ಈ ಅಪಾಯಕಾರಿ ಪಿಡುಗಿಗೆ ಸಹಾನುಭೂತಿ ತೋರುವುದನ್ನು ನಿಲ್ಲಿಸಿದರೆ ಅದೇ ಪರಿಹಾರ ಪಾಕಿಸ್ತಾನದ ಪರ ಅದೇಕೆ ಇಷ್ಟೊಂದು ಪ್ರೀತಿ! ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಘೋಷಣೆ ಕೂಗುವ ಪ್ರವೃತ್ತಿ ಕೊರೋನಾ ವೈರಸ್ ರೀತಿಯಲ್ಲಿಹಬ್ಬುತ್ತಿದೆ. ರಾಷ್ಟ್ರದ ಸಮಗ್ರತೆ ಮತ್ತು ಏಕತೆಯ ದೃಷ್ಟಿಯಿಂದ ಇದು ಖಂಡಿತಕ್ಕೂ ಒಳ್ಳೆಯ ಬೆಳವಣಿಗೆಯಲ್ಲ. ಈ ವಿಷಬೀಜ ಮೊಳಕೆಯೊಡೆದದ್ದು ದಿಲ್ಲಿಯ ಜೆಎನ್ಯು ಕ್ಯಾಂಪಸ್ನಿಂದ ಎನ್ನುತ್ತಾರೆ. ಅದಕ್ಕೆ ಪುರಾವೆಗಳೂ ಸಿಗುತ್ತಿವೆ. ಹಲವು ವರ್ಷಗಳಿಂದ ಸುಪ್ತವಾಗಿ ಪ್ರವಹಿಸಿ ಗಟ್ಟಿಗೊಳ್ಳುತ್ತಲಿದ್ದ ಆ ಮಾನಸಿಕತೆ ಕೆಲ ವರ್ಷಗಳ ಹಿಂದೆ ಬಹಿರಂಗ ಸ್ವರೂಪ ಪಡೆದುಕೊಂಡಿತು. ಜೆಎನ್ಯು […]
Read More
ಪೌರತ್ವ ಕಾಯಿದೆ : ಅಪಾಯ ಬಿತ್ತಿ ಬೆಳೆದ ಅರ್ಧಸತ್ಯಗಳು ಜತನದಿಂದ ಕಾಪಾಡಿಕೊಂಡು ಬಂದ ಮತೀಯ ಸಾಮರಸ್ಯಕ್ಕೆ ಪೆಟ್ಟು, ದೇಶದ ಪ್ರತಿಷ್ಠೆಗೆ ಘಾಸಿ ಮಾಡಿದ ಅಶಾಂತಿ ಭಾರತದ ಜನತಂತ್ರಾತ್ಮಕ ಗಣರಾಜ್ಯ ಎಂದೂ ಕೂಡ ಬನಾನಾ ರಿಪಬ್ಲಿಕ್ ಆಗಲು ಸಾಧ್ಯವೇ ಇಲ್ಲ. ಈ ಅದಮ್ಯ ಆತ್ಮವಿಶ್ವಾಸಕ್ಕೆ ಕಾರಣ ನಮ್ಮ ಶ್ರೇಷ್ಠ ಸಂವಿಧಾನ. ಜಗತ್ತಿನ 220 ದೇಶಗಳ ಪೈಕಿ 180 ಪ್ರಜಾತಂತ್ರ ದೇಶಗಳಲ್ಲಿರುವ ಶ್ರೇಷ್ಠ ಮಾದರಿಗಳನ್ನು ಅಧ್ಯಯನ ನಡೆಸಿ, ರೂಪುಗೊಂಡಿರುವ ಸರ್ವಶ್ರೇಷ್ಠವಾದ ಸಂವಿಧಾನ ನಮ್ಮದು. ಹಾಗಾಗಿ ಇದು ಇಡೀ ಜಗತ್ತಿನಲ್ಲೇ ಅತ್ಯಂತ […]
Read More
ಸಿನಿಮಾ ಕೂಡ ಅಮಿತಾಭ್ಗೆ ಏಕಾಏಕಿ ದಕ್ಕಿದ್ದಲ್ಲ. ಅವರಿಗೆ 30 ವರ್ಷ ಆಗುವ ಹೊತ್ತಿಗೆ ಒಂದಲ್ಲ, ಎರಡಲ್ಲ ಸತತ 12 ಸಿನಿಮಾಗಳು ಫ್ಲಾಪ್ ಆದವು. ಅಮಿತಾಭ್ ಬಚ್ಚನ್ ಅಂದ್ರೆ ಛಲ, ಸಾಹಸ, ಸ್ಫೂರ್ತಿ ಮತ್ತು ಒಂದು ಯಶಸ್ವಿ ಮಾದರಿಯ(ಬ್ರಾಂಡ್) ಸಂಕೇತ, ಈ ಎಲ್ಲವುಗಳ ಬಹುದೊಡ್ಡ ರೂಪಕ. ಬಚ್ಚನ್ ಜೀವನದ ನಾನಾ ಮಜಲುಗಳ ಮೇಲೆ ಒಮ್ಮೆ ಕಣ್ಣಾಡಿಸಿದರೆ, ಎಂಥವರಿಗೂ ಇದು ಮನವರಿಕೆ ಆಗದೆ ಇರದು. ತನ್ನ ಜೀವಿತಾವಧಿಯಲ್ಲೇ ದಂತಕತೆಯಾದ ವ್ಯಕ್ತಿ ನಮ್ಮ ನಡುವೆ ಯಾರಾದರೂ ಇದ್ದರೆ ಅದು ಅಮಿತಾಭ್ ಮಾತ್ರ ಎಂದು […]
Read More
ಈಗಿನ ಸನ್ನಿವೇಶವನ್ನು ಅವಲೋಕಿಸಿದರೆ, ವೀರಶೈವ-ಲಿಂಗಾಯತಕ್ಕೆ ಸೂತ್ರಸಂಬಂಧ ಇಲ್ಲದವರು ಧರ್ಮ ಸ್ಥಾಪನೆಗೆ ಮುಂದಾಗಿರುವುದು ಕಾಣುತ್ತದೆ. ಈ ವಿಷಯವನ್ನು ಧರ್ಮ, ಸಂಸ್ಕೃತಿ, ಇತಿಹಾಸ, ಪುರಾಣಗಳ ತಳಹದಿಗಿಂತ ಹೆಚ್ಚಾಗಿ ರಾಜಕೀಯದ ಹಿನ್ನೆಲೆಯಿಂದ ನೋಡುವುದೇ ಉಚಿತ ಎನಿಸುತ್ತದೆ. ಸಿಎಂ ಸಿದ್ದರಾಮಯ್ಯನವರ ಆಸಕ್ತಿಯಂತೆ ಲಿಂಗಾಯತ ಧರ್ಮದ ಸ್ಥಾಪನೆಗೆ ರಾಜ್ಯ ಸರ್ಕಾರವೇ ಪೌರೋಹಿತ್ಯ ವಹಿಸಿಕೊಂಡ ಮೇಲೆ ಹತ್ತು ಹಲವು ಟೀಕೆಗಳು ಕೇಳಿಬರುತ್ತಲೇ ಇವೆ. ಸಾಮಾಜಿಕ ಜಾಲತಾಣಗಳಲ್ಲಿ ಭಿನ್ನವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಆ ಪೈಕಿ ಗಮನ ಸೆಳೆದ ಒಂದು ಹೇಳಿಕೆ- ಅಂದು ಎಲ್ಲ ಜಾತಿಗಳನ್ನೂ ಒಂದುಮಾಡಲು ಪ್ರಯತ್ನಪಟ್ಟರು […]
Read More
ನಟ ಪ್ರಕಾಶ್ ರೈ ಮುಂದಿಡುತ್ತಿರುವ ವಾದಗಳ ಕುರಿತು ತದನಂತರದಲ್ಲಿ ಚರ್ಚೆ ಮಾಡೋಣ. ಅದಕ್ಕೂ ಮೊದಲು ಗಮನಿಸಲೇಬೇಕಾದ ಕೆಲ ಸಂಗತಿಗಳಿವೆ. ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಗ್ರಪ್ರಾಶಸ್ತ್ಯ ಇರುವುದು ನಿಜ. ಆದರೆ ಅದರ ಅರ್ಥ ಯಾರು ಬೇಕಾದರೂ, ಯಾರ ವಿರುದ್ಧ ಬೇಕಾದರೂ ಏನು ಬೇಕಾದರೂ ಮಾತನಾಡಬಹುದು ಅಂತಲ್ಲ. ಬಾಯಿಗೆ ಬಂದಂತೆ ಮಾತನಾಡಿದರೆ ಟಿವಿ ಚಾನೆಲ್ಗಳಿಗೆ ಆಹಾರ ಆಗಬಹುದೇ ಹೊರತು ಆಡಿದವನ ವ್ಯಕ್ತಿತ್ವವೇನೂ ಅರೆಕ್ಷಣದಲ್ಲಿ ಹಿಮಾಲಯದ ಎತ್ತರಕ್ಕೆ ಏರುವುದಿಲ್ಲ. ಇತಿಹಾಸ, ಪರಂಪರೆ ಬದಲಾಗಿಹೋಗುವುದಿಲ್ಲ. ಜನರು ನಂಬಿ ಅನುಸರಿಸುವುದಿಲ್ಲ. ಈ ಹಿನ್ನೆಲೆಯಲ್ಲಿ ಕೆಲವೊಂದು […]
Read More
ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅನಿರೀಕ್ಷಿತ ಫಲಿತಾಂಶ ಪಡೆದಿರುವುದು ಗೊತ್ತೇ ಇದೆ. ಅನಿರೀಕ್ಷಿತ ಫಲಿತಾಂಶ ಎಂದು ಉದ್ಗರಿಸಿದ ತಕ್ಷಣ ಪ್ರಮುಖವಾಗಿ ಎರಡು ಪ್ರಶ್ನೆಗಳು ಏಳುವುದು ಸಹಜ. ಗುಜರಾತಲ್ಲಿ ಬಿಜೆಪಿ ಸರಳ ಬಹುಮತ ಗಳಿಸುವ ಸಂಭವ ಇರಲಿಲ್ಲವೇ ಎಂಬ ಒಂದು ಅರ್ಥವನ್ನು ಈ ಪ್ರಶ್ನೆ ಧ್ವನಿಸಿದರೆ, ಬಿಜೆಪಿ ಇದಕ್ಕೂ ಹೆಚ್ಚಿನ ಸ್ಥಾನ ಗಳಿಸಲು ಸಾಧ್ಯವಿತ್ತೇ ಎಂಬ ಅರ್ಥವನ್ನೂ ಹೊರಹೊಮ್ಮಿಸುತ್ತದೆ. ವಾಸ್ತವದಲ್ಲಿ ಇವೆರಡೂ ಸಂಗತಿಗಳು ಸಹ ನಿಜವೆ. ಈಗ ಮೊದಲನೆಯ ಅಂಶವನ್ನು ಅವಲೋಕಿಸೋಣ. ಬಿಜೆಪಿ ಗುಜರಾತಲ್ಲಿ ಸರಳ ಬಹುಮತವನ್ನು ಗಳಿಸಲು […]
Read More
ಧರ್ಮಸ್ಥಳ ದೇಶವಿದೇಶಗಳಲ್ಲಿಯೂ ಖ್ಯಾತಿ ಪಡೆದ ಪುಣ್ಯಕ್ಷೇತ್ರ, ಕಾರಣಿಕ ಕ್ಷೇತ್ರ. ಶ್ರೀ ಕ್ಷೇತ್ರದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ ಹೆಸರೂ ಅಷ್ಟೇ ಸುಪರಿಚಿತ. ಧಾರ್ವಿುಕ, ಸಾಮಾಜಿಕ ಕಾರ್ಯಗಳಲ್ಲಿ ನಿರಂತರವಾಗಿ ತೊಡಗಿಕೊಂಡಿರುವ ಹೆಗ್ಗಡೆಯವರು ಈಗ ಪಟ್ಟಾಭಿಷೇಕದ 50ನೇ ವರ್ಷದ ಮಹತ್ವದ ಕಾಲಘಟ್ಟದಲ್ಲಿದ್ದಾರೆ. ವಿಜಯವಾಣಿ ಹಾಗೂ ದಿಗ್ವಿಜಯ ನ್ಯೂಸ್ ಪ್ರಧಾನ ಸಂಪಾದಕ ಹರಿಪ್ರಕಾಶ ಕೋಣೆಮನೆಯವರಿಗೆ ನೀಡಿದ ಈ ವಿಶೇಷ ಸಂದರ್ಶನದಲ್ಲಿ ಡಾ.ಹೆಗ್ಗಡೆಯವರು ತಮ್ಮ ಸುದೀರ್ಘ ಪಯಣದ ವಿವರಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ. ಭಾಗ 1 # ಸಾಮಾಜಿಕ ಕಾರ್ಯ ಧರ್ಮಸ್ಥಳ ಕ್ಷೇತ್ರಕ್ಕೆ ವಿಶಿಷ್ಟ ಸ್ಥಾನಮಾನವನ್ನು […]
Read More
ಕೆಲವು ಎನ್ಜಿಒಗಳು ಭಾರತದ ಘನತೆ ಗೌರವವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಾಜು ಹಾಕಲೆಂದೇ ಕಾರ್ಯನಿರ್ವಹಿಸುತ್ತಿವೆ. ಈ ಘನಂದಾರಿ ಕೆಲಸಕ್ಕಾಗಿ ಅವಕ್ಕೆ ಅಪಾರ ಪ್ರಮಾಣದ ಧನ ಸಹಾಯವೂ ಬರುತ್ತದೆ. ಈ ಹುನ್ನಾರವನ್ನು ಅರಿಯದೆ ವಿದೇಶಿ ನೆಲದಲ್ಲಿ ಭಾರತವನ್ನು ಬೈಯುವುದಕ್ಕೆ ಏನೆನ್ನಬೇಕೋ ತಿಳಿಯದು. ರಾಹುಲ್ ಗಾಂಧಿ ಕೊನೆಗೂ ಕಾಂಗ್ರೆಸ್ ಗಾಡಿಯ ನೊಗಕ್ಕೆ ಹೆಗಲು ಕೊಡಲು ಮನಸ್ಸು ಮಾಡಿದ್ದಾರೆ. ಅಷ್ಟು ಮಾತ್ರವಲ್ಲ, ದೇಶದ ಪ್ರಧಾನಮಂತ್ರಿಯೂ ಆಗುತ್ತೇನೆಂದು ಹೇಳುವ ಧೈರ್ಯ ತೋರಿದ್ದಾರೆ. ಅದು ಒಳ್ಳೆಯದೇ ಅಂತಿಟ್ಟುಕೊಳ್ಳೋಣ. ಈ ಘೊಷಣೆಯಿಂದ ಯಾರಿಗೆ ಎಷ್ಟು ಸಮಾಧಾನ, ಖುಷಿಯಾಗಿದೆಯೋ […]
Read More
ತನ್ನ ಸಾಮ್ರಾಜ್ಯವಾದ ವಿಸ್ತರಣೆಗೆ ಭಾರತವೇ ದೊಡ್ಡ ಅಡ್ಡಿ ಎಂಬುದು ಚೀನಾದ ಅಸಮಾಧಾನ. ಹೀಗಾಗಿ ಲಭ್ಯ ವೇದಿಕೆಗಳನ್ನೆಲ್ಲ ಬಳಸಿಕೊಂಡು ಭಾರತಕ್ಕೆ ತಲೆನೋವು ತರುವುದು ಅದರ ಕಾರ್ಯತಂತ್ರ. ಆದರೆ ಭಾರತ ಬದಲಾಗಿದೆ ಎಂಬ ಸ್ಪಷ್ಟ ಸಂದೇಶ ಡೋಕ್ಲಂ ಬಿಕ್ಕಟ್ಟಿನ ಸಂದರ್ಭದಲ್ಲಿ ರವಾನೆಯಾಗಿದೆ. ಇನ್ನೇನು ಭಾರತದ ಮೇಲೆ ಚೀನಾ ಯುದ್ಧ ನಡೆಸಿಯೇಬಿಟ್ಟಿತು ಎಂಬ ಸ್ಥಿತಿ ನಿರ್ಮಾಣ ಆದಾಗಲೂ ಪ್ರಧಾನಿ ನರೇಂದ್ರ ಮೋದಿ ಯಾಕೆ ಮೌನ ಮುರಿಯಲಿಲ್ಲ? ಚೀನಾದ ಸತತ ತರ್ಲೆಗಳಿಗೆ ಬಹಿರಂಗ ಉತ್ತರ ಕೊಡುವುದಕ್ಕೆ ಅವರೇಕೆ ಮುಂದಾಗಲಿಲ್ಲ ಎಂಬ ಪ್ರಶ್ನೆಗಳಿಗೆ ಈಗ […]
Read More