ಪಾಕಿಸ್ತಾನದ ಪರ ಅದೇಕೆ ಇಷ್ಟೊಂದು ಪ್ರೀತಿ!

ಈ ಅಪಾಯಕಾರಿ ಪಿಡುಗಿಗೆ ಸಹಾನುಭೂತಿ ತೋರುವುದನ್ನು ನಿಲ್ಲಿಸಿದರೆ ಅದೇ ಪರಿಹಾರ

ಪಾಕಿಸ್ತಾನದ ಪರ ಅದೇಕೆ ಇಷ್ಟೊಂದು ಪ್ರೀತಿ!

‘ಪಾಕಿಸ್ತಾನ್‌ ಜಿಂದಾಬಾದ್‌’ ಎಂದು ಘೋಷಣೆ ಕೂಗುವ ಪ್ರವೃತ್ತಿ ಕೊರೋನಾ ವೈರಸ್‌ ರೀತಿಯಲ್ಲಿಹಬ್ಬುತ್ತಿದೆ. ರಾಷ್ಟ್ರದ ಸಮಗ್ರತೆ ಮತ್ತು ಏಕತೆಯ ದೃಷ್ಟಿಯಿಂದ ಇದು ಖಂಡಿತಕ್ಕೂ ಒಳ್ಳೆಯ ಬೆಳವಣಿಗೆಯಲ್ಲ. ಈ ವಿಷಬೀಜ ಮೊಳಕೆಯೊಡೆದದ್ದು ದಿಲ್ಲಿಯ ಜೆಎನ್‌ಯು ಕ್ಯಾಂಪಸ್‌ನಿಂದ ಎನ್ನುತ್ತಾರೆ. ಅದಕ್ಕೆ ಪುರಾವೆಗಳೂ ಸಿಗುತ್ತಿವೆ. ಹಲವು ವರ್ಷಗಳಿಂದ ಸುಪ್ತವಾಗಿ ಪ್ರವಹಿಸಿ ಗಟ್ಟಿಗೊಳ್ಳುತ್ತಲಿದ್ದ ಆ ಮಾನಸಿಕತೆ ಕೆಲ ವರ್ಷಗಳ ಹಿಂದೆ ಬಹಿರಂಗ ಸ್ವರೂಪ ಪಡೆದುಕೊಂಡಿತು. ಜೆಎನ್‌ಯು ಸ್ಟೂಡೆಂಟ್‌ ಯೂನಿಯನ್‌ ಅಧ್ಯಕ್ಷ ಕನ್ಹಯ್ಯಕುಮಾರ್‌, ಸಹವರ್ತಿ ವಿದ್ಯಾರ್ಥಿ ನಾಯಕರಾದ ಉಮರ್‌ ಖಾಲಿದ್‌, ಅನಿರುದ್‌ ಭಟ್ಟಾಚಾರ್ಯ ವಿವಿ ಕ್ಯಾಂಪಸ್‌ನಲ್ಲಿಭಾರತ ವಿರೋಧಿ, ಕಾಶ್ಮೀರದ ಪ್ರತ್ಯೇಕತೆ ಪರ ಘೋಷಣೆ ಮೊಳಗಿಸಿದ ನಂತರ ಅದು ದೇಶಾದ್ಯಂತ ಪ್ರತಿಧ್ವನಿಸತೊಡಗಿತು. ಅಂತಹ ಪ್ರಕರಣಗಳಲ್ಲಿಒಂದು ಗುರುವಾರ ಬೆಂಗಳೂರಿನಲ್ಲಿಎಐಎಂಐಎಂ ಹಮ್ಮಿಕೊಂಡಿದ್ದ ಸಿಎಎ ವಿರೋಧಿ ರಾರ‍ಯಲಿಯಲ್ಲಿಅಮೂಲ್ಯ ಲಿಯೋನ್‌ ಎಂಬ ಯುವತಿ ಪಾಕಿಸ್ತಾನದ ಪರ ಘೋಷಣೆ ಕೂಗಿದ್ದು ಮತ್ತು ಶುಕ್ರವಾರ ಟೌನ್‌ಹಾಲ್‌ ಎದುರು ನಡೆದ ಸಭೆಯಲ್ಲಿಆದ್ರ್ರಾ ಎಂಬ ಯುವತಿ ಕಾಶ್ಮೀರ ಸ್ವಾತಂತ್ರ್ಯದ ಪರ ಭಿತ್ತಿಪತ್ರ ಪ್ರದರ್ಶನ ಮಾಡಿದ್ದು ಮತ್ತೊಂದು.
ವಿಶೇಷ ಎಂದರೆ ಇದೇ ಮೊದಲ ಬಾರಿಗೆ ಆ ಕಾರ್ಯಕ್ರಮ ಆಯೋಜಿಸಿದ ಓವೈಸಿ, ಕರ್ನಾಟಕದ ಕಾಂಗ್ರೆಸ್‌ ಅಧ್ಯಕ್ಷ ರು, ಇತರ ಸೆಕ್ಯುಲರ್‌ ನಾಯಕರು ಈ ಘಟನೆಯನ್ನು ಖಂಡಿಸಿದ್ದಾರೆ, ಅಪಾಯಕಾರಿ ಪಿಡುಗು ಎಂದು ಬಣ್ಣಿಸಿದ್ದಾರೆ. ಇದೇ ನಡೆಯನ್ನು ಆರಂಭದಲ್ಲೇ ತಾಳಿದ್ದರೆ ಈ ಮಾನಸಿಕತೆ ಇಷ್ಟರವರೆಗೆ ಬೆಳೆಯುತ್ತಿರಲಿಲ್ಲ. ಇದೊಂದು ಅಪಾಯಕಾರಿ ಪಿಡುಗು ಎಂದಾದ ಮೇಲೆ ಅದಕ್ಕೆ ಪರಿಹಾರ ಹುಡುಕುವ, ಪರಿಣಾಮಗಳನ್ನು ಮನಗಾಣಿಸುವ ಪ್ರಯತ್ನಗಳೂ ಆಗಬೇಕಾದ್ದು ಅನಿವಾರ್ಯ.
ಕೆಲವು ವೈಚಿತ್ರ್ಯಗಳು: ಈಗ ಸಿಎಎ ಪರ ಹೋರಾಟಗಾರರಲ್ಲೇ ಹಲವು ಒಡಕುಗಳು ಉಂಟಾಗಿವೆ. ಪಾಕಿಸ್ತಾನದ ಪರ ಘೋಷಣೆ ಕೂಗುವವರನ್ನು ಸಮರ್ಥಿಸಿಕೊಳ್ಳುವವರು; ಹಾಗೂ ಅವರನ್ನು ವಿರೋಧಿಸುತ್ತಿರುವವರು. ಈಗ ಪಾಕಿಸ್ತಾನ್‌ ಜಿಂದಾಬಾದ್‌ ಎಂದು ಕೂಗಿ ಜೈಲಿಗೆ ಹೋದವರ ಪರವಾಗಿ ವಕಾಲತು ವಹಿಸಲು ಯಾರೂ ಮುಂದೆ ಬರುತ್ತಿಲ್ಲಎಂಬುದನ್ನು ಗಮನಿಸಬಹುದು. ಈಕೆಯ ತಲೆಯಲ್ಲಿವಿಷಬೀಜ ಬಿತ್ತಿದವರೂ ಕೂಡ ಅದು ವಿಷಫಲ ನೀಡುತ್ತಿರುವುದನ್ನು ಮರೆಯಲ್ಲಿದ್ದೇ ನೋಡುತ್ತಿದ್ದಾರೆ. ವಿಷಬೀಜದ ಫಲವನ್ನು ಉಣ್ಣಬೇಕಾದ್ದು ಯುವ ತಲೆಮಾರು. ವಿದ್ಯಾಭ್ಯಾಸದ ಪ್ರಾಯದಲ್ಲಿಮಾಡಿಕೊಂಡ ಈ ಎಡವಟ್ಟು ಇವರನ್ನು ಜೀವಮಾನವಿಡೀ ಕಾಡಬಹುದು.
ಸಮಸ್ಯೆಯ ಮೂಲ ಆ ಎರಡು ಪದಗಳು: 1947ರಲ್ಲಿಈ ದೇಶ ವಿಭಜನೆ ಆದದ್ದು ಪ್ರತ್ಯೇಕ ಮುಸ್ಲಿಂ ರಾಷ್ಟ್ರ ಬೇಕು ಎಂಬ ಕಾರಣದಿಂದ. ಧರ್ಮದ ಆಧಾರದಲ್ಲಿವಿಭಜನೆಯಾದ ಪಾಕಿಸ್ತಾನ ‘ಇಸ್ಲಾಮಿಕ್‌ ರಿಪಬ್ಲಿಕ್‌’ ಎಂದು ಘೋಷಿಸಿಕೊಂಡಿತು. ಅದೇ ಕಾಲಕ್ಕೆ ಸ್ವತಂತ್ರ ಭಾರತ ‘ಸೆಕ್ಯುಲರ್‌ ಸವರಿನ್‌ ರಿಪಬ್ಲಿಕ್‌’ ಎಂದಾಯಿತು. ಅಂದ ಮೇಲೆ ಸೆಕ್ಯುಲರ್‌ ಭಾರತದಲ್ಲಿಅಲ್ಪಸಂಖ್ಯಾತ, ಬಹುಸಂಖ್ಯಾತ ಎಂಬ ಪದ ಬಳಕೆ ಶುರುವಾಗಿದ್ದು ಏಕೆ? ಭಾರತದ ಜನಸಮೂಹವನ್ನು ದೇಶವಿಭಜನೆ ಕಾಲಘಟ್ಟದಿಂದ ಇಲ್ಲಿಯವರೆಗೂ ಸಂಖ್ಯಾ ದೃಷ್ಟಿಯಿಂದಲೇ ನೋಡಿದರೂ ಮುಸ್ಲಿಮರು ಆಗಲೂ ಅಲ್ಪಸಂಖ್ಯಾತರಾಗಿರಲಿಲ್ಲ. ಈಗಲೂ ಅಲ್ಪಸಂಖ್ಯಾತರಲ್ಲ. ಶೇ. 15ರಷ್ಟಿರುವ ಮುಸ್ಲಿಮರನ್ನು ಅಲ್ಪಸಂಖ್ಯಾತರೆಂದು ಕರೆಯುವುದಾದರೆ ಅರ್ಧ ಪ್ರತಿಶತ, ಒಂದು, ಎರಡು, ಮೂರು, ಐದು ಪರ್ಸೆಂಟ್‌ವರೆಗೆ ಇರುವ ಉಳಿದ ನೂರಾರು ಜಾತಿ ಪಂಗಡಗಳ ಜನರನ್ನು ಏನೆಂದು ಕರೆಯೋಣ. ವಾಸ್ತವದಲ್ಲಿಈಗ ಭಾರತದಲ್ಲಿರುವ ಮುಸ್ಲಿಮರ ಸಂಖ್ಯೆ 172 ದಶಲಕ್ಷ ಕ್ಕೂ ಅಧಿಕ. ಹಾಗೆ ನೋಡಿದರೆ ಅಧಿಕೃತವಾಗಿ ಘೋಷಿಸಿಕೊಂಡಿರುವ ಇಸ್ಲಾಮಿಕ್‌ ದೇಶಗಳನ್ನು ಹೊರತುಪಡಿಸಿದರೆ ಪ್ರಪಂಚದ ಎಲ್ಲದೇಶಗಳ ಪೈಕಿ ಭಾರತದಲ್ಲೇ ಅತಿಹೆಚ್ಚು ಸಂಖ್ಯೆಯ ಮುಸ್ಲಿಮರಿದ್ದಾರೆ. ಜನಸಂಖ್ಯೆ ದೃಷ್ಟಿಯಿಂದ ಮಾತ್ರವಲ್ಲ, ತಲಾ ಆದಾಯ, ಜೀವನ ಮಟ್ಟ, ವ್ಯಕ್ತಿ ಸ್ವಾತಂತ್ರ್ಯ, ಮಾನವ ಹಕ್ಕುಗಳ ರಕ್ಷ ಣೆ ವಿಚಾರಕ್ಕೆ ಬಂದರೂ ಇಸ್ಲಾಮಿಕ್‌ ರಾಷ್ಟ್ರಗಳಿಗಿಂತಲೂ ಭಾರತದಲ್ಲಿಮುಸ್ಲಿಮರು ಹೆಚ್ಚು ಸುಖವಾಗಿದ್ದಾರೆಂದು ಅಧ್ಯಯನ ವರದಿಗಳು ಹೇಳುತ್ತಿವೆ.
ವಾಸ್ತವ ಹೀಗಿರುವಾಗ ಮುಸ್ಲಿಮರನ್ನು ಮತ್ತು ಮುಸ್ಲಿಮೇತರರನ್ನು ಲಂಬವಾಗಿ ವಿಭಜಿಸುವ ಅಲ್ಪಸಂಖ್ಯಾತ/ಬಹುಸಂಖ್ಯಾತ ಪದದ ಅಗತ್ಯವಾದರೂ ಏನು. ಕಾಶ್ಮೀರದ ಆಜಾದಿಯಿಂದ ಹಿಡಿದು ಸಹಬಾಳ್ವೆಗೆ ಎದುರಾಗಿರುವ ಸವಾಲುಗಳವರೆಗೆ ಎಲ್ಲದಕ್ಕೂ ಇದೇ ಮೂಲ. ಹಾಗಾದರೆ ಆ ಎರಡು ಪದಗಳನ್ನು ಬಿಟ್ಟು ನಾವೆಲ್ಲರೂ ಭಾರತವಾಸಿಗಳು ಎಂದು ಹೇಳಬಹುದಲ್ಲ. ಅದಕ್ಕಿಂತ ದೊಡ್ಡ ಸೆಕ್ಯುಲರ ಕಲ್ಪನೆ ಇನ್ನಾವುದಿದೆ?
ತುಷ್ಟೀಕರಣದ ಪರಿಣಾಮ: ಮುಸ್ಲಿಮರನ್ನು ಅಲ್ಪಸಂಖ್ಯಾತರೆಂದು ಕರೆದವರು ಅವರ ಮತಗಳ ವಿಷಯ ಬಂದಾಗ ಮಾತ್ರ ಅವುಗಳನ್ನು ತಮ್ಮ ಕಡೆ ತಿರುಗಿಸಿಕೊಳ್ಳುವುದಕ್ಕಾಗಿ ಹಲವು ಆಟ ಕಟ್ಟತೊಡಗಿದರು. ಈ ‘ಅಲ್ಪಸಂಖ್ಯಾತ’ ಮತಗಳೇ ಇವರಿಗೆ ಅಧಿಕಾರ ತಂದುಕೊಡುವ ಬಹುಸಂಖ್ಯಾ ವೈಚಿತ್ರ್ಯವಾಗಿ ಕೆಲಸ ಮಾಡತೊಡಗಿತು. ಅಲ್ಪಸಂಖ್ಯಾತರನ್ನು ಬಹುಸಂಖ್ಯಾತರಿಂದ ಪ್ರತ್ಯೇಕಿಸಿ ಬೇರೆಯೇ ಇಡುವ ಎಲ್ಲಪ್ರಯತ್ನಗಳನ್ನೂ ಮಾಡಲಾಯಿತು. ಆ ಸಂದರ್ಭದಲ್ಲಿನಮ್ಮ ಶಾಸಕರಿಗೆ, ಕಾಯಿದೆ ನಿರ್ಮಾತೃಗಳಿಗೆ ‘ಸೆಕ್ಯುಲರ್‌’ ಎಂಬ ಮೌಲ್ಯದ ಪರಿಪೂರ್ಣ ಪಾಲನೆ ಸಾಧ್ಯವಾಗಲೇ ಇಲ್ಲ.
ರಾಜಕೀಯ ಲಾಭ/ ದೇಶಕ್ಕೆ ನಷ್ಟ: ಅಲ್ಪಸಂಖ್ಯಾತ ಪದ ಅತಿ ಹೆಚ್ಚು ಅಪಬಳಕೆ ಆದದ್ದು ರಾಜಕೀಯ ಕಾರಣಕ್ಕೆ. ಮತ ಬ್ಯಾಂಕ್‌ ರಕ್ಷ ಣೆಯ ಉದ್ದೇಶಕ್ಕೆ. ಈ ಹಣೆಪಟ್ಟಿಯ ಆಧಾರದಲ್ಲಿತಮಗೆ ಸಿಕ್ಕಿದ್ದೆಷ್ಟು, ಕಳೆದುಕೊಂಡಿದ್ದೆಷ್ಟು ಎಂದು ಆ ಜನಸಮುದಾಯ ಆಲೋಚನೆ ಮಾಡಲೇ ಇಲ್ಲ. ಸಮುದಾಯದ ಮುಗ್ಧತೆಯನ್ನ ಆ ಜನಾಂಗದ ನಾಯಕರಿಂದ ಹಿಡಿದು ಅಲ್ಪಸಂಖ್ಯಾತ ಪದಬಳಕೆ ಸೃಷ್ಟಿಸಿದವರ ವರೆಗೆ ಎಲ್ಲರೂ ಯಥೇಚ್ಛವಾಗಿ ದುರ್ಬಳಕೆ ಮಾಡಿಕೊಂಡರು. ಪದಬಳಕೆಯಿಂದ ಹುಟ್ಟಿದ ಕಂದಕ ಮನಸ್ಸಿನ ಆಳಕ್ಕೆ ಇಳಿಯುವಂತೆ ವ್ಯವಸ್ಥಿತವಾಗಿ ನೋಡಿಕೊಂಡರು. ಈಗೀಗ ಆ ಕುರಿತ ಅರಿವು ಮತ್ತು ಪರಿಣಾಮ ಕಾಣಲಾರಂಭಿಸಿದೆ. ತ್ರಿವಳಿ ತಲಾಕ್‌ ವಿಷಯವನ್ನೇ ತೆಗೆದುಕೊಳ್ಳೋಣ. ಶಾಬಾನೊ ಪ್ರಕರಣದಲ್ಲಿಕಾಂಗ್ರೆಸ್‌ ನಡೆದು ಕೊಂಡ ರೀತಿಗೂ, ತ್ರಿವಳಿ ತಲಾಕ್‌ ರದ್ದತಿ ಕಾಯಿದೆ ವಿಚಾರದಲ್ಲಿಬಿಜೆಪಿ ನಡೆದುಕೊಂಡ ರೀತಿಗೂ ವ್ಯತ್ಯಾಸವಿತ್ತು; ತಮಗೆ ಯಾವುದು ಹಿತ, ಯಾವುದು ಅಹಿತ ಎಂದು ಅರಿಯಲು ಮುಸ್ಲಿಂ ಜನಾಂಗಕ್ಕೆ ಸಾಧ್ಯವಾದರೆ ಅದಕ್ಕಿಂತ ದೊಡ್ಡ ವಿಚಾರ ಮತ್ತೊಂದಿರಲಾರದು.
ಚುನಾವಣೆಗಳೇ ಅಳತೆಗೋಲು: ನಮ್ಮ ದೇಶದಲ್ಲಿಸಾರ್ವತ್ರಿಕ ಚುನಾವಣೆ ಹೊರತಾಗಿ ಅನ್ಯ ಜನಮತಗಣನೆ ವ್ಯವಸ್ಥೆ ಇಲ್ಲದಿ ರುವುದರಿಂದ ಜನರ ಆಲೋಚನೆಯಲ್ಲಿಆಗುತ್ತಿರುವ ಸುಧಾರಣೆಗೆ ಚುನಾವಣಾ ಫಲಿತಾಂಶಗಳೇ ಅಳತೆಗೋಲೆಂದು ಪರಿಗಣಿಸುವುದು ಅನಿವಾರ್ಯ. ಹಾಗೆ ನೋಡಿದರೆ ದೇಶದಲ್ಲಿಕಾಂಗ್ರೆಸ್‌ ಪಕ್ಷ ದ ಅವನತಿ ಮತ್ತು ಅದೇ ವೇಳೆ ಇತರ ಪ್ರಾದೇಶಿಕ ಪಕ್ಷ ಗಳ ಉನ್ನತಿಯನ್ನು ಘೋಷಿತ ಅಲ್ಪಸಂಖ್ಯಾತರ ಮನದಲ್ಲಿಏಳುತ್ತಿರುವ ಅನುಮಾನದ ಪ್ರಶ್ನೆಗಳ ಪರಿಣಾಮವೆಂದೇ ಪರಿಗಣಿಸಬೇಕಾಗುತ್ತದೆ. ಆದರೆ ಕಾಂಗ್ರೆಸ್‌ ಅವನತಿಯ ಪರಿಣಾಮದಿಂದ ಉದಯಿಸಿದ ಪ್ರಾದೇಶಕ ಪಕ್ಷ ಗಳು ಆ ವರ್ಗದ ಪಾಲಿಗೆ ಬೆಂಕಿಯಿಂದ ಬಾಣಲೆಗೆ ಹಾರಿದ ಅನುಭವವನ್ನೇ ನೀಡಿದ್ದು ಮಾತ್ರ ವಿಪರ್ಯಾಸ.
ಭೂತವಾಗಿ ಕಾಡಿತು ಬಿಜೆಪಿ: ಕಾಂಗ್ರೆಸ್‌ ಪಕ್ಷ ಅನುಸರಿಸಿದ ಅತಿಯಾದ ಅಲ್ಪಸಂಖ್ಯಾತ ತುಷ್ಟೀಕರಣದ ಫಲವೇ ಬಿಜೆಪಿ ರಾಷ್ಟ್ರಮಟ್ಟದಲ್ಲಿಪ್ರವರ್ಧಮಾನಕ್ಕೆ ಬರಲು ಕಾರಣವಾದ ಅಂಶ. ಆದರೆ ಹಾಗೆ ಉದ್ಭವಿಸಿದ ಬಿಜೆಪಿ ಅಂತಿಮವಾಗಿ ತುಷ್ಟೀಕರಣದ ತಂತ್ರಗಳೆದುರು ಸೋಲುತ್ತಿದೆಯೇ ವಿನಃ, ಮುಸ್ಲಿಮರ ಪ್ರೀತಿವಿಶ್ವಾಸ ಗಳಿಸುವಲ್ಲಿಗೆಲುವನ್ನು ಕಾಣುತ್ತಿಲ್ಲ. ಆ ದೃಷ್ಟಿಯಿಂದ ನೋಡುವುದಾದರೆ ಮುಸ್ಲಿಂ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಉದ್ದೇಶದಿಂದ ಬಿಜೆಪಿಯ ಮಾತೃಸಂಸ್ಥೆ ಆರೆಸ್ಸೆಸ್‌ ಕೆಲ ವರ್ಷಗಳ ಹಿಂದೆ ‘ರಾಷ್ಟ್ರೀಯ ಮುಸ್ಲಿಂ ಮಂಚ್‌’ ಸ್ಥಾಪನೆ ಮಾಡಿದ್ದು ಒಂದು ಉತ್ತಮ ಪ್ರಯತ್ನ. ಆದರೆ ಸಾಂಸ್ಕೃತಿಕ ರಾಜಕಾರಣವೋ, ರಾಜಕಾರಣಕ್ಕಾಗಿ ಸಂಸ್ಕೃತಿ ಪ್ರತಿಪಾದನೆಯೋ ಎಂಬ ತೊಳಲಾಟದಲ್ಲಿಬಿಜೆಪಿ ಅಸ್ತಿತ್ವ ಕಳೆದುಕೊಂಡರೆ ಅಚ್ಚರಿಯಲ್ಲ.
ಆರು ವರ್ಷಗಳ ಈಚಿನ ಬೆಳವಣಿಗೆ: 2014ರ ಲೋಕಸಭೆ ಚುನಾವಣೆ, ಆ ನಂತರ ನಡೆದ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಲು ನರೇಂದ್ರ ಮೋದಿ ಅವರ ಅಭಿವೃದ್ಧಿ ಅಜೆಂಡಾ ಮತ್ತು ಗಣನೀಯ ಪ್ರಮಾಣದಲ್ಲಿಮುಸ್ಲಿಮ್‌ ಮತದಾರರು ಬಿಜೆಪಿ ಕಡೆಗೆ ವಾಲಿದ್ದೂ ಕಾರಣ. ಇದರಲ್ಲಿಸಂದೇಹವಿಲ್ಲ. ಆ ನಂತರ ಶುರುವಾದ ಮತ್ತೊಂದು ಸುತ್ತಿನ ತುಷ್ಟೀಕರಣ, ಲಂಬವಾಗಿ ವಿಭಜನೆ ಮಾಡುವ ಪ್ರಯತ್ನ ರಫೇಲ್‌ ಡೀಲ್‌ ವಿರೋಧದಿಂದ ಆರಂಭವಾಗಿ, ಕಾಶ್ಮೀರದ 370ನೇ ವಿಧಿ ರದ್ದತಿ, ಪೌರತ್ವ ತಿದ್ದುಪಡಿ ಕಾಯಿದೆ, ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಪ್ರಸ್ತಾಪದವರೆಗೆ ಮುಸ್ಲಿಮರನ್ನು ಪ್ರತ್ಯೇಕಿಸುವ, ಭಯ ಹುಟ್ಟಿಸುವ ಹುನ್ನಾರಗಳಿಗೆ ಬಳಕೆ ಆಯಿತು. ಅದೀಗ ಎಲ್ಲೆಂದರಲ್ಲಿಪಾಕಿಸ್ತಾನ ಪರ ಬಹಿರಂಗ ಘೋಷಣೆಗಳ ಮಾರ್ದನಿಗೆ, ಅದರಿಂದಾಗುತ್ತಿರುವ ಗೊಂದಲಗಳಿಗೆ ಕಾರಣ. ಇವೆಲ್ಲಯಾರ ಲಾಭಕ್ಕಾಗಿ.
ಜನರಿಗೆ ಜಾತಿ/ಭೀತಿ ಸಾಕಾಗಿದೆಯಾ?: ಇದು ರಾಜಕೀಯ ಪಕ್ಷ ಗಳು ಯೋಚನೆ ಮಾಡಬೇಕಿರುವ ಪ್ರಶ್ನೆ. ಎಪ್ಪತ್ತು ವರ್ಷ ದೇಶವಾಳಿದ ಕಾಂಗ್ರೆಸ್‌, ಇಪ್ಪತ್ತೈದು ವರ್ಷ ಬಂಗಾಳದಿಂದ ಕೇರಳದವರೆಗೆ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಕಮ್ಯುನಿಸ್ಟರು, ಕಾಂಗ್ರೆಸ್‌ ಅವಸಾನದ ಪರಿಣಾಮ ಹುಟ್ಟಿದ ವಿವಿಧ ಪ್ರಾದೇಶಿಕ ಪಕ್ಷ ಗಳು, ಸಾಂಸ್ಕೃತಿಕ ರಾಜಕಾರಣದ ಹೆಸರಲ್ಲಿಪ್ರವರ್ಧಮಾನಕ್ಕೆ ಬಂದ ಬಿಜೆಪಿ ಸೋಲಿನ ಹಾದಿಯಲ್ಲಿರುವಾಗ ಅಭಿವೃದ್ಧಿ, ಆಡಳಿತದಲ್ಲಿದಕ್ಷತೆ, ಪಾರದರ್ಶಕತೆ,ಜನಪರತೆಗೆ ಒತ್ತು ಕೊಡುತ್ತೇನೆನ್ನುವ ಎಎಪಿ ಪಕ್ಷ ದ ವಿಜಯವನ್ನು ಗಮನಿಸಿದರೆ ಜನರು ಉತ್ತಮ ಪರ್ಯಾಯಗಳ ಹುಡುಕಾಟದಲ್ಲಿರುವುದು ಗೋಚರಿಸುತ್ತದೆ. ಕಾಂಗ್ರೆಸ್ಸಿಗರು, ಕಮ್ಯುನಿಸ್ಟರು ಈ ಸಂಗತಿ ಇನ್ನಾದರೂ ಅರ್ಥ ಮಾಡಿಕೊಳ್ಳಬೇಕು.
ಹೊಣೆ ಹೊರಬೇಕು: ಹಿಂಸೆ, ಗದ್ದಲಗಳಿಗೆ ಆಯಾ ಸಂಘಟನೆಗಳೇ ಹೊಣೆ ಹೊರಬೇಕು ಅಥವಾ ಹೊಣೆ ಹೊರಿಸಬೇಕು. ಎಂಐಎಂನ ಓವೈಸಿಯಿಂದ, ಕಾಂಗ್ರೆಸ್‌, ಕಮ್ಯುನಿಸ್ಟ್‌, ಬಿಜೆಪಿ ಎಲ್ಲರೂ ಅದೇ ನೀತಿ ಅನುಸರಿಸಲಿ. ಆಗ ಪೊಲೀಸರಿಗೆ, ಕಾನೂನಿಗೆ ಎಲ್ಲಿಯ ಕೆಲಸ!
ದೇಶವಿರೋಧಿ ಕೃತ್ಯಕ್ಕೆ ಪರಿಹಾರ ಏನು?: ಕಾಂಗ್ರೆಸ್ಸಿಗರು ಸೆಕ್ಯುಲರ್‌ ಪಕ್ಷ ಗಳು ತುಷ್ಟೀಕರಣ ಬಿಡಲಿ, ಕಮ್ಯುನಿಷ್ಟರು ನಕ್ಸಲರಿಂದ ಹಿಡಿದು ಪಾಕಿಸ್ತಾನದ ಪರ ಘೋಷಣೆ ಕೂಗುವವರಿಗೆ ಸಹಾನುಭೂತಿ ತೋರುವುದನ್ನು ನಿಲ್ಲಿಸಲಿ. ದೇಶಭಕ್ತಿ ಎಂಬ ಬ್ರಾಂಡಿಂಗ್‌ ಅಪಬಳಕೆಗೆ ಬಿಜೆಪಿ ಕಡಿವಾಣ ಹಾಕಲಿ. ದೇಶಭಕ್ತಿಯೂ ಮಾರಾಟದ, ಲಾಭ-ನಷ್ಟದ ಲೆಕ್ಕಾಚಾರದ ಸರಕಾಗಬಾರದು; ದೇಶದ್ರೋಹವೂ ಮಾರಾಟದ ಸರಕಾಗಬಾರದು. ಅಲ್ಲಿಗೆ ಮುಕ್ಕಾಲು ಭಾಗ ಸಮಸ್ಯೆ ಪರಿಹಾರ ಆದಂತೆಯೇ.
ಅಖಂಡ ಭಾರತದ ತಾಕಲಾಟ?: ಅಖಂಡ ಭಾರತ ಒಂದು ಅದ್ಭುತ ಕಲ್ಪನೆ. ಖಂಡಭಾರತವನ್ನೇ ನಿಭಾಯಿಸಲಾಗದೇ ತಿಣುಕಾಡುವಾಗ ಅಖಂಡ ಭಾರತದ ಬಗ್ಗೆ ಮಾತನಾಡುವುದು ಎಷ್ಟು ಸರಿ. ನಿಜಾರ್ಥದಲ್ಲಿಅದು ಆಗದ ಮಾತು. ಆಗಬಾರದಂತಹ ಮಾತು. ಪಾಕಿಸ್ತಾನ, ಅಪಘಾನಿಸ್ತಾನಗಳನ್ನೆಲ್ಲಕಟ್ಟಿಕೊಂಡು ಬಾಳುವುದೆಂತು, ಸಂಭಾಳಿಸುವುದೆಂತು?! ಆದರೆ ಒಂದು ಸಾಧ್ಯತೆ ಇದೆ. ಅದೇನೆಂದರೆ ಭೌಗೋಳಿಕವಾಗಿ, ಸಾಂಸ್ಕೃತಿಕವಾಗಿ, ರಾಜಕೀಯವಾಗಿ ಆಗದ ಅಖಂಡ ಭಾರತ ರಾಜತಾಂತ್ರಿಕವಾಗಿ ಸಾಧ್ಯವಾಗುವುದಾದರೆ ಅದಕ್ಕಿಂತ ಉತ್ತಮ ಕೆಲಸ ಮತ್ತೊಂದಿಲ್ಲ. ಭಾರತದ ಬಹುಪಾಲು ಸಮಸ್ಯೆ, ವೇದನೆಗಳಿಗೆ ಬೇರೆ ಪರಿಹಾರ ಬೇಕಿಲ್ಲ. ಅಂಥ ದಿನ ಬರಲಿ ಎಂದು ಬಯಸೋಣ.
ಓದುಗರ ಒಡಲಾಳ
ಸರಕಾರಿ ಯಂತ್ರ ಚುರುಕಾಗಬೇಕು, ಅಧಿಕಾರಿಗಳು ಸಿಬ್ಬಂದಿ ದಕ್ಷ ತೆ, ಪ್ರಾಮಾಣಿಕತೆ ರೂಢಿಸಿಕೊಳ್ಳಬೇಕು ಎಂದು ಮುಖ್ಯಮಂತ್ರಿಯಿಂದ ಶ್ರೀಸಾಮಾನ್ಯನವರೆಗೆ ಎಲ್ಲರೂ ಹೇಳುತ್ತಾರೆ. ತಪ್ಪು ಮಾಡಿದರೆ, ಕಾಯಿದೆ ಉಲ್ಲಂಘಿಸಿದರೆ ಜುಲ್ಮಾನೆಯನ್ನೂ ವಿಧಿಸುತ್ತಾರೆ. ಅದರ ಬದಲು ಉತ್ತಮ ಕೆಲಸಕ್ಕೆ ಮಾನದಂಡ ರೂಪಿಸಿ ಇನಾಮು ಕೊಡುವ ಪರಿಪಾಠವನ್ನು ದೊಡ್ಡ ಪ್ರಮಾಣದಲ್ಲಿಏಕೆ ಮಾಡುವುದಿಲ್ಲ. ಈ ಬಗ್ಗೆ ವಿಕ ವಿಸ್ತಾರ ಸರಕಾರದ ಗಮನ ಸೆಳೆಯಬಹುದೇ?
ಬಾಲಚಂದ್ರ ಭಟ್ಟ ಯಲ್ಲಾಪುರ

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top