– ಡ್ರ್ಯಾಗನ್ ದೇಶದ ಕ್ಷುದ್ರತನಕ್ಕೆ ಎದುರೇಟು ನೀಡಲು ಮುಂದಾಗಿದೆ ಅಂತಾರಾಷ್ಟ್ರೀಯ ಸಮುದಾಯ. – ಹರಿಪ್ರಕಾಶ್ ಕೋಣೆಮನೆ. ಇದುವರೆಗೆ ಭಾರತದ ಪಾಲಿಗೆ ಗಡಿಯಲ್ಲಿ ಮತ್ತು ಉಡಿಯಲ್ಲಿ ಕಟ್ಟಿಕೊಂಡ ಕೆಂಡದಂತಿದ್ದ ಚೀನಾ, ಈಗ ಕರಕಲಾದ ಇದ್ದಿಲಿನಂತಾಗಿದೆ ಎಂದರೆ ಉತ್ಪ್ರೇಕ್ಷೆ ಆಗದು. ಅಮೆರಿಕಾಗೆ ಸಡ್ಡು ಹೊಡೆದು ಜಾಗತಿಕ ಪರ್ಯಾಯ ಶಕ್ತಿಯಾಗುವೆ ಎಂದು ಜಗತ್ತಿನ ಎದುರು ಬೀಗುತ್ತಿದ್ದ ಆ ರಾಷ್ಟ್ರ ಸದ್ಯಕ್ಕಂತೂ ಏಕಾಂಗಿಯಾಗಿದೆ. ಸ್ವಾರಸ್ಯ ಎಂದರೆ, ಚೀನಾ ವಿರುದ್ಧವೇ ಜಾಗತಿಕ ಒಕ್ಕೂಟ ರಚನೆಯಾಗುವ ಮುನ್ಸೂಚನೆಗಳು ಕಾಣುತ್ತಿವೆ. ನಿಜವಾಗಿಯೂ ಚೀನಾಗೆ ಜಾಗತಿಕ ಶಕ್ತಿಯಾಗುವ ಅರ್ಹತೆ […]
Read More
ಸ್ವಾವಲಂಬನೆಯ ಮೂಲಕ ವ್ಯಾಪಾರ ವಹಿವಾಟಿನಲ್ಲೂ ಚೀನಾವನ್ನು ಮಣಿಸಬೇಕು. – ಹರಿಪ್ರಕಾಶ್ ಕೋಣೆಮನೆ. ಚೀನಾದ ವುಹಾನ್ ಪ್ರಾಂತ್ಯದಿಂದ ಹರಡಿದ ಕೊರೊನಾ ಎಂಬ ವೈರಸ್ ಇಡೀ ಜಗತ್ತಿನ ತಲ್ಲಣಕ್ಕೆ ಕಾರಣವಾಗಿದೆ. ಇಡೀ ಮನುಕುಲಕ್ಕೆ ವೈರಸ್ ಹರಡಲು ಕಾರಣವಾದ ಅದೇ ಚೀನಾ ಭಾರತಕ್ಕೆ ಸದಾ ಮಗ್ಗಲು ಮುಳ್ಳು. ಈಗ ಕೊರೊನಾ ಕಾಟದ ಜತೆಗೆ ಮಿಲಿಟರಿ ಬೆದರಿಕೆ ಒಡ್ಡುತ್ತಿದೆ. ಇದಕ್ಕೆ ಭಾರತವೇನು ಹೆದರಿಲ್ಲ. ಈಗಂತೂ ಗಟ್ಟಿ ನಾಯಕತ್ವವೇ ಇರುವುದರಿಂದ, ಹೆದರಿಸುವ ಸ್ಥಾನದಲ್ಲೂ ಇದೆ. ಹಾಗೆ ಸುಮ್ಮನೇ 2017ರ ಸನ್ನಿವೇಶವನ್ನು ಒಮ್ಮೆ ನೆನಪಿಸಿಕೊಳ್ಳೋಣ. ಭಾರತ- […]
Read More
ಕೊರೊನಾದಿಂದ ನೆಲಕಚ್ಚಿದ ಆರ್ಥಿಕತೆಯ ನಡುವೆಯೂ ಆತ್ಮನಿರ್ಭರ ಭಾರತದ ಕನಸಿನ ಹಾದಿಯಲ್ಲಿ. – ಹರಿಪ್ರಕಾಶ್ ಕೋಣೆಮನೆ. ಎಷ್ಟು ಬೇಗ ದಿನಗಳು ಉರುಳಿ ಹೋದವು! ಹದಿನೈದು ವರ್ಷದಷ್ಟು ದೀರ್ಘ ಕಾಲ ಗುಜರಾತ್ ಮುಖ್ಯಮಂತ್ರಿ ಆಗಿದ್ದ ನರೇಂದ್ರ ಮೋದಿ ರಾಷ್ಟ್ರ ರಾಜಕಾರಣ ಮುಖ್ಯ ಭೂಮಿಕೆಗೆ ಬರುತ್ತಾರೆಂಬ ಊಹಾತ್ಮಕ ಚರ್ಚೆ ಶುರುವಾದದ್ದು, ಅದರ ಬೆನ್ನಲ್ಲೇ 2014ರ ಲೋಕಸಭಾ ಚುನಾವಣೆಯ ಬಿಜೆಪಿ ಪ್ರಚಾರ ಸಮಿತಿ ಅಧ್ಯಕ್ಷರಾಗಿ ನೇಮಕಗೊಂಡದ್ದು, ಮತ್ತೆ ಕೆಲವೇ ದಿನಗಳಲ್ಲಿ ಅವರು ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿ ಹೊರ ಹೊಮ್ಮಿದ್ದೆಲ್ಲ ಇನ್ನೂ ಕಣ್ಣಿಗೆ ಕಟ್ಟಿದಂತಿದೆ. […]
Read More
– ಸ್ವಾವಲಂಬನೆಯೊಂದಿಗೆ ವೈಶ್ವಿಕ ಗ್ರಾಮ ಬಲಗೊಳಿಸುವ ಭಾರತೀಯ ಚಿಂತನೆ – ಹರಿಪ್ರಕಾಶ್ ಕೋಣೆಮನೆ. ಕೊರೊನಾ ವೈರಸ್ನಿಂದ ಪಾರಾಗುವುದು ಹೇಗೆ ಎಂಬುದೇ ಮೂರು ತಿಂಗಳ ಹಿಂದೆ ನಮ್ಮೆದುರಿನ ಬೃಹತ್ ಸವಾಲಾಗಿತ್ತು. ಕಾರಣ ಎದುರಾಗಿದ್ದ ಜೀವ ಭಯ! ಅದೊಂದು ಜೀವನ್ಮರಣದ ಪ್ರಶ್ನೆ ಎಂಬಂತೆಯೇ ಸರಕಾರವೂ ಯೋಚನೆಗೆ ಬಿದ್ದಿತ್ತು. ಆದರೆ ಈಗ ಅದು ನಮ್ಮ ಚಿಂತನೆಯ ಕೇಂದ್ರ ವಸ್ತುವಲ್ಲ. ಕೊರೊನಾದೊಂದಿಗೆ ಬದುಕಲು ಕಲಿಯಿರಿ ಎಂದು ಸರಕಾರ ಹಾಗೂ ವಿಶ್ವ ಆರೋಗ್ಯ ಸಂಸ್ಥೆ ಹೇಳುವ ಮುನ್ನವೇ, ಅದರೊಟ್ಟಿಗೆ ಬದುಕಲು ಕಲಿಯಲಾರಂಭಿಸಿದ್ದೇವೆ. ಆದರೆ, ಈಗ […]
Read More
– ಭವಿಷ್ಯದ ದಿನಗಳಲ್ಲಿ ನಮ್ಮ ಜೀವನ, ಚಿಂತನೆಗಳಲ್ಲೇ ಬಹುದೊಡ್ಡ ಬದಲಾವಣೆ ಆಗಬೇಕಿದೆ – ಹರಿಪ್ರಕಾಶ್ ಕೋಣೆಮನೆ. ಮಹಾಯುದ್ಧ ನಡೆದರೆ ಇಲ್ಲವೇ ಪ್ರಕೃತಿ ವಿಕೋಪದಿಂದ ರಾಷ್ಟ್ರದ ಭೌತಿಕ ಬದುಕು ಧ್ವಂಸವಾದರೆ ಮತ್ತೆ ಅಂಥ ರಾಷ್ಟ್ರಗಳು ಮರುನಿರ್ಮಾಣವಾಗಿರುವ ಕಥೆಗಳು ಇತಿಹಾಸದಲ್ಲಿ ಸಿಗುತ್ತವೆ. ಹಿರೋಷಿಮಾ, ನಾಗಸಾಕಿ ದುರಂತದಿಂದ ನಾಶವಾದ ಜಪಾನ್ನಿಂದ ಹಿಡಿದು, ತೀರಾ ಇತ್ತೀಚಿಗೆ ಭೂಕಂಪದಿಂದ ಸಂಪೂರ್ಣ ನೆಲಕಚ್ಚಿ ಹೋಗಿದ್ದ ನೇಪಾಳದಂಥ ರಾಷ್ಟ್ರಗಳು ಮತ್ತೆ ಎಲೆ ಎತ್ತಿ ನಿಂತಿರುವ ಬಗೆಯನ್ನು ಓದಿದ್ದೀರಿ, ಕಂಡಿದ್ದೀರಿ. ಆದರೆ, ಕೊರೊನಾ ಎಂಬ ಅಣುಗಾತ್ರದ ಅಗೋಚರ ಶತ್ರುವೊಬ್ಬ […]
Read More
ಲಾಕ್ಡೌನ್ನಿಂದ ಕಲಿತ ಪಾಠಗಳನ್ನು ಜೀವಮಾನ ಪರ್ಯಂತ ಅಳವಡಿಸಿಕೊಂಡರೆ ಅಪಾಯ ದೂರ. ಕೊರೊನಾ ಲಾಕ್ಡೌನ್ ಏಪ್ರಿಲ್ 14ಕ್ಕೆ ಅಂತ್ಯ ಕಾಣುವುದೇ ಅಥವಾ ಮುಂದುವರಿಯುವುದೇ ಎಂಬ ಒಂದು ಪ್ರಶ್ನೆ ಭಾರತದ ಕೋಟಿ ಕೋಟಿ ಜನರನ್ನು ಮೂರು ದಿನಗಳ ಹಿಂದಿನವರೆಗೂ ಕಾಡುತ್ತಿತ್ತು. ಅದನ್ನು ಎಲ್ಲರೂ ತಮ್ಮೊಳಗೆ ತಾವು ಕೇಳಿಕೊಳ್ಳುತ್ತಿದ್ದರು. ಆದರೆ, ಈಗ ಲಾಕ್ಡೌನ್ ಮೇ 3ರವರೆಗೆ ಅಧಿಕೃತವಾಗಿ ವಿಸ್ತರಣೆಯಾಗಿರುವುದರಿಂದ 14ರ ಕುತೂಹಲಕ್ಕೆ ತೆರೆ ಬಿದ್ದಾಗಿದೆ. ಬೆನ್ನಲ್ಲಿಯೇ ಏಪ್ರಿಲ್ 20ರ ಬಳಿಕ ಈಗ ಜಾರಿಯಲ್ಲಿರುವ ಲಾಕ್ಡೌನ್-2ರ ಬಿಗಿ ಏನಾದರೂ ಸಡಿಲ ಆಗುವುದೇ? ಮೇ […]
Read More
ಕಣ್ಣಿಗೆ ಕಾಣದ ಶತ್ರುವಿನ ಮುಂದೆ ಸಂಘಟಿತ ಭಾರತೀಯ ಎಲ್ಲರಿಗಿಂತ ಮೊದಲು ಎಚ್ಚೆತ್ತುಕೊಂಡ ಭಾರತದ ಲಾಕ್ಡೌನ್ ನಿರ್ಧಾರ ಮೆಚ್ಚುಗೆ ಪಡೆದಿದೆ ಕೊರೊನಾ ಎಂಬ ಮಾರಕ ಸೋಂಕು ಜನರ ಜೀವವನ್ನೇ ಹಿಂಡಿ ಹಿಪ್ಪೆ ಮಾಡುತ್ತಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಈಗ ನಾವು ಪಾಲಿಸುತ್ತಿರುವ ಸಾಮಾಜಿಕ ಅಂತರ, ಸ್ವಚ್ಛತೆಯ ಶಿಸ್ತು, ಅನಿವಾರ್ಯ ಮನೆವಾಸ, ಏಕಾಂಗಿತನ (ಕ್ವಾರಂಟೈನ್)- ಈ ಎಲ್ಲವೂ ನಿಶ್ಚಿತವಾಗಿ ನಮಗೊಂದು ದೊಡ್ಡ ಪಾಠವಾಗಲಿದೆ. ಇದು ನಮ್ಮ ಜೀವನ ಕ್ರಮ ಮತ್ತು ಆಲೋಚನಾ ವಿಧಾನದಲ್ಲಿ ಅಗಾಧ ಬದಲಾವಣೆ ತರಬೇಕಿದೆ. ಆಗ ಮಾತ್ರ […]
Read More
ಗೊಗೊಯಿ ನೇಮಕ ತಾಂತ್ರಿಕವಾಗಿ ಸರಿ, ನೈತಿಕವಾಗಿ? ಇಂಥ ನೇಮಕಗಳನ್ನು ಹಿಂದೆ ಸ್ವತಃ ಗೊಗೊಯಿ ವಿರೋಧಿಸಿದ್ದರು/ ಲೈಂಗಿಕ ದೌರ್ಜನ್ಯ ಆರೋಪವೂ ಅವರ ಮೇಲಿದೆ – ಹರಿಪ್ರಕಾಶ್ ಕೋಣೆಮನೆ ಸುಪ್ರೀಂ ಕೋರ್ಟಿನ ಮಾಜಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ರಾಜ್ಯಸಭೆಗೆ ನಾಮ ನಿರ್ದೇಶನಗೊಂಡ ಬಳಿಕ ಇದೇ ಮೊದಲ ಬಾರಿಗೆ ಪರ-ವಿರೋಧದ ದೊಡ್ಡ ಚರ್ಚೆಯೇ ನಡೆಯುತ್ತಿದೆ. ಐತಿಹಾಸಿಕ ಎಂಬಂತೆ ಗೊಗೊಯಿ ಪ್ರಮಾಣ ವಚನದ ವೇಳೆ ರಾಜ್ಯಸಭೆಯಲ್ಲಿ ಕಾಂಗ್ರೆಸ್ ಸಭಾತ್ಯಾಗ ಮಾಡಿ ಪ್ರತಿಭಟಿಸಿದೆ. ಈ ಹಿಂದೆಯೂ ಯುಪಿಎ ಸರಕಾರದ ಅವಧಿಯಲ್ಲೂ ಸುಪ್ರೀಂ ಕೋರ್ಟಿನ […]
Read More
ಬ್ಯಾಂಕ್ಗಳ ಸಂಕಷ್ಟಕ್ಕೂ ಬಜೆಟ್ ಸಂಕಟಕ್ಕೂ ಸಂಬಂಧವಿದೆ ಭಾರತದ ಹಣಕಾಸು ಕ್ಷೇತ್ರದಲ್ಲಿ ಉಂಟಾಗಿರುವ ತಲ್ಲಣಕ್ಕೆ ಬಿಗಿ ನಿಯಂತ್ರಣ ವ್ಯವಸ್ಥೆ ರೂಪಿಸುವುದೊಂದೇ ಪರಿಹಾರ – ಹರಿಪ್ರಕಾಶ್ ಕೋಣೆಮನೆ ಯೆಸ್ ಬ್ಯಾಂಕ್ ಸಂಕಷ್ಟದ ಬೆಳವಣಿಗೆಗೂ ಕರ್ನಾಟಕ ಸರಕಾರದ ಬಜೆಟ್ಗೂ ನೇರವಾಗಿ ಯಾವುದೇ ಸಂಬಂಧ ಇಲ್ಲ. ಆದರೆ ಆ ಎರಡೂ ವಿದ್ಯಮಾನಗಳ ನಡುವೆ ಕೆಲ ಸಾಮ್ಯತೆಗಳಿರುವುದು ಮಾತ್ರ ನಿಜ. ಯೆಸ್ ಬ್ಯಾಂಕ್ ದಿವಾಳಿ ಹಾದಿಯಲ್ಲಿ ದಾಪುಗಾಲಿಟ್ಟಿರುವುದು ಬಹಳ ಸ್ಪಷ್ಟವಾಗಿ ಗೋಚರಿಸುತ್ತಿದೆ. ಹಾಗೆಯೇ ದೇಶ ಎದುರಿಸುತ್ತಿರುವ ಆರ್ಥಿಕ ಮುಗ್ಗಟ್ಟಿನ ಪರಿಣಾಮ ರಾಜ್ಯ ಸರಕಾರದ ಕಾರ್ಯನಿರ್ವಹಣೆಯ […]
Read More
ಈ ಅಪಾಯಕಾರಿ ಪಿಡುಗಿಗೆ ಸಹಾನುಭೂತಿ ತೋರುವುದನ್ನು ನಿಲ್ಲಿಸಿದರೆ ಅದೇ ಪರಿಹಾರ ಪಾಕಿಸ್ತಾನದ ಪರ ಅದೇಕೆ ಇಷ್ಟೊಂದು ಪ್ರೀತಿ! ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಘೋಷಣೆ ಕೂಗುವ ಪ್ರವೃತ್ತಿ ಕೊರೋನಾ ವೈರಸ್ ರೀತಿಯಲ್ಲಿಹಬ್ಬುತ್ತಿದೆ. ರಾಷ್ಟ್ರದ ಸಮಗ್ರತೆ ಮತ್ತು ಏಕತೆಯ ದೃಷ್ಟಿಯಿಂದ ಇದು ಖಂಡಿತಕ್ಕೂ ಒಳ್ಳೆಯ ಬೆಳವಣಿಗೆಯಲ್ಲ. ಈ ವಿಷಬೀಜ ಮೊಳಕೆಯೊಡೆದದ್ದು ದಿಲ್ಲಿಯ ಜೆಎನ್ಯು ಕ್ಯಾಂಪಸ್ನಿಂದ ಎನ್ನುತ್ತಾರೆ. ಅದಕ್ಕೆ ಪುರಾವೆಗಳೂ ಸಿಗುತ್ತಿವೆ. ಹಲವು ವರ್ಷಗಳಿಂದ ಸುಪ್ತವಾಗಿ ಪ್ರವಹಿಸಿ ಗಟ್ಟಿಗೊಳ್ಳುತ್ತಲಿದ್ದ ಆ ಮಾನಸಿಕತೆ ಕೆಲ ವರ್ಷಗಳ ಹಿಂದೆ ಬಹಿರಂಗ ಸ್ವರೂಪ ಪಡೆದುಕೊಂಡಿತು. ಜೆಎನ್ಯು […]
Read More