ಪೊಲೀಸರಿಗೆ ಸವಾಲ್‌

ಒಂದೇ ದಿನ ಐವರಿಗೆ ಸೋಂಕು |  ಕರಾವಳಿಯ 4 ಠಾಣೆ ಸೀಲ್‌ಡೌನ್.   ‌ಸೂಕ್ತ ತರಬೇತಿ, ರಕ್ಷಣಾ ಪರಿಕರವಿಲ್ಲದೆ ಅಪಾಯಕ್ಕೆ ಸಿಲುಕುವ ಸಿಬ್ಬಂದಿ. ವಿಕ ಸುದ್ದಿಲೋಕ ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ನಡುವೆಯೇ ಪೊಲೀಸರೂ ಸೋಂಕಿಗೆ ಒಳಗಾಗುತ್ತಿರುವುದು ಆತಂಕ ಮೂಡಿಸಿದೆ. ಭಾನುವಾರ ಒಂದೇ ದಿನ ಕರಾವಳಿಯ ನಾಲ್ವರು ಮತ್ತು ಹಾಸನ ಒಬ್ಬ ಸಿಬ್ಬಂದಿಯಲ್ಲಿ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ನಾಲ್ಕು ಠಾಣೆಗಳನ್ನು ಸೀಲ್‌ಡೌನ್‌ ಮಾಡಲಾಗಿದೆ. ಜತೆಗೆ 150ಕ್ಕೂ ಅಧಿಕ ಮಂದಿ ಪೊಲೀಸರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಕೊರೊನಾ […]

Read More

ಪುಟಾಣಿಗಳಿಗೆ ಬೇಡ ಆನ್‌ಲೈನ್‌ ಪಾಠ

6 ವರ್ಷದವರೆಗಿನ ಮಕ್ಕಳು ಒಂದು ಗಂಟೆಗಿಂತ ಹೆಚ್ಚು ಸಮಯ ಸ್ಕ್ರೀನ್‌ ನೋಡಬಾರದು. ಶಿಶುಗಳ ಮೇಲೆ ಆನ್‌ಲೈನ್‌ ಶಿಕ್ಷಣ ಪ್ರಯೋಗ ಬೇಡವೇ ಬೇಡ. ಮಕ್ಕಳ ದೃಷ್ಟಿಗೆ ಭಾರಿ ತೊಂದರೆಯಾಗುವ ಅಪಾಯ. ದೈಹಿಕ, ಮಾನಸಿಕವಾಗಿಯೂ ತೊಂದರೆ ಒಡ್ಡುವ ಡಿಜಿಟಲ್‌ ಸ್ಕ್ರೀನ್‌. —— ಸರಕಾರವನ್ನು ಎಚ್ಚರಿಸಿದ ನಿಮ್ಹಾನ್ಸ್‌ ವರದಿ | ಮಕ್ಕಳ ಬೆಳವಣಿಗೆ ಮೇಲೆ ದುಷ್ಪರಿಣಾಮ ಎಂದ ಸಂಸ್ಥೆ.  ಜಯಂತ್‌ ಗಂಗವಾಡಿ ಬೆಂಗಳೂರು.  ‘ಯಾವುದೇ ಕಾರಣಕ್ಕೂ ಶಿಶುಗಳಿಗೆ ‘ಆನ್‌ಲೈನ್‌ ತರಗತಿ’ಗಳನ್ನು ನಡೆಸುವುದು ಬೇಡವೇ ಬೇಡ,’ ಎಂದು ನಿಮ್ಹಾನ್ಸ್‌ ಸರಕಾರಕ್ಕೆ ಸಲಹೆ ನೀಡಿದೆ. […]

Read More

ಕಾಯಿಲೆಯೊಂದು ದರ್ಶನ ಅದು ಅಂತರಂಗದ ಪಯಣ

– ಹರೀಶ್‌ ಕೇರ. ಈ ಕಾಯಿಲೆಯೆಂಬ ದಾರಿಯಲ್ಲಿ ನಮಗಿಂತ ಮೊದಲು ಇನ್ನೂ ಬೇಕಾದಷ್ಟು ಮಂದಿ ಹಾದು ಹೋಗಿದ್ದಾರೆ ಎಂಬುದು ನಮಗೆ ಗೊತ್ತಿರುತ್ತದೆ. ಆದರೆ ಆ ಕಾಯಿಲೆಯ ಹಾದಿಯನ್ನು ನಾವೇ ನಡೆಯುತ್ತಿರುವಾಗ ಮಾತ್ರ ಅದು ನಮ್ಮದೇ ಆಗಿರುತ್ತದೆ. ಆಗ ಅವರಾರ‍ಯರ ಯಾತನೆ, ಒಂಟಿತನ ಇತ್ಯಾದಿಗಳೂ ನಮ್ಮ ನೆರವಿಗೆ ಬರುವುದಿಲ್ಲ- ಎಂದು ಬರೆಯುತ್ತಾಳೆ ವರ್ಜೀನಿಯಾ ವೂಲ್ಫ್‌. ಹತ್ತೊಂಬತ್ತನೇ ಶತಮಾನದ ಮೊದಲರ್ಧದಲ್ಲಿ ಬದುಕಿದ್ದ ಬ್ರಿಟನ್‌ನ ಲೇಖಕಿ. ಈಕೆ ಕಾದಂಬರಿಗಾರ್ತಿಯಾಗಿದ್ದಂತೆ ಮೊದಮೊದಲ ಸ್ತ್ರೀವಾದಿ ಚಿಂತಕಿಯೂ ಆಗಿದ್ದಳು. ‘ಆನ್‌ ಬೀಯಿಂಗ್‌ ಇಲ್‌’ (ಕಾಯಿಲೆ ಬೀಳುವುದರ […]

Read More

ಮುಳುಗಿದ ಭಾರಂಗಿಯಿಂದ ಹೊರಟ ಹಾಡು

– ದೀಪಾ ರವಿಶಂಕರ್‌.  ಕೆಲವು ಕೃತಿಗಳು ನಮ್ಮ ಬದುಕು, ಹೋರಾಟ, ಸಂಬಂಧಗಳ ಪಲ್ಲಟದೊಂದಿಗೆ ಅಭಿವೃದ್ಧಿಗಾಗಿ ಪ್ರಕೃತಿ- ಜನಪದದ ಮೇಲೆ ಮನುಷ್ಯರು ನಡೆಸಿದ ಅತ್ಯಾಚಾರವನ್ನೂ ಸಾರಿ ಹೇಳುತ್ತಿರುತ್ತವೆ. ಅಂಥ ಒಂದು ಕಾದಂಬರಿ ಗಜಾನನ ಶರ್ಮ ಅವರ ‘ಪುನರ್ವಸು’. ಹಲವು ತಲೆಮಾರುಗಳ ಕತೆಯನ್ನು ಹೇಳುವ ಅನೇಕ ಕೃತಿಗಳು ನಮ್ಮಲ್ಲಿ ಬಂದಿವೆ- ಮರಳಿ ಮಣ್ಣಿಗೆ, ಮೂರು ತಲೆಮಾರು, ಸ್ವಪ್ನ ಸಾರಸ್ವತ ಇತ್ಯಾದಿ. ಹಾಗೇ ಒಂದು ಪ್ರದೇಶದ ಜನಜೀವನದ ಏರಿಳಿತ, ಸಾಂಸ್ಕೃತಿಕ ಪಲ್ಲಟಗಳ ಕತೆಯನ್ನು ಹೇಳುವ ಕೃತಿಗಳು ಕೂಡ- ಮಲೆಗಳಲ್ಲಿ ಮದುಮಗಳು, ಗ್ರಾಮಾಯಣ […]

Read More

ಕಟಕಟೆಯಲ್ಲಿ ನೆತನ್ಯಾಹು

– ಮಲ್ಲಿಕಾರ್ಜುನ ತಿಪ್ಪಾರ.  ಇಸ್ರೇಲ್‌ನ ಪ್ರಶ್ನಾತೀತ ನಾಯಕ, ಪ್ರಖರ ರಾಷ್ಟ್ರವಾದಿ ಬೆಂಜಮಿನ್‌ ನೆತನ್ಯಾಹು ಕಟಕಟೆಯಲ್ಲಿ ನಿಲ್ಲುವ ಪರಿಸ್ಥಿತಿ ಬಂದೊದಗಿದೆ. ಕೋರ್ಟ್‌ಗೆ ಖುದ್ದು ಹಾಜರಾತಿಯಿಂದ ವಿನಾಯಿತಿ ಪಡೆಯುವ ಎಲ್ಲ ಪ್ರಯತ್ನಗಳು ವಿಫಲವಾದ ಹಿನ್ನೆಲೆಯಲ್ಲಿ ಭಾನುವಾರ ಅವರು ವಿಚಾರಣೆಗೆ ಹಾಜರಾಗಲಿದ್ದು, ಅದರೊಂದಿಗೆ ‘ಅಧಿಕಾರದಲ್ಲಿದ್ದಾ­ಗಲೇ ಕಟಕಟೆ ಏರಿದ ಮೊದಲ ಪ್ರಧಾನಿ’ ಎಂಬ ಕುಖ್ಯಾತಿಯೂ ನೆತನ್ಯಾಹು ಬೆನ್ನಿಗಂಟಿದೆ. ಸುತ್ತ ವೈರಿ ರಾಷ್ಟ್ರಗಳ ಕೂಟವನ್ನೆ ಕಟ್ಟಿಕೊಂಡಿರುವ ಪುಟ್ಟ ದೇಶ ಇಸ್ರೇಲ್‌ನ ರಾಜಕಾರಣದಲ್ಲಿ ಬೆಂಜಮಿನ್‌ ನೆತನ್ಯಾಹು ಅವರದ್ದು ಮಹತ್ತರ ಪಾತ್ರ­ವಿದೆ. ದಶಕಗಳಿಂದ ಇಸ್ರೇಲ್‌ ರಾಜಕಾರಣದಲ್ಲಿ ಪ್ರಭಾವವನ್ನು […]

Read More

ಸಾರ್ವಜನಿಕ ಜೀವನದಲ್ಲಿ ನಡವಳಿಕೆ ಮುಖ್ಯ

– ಶಶಿಧರ ಹೆಗಡೆ.   ‘ಹೇಳುವುದು ಕಾಶಿ ಕಾಂಡ. ತಿನ್ನುವುದು ಮಶಿ ಕೆಂಡ’ ಎಂಬ ಮಾತೊಂದಿದೆ. ಅಂದರೆ ವೇದಾಂತ ಹೇಳುವುದಕ್ಕೆ-ಬದನೆಕಾಯಿ ತಿನ್ನುವುದಕ್ಕೆ ಅನ್ನುತ್ತಾರಲ್ಲ. ಇದೂ ಹಾಗೆಯೇ! ಎಷ್ಟೋ ಬಾರಿ ನುಡಿಗೂ ನಡೆಗೂ ಹೊಂದಾಣಿಕೆ ಇರುವುದಿಲ್ಲ. ಸಾಮಾನ್ಯವಾಗಿ ರಾಜಕಾರಣಿಗಳು ಇಂತಹ ಆರೋಪಕ್ಕೆ ಗುರಿಯಾಗುತ್ತಾರೆ. ರಾಜಕಾರಣಿಗಳೆಲ್ಲರನ್ನೂ ಒಂದೇ ತಕ್ಕಡಿಯಲ್ಲಿಟ್ಟು ತೂಗುವುದೂ ಸರಿಯಲ್ಲ. ಯಾಕೆಂದರೆ ಸಾರ್ವಜನಿಕ ಬದುಕಿನಲ್ಲಿ ಹೇಗಿರಬೇಕೆಂದು ತೋರಿಸಿಕೊಟ್ಟ ಆದರ್ಶಪ್ರಾಯರು ಅನೇಕರಿದ್ದಾರೆ. ಗುಲಗಂಜಿಯಷ್ಟು ಪ್ರಾಮಾಣಿಕತೆ, ಬದ್ಧತೆ ಹೊಂದಿದವರು ನಮ್ಮ ನಡುವೆ ಇನ್ನೂ ಇದ್ದಾರೆ. ಮೆದುಳಿಗೂ ನಾಲಿಗೆಗೂ ಲಿಂಕ್‌ ತಪ್ಪಿ ಹೋದಂತೆ ಬಡಬಡಿಸುವವರೂ […]

Read More

ಹೋಟೆಲ್ ಓಪನ್‌ಗೆ ಕ್ಷಣಗಣನೆ

– ವಿಮಾನ, ರೈಲು ಸಂಚಾರದ ಆರಂಭದ ಹಿನ್ನೆಲೆಯಲ್ಲಿ ಆಹಾರ, ವಸತಿ ವ್ಯವಸ್ಥೆ ಅನಿವಾರ್ಯ – ಶೀಘ್ರವೇ ದೇಗುಲಗಳೂ ತೆರೆಯುವ ಸಾಧ್ಯತೆ | ಜನಜೀವನ ವೇಗವಾಗಿ ಮರಳಿ ಹಳಿಗೆ. – ಎಚ್.ಪಿ.ಪುಣ್ಯವತಿ,  ಬೆಂಗಳೂರು.  ಕೊರೊನಾ ನಡುವೆಯೇ ಬದುಕು ಕಟ್ಟಿಕೊಳ್ಳುವುದು ಅನಿವಾರ್ಯ ಎಂಬ ಸಂದೇಶಕ್ಕೆ ಪೂರಕವಾಗಿ ಜನಜೀವನ ವೇಗವಾಗಿ ಮರಳಿ ಹಳಿಗೆ ಬರುತ್ತಿದೆ. ಇದರ ಭಾಗವಾಗಿ, ರಾಜ್ಯದಲ್ಲಿ ಹೋಟೆಲ್‌ಗಳ ಮರು ಆರಂಭಕ್ಕೂ ಕ್ಷಣಗಣನೆ ಆರಂಭವಾಗಿದೆ. ಜತೆಗೆ ಕೆಲವೇ ದಿನಗಳಲ್ಲಿ ದೇವಾಲಯಗಳ ಬಾಗಿಲುಗಳೂ  ತೆರೆಯಲಿವೆ. ಲಾಕ್‌ಡೌನ್‌ ಸಡಿಲಿಕೆ ನಂತರ ವಾಣಿಜ್ಯ ಚಟುವಟಿಕೆಗಳು […]

Read More

ಮನರಂಜನೆ ಮನೆ ಮನ ಕೆಡಿಸದಿರಲಿ

– ಡಾ. ರೋಹಿಣಾಕ್ಷ ಶಿರ್ಲಾಲು.  ಲಾಕ್‌ಡೌನ್‌ ಕಾಲಘಟ್ಟದಲ್ಲಿ ನಮ್ಮ ಬಹುತೇಕ ಖಾಸಗಿ ಮನರಂಜನಾ ಟಿವಿ ಚಾನೆಲ್‌ಗಳಲ್ಲಿ ಪ್ರಸಾರವಾಗುತ್ತಿದ್ದ ಧಾರಾವಾಹಿಗಳ ಎಪಿಸೋಡ್‌ಗಳು ಚಿತ್ರೀಕರಣವಿಲ್ಲದೆ ಮುಕ್ತಾಯವಾಗಿವೆ. ಜನ ಮನೆಯಿಂದ ಹೊರಗೆ ಹೋಗಲಾರದೆ ಮನೆಯಲ್ಲೇ ಕುಳಿತುಕೊಳ್ಳಬೇಕಾದ ಅನಿವಾರ್ಯತೆ ಬಂದುದರಿಂದ, ಮನರಂಜನೆಗಾಗಿ ಟಿವಿ ಚಾನೆಲ್‌ಗಳನ್ನೇ ಅವಲಂಬಿಸಬೇಕಾಗಿ ಬಂದಾಗ ಸರಕಾರಿ ದೂರದರ್ಶನ ಚಾನೆಲ್ ಬಹುವರ್ಷಗಳ ಹಿಂದೆ ಪ್ರಸಾರ ಮಾಡಿದ್ದ ರಾಮಾಯಣ, ಮಹಾಭಾರತ ಮೊದಲಾದ ಜನಪ್ರಿಯ ಪೌರಾಣಿಕ ಧಾರಾವಾಹಿಗಳನ್ನು ಪ್ರಸಾರ ಮಾಡಿತು. ಈ ಪ್ರಸಾರಗಳು ದಾಖಲೆಯನ್ನೇ ನಿರ್ಮಿಸಿತು. ದೇಶಾದ್ಯಂತ ಕೋಟ್ಯಂತರ ಟಿವಿ ವೀಕ್ಷ ಕರು ಈ […]

Read More

ಪರಾವಲಂಬಿ ಕೊರೊನಾ ವೈರಸ್ ಸೋಲಿಸಲು ಸ್ವಾವಲಂಬಿ ಭಾರತ!

-ಡಾ. ವಿಜಯಲಕ್ಷ್ಮೀ ಬಾಳೇಕುಂದ್ರಿ.   2019 ರ ಡಿಸೆಂಬರ್ ಕೊನೆಯಲ್ಲಿ ಚೀನಾದ ವುಹಾನ್‌ನಲ್ಲಿ ಕೊರೊನಾ ವೈರಾಣುವಿನ ಹಾವಳಿ ಆರಂಭವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಕಮ್ಯುನಿಸ್ಟ್ ಸರಕಾರ ಸುತ್ತಮುತ್ತಲಿನ ಐದು ನಗರಗಳಲ್ಲಿರುವ 5 ಕೋಟಿ ಜನರಿಗೆ ಊರು ಬಿಟ್ಟು ಹೋಗದಂತೆ ನಿಷೇಧಾಜ್ಞೆ ಹೊರಡಿಸಿತು. ಮನೆ ಬಿಟ್ಟು ಬರದಂತೆ ಕಟ್ಟೆಚ್ಚರ ವಹಿಸಿ, ಅವರ ಮನೆಗಳನ್ನೇ ಹೊರಗಡೆಯಿಂದ ಸೀಲ್ ಮಾಡಿ ಮುಚ್ಚಲಾಯಿತು. ಮನೆಯೊಳಗೆ ಸಿಲುಕಿದವರು ಹೊಟ್ಟೆಗೆ ತಿಂದರೋ ಬಿಟ್ಟರೂ ಲೆಕ್ಕಿಸದೆ ಊರಿಗೆ ಊರನ್ನೇ ನಿರ್ಮಲಗೊಳಿಸಲು 560 ಟನ್ ಸೋಂಕು ನಿವಾರಕ ಕಳಿಸಿ, ವುಹಾನ್‌ನಲ್ಲಿ ವೈರಾಣು ಪಸರಿಸದಂತೆ […]

Read More

ರೆಪೊ ದರ ಇಳಿಕೆ ಯಾರಿಗೆ ಲಾಭ? – ಗ್ರಾಹಕನಿಗೆ ಲಾಭವಿಲ್ಲದ ಬಡ್ಡಿದರ ವ್ಯರ್ಥ

ಕೊರೊನಾ ಹಾವಳಿ ಮತ್ತು ಲಾಕ್‌ಡೌನ್‌ನ ಪರಿಣಾಮ ಕಳೆದ ಎರಡು ತಿಂಗಳಿನಿಂದ ನಿಶ್ಚೇತನಗೊಂಡಿರುವ ಆರ್ಥಿಕ ಚಟುವಟಿಕೆಗಳಿಗೆ ಚೈತನ್ಯ ತುಂಬಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಅಲ್ಪಾವಧಿಯ ಸಾಲದ ಬಡ್ಡಿ ದರವನ್ನು (ರೆಪೊ) ಶೇ.4.4ರಿಂದ ಶೇ.4ಕ್ಕೆ ಕಡಿತಗೊಳಿಸಿದೆ. ಮಾರ್ಚ್‌ನಲ್ಲೂ ರೆಪೊ ದರ ಕಡಿತಗೊಳಿಸಲಾಗಿತ್ತು. 2019 ಮತ್ತು ಈ ವರ್ಷದ ಅವಧಿಯಲ್ಲಿ ಒಟ್ಟಾರೆ ಎಂಟಕ್ಕೂ ಅಧಿಕ ಬಾರಿ ರೆಪೊ ದರ ಇಳಿಸಲಾಗಿದೆ. ಇದರ ಜೊತೆಗೆ ಸಾಲ ಕಂತು ಪಾವತಿಯ ಮುಂದೂಡಿಕೆಯ ಐಚ್ಛಿಕ ಸೌಲಭ್ಯವನ್ನೂ ಆರ್‌ಬಿಐ ವಿಸ್ತರಿಸಿದೆ. ರೆಪೊ ದರ ಇಳಿಕೆಯ […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top