ಕೆಲಸಕ್ಕೆ ಬೇಕಾಗಿದ್ದಾರೆ

– ಉದ್ಯೋಗ ನಷ್ಟದ ನಡುವೆಯೂ ಆಶಾಕಿರಣ | ಹಲವು ಕ್ಷೇತ್ರಗಳಲ್ಲಿ ಬೇಡಿಕೆ ಸೃಷ್ಟಿ – ಕಾರ್ಮಿಕರ ವಲಸೆಯಿಂದ ಸ್ಥಳೀಯರಿಗೆ ಭರವಸೆ | ದೇಶಾದ್ಯಂತ ಹೊಸ ಟ್ರೆಂಡ್. ವಿಕ ಸುದ್ದಿಲೋಕ ಬೆಂಗಳೂರು:  ಲಾಕ್‌ಡೌನ್‌ ಸಡಿಲಿಕೆಯಾಗುತ್ತಿದ್ದಂತೆಯೇ ರಾಜ್ಯದಲ್ಲಿ ಕೈಗಾರಿಕೆ ಮತ್ತು ವ್ಯವಹಾರೋದ್ಯಮಗಳು ನಿಧಾನವಾಗಿ ಚಿಗುರಿಕೊಳ್ಳುತ್ತಿವೆ. ಈ ನಡುವೆ, ಉದ್ಯೋಗಿಗಳಿಗೂ ಬೇಡಿಕೆ ಸೃಷ್ಟಿಯಾಗಿ ಆಶಾವಾದ ಮೂಡಿಸಿದೆ.ಲಾಕ್‌ಡೌನ್‌ನಿಂದಾಗಿ ಆರ್ಥಿಕ ಕ್ಷೇತ್ರ ತತ್ತರಿಸಿ ಹೋಗಿದ್ದು, ಕೈಗಾರಿಕೆ, ವ್ಯಾಪಾರೋದ್ಯಮಗಳು ಸಂಕಷ್ಟಕ್ಕೆ ಸಿಲುಕಿದ್ದವು. ಸಾವಿರಾರು ಮಂದಿ ಉದ್ಯೋಗ ಕಳೆದುಕೊಂಡು ಜಾಬ್‌ಲಾಸ್‌ನ ಹೊಡೆತವೂ ತೀವ್ರವಾಗಿತ್ತು. ಈ ನಡುವೆ, ಆರ್ಥಿಕ […]

Read More

ಕಳವಾಗಿದ್ದ ಬೈಕ್ ಮನೆಗೆ ಪಾರ್ಸೆಲ್ ಬಂದಾಗ!

– 15 ದಿನದ ಬಳಿಕ ಮಾಲೀಕನಿಗೆ ಹಿಂದಿರುಗಿಸಿದ ಕಳ್ಳ – ಕೊಯಮತ್ತೂರಿನಲ್ಲೊಂದು ಅಪರೂಪದ ಘಟನೆ ಕೊಯಮತ್ತೂರು: ಕೊರೊನಾ ಬಿಕ್ಕಟ್ಟಿನ ಸಮಯದಲ್ಲಿ ಹೊಸದು ಸಂಪಾದಿಸುವುದಿರಲಿ, ಇರುವುದನ್ನು ಉಳಿಸಿಕೊಂಡರೆ ಸಾಕು ಎಂಬ ಪರಿಸ್ಥಿತಿ ಬಹುತೇಕ ಜನರದ್ದು. ಅಂಥದ್ದರಲ್ಲಿ ನಿಲ್ಲಿಸಿದ್ದ ಸ್ಥಳದಿಂದ ಬೈಕ್ ಮಾಯವಾದರೆ ಮಾಲೀಕನ ಸ್ಥಿತಿ ಹೇಗಿರಬಹುದು? ಆದರೆ 15 ದಿನದಲ್ಲೇ ಆ ಬೈಕ್ ಮನೆಗೆ ಪಾರ್ಸಲ್ ಬಂದರೆ ಆತನಿಗೆ ಹೇಗಾಗಬಹುದು? ತಮಿಳುನಾಡಿನ ಕೊಯಮತ್ತೂರಿನಲ್ಲಿ ಇಂಥದ್ದೇ ಅಪರೂಪದ ಘಟನೆ ನಡೆದಿದೆ. ಕೊರೊನಾ ಲಾಕ್‌ಡೌನ್‌ ಸಮಯದಲ್ಲಿ ಊರಿಗೆ ಮರಳಲು ವಾಹನವಿಲ್ಲದೆ ಬೈಕ್ […]

Read More

ಕೊರೊನಾ ಕುತ್ತಿಗೆಗೆ ಹಾಕಬಹುದೆ ವಿಟಮಿನ್‌ ಡಿ ಕುಣಿಕೆ?

– ಡಿ ಜೀವಸತ್ವ ಕಡಿಮೆಯಾದರೆ ಸೋಂಕಿನ ಹಾವಳಿ, ಹೆಚ್ಚಾದರೆ ಪ್ರತಿರೋಧದ ಸುಂಟರಗಾಳಿ. – ಸುಧೀಂದ್ರ ಹಾಲ್ದೊಡ್ಡೇರಿ. ಕೋವಿಡ್‌-19 ಹಾವಳಿ ಕುರಿತಂತೆ ಜಗತ್ತಿನಾದ್ಯಂತ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆಗಳು ಜರುಗುತ್ತಿರುವುದು ನಿಮಗೆ ಗೊತ್ತು. ಅಮೆರಿಕದ ಇಲಿನಾಯ್ಸ್‌ನಲ್ಲಿರುವ ನಾರ್ಥ್‌ ವೆಸ್ಟರ್ನ್‌ ಯೂನಿವರ್ಸಿಟಿಯ ವೈದ್ಯ ವಿಜ್ಞಾನಿಗಳು ತಮ್ಮ ಅಧ್ಯಯನಕ್ಕೆ ಕೋವಿಡ್‌-19 ಸೋಂಕಿನಿಂದ ಹೆಚ್ಚು ನಲುಗಿದ ದೇಶಗಳಾದ ಚೀನಾ, ಫ್ರಾನ್ಸ್‌, ಜರ್ಮನಿ, ಇಟಲಿ, ಇರಾನ್‌, ಸೌತ್‌ಕೊರಿಯ, ಸ್ಪೇನ್‌, ಸ್ವಿಝರ್‌ಲೆಂಡ್‌, ಬ್ರಿಟನ್‌ ಹಾಗೂ ಅಮೆರಿಕವನ್ನು ಆಯ್ದುಕೊಂಡರು. ಈ ಎಲ್ಲ ದೇಶಗಳಲ್ಲಿ ಸೋಂಕಿನಿಂದ ಸತ್ತವರ ಆಸ್ಪತ್ರೆ ದಾಖಲೆಗಳನ್ನು […]

Read More

ಕರಿಯ ಬಿಳಿಯ ಕಲಹ, ಕೆಂಪಾದ ಅಮೆರಿಕ

ಕೊರೊನಾ ವೈರಸ್ ಹಾವಳಿಯ ನಡುವೆಯೂ ಸಾವಿರಾರು ಜನ ಅಮೆರಿಕದಲ್ಲಿ ರಸ್ತೆಗಿಳಿದು ಪ್ರತಿಭಟಿಸುತ್ತಿದ್ದಾರೆ. ಜಾರ್ಜ್ ಫ್ಲಾಯ್ಡ್ ಎಂಬ ಕಪ್ಪು ವರ್ಣೀಯನನ್ನು ಪೊಲೀಸರು ಕೊಂದು ಹಾಕಿದ ನಂತರ ಈ ಪ್ರತಿಭಟನೆಯ ಜ್ವಾಲೆ ಭುಗಿಲೆದ್ದಿದೆ. ಅಮೆರಿಕದ ಆಳದಲ್ಲಿ ಸದಾ ಜೀವಂತವಾಗಿರುವ ವರ್ಣದ್ವೇಷ ಮತ್ತೊಮ್ಮೆ ಭುಗಿಲೆದ್ದಿದೆ. ಶ್ವೇತವರ್ಣೀಯರು- ಕಪ್ಪುವರ್ಣೀಯರ ನಡುವೆ ತಲೆಮಾರುಗಳಿಂದ ಹರಿದುಬಂದ ದ್ವೇಷ ಪ್ರಕಟವಾಗಲು ಮತ್ತೊಂದು ಘಟನೆ ಕಾರಣವಾಗಿದೆ. ಹೆಚ್ಚಿನ ಸಲ ನಡೆಯುವಂತೆ, ಈ ಬಾರಿಯೂ ಅದಕ್ಕೆ ಕಾರಣರಾದವರು ಶ್ವೇತವರ್ಣೀಯ ಪೊಲೀಸರು. ಕರಿಯ ಅಮೆರಿಕನ್ನರ ಜೊತೆಗೆ ಸದಾ ಒರಟುತನ, ಅಸೂಕ್ಷ್ಮ ರೀತಿಯಲ್ಲಿ […]

Read More

ರೈತರಿಗೆ ಬಂಪರ್ ಕೊಡುಗೆ

– 14 ಮುಂಗಾರು ಬೆಳೆಗಳ ಕನಿಷ್ಠ ಬೆಂಬಲ ಬೆಲೆ ಏರಿಕೆ | ರೈತರ ಲಾಭ 50% ಹೆಚ್ಚಳಕ್ಕೆ ಕ್ರಮ. – ಸಣ್ಣ ಕೈಗಾರಿಕೆಗೆ ಮತ್ತಷ್ಟು ನೆರವಿನ ಪ್ಯಾಕೇಜ್ | ಬೀದಿ ವ್ಯಾಪಾರಿಗಳಿಗೆ ಸುಲಭ ಸಾಲ. – 50%-83%: ವಿವಿಧ ಬೆಳೆಗಳಿಗೆ ಹೆಚ್ಚಿಸಲಾದ ಎಂಎಸ್‌ಪಿ ಪ್ರಮಾಣ. – 2020- 21: ಕನಿಷ್ಠ ಬೆಂಬಲ ಬೆಲೆ ಹೆಚ್ಚಳ ಅನ್ವಯವಾಗುವ ಅವಧಿ. – 35 ಲಕ್ಷ ಹೆಕ್ಟೇರ್ ಈಗಾಗಲೇ ಭತ್ತ ನಾಟಿ ಆರಂಭವಾಗಿರುವ ಕೃಷಿ ಭೂಮಿ. ಹೊಸದಿಲ್ಲಿ: ಲಾಕ್‌ಡೌನ್‌, ಬೆಲೆ ಕುಸಿತ, […]

Read More

ಅಂತರಿಕ್ಷವೇರಿದ ಮೊದಲ ಖಾಸಗಿ ತೇರು

– ಸುಧೀಂದ್ರ ಹಾಲ್ದೊಡ್ಡೇರಿ.  ಬಸ್ಸಿರಲಿ, ವಿಮಾನವಿರಲಿ ಸಾರಿಗೆ ಸೇವೆ ‘ಖಾಸಗಿ’ ಎಂದರೆ ನಮ್ಮ ಜನರಿಗೆ ರೋಮಾಂಚನ. ಖಾಸಗಿಯೆಂದರೆ ಸೇವೆ ಉತ್ಕೃಷ್ಟವಾಗಿರಲೇಬೇಕು ಎಂಬ ನಿರೀಕ್ಷೆ. ಈ ವಿಷಯದಲ್ಲಿ ಅಮೆರಿಕವೂ ಹೊರತಲ್ಲ. ಮೊನ್ನೆ ಶನಿವಾರ ರಾತ್ರಿ ಫ್ಲಾರಿಡಾದ ಕೇಪ್‌ ಕ್ಯಾನವೆರಲ್‌ನಲ್ಲಿ ಲಕ್ಷಾಂತರ ಮಂದಿ ನೆರೆದಿದ್ದರು. ಅಮೆರಿಕದ ಬಾಹ್ಯಾಕಾಶ ಸಂಸ್ಥೆ ‘ನಾಸಾ’ ನೂರಾರು ನೌಕೆಗಳನ್ನು ಬಾಹ್ಯಾಕಾಶಕ್ಕೆ ತೂರಿದೆ. ಅವೆಲ್ಲದರ ಉಡ್ಡಯನ ಸಮಯದಲ್ಲಿ ಇಷ್ಟೊಂದು ಜನ ಜಮಾಯಿಸಿರಲಿಲ್ಲ. ಆದರೆ, ಈ ಬಾರಿ ಸಾರ್ವಜನಿಕ ಪ್ರವೇಶಕ್ಕೆ ನೂರೆಂಟು ನಿರ್ಬಂಧಗಳಿದ್ದರೂ ಜನ ಕಾದಿದ್ದರು. ಮಾಧ್ಯಮ ಪ್ರತಿನಿಧಿಗಳು, […]

Read More

ಗ್ರಾಮೀಣ ಆರ್ಥಿಕತೆ ಮೇಲೆತ್ತಿದ ಕ್ಷೀರ ಕ್ರಾಂತಿ

ಬಡತನದಿಂದ ಬಳಲುತ್ತಿದ್ದ ಭಾರತದ ಗ್ರಾಮೀಣ ಜನತೆ ತುಸುವಾದರೂ ಹಣದ ಮುಖ ನೋಡಲು ಸಾಧ್ಯವಾದದ್ದು ಕ್ಷೀರ ಕ್ರಾಂತಿಯಿಂದ. ಮಹಿಳೆಯರು ಸ್ವಾವಲಂಬಿಗಳಾಗಲು, ಮಕ್ಕಳು ಪೌಷ್ಟಿಕ ಆಹಾರ ಪಡೆಯಲು ಕಾರಣವಾದ ಈ ಕ್ಷೀರ ಕ್ರಾಂತಿ, ಹಸಿರು ಕ್ರಾಂತಿಯ ಜೊತೆಗೇ ಉಲ್ಲೇಖಿಸಬೇಕಾದ್ದು. 1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ದೊರೆತಾಗ, ನಮ್ಮ ಜನತೆಗೆ ಅಗತ್ಯವಾದಷ್ಟು ಆಹಾರಧಾನ್ಯ ಬೆಳೆಯುತ್ತಿರಲಿಲ್ಲ. ಇದನ್ನು ನಿವಾರಿಸಲು ಬೃಹತ್‌ ಕೃಷಿಕ್ಷೇತ್ರಗಳ ಬಳಕೆ, ಆಧುನಿಕ ಯಂತ್ರೋಪಕರಣಗಳು, ರಸಗೊಬ್ಬರಗಳು, ಹೈಬ್ರಿಡ್‌ ತಳಿಗಳು ಇತ್ಯಾದಿಗಳನ್ನು ಬಳಸಿ ‘ಹಸಿರು ಕ್ರಾಂತಿ’ ನಡೆಸಲಾಯಿತು. 60ರ ದಶಕದಲ್ಲಿ ಇದಕ್ಕೆ ವೇಗ ದೊರೆಯಿತು. […]

Read More

ಅಗ್ಗದ ಕೀಟನಾಶಕ ಬ್ಯಾನ್‌?

– 27 ಪೆಸ್ಟಿಸೈಡ್ಸ್‌ ನಿಷೇಧಕ್ಕೆ ಕೇಂದ್ರದ ಪ್ರಸ್ತಾಪ – ಪರ್ಯಾಯ ನಾಶಕಗಳು ದುಬಾರಿ ಆತಂಕ. ಕಿರಣ್‌ ಕುಮಾರ್‌ ಡಿ. ಕೆ ಬೆಂಗಳೂರು.   ಹಲವು ದಶಕಗಳಿಂದ ಜನಪ್ರಿಯವಾಗಿರುವ ಹಾಗೂ ಪರಿಣಾಮಕಾರಿ ಫಲಿತಾಂಶ ನೀಡುತ್ತಿರುವ 27 ಕೀಟನಾಶಕಗಳ ನಿಷೇಧಕ್ಕೆ ಕೇಂದ್ರ ಸರಕಾರ ಕರಡು ಪ್ರಸ್ತಾವನೆ ಸಿದ್ಧಪಡಿಸಿದೆ. ಇವುಗಳಲ್ಲಿ ಹೆಚ್ಚಿನವು ಕಡಿಮೆ ಅಪಾಯಕಾರಿಯಾಗಿರುವ ಅಗ್ಗದ ಜನರಿಕ್‌ ಕೀಟನಾಶಕಗಳೇ ಆಗಿರುವುದು ರೈತರಲ್ಲಿ ಆತಂಕ ಮೂಡಿಸಿದೆ. ಈಗಾಗಲೇ ಅಧಿಕ ನಿರ್ವಹಣಾ ವೆಚ್ಚ ಹಾಗೂ ಬೆಳೆದ ಉತ್ಪನ್ನಗಳಿಗೆ ದರ ಕುಸಿತದಿಂದ ಹೈರಾಣಾಗಿರುವ ರೈತರು, ದುಬಾರಿ ದರ […]

Read More

ಕರುನಾಡ ಕಟ್ಟೋಣ… ಜೊತೆಯಾಗಿ ಮುನ್ನಡೆಯೋಣ ಬನ್ನಿ – ಕೊರೊನೋತ್ತರ ಕರ್ನಾಟಕದ ಪುನಃಶ್ಚೇತನಕ್ಕೆ ವಿಕ ಅಭಿಯಾನ -ಸ್ವಾವಲಂಬೀ ಕರ್ನಾಟಕ ನಿರ್ಮಾಣಕ್ಕೆ ಒಂದು ಹೆಜ್ಜೆ

ಕೊರೊನಾ ಇಡೀ ಜಗತ್ತನ್ನೇ ಕಾಡಿದ ಸಂಕಷ್ಟ. ಇದರ ಹೊಡೆತಕ್ಕೆ ವಿಶ್ವದ ಬಲಾಢ್ಯ ದೇಶಗಳೇ ನಲುಗಿವೆ. ಆರ್ಥಿಕ ಪ್ರಬಲ ರಾಷ್ಟ್ರಗಳೇ ಭವಿಷ್ಯದ ಆತಂಕಕ್ಕೆ ಸಿಲುಕಿವೆ. ಅದೇ ವೇಳೆ ಭಾರತ ಕೊರೊನಾ ಸವಾಲನ್ನು ಎದುರಿಸಿದ ರೀತಿಗೆ ಜಗತ್ತಿನ ಮೆಚ್ಚುಗೆ ಸಿಕ್ಕಿದೆ. ಭಾರತದೊಳಗಿನ ರಾಜ್ಯಗಳಿಗೆ ಸಂಬಂಧಿಸಿ ಹೇಳುವುದಾದರೆ ಕರ್ನಾಟಕವು ಕೊರೊನಾ ವಿರುದ್ಧ ಯಶಸ್ವಿಯಾಗಿ ಸೆಣಸಿದ ರಾಜ್ಯಗಳ ಪೈಕಿ ಎರಡನೇ ಸ್ಥಾನದಲ್ಲಿದೆ. ಕೊರೊನಾವನ್ನು ನಾವು ಸಂಘಟಿತವಾಗಿ, ಸಮರ್ಥವಾಗಿ ಎದುರಿಸಿದ್ದನ್ನು ಎಲ್ಲರೂ ಮನಗಾಣಬೇಕಿರುವ ಸತ್ಯ. ಈ ವಿಚಾರದಲ್ಲಿ ದೇಶ ಮತ್ತು ರಾಜ್ಯದ ಯಶಸ್ವಿ ನಾಯಕತ್ವಕ್ಕೆ, […]

Read More

ಕೊರೊನಾ ಹಿನ್ನೆಲೆಯಲ್ಲಿ ಒಂದು ಧ್ಯಾನ !

– ಪಿ.ಶೇಷಾದ್ರಿ.   ಬೆಂಗಳೂರಿನಲ್ಲಿ ನಾನಿರುವ ಮನೆ ನಗರದ ನಡುವಿನ ವಸತಿ ಸಮುಚ್ಛಯದ ಆರನೇ ಮಹಡಿಯಲ್ಲಿದೆ. ಬೆಳಗ್ಗೆ ಎದ್ದ ತಕ್ಷಣ ನಮಗೆ ಕೇಳಿಸುವ ಮೊದಲ ಶಬ್ದ ಹಕ್ಕಿಗಳ ಚಿಲಿಪಿಲಿ. ಈ ನಗರದ ಮಧ್ಯೆ ಹಕ್ಕಿಗಳ ಕಲರವ ಕೇಳಲು ಮುಖ್ಯ ಕಾರಣವೆಂದರೆ ನಮ್ಮ ಅಪಾರ್ಟ್‌ಮೆಂಟ್‌ಗೆ ಹೊಂದಿಕೊಂಡಂತೆ ಇರುವ ಐದೆಕರೆ ಖಾಲಿ ಸೈಟು! ಪ್ರಾಯಶಃ ಯಾವುದೋ ತಕರಾರಿನಿಂದ ಅದು ಖಾಲಿ ಉಳಿದಿದೆ ಅಷ್ಟೆ. ಈ ಖಾಲಿ ಜಾಗದಲ್ಲಿ ದಟ್ಟವಾಗಿ ಗಿಡ ಮರಗಳು ಬೆಳೆದುಕೊಂಡು, ಪುಟ್ಟ ಕಾಡಿನಂತಿದೆ. ಇಲ್ಲಿ ಹಕ್ಕಿಗಳು ಸಂತೋಷದಿಂದ ಸಂಸಾರ […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top