ಮೋದಿಯವರ ಅಷ್ಟೊಂದು ವಿದೇಶ ಪ್ರವಾಸಗಳ ಪರಿಣಾಮ ಈಗ ತಿಳಿಯತೊಡಗಿದೆ – ರಮೇಶ್ ಕುಮಾರ್ ನಾಯಕ್. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸದಾ ವಿದೇಶ ಪ್ರವಾಸದ ಶೋಕಿ. ಬೆನ್ನುಬೆನ್ನಿಗೆ ಫಾರಿನ್ ಟೂರ್ ಮಾಡುವ ಮೂಲಕ ಖಜಾನೆಯ ದುಡ್ಡಿನ ದುಂದು ವೆಚ್ಚ ಮಾಡುತ್ತಿದ್ದಾರೆ. ದೇಶದ ಕೋಟ್ಯಂತರ ಜನ ಒಂದು ಹೊತ್ತಿನ ಊಟಕ್ಕೆ ಪರದಾಡುತ್ತಿರುವಾಗ ಈ ಪ್ರಧಾನಿ ದಿನ ಬೆಳಗಾದರೆ ವಿಶೇಷ ವಿಮಾನ ಏರಿ ದೇಶ ಸುತ್ತುವುದೇಕೆ? ಆಗಾಗ ಅಮೆರಿಕ, ರಷ್ಯಾ, ಜಪಾನ್, ಜರ್ಮನಿ, ಫ್ರಾನ್ಸ್, ಭೂತಾನ್ ಎಂದೆಲ್ಲ ರಾಜತಾಂತ್ರಿಕ ಭೇಟಿ […]
Read More
ಗ್ಯಾಜೆಟ್ಗಳ ಟೆಕ್ಸ್ಟ್ ಸಂಸ್ಕೃತಿಯಿಂದ ಬರೆಯುವ ಕೌಶಲಕ್ಕೆ ಆಪತ್ತು | ಕ್ಲಾಸ್ರೂಮ್ಗೆ ಪರ್ಯಾಯವಲ್ಲ ಆನ್ಲೈನ್ ತರಗತಿ. ಚೀ.ಜ.ರಾಜೀವ ಮೈಸೂರು. ಪ್ರಾಥಮಿಕ ಶಾಲಾ ಮಕ್ಕಳಿಗೆ ಆನ್ಲೈನ್ ಕಲಿಕೆ ಅನಿವಾರ್ಯವಾದರೆ, ಕೈ ಬರಹದ ಭವಿಷ್ಯವೇನು? ಆನ್ಲೈನ್ ಶಿಕ್ಷಣ ಪದ್ಧತಿಯಲ್ಲಿ ಬರಹ ಕೌಶಲವನ್ನು ಉಳಿಸಿ-ಬೆಳೆಸುವುದು ಹೇಗೆ ಎಂಬ ಸವಾಲು ಎದ್ದಿದೆ. ಪ್ರಾಥಮಿಕ ಹಂತದಿಂದಲೇ ಆನ್ಲೈನ್ ಶಿಕ್ಷಣಕ್ಕೆ ಹೈಕೋರ್ಟ್ ಮತ್ತು ರಾಜ್ಯ ಸರಕಾರದಿಂದ ಹಸಿರು ನಿಶಾನೆ ದೊರಕಿದ ಬೆನ್ನಲ್ಲಿಯೇ ಹೊಸ ಪ್ರಶ್ನೆ ಎದ್ದಿದೆ. ಸದ್ಯ ಲಭ್ಯವಿರುವ ಹೈಟೆಕ್ ಗ್ಯಾಜೆಟ್ಗಳ ಮೂಲಕ ಆನ್ಲೈನ್ನಲ್ಲಿ ಕಲಿಯುವುದೆಂದರೆ-ನೋಡುವುದು, ಆಲಿಸುಧಿವುದು, […]
Read More
– ಕೊರೊನಾ ಸಮಯದಲ್ಲಿ ಅನುಸರಿಸಬಹುದಾದ ಸಪ್ತಸೂತ್ರಗಳು. – ಎನ್.ರವಿಶಂಕರ್. ವಿಶ್ವಾದ್ಯಂತ ಮ್ಯಾನೇಜ್ಮೆಂಟ್ ಚಿಂತಕರ ಪಟ್ಟಿಯಲ್ಲಿ ಅಗ್ರಗಣ್ಯರೆನಿಸಿಕೊಂಡಿದ್ದ ಸ್ಟೀಫನ್ ಕೋವೆ, ಎಂಟು ವರ್ಷದ ಹಿಂದೆ ಇದೇ ಜುಲೈನಲ್ಲಿ ನಿಧನರಾದರು. ಆದರೆ, ಕಳೆದ 25 ವರ್ಷಗಳಿಂದ ನಾನು ಗಮನಿಸಿರುವ ಪ್ರವೃತ್ತಿಯೆಂದರೆ ಮ್ಯಾನೇಜ್ಮೆಂಟ್ನ ಯಾವುದೇ ಆಯಾಮಕ್ಕೆ ಸಂಬಂಧಪಟ್ಟ ಯಾವುದೇ ಸೆಮಿನಾರ್, ಕಾನ್ಫರೆನ್ಸ್, ಚರ್ಚೆ, ವಿಶ್ಲೇಷಣಾದಿಗಳಲ್ಲಿ ಸ್ಟೀಫನ್ ಕೋವೆ ಮಂಡಿಸಿದ ಕೆಲವು ವಿಚಾರಗಳ ವಿಷಯ ಬಂದೇ ಬರುತ್ತದೆ. ಅಷ್ಟು ಮಾತ್ರವಲ್ಲ, ಎಷ್ಟೋ ಸಂಭಾಷಣೆಗಳಿಗೆ ಅದುವೇ ಆಧಾರವಾಗಿರುತ್ತದೆ. ಅವರ ಬಹುಪಾಲು ಬರಹ ಮತ್ತು ಆಲೋಚನೆಗಳು […]
Read More
ವಿಕಾಸ್ ದುಬೆ ಎಂಬ ಕುಖ್ಯಾತ ಮಾಫಿಯಾ ದೊರೆಯ ಎನ್ಕೌಂಟರ್ ಮಾಡಿದ್ದಾರೆ ಉತ್ತರಪ್ರದೇಶದ ಪೊಲೀಸರು. ಯೋಗಿ ಆದಿತ್ಯನಾಥ್ ಸರಕಾರ ಆಡಳಿತಕ್ಕೆ ಬಂದ ಬಳಿಕ ಇಲ್ಲಿ 100ಕ್ಕೂ ಹೆಚ್ಚು ಕ್ರಿಮಿನಲ್ಗಳನ್ನು ಗುಂಡಿಕ್ಕಿ ಸಾಯಿಸಲಾಗಿದೆ. ದಶಕಗಳ ಕಾಲ ಮೆರೆದ ನಾನಾ ಗ್ಯಾಂಗ್ಸ್ಟರ್ಗಳಿಗೆ ಈಗ ಪಾಪಕ್ಕೆ ಫಲ ಪಡೆಯುವ ಕಾಲ. ಮೂರು ವರ್ಷಗಳ ಹಿಂದೆ ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಅವರು ಬಿಜೆಪಿ ಪರ ನಡೆಸಿದ ಚುನಾವಣೆ ಪ್ರಚಾರದ ವೇಳೆ, ಅಧಿಕಾರಕ್ಕೆ ಬಂದರೆ ರಾಜ್ಯವನ್ನು ಸಂಘಟಿತ ಅಪರಾಧ ಗ್ಯಾಂಗ್ಗಳಿಂದ ಮುಕ್ತಗೊಳಿಸುವುದಾಗಿ ಹೇಳಿದ್ದರು. ಹೇಳಿದಂತೆಯೇ ಮಾಡಿದ್ದಾರೆ, […]
Read More
ಕಳೆದ ವಾರ ಉತ್ತರ ಪ್ರದೇಶದಲ್ಲಿ ಎಂಟು ಪೊಲೀಸರನ್ನು ಹತ್ಯೆಗೈದಿದ್ದ ಕುಖ್ಯಾತ ಗ್ಯಾಂಗ್ಸ್ಟರ್ ವಿಕಾಸ್ ದುಬೆಯನ್ನು ಶುಕ್ರವಾರ ಬೆಳಗ್ಗೆ ಹೊಡೆದುರುಳಿಸಲಾಗಿದೆ. ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಸಿಕ್ಕಿಬಿದ್ದ ದುಬೆಯನ್ನು ಕಾನ್ಪುರಕ್ಕೆ ಕರೆತರುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಕಾರಿನಿಂದ ತಪ್ಪಿಸಿಕೊಂಡು ಪೊಲೀಸರ ಗನ್ ಸೆಳೆದು ಅವರ ಮೇಲೆ ಗುಂಡಿಕ್ಕಿ ಪರಾರಿಯಾಗಲು ಯತ್ನಿಸಿದ ಸಂದರ್ಭದಲ್ಲಿ ಪೊಲೀಸರು ಗುಂಡಿಕ್ಕಿ ಕೊಂದುಹಾಕಿದ್ದಾರೆ. ಪೊಲೀಸರ ಈ ನಡೆ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಇದೊಂದು ನಕಲಿ ಎನ್ಕೌಂಟರ್ ಎಂದು ಆರೋಪಿಸಿರುವ ಪ್ರತಿಪಕ್ಷಗಳು ಸುಪ್ರೀಂ ಕೋರ್ಟ್ ನಿಗಾದಲ್ಲಿ […]
Read More
– ಡ್ರ್ಯಾಗನ್ ದೇಶದ ಕ್ಷುದ್ರತನಕ್ಕೆ ಎದುರೇಟು ನೀಡಲು ಮುಂದಾಗಿದೆ ಅಂತಾರಾಷ್ಟ್ರೀಯ ಸಮುದಾಯ. – ಹರಿಪ್ರಕಾಶ್ ಕೋಣೆಮನೆ. ಇದುವರೆಗೆ ಭಾರತದ ಪಾಲಿಗೆ ಗಡಿಯಲ್ಲಿ ಮತ್ತು ಉಡಿಯಲ್ಲಿ ಕಟ್ಟಿಕೊಂಡ ಕೆಂಡದಂತಿದ್ದ ಚೀನಾ, ಈಗ ಕರಕಲಾದ ಇದ್ದಿಲಿನಂತಾಗಿದೆ ಎಂದರೆ ಉತ್ಪ್ರೇಕ್ಷೆ ಆಗದು. ಅಮೆರಿಕಾಗೆ ಸಡ್ಡು ಹೊಡೆದು ಜಾಗತಿಕ ಪರ್ಯಾಯ ಶಕ್ತಿಯಾಗುವೆ ಎಂದು ಜಗತ್ತಿನ ಎದುರು ಬೀಗುತ್ತಿದ್ದ ಆ ರಾಷ್ಟ್ರ ಸದ್ಯಕ್ಕಂತೂ ಏಕಾಂಗಿಯಾಗಿದೆ. ಸ್ವಾರಸ್ಯ ಎಂದರೆ, ಚೀನಾ ವಿರುದ್ಧವೇ ಜಾಗತಿಕ ಒಕ್ಕೂಟ ರಚನೆಯಾಗುವ ಮುನ್ಸೂಚನೆಗಳು ಕಾಣುತ್ತಿವೆ. ನಿಜವಾಗಿಯೂ ಚೀನಾಗೆ ಜಾಗತಿಕ ಶಕ್ತಿಯಾಗುವ ಅರ್ಹತೆ […]
Read More
ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಸಮಯದಲ್ಲಿಯೇ ಕೆಲವು ಮಾಧ್ಯಮಗಳ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ಗಾಳಿಸುದ್ದಿಗಳೂ ಹರಡುತ್ತಿವೆ. ಒಮ್ಮೊಮ್ಮೆ ಇಂಥ ಸುದ್ದಿಗಳು ಹಗ್ಗಕ್ಕೇ ಹೆದರುವವರ ಮೇಲೆ ಹಾವು ಎಸೆದಂತಾಗುತ್ತಿದೆ. ಕೋವಿಡ್-19 ವೈರಸ್ ಅನ್ನು ಇದುವರೆಗೂ ನಾವು ವರ್ಗೀಕರಿಸಿಕೊಂಡಿದ್ದು, ಮನುಷ್ಯ-ಮನುಷ್ಯರ ನಡುವಿನ ಸಂಪರ್ಕದಿಂದ ಹರಡಬಲ್ಲದ್ದೆಂದು. ಅದು ಗಾಳಿಯ ಮೂಲಕವೂ ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಸಾಧ್ಯತೆಯಿದೆಯೆಂದು ಆಸ್ಪ್ರೇಲಿಯಾದ ಕ್ವೀನ್ಸ್ಲ್ಯಾಂಡ್ ಯೂನಿವರ್ಸಿಟಿ ಆಫ್ ಟೆಕ್ನಾಲಜಿಯ ಪ್ರಾಧ್ಯಾಪಕರಾದ ಲಿಡಿಯಾ ಮೊರಾಸ್ಕಾ ಹಾಗೂ ಅಮೆರಿಕದ ಯೂನಿವರ್ಸಿಟಿ ಆಫ್ ಮೇರಿಲ್ಯಾಂಡ್ನ ಪ್ರಾಧ್ಯಾಪಕರಾದ ಡೊನಾಲ್ಡ್ ಮಿಲ್ಟನ್ ಜತೆಯಾಗಿ […]
Read More
ಕೊರೊನಾ ಸೋಂಕು ನಿರ್ವಹಣೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ವಿಫಲವಾಗಿದೆ; ಅದು ಚೀನಾ ಪಕ್ಷಪಾತಿಯಾಗಿದೆ ಎಂದು ಆರೋಪಿಸಿ ಅಮೆರಿಕ ಸಂಸ್ಥೆಯಿಂದ ಹೊರಬರಲು ಮುಂದಾಗಿದೆ. ಏನೀ ವಿವಾದ? ಅಮೆರಿಕದ ವಾದವೇನು? ಡಬ್ಲ್ಯುಎಚ್ಒ ಯಾಕೆ ಅನಿವಾರ್ಯ? ಅಮೆರಿಕದ ವಾದವೇನು? ಡಬ್ಲ್ಯುಎಚ್ಒ ಅದರ ನೀತಿ ನಿಯಮಾವಳಿಯ ಪ್ರಕಾರ ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಚೀನಾದ ಪಕ್ಷಪಾತಿಯಾಗಿ ವರ್ತಿಸುತ್ತಿದೆ. ಕಳೆದ ಡಿಸೆಂಬರ್ನಲ್ಲೇ ಚೀನಾದ ವುಹಾನ್ನಲ್ಲಿ ಕೊರೊನಾ ಸೋಂಕು ಪತ್ತೆಯಾಗಿತ್ತು. ಆದರೆ ಅದನ್ನು ಡಬ್ಲ್ಯುಎಚ್ಒಗೆ ತಿಳಿಸಲು ತಡ ಮಾಡಿತು. ನಂತರವೂ ಡಬ್ಲ್ಯುಎಚ್ಒ ವಿಶ್ವ ಸಮುದಾಯದ ಮುಂದೆ […]
Read More
– ಬೆಂಗಳೂರಿನಲ್ಲಿ ಕೊರೊನಾ ನಿಯಂತ್ರಣಕ್ಕೆ 8 ವಲಯ ಸ್ಥಾಪನೆ ಉಸ್ತುವಾರಿಗೆ 8 ಸಚಿವರು, 8 ಐಎಎಸ್ ಅಧಿಕಾರಿಗಳ ನೇಮಕ. ವಿಕ ಸುದ್ದಿಲೋಕ ಬೆಂಗಳೂರು. ರಾಜಧಾನಿ ಬೆಂಗಳೂರು ಸೇರಿ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ತೀವ್ರ ಕಳವಳ ವ್ಯಕ್ತವಾಗಿದೆ. ಈ ಸಂಬಂಧ ಸುದೀರ್ಘ ಚರ್ಚೆ ನಡೆದ ಬಳಿಕ, ಬೆಂಗಳೂರು ಕೊರೊನಾ ಸೋಂಕು ನಿರ್ವಹಣೆಗೆ 8 ವಲಯಗಳ ಉಸ್ತುವಾರಿಯನ್ನು ಸಚಿವರ ಹೆಗಲಿಗೆ ಹಾಕಲಾಗಿದೆ. ಇವರ ಜತೆಗೆ 8 ವಲಯಗಳಿಗೂ 8 ಐಎಎಸ್ […]
Read More
ಇಡೀ ಮಾನವ ಕುಲಕ್ಕೆ ಕಂಟಕವಾಗುತ್ತಿರುವ ಕೊರೊನಾ ಸೋಂಕು ಉಲ್ಬಣಗೊಳ್ಳುತ್ತಿರುವ ಈ ಹೊತ್ತಿನಲ್ಲಿ ರಾಜ್ಯದ ಬಹಳಷ್ಟು ವೈದ್ಯರು ತಮ್ಮ ಕುಟುಂಬ, ಪ್ರೀತಿ ಪಾತ್ರರನ್ನು ತೊರೆದು ನಾಲ್ಕು ತಿಂಗಳಿಂದ ರೋಗಿಗಳ ಆರೈಕೆಯಲ್ಲಿ ಟೊಂಕ ಕಟ್ಟಿ ನಿಂತಿದ್ದಾರೆ. ಭಯಗ್ರಸ್ಥ ಸೋಂಕಿತರಲ್ಲಿ ಧೈರ್ಯ ತುಂಬಿ, ಆತ್ಮಸ್ಥೈರ್ಯವನ್ನೇ ಮದ್ದಾಗಿಸುತ್ತಿದ್ದಾರೆ. ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಹೊರ ಕಾಲಿಟ್ಟಿರೆ ಇವರ ಮನದಲ್ಲಿ ಸಾರ್ಥಕ್ಯದ ಭಾವ. ಸ್ವತಃ ಸೋಂಕಿಗೆ ತೆರೆದುಕೊಳ್ಳುವ ಅಪಾಯವಿದ್ದರೂ ಲೆಕ್ಕಿಸದೇ ಕಾರ್ಯನಿರ್ವಹಿಸುತ್ತಿರುವ ವೈದ್ಯರ ಸೇವಾ ಮನೋಭಾವ, ಕಾರ್ಯತತ್ವರತೆ ನಾಡಿನ ಎಲ್ಲವೈದ್ಯ ಸಮೂಹಕ್ಕೆ ಸ್ಫೂರ್ತಿಯಾಗಲಿ… ಟೆಲಿ ಮೆಡಿಸಿನ್ […]
Read More