದ್ದೇಶ ಅಷ್ಟು ಮಾತ್ರವಲ್ಲ, ಆಡಳಿತದಲ್ಲಿ, ವೈಯಕ್ತಿಕ ಜೀವನದಲ್ಲಿ ಅಂಟಿಕೊಳ್ಳುವ ಕಲ್ಮಶವನ್ನು ಗುಡಿಸಿ ತೊಳೆದು ಸ್ವಚ್ಛಗೊಳಿಸಿಕೊಳ್ಳುವುದು. ಇದೇ ಅಲ್ಲವಾ ಅಂತಿಮ ಗುರಿ.

ಸಂಗತಿಗಳಾಗಿವೆ.
– ಎಲ್ಲರ ಒಳಿತು ಬಯಸುವುದೇ ಧರ್ಮದ ನಿಜವಾದ ಅರ್ಥ. ಇಷ್ಟು ಸರಳವಾದದ್ದನ್ನು ನಮ್ಮ ಧಾರ್ಮಿಕ, ರಾಜಕೀಯ ಮುಖಂಡರು ಕ್ಲಿಷ್ಟಗೊಳಿಸಿ ಜನರು ಸದಾ ಅಲ್ಲೇ ಸುತ್ತುವಂತೆ ಮಾಡಿದ್ದಾರೆ.
– ಜಾತ್ಯತೀತ ಎಂಬುದು ಜಾತಿಯನ್ನು ಮೀರಿದ್ದು ಎಂದಾಗುವ ಬದಲು ಜಾತಿ-ಅತಿ ಎಂಬಂತಾಗಿದೆ.
– ವಿಸ್ತಾರದಲ್ಲಿವಿವರಿಸಿದಂತೆ ನಾವು ಮಾಡುವ ಕೆಲಸಕ್ಕೆ ಪೂಜೆ ಪೂರಕವಾಗಿರಬೇಕೇ ವಿನಹ ಪೂಜೆಯೇ ಕೆಲಸವಾಗಬಾರದು.
– ಜ್ಯೋತಿ, ಹಾವೇರಿ

ಮುಖ್ಯಮಂತ್ರಿಗಳು, ಮಂತ್ರಿಗಳು ಸರಕಾರಿ ಕೆಲಸದ ವೇಳೆಯನ್ನು ಪೂಜೆಗೆ ಬಳಸುವುದು ಸಮ್ಮತವಲ್ಲ, ಅದರ ಜೊತೆಗೆ ಮಂಗಳವಾರ ಶುಕ್ರವಾರ ಸರಕಾರಿ ಕಚೇರಿಗಳಲ್ಲಿ ನಡೆಯುವ ಲಕ್ಷ್ಮೀಪೂಜೆಯೂ ನಿಲ್ಲಬೇಕು. ಯಾಕೆ ಅಂತ ಬಿಡಿಸಿ ಹೇಳಬೇಕಿಲ್ಲ.

– ಶಂಕರ ಹಿರೇಮಠ, ಕಲಬುರ್ಗಿ

ಧರ್ಮ, ಜಾತಿ, ಜಾತ್ಯತೀತತೆಗೆ ಸಂಬಂಧಿಸಿ ಸಂವಿಧಾನದ ಆಶಯ ಸರಿಯಾಗಿಯೇ ಇದೆ. ಅದನ್ನು ಅರಿಯದವರು, ಅರಿತು ಅನರ್ಥಕ್ಕೆ ಬಳಸುವವರು ಅಪಚಾರ ಮಾಡುತ್ತಿದ್ದಾರೆ. ಸಂವಿಧಾನ ಪರ ವಕಾಲತ್ತು ವಹಿಸುವವರಿಂದಲೇ ಅದಕ್ಕೆ ಅಪಚಾರ ಹೆಚ್ಚು.
– ಅನಿಲ್‌ ಕಾಂಚನ್‌, ಬ್ರಹ್ಮಾವರ(ಯುಎಸ್‌)

 

 

 

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top