– ಗ.ನಾ.ಭಟ್ಟ. ಕನ್ನಡನಾಡಿನ ಮಹಾಪಂಡಿತ, ಅನುವಾದಕ, ಕವಿ, ಉಪನ್ಯಾಸಕ ಬನ್ನಂಜೆ ಗೋವಿಂದಾಚಾರ್ಯರಿಗೆ ಆ.3ರಂದು 84 ವರ್ಷ ತುಂಬಿ 85 ಆರಂಭವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅವರನ್ನೂ ಅವರ ಕೃತಿಗಳನ್ನೂ ನೆನೆಯುವ ಲೇಖನ ಇಲ್ಲಿದೆ. ಬಹಳ ವರ್ಷ ಹಿಂದೆ ಪ್ರಸಿದ್ಧ ಸಂಸ್ಕೃತ ವಿದ್ವಾಂಸರೊಬ್ಬರು ಭವಭೂತಿಯ ‘ಉತ್ತರರಾಮಚರಿತ’ದ ಸಂವಿಧಾನ ಕೌಶಲವನ್ನು ವಿಮರ್ಶಿಸುತ್ತಾ ಭವಭೂತಿ ಸೂತ್ರಧಾರನನ್ನು ಚಿತ್ರಿಸಿದ್ದು ಸರಿಯಿಲ್ಲವೆಂದು ಹೇಳಿದರು. ಅದಕ್ಕೆ ಕಾರಣ ಇಷ್ಟೇ! ಸೂತ್ರಧಾರ ರಂಗಸ್ಥಳವನ್ನು ಪ್ರವೇಶಿಸಿ- ‘‘ಯಂ ಬ್ರಹ್ಮಾಣಮಿಯಂ ದೇವೀ ವಾಗ್ವಶ್ಯೇವಾನುವರ್ತತೇ | ಉತ್ತರಂ ರಾಮಚರಿತಂ ತತ್ಪ್ರಣೀತಂ ಪ್ರಯೋಕ್ಷ ್ಯತೇ […]
Read More
– ಮಲ್ಲಿಕಾರ್ಜುನ ತಿಪ್ಪಾರ. ವೈರಾಣು ಲಸಿಕೆಗಳ ತಯಾರಿಕೆಯಲ್ಲಿ ನಿಷ್ಣಾತರಾಗಿರುವ ಆಕ್ಸ್ಫರ್ಡ್ ವಿವಿಯ ಡಾ. ಸಾರಾ ಗಿಲ್ಬರ್ಟ್ ಅವರು, ಕೊರೊನಾ ಲಸಿಕೆ ಪ್ರಯೋಗಕ್ಕೆ ತನ್ನ ತ್ರಿವಳಿ ಮಕ್ಕಳನ್ನೇ ಒಡ್ಡಿದ್ದಾರೆ. ಇಡೀ ವಿಶ್ವವನ್ನೇ ತಲ್ಲಣಗೊಳಿಸಿರುವ ಕೋವಿಡ್-19 ವೈರಾಣು ಸೋಂಕಿತರ ಸಂಖ್ಯೆ 18 ಲಕ್ಷ ದಾಟಿದ್ದು, ಈವರೆಗೆ ಹತ್ತಿರ 6.80 ಲಕ್ಷ ಜನರು ಮೃತಪಟ್ಟಿದ್ದಾರೆ ಮತ್ತು ಈ ಸಂಖ್ಯೆ ಇನ್ನೂ ಏರುತ್ತಲೇ ಇದೆ. ಹಾಗಾಗಿ, ಕೋವಿಡ್ -19 ವಿರುದ್ಧದ ಲಸಿಕೆ ಅಥವಾ ಔಷಧ ತಯಾರಿಕೆ ಈ ಕ್ಷಣದ ಅಗತ್ಯವಾಗಿದ್ದು, ಅನೇಕ ರಾಷ್ಟ್ರಗಳು, […]
Read More
ಸ್ವದೇಶಿ ಕಲ್ಪನೆಯನ್ನು ಜನರೆದೆಯಲ್ಲಿ ಬಿತ್ತಿದ ಮಹಾಸ್ವಾಭಿಮಾನಿಗೆ ಶತಮಾನ. – ಡಾ.ರೋಹಿಣಾಕ್ಷ ಶಿರ್ಲಾಲು. ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸವನ್ನು ಮೆಲುಕು ಹಾಕಿದರೆ ನಮ್ಮ ಕಣ್ಮುಂದೆ ಹಾದುಹೋಗುವ ವ್ಯಕ್ತಿತ್ವಗಳು ನೂರಾರು. ಒಬ್ಬೊಬ್ಬರೂ ಮಹಾನ್ ನಾಯಕರೇ. ಗುಲಾಮಿತನ ಎನ್ನುವುದು ರಕ್ತಗತವಾಗಿ, ದಾಸ್ಯಕ್ಕೆ ಒಡ್ಡಿಕೊಂಡು ವಿಸ್ಮೃತಿಗೊಳಗಾಗಿ ಕರಿಚರ್ಮದ ಬ್ರಿಟಿಷರಂತೆ ಬದುಕುತ್ತಿದ್ದ ಭಾರತೀಯರ ಎದೆಯೊಳಗೆ ಸ್ವಾತಂತ್ರ್ಯದ ಕಿಚ್ಚು ಹಚ್ಚುವಂತೆ ‘ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು, ಅದನ್ನು ಪಡೆದೇ ತೀರುತ್ತೇನೆ’ ಎಂದು ಸಿಂಹಘರ್ಜನೆ ಮಾಡಿದ ‘ಲೋಕಮಾನ್ಯ’ರ ಶತಮಾನದ ಸ್ಮೃತಿದಿನ ಇಂದು. 1920 ಆಗಸ್ಟ್ 1ರಂದು ನಿಧನರಾದ […]
Read More
ನೂತನ ಶಿಕ್ಷಣ ನೀತಿಯನ್ನು ಕೇಂದ್ರ ಸರಕಾರ ಬಿಡುಗಡೆ ಮಾಡಿದೆ. ಯಾವ ದೇಶಗಳಲ್ಲಿ ಪರಿಣಾಮಕಾರಿ ಶಿಕ್ಷಣ ನೀತಿಯಿದೆ? ಭಾರತಕ್ಕೂ ಅವುಗಳಿಗೂ ಇರುವ ವ್ಯತ್ಯಾಸವೇನು? ಒಂದು ನೋಟ ಇಲ್ಲಿದೆ. ತಾಯಿನುಡಿಗೆ ಯುನೆಸ್ಕೊ ಒತ್ತು ನೂತನ ಶಿಕ್ಷಣ ನೀತಿಯಲ್ಲಿ ಕೇಂದ್ರ ಸರಕಾರ ಮಾತೃಭಾಷೆಗೆ ನೀಡಿರುವ ಒತ್ತನ್ನು, ವಿಶ್ವ ಸಂಸ್ಥೆಯ ಶಿಕ್ಷಣ, ವಿಜ್ಞಾನ ಮತ್ತು ಸಾಂಸ್ಕೃತಿಕ ಘಟಕ (ಯುನೆಸ್ಕೊ) ಕೂಡ ಒತ್ತಿ ಹೇಳಿದೆ. ಮಗುವಿಗೆ ಚಿಕ್ಕ ವಯಸ್ಸಿನಿಂದಲೇ ಬಹುಭಾಷಾ ಶಿಕ್ಷಣವನ್ನು ಒದಗಿಸಬೇಕು. ಇದರಿಂದ ಮಗುವಿನ ಕಲ್ಪನೆ, ವೈವಿಧ್ಯತೆಯ ಪರಿಕಲ್ಪನೆ ಹಾಗೂ ಸೃಜನಶೀಲತೆಗೆ ಇಂಬು […]
Read More
ಕರ್ನಾಟಕ ಸರಕಾರ ಇಂಜಿನಿಯರಿಂಗ್ ಹಾಗೂ ವೃತ್ತಿಪರ ಕೋರ್ಸ್ಗಳ ಪ್ರವೇಶಾತಿಗಾಗಿ ನಡೆಸುವ ಸಿಇಟಿ ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರೈಸಿದೆ. ಗುರುವಾರ ಹಾಗೂ ಶುಕ್ರವಾರ ಸುಮಾರು 497 ಪರೀಕ್ಷಾ ಕೇಂದ್ರಗಳಲ್ಲಿ ನಡೆದ ಪರೀಕ್ಷೆಯಲ್ಲಿ 1.75 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಪಿಯುಸಿ ಇಂಗ್ಲಿಷ್ ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆಗಳನ್ನು ಲಾಕ್ಡೌನ್ ಸಂದರ್ಭದಲ್ಲಿಯೇ ಯಶಸ್ವಿಯಾಗಿ ನಡೆಸಿದ್ದ ಸರಕಾರ, ಈಗ ಸಿಇಟಿಯನ್ನೂ ನೆರವೇರಿಸಿ ಸೈ ಎನ್ನಿಸಿಕೊಂಡಿದೆ. ಇದರಲ್ಲಿ 63 ಮಂದಿ ಕೋವಿಡ್ ಸೋಂಕಿತರೂ ಇದ್ದುದು ವಿಶೇಷ. ಈ ವಿದ್ಯಾರ್ಥಿಗಳು ಪರೀಕ್ಷೆಗಳಿಂದ ವಂಚಿತರಾಗದಂತೆ ನೋಡಿಕೊಂಡ ಪರೀಕ್ಷಾ ಪ್ರಾಧಿಕಾರದ […]
Read More
– ಸುಧೀಂದ್ರ ಹಾಲ್ದೊಡ್ಡೇರಿ. ಯುದ್ಧ ವಿಮಾನಗಳೆಂದರೆ ಕ್ಷಿಪ್ರ ವೇಗದಲ್ಲಿ ಆಗಸಕ್ಕೇರಿ, ಶತ್ರು ದೇಶದ ರೇಡಾರ್ಗಳ ಕಣ್ತಪ್ಪಿಸಿ, ತಾನು ಹೊತ್ತೊಯ್ದ ಕ್ಷಿಪಣಿ-ಬಾಂಬುಗಳನ್ನು ನಿರ್ದಿಷ್ಟ ಗುರಿಗೆ ತಲುಪಿಸಿ ಸುರಕ್ಷಿತವಾಗಿ ಹಿಂದಿರುಗುವ ಲೋಹ ಪಕ್ಷಿಗಳು. ಸೆಣಸಾಟಕ್ಕೆಂದು ಶತ್ರು ವಿಮಾನ ಆಗಸದಲ್ಲಿಯೇ ಸವಾಲೊಡ್ಡಿದರೆ, ಭೀಕರ ಸರ್ಪಕಾಳಗಕ್ಕೂ ಸಿದ್ಧವಾಗಿರುತ್ತವೆ. ಸುಂಯ್ಯೆಂದು ಮೇಲೇರುವ, ಅಷ್ಟೇ ವೇಗದಿಂದ ಕೆಳಗಿಳಿಯುವ, ತಲೆಕೆಳಕಾಗಿ ಮುನ್ನುಗ್ಗುವ, ಎಲ್ಲೆಂದರಲ್ಲಿ, ಎತ್ತೆಂದರತ್ತ ತಿರುತಿರುಗಿ ಸುಳಿದಾಡಿ ಸೆಳೆಯುವ ಸಾಮರ್ಥ್ಯ ಈ ಯುದ್ಧ ವಿಮಾನಗಳದು. ಅಕ್ಷರಶಃ ಜಾದೂಗಾರನ ಮಾಯಾದಂಡಕ್ಕೆ ಮಣಿಯುವ ಪುಟ್ಟ ಪಕ್ಷಿಯಂತೆ ಇವು ಕಾರ್ಯನಿರ್ವಹಿಸಬೇಕು. ಇಂಥದೊಂದು […]
Read More
ಫ್ರಾನ್ಸ್ನಿಂದ ಐದು ರಫೇಲ್ ಯುದ್ಧವಿಮಾನಗಳು ಭಾರತಕ್ಕೆ ಆಗಮಿಸಿದ್ದು, ಅಂಬಾಲ ವಾಯುನೆಲೆಯಲ್ಲಿ ಇಳಿದಿವೆ. ಕಳೆದ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ರಫೇಲ್ ಖರೀದಿಯ ಬಗ್ಗೆ ಹೆಚ್ಚು ಚರ್ಚೆಯಾಗಿತ್ತು. ರಫೇಲ್ನಂಥ ಯುದ್ಧವಿಮಾನಗಳ ಖರೀದಿ ಹೊಸದಲ್ಲ, ಅಂಥ ವಿಚಾರಗಳು ಜನಸಾಮಾನ್ಯರ ನೆಲೆಯಲ್ಲಿ ಹೆಚ್ಚು ಚರ್ಚೆಯಾಗುವುದಿಲ್ಲವಾದರೂ, ರಫೇಲ್ ಫೈಟರ್ಜೆಟ್ಗಳ ವಿಚಾರದಲ್ಲಿ ಹಾಗಾಗಿಲ್ಲ. ದೇಶದ ಜನತೆ ಕುತೂಹಲದಿಂದ ಇವುಗಳನ್ನು ನೋಡಿದ್ದಾರೆ. ಇವುಗಳ ಬಗ್ಗೆ ಸಾಕಷ್ಟು ಉತ್ಪ್ರೇಕ್ಷೆಯೂ ಹಬ್ಬಿದೆ; ಹಾಗೇ ಉಡಾಫೆಯೂ ಕೆಲವು ವಲಯದಲ್ಲಿ ಇದೆ. ಈ ಎರಡೂ ವೈಖರಿಗಳನ್ನು ಕೈಬಿಟ್ಟು ವಸ್ತುನಿಷ್ಠವಾಗಿ ಈ ವಿಚಾರವನ್ನು ನೋಡುವುದು […]
Read More
‘2020ರ ಹೊಸ ಶಿಕ್ಷಣ ನೀತಿ’ಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ. 34 ವರ್ಷಗಳ ಬಳಿಕ ಹೊಸ ನೀತಿಯನ್ನು ಜಾರಿಗೆ ತರಲಾಗುತ್ತಿದೆ. ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣ ಪದ್ಧತಿಯಲ್ಲಿ ಆಮೂಲಾಗ್ರ ಬದಲಾವಣೆ, ಉನ್ನತ ಶಿಕ್ಷಣವನ್ನು ಮತ್ತಷ್ಟು ಸ್ಪರ್ಧಾತ್ಮಕಗೊಳಿಸುವ ಅಂಶಗಳು ಈ ನೀತಿಯಲ್ಲಿವೆ. ಎಲ್ಲಕ್ಕಿಂತ ಹೆಚ್ಚಾಗಿ ಇದು ‘ಭಾರತ ಕೇಂದ್ರಿತ ಶಿಕ್ಷಣ ನೀತಿ’ಯಾಗಿದ್ದು, ಮಕ್ಕಳ ಸಮಗ್ರ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗಿದೆ. ಹೊಸ ಭಾರತದಲ್ಲಿ ಹೊಸ ಶಿಕ್ಷಣ ನೀತಿಯು ‘ಹೊಸ ಯುಗ’ಕ್ಕೆ ದಾರಿ ದೀಪವಾಗಲಿದೆ. – ಉನ್ನತ ಶಿಕ್ಷಣದಲ್ಲಿ ಭರ್ಜರಿ ಬದಲಾವಣೆ […]
Read More
ರಾಷ್ಟ್ರೀಯ ಶಿಕ್ಷಣ ನೀತಿ 2020ಗೆ ಅಸ್ತು | ಜ್ಞಾನದ ಜತೆಗೆ ವೃತ್ತಿಪರ ಕೌಶಲಕ್ಕೆ ಒತ್ತು 3ನೇ ವರ್ಷದಿಂದಲೇ ಸ್ಕೂಲಿಂಗ್ | 5ನೇ ಕ್ಲಾಸಿನವರೆಗೆ ಮಾತೃಭಾಷಾ ಶಿಕ್ಷಣ ಶಿಕ್ಷಣವನ್ನು ಕೇವಲ ಜ್ಞಾನಕ್ಕೆ ಸೀಮಿತಗೊಳಿಸದೆ ಕೌಶಲಕ್ಕೂ ಒತ್ತು ನೀಡಿ ಬದುಕಿಗೆ ಪೂರಕಗೊಳಿಸುವ ಮಹತ್ವಾಕಾಂಕ್ಷೆಯನ್ನು ಹೊತ್ತ ರಾಷ್ಟ್ರೀಯ ಶಿಕ್ಷಣ ನೀತಿ 2020ಕ್ಕೆ ಕೇಂದ್ರ ಸಂಪುಟ ಬುಧವಾರ ಒಪ್ಪಿಗೆ ನೀಡಿದೆ. 18 ವರ್ಷದವರೆಗೆ ಕಡ್ಡಾಯ ಶಿಕ್ಷಣ, ಪದವಿಯನ್ನು ಯಾವ ಹಂತದಲ್ಲಿ ನಿಲ್ಲಿಸಿದರೂ ಪ್ರಮಾಣಪತ್ರ ನೀಡುವ ವ್ಯವಸ್ಥೆ, ವಿದ್ಯಾರ್ಥಿಗಳನ್ನು ತಂತ್ರಜ್ಞಾನದಲ್ಲಿ ಸಶಕ್ತಗೊಳಿಸಿ ವೃತ್ತಿಗೆ ಸಿದ್ಧಗೊಳಿಸುವುದು […]
Read More
ಸಂಗಮೇಶ ಟಿ. ಚೂರಿ, ವಿಜಯಪುರ. ಫ್ರಾನ್ಸ್ ನಿರ್ಮಿತ 5 ರಫೇಲ್ ಫೈಟರ್ ಜೆಟ್ ವಿಮಾನಗಳ ವಿಂಗ್ ಕಮಾಂಡರ್ ಆಗಿರುವ ಇಲ್ಲಿನ ಸೈನಿಕ ಶಾಲೆಯ ಹಳೆ ವಿದ್ಯಾರ್ಥಿ ಅರುಣಕುಮಾರ ಬುಧವಾರ ಹರಿಯಾಣ ರಾಜ್ಯದ ಅಂಬಾಲಾ ವಾಯುಪಡೆ ವಿಮಾನ ನಿಲ್ದಾಣಕ್ಕೆ ರಫೇಲ್ ಯುದ್ಧ ವಿಮಾನ ಇಳಿಸಿದ್ದು, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುಮ್ಮಟನಗರಿಗೆ ಮತ್ತೊಂದು ಗರಿ ಮೂಡಿದಂತಾಗಿದೆ. ಫ್ರಾನ್ಸ್ನಿಂದ ಭಾರತ ಸೇನೆಗೆ ಸೇರ್ಪಡೆಯಾದ ರಫೇಲ್ ಜೆಟ್ಗೆ ದೇಶದ ವಿವಿಧ ಸೈನಿಕ ಶಾಲೆಯ ನಾಲ್ವರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದರೆ, ಈ ಪೈಕಿ ಇಲ್ಲಿನ […]
Read More