ದೇವಸ್ಥಾನವೆಂದರೆ ಬರೀ ಪ್ರಾರ್ಥನೆಯ ಸ್ಥಳವಲ್ಲ, ಸಂಸ್ಕೃತಿಯ ಆಗರ – ಡಾ.ಆರತೀ ವಿ.ಬಿ. ‘‘ವರ್ಷಸಾಹಸ್ರಗಳ ಕನಸು ನನಸಾಗಿಹುದು/ಅಹಹ ರಾಮಾಲಯವು ಬೆಳಗುತಿಹುದು/ದೀರ್ಘನಿದ್ರೆಯು ಕಳೆದು ಕ್ಷಾತ್ರತೇಜವು ಬೆಳೆದು/ರಾಮರಾಜ್ಯವು ಭುವಿಗೆ ಮರಳುತಿಹುದು’’ ರಾಮಮಂದಿರ ಮರಳಿ ತಲೆಯೆತ್ತಿದೆ! ಭಾರತವನ್ನೂ ಭಾರತೀಯತೆಯನ್ನೂ ಎತ್ತಿ ಮೆರೆಸಿದೆ! ಅಸಂಖ್ಯರ ಪ್ರಾಮಾಣಿಕ ಯತ್ನಗಳಿಗೆ ಫಲವಿತ್ತಿದೆ! ಶತಮಾನಗಳ ಶತಸಂಖ್ಯೆಗಳ ಜನರ ಸಮ್ಮಾನಿಸಿದೆ! ದೇಶಧರ್ಮಗಳಿಗೆ ಕಳಂಕವೀಯಲೆಂದೇ ಸದಾ ದುರ್ವಾಸನೆ ಬೀರುವ ವಾಮಬಾಯಿಗಳನ್ನು ಮುಚ್ಚಿಸಿದೆ! ಮತಗಳಿಗಾಗಿ ದೇಶವನ್ನೂ ದೇಶೀಯತೆಯನ್ನೂ ಬಲಿಗೊಡುವ ದೇಶದ್ರೋಹಿ ಪಕ್ಷಗಳ ಬಾಲ ಮುದುರಿಸಿದೆ! ಐನೂರಕ್ಕೂ ಹೆಚ್ಚು ವರ್ಷ ನೂರಾರು ಪೀಳಿಗೆಗಳ ಭಾರತೀಯರ […]
Read More
ಕಳೆದ ವರ್ಷ ಭಾರಿ ಮಳೆ ಹಾಗೂ ಪ್ರವಾಹ ಪರಿಸ್ಥಿತಿ ಬಂದ ಮಾಸದಲ್ಲೇ ಈ ವರ್ಷವೂ ಅದು ಮರುಕಳಿಸುತ್ತಿದೆ. ಹಾಗೆಯೇ ಎರಡು ವರ್ಷಗಳ ಹಿಂದೆ ಕೊಡಗಿನಲ್ಲಿ ಭಾರಿ ಪ್ರಮಾಣದ ಭೂಕುಸಿತ ಉಂಟಾಗಿ ಹಲವು ಮಂದಿಯನ್ನು ಬಲಿ ತೆಗೆದುಕೊಂಡು ನೂರಾರು ಮಂದಿಯನ್ನು ನಿರಾಶ್ರಿತರನ್ನಾಗಿಸಿತ್ತು. ನಿನ್ನೆ ತಲಕಾವೇರಿಯಲ್ಲಿ ಅಂಥದೇ ಇನ್ನೊಂದು ದುರಂತ ಸಂಭವಿಸಿದ್ದು, ಹಲವರು ಜೀವಂತ ಸಮಾಧಿಯಾಗಿರುವ ಶಂಕೆ ಇದೆ. ಭಾರಿ ಮಳೆ ಸುರಿಯುತ್ತಲೇ ಇರುವುದರಿಂದ ದುರಂತಗಳ ಸಂಖ್ಯೆ ನಾವು ಬೇಡವೆಂದರೂ ಹೆಚ್ಚಾಗಬಹುದು; ಮುನ್ನೆಚ್ಚರಿಕೆ ಹಾಗೂ ತಕ್ಷಣದ ರಕ್ಷಣಾ ಕಾರ್ಯಾಚರಣೆಗಳು ಈಗ […]
Read More
– ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಆದಿಚುಂಚನಗಿರಿ ಮಹಾಸಂಸ್ಥಾನ. ಭವ್ಯ ಶ್ರೀ ರಾಮ ಮಂದಿರಕ್ಕೆ ಶಿಲಾನ್ಯಾಸ ಕಾರ್ಯಕ್ರಮ ನಡೆಯುತ್ತಿದ್ದಾಗ ನನ್ನೊಳಗಿನ ತನ್ಮಯತೆಯ ಜತೆಗೇ ಸುತ್ತಲಿನವರನ್ನೂ ಗಮನಿಸುತ್ತಿದ್ದೆ. ಸಾಮಾನ್ಯ ಪೂಜೆಯ ಸಂದರ್ಭದಲ್ಲೇ ನಾವೆಲ್ಲ ಧ್ಯಾನಸ್ಥ ಸ್ಥಿತಿಗೆ ಹೋಗುತ್ತೇವೆ. ಅಲ್ಲಿದ್ದವರಲ್ಲಿ ಹೆಚ್ಚಿನವರು ತಮ್ಮ ಇಡೀ ಬದುಕನ್ನು ರಾಮನಿಗಾಗಿ ಮುಡಿಪಿಟ್ಟವರು. ಅವನ ಸ್ಮರಣೆಯ ಜತೆಗೆ ಹೋರಾಟದಲ್ಲಿ ಕಳೆದವರು. ಅವರ ಡಿಎನ್ಎಯಲ್ಲೇ ರಾಮ ಸೇರಿ ಹೋಗಿದ್ದ. ಶಿಲಾನ್ಯಾಸದ ಸಂದರ್ಭದಲ್ಲಿ ಅವರೆಲ್ಲ ದಿವ್ಯಾನುಭೂತಿಯನ್ನು ಅನುಭವಿಸುತ್ತಿರುವುದನ್ನು ಕಂಡೆ. ಇಡೀ ವಾತಾವರಣವೇ ಸಾರ್ಥಕ ಭಾವದಿಂದ ತುಂಬಿ ಹೋಗಿತ್ತು. ಶಿಲಾನ್ಯಾಸ […]
Read More
ಕೇಂದ್ರ ಲೋಕಸೇವಾ ಆಯೋಗವು(ಯುಪಿಎಸ್ಸಿ) ಐಎಎಸ್, ಐಪಿಎಸ್ ಮತ್ತು ಇತರ ಅಖಿಲ ಭಾರತ ಸೇವೆಗಳಿಗೆ ಅಭ್ಯರ್ಥಿಗಳ ಆಯ್ಕೆಗೆ ನಡೆಸಿದ ವಾರ್ಷಿಕ ಪರೀಕ್ಷಾ ಫಲಿತಾಂಶ ಪ್ರಕಟವಾಗಿದೆ. ವಿಶೇಷವೆಂದರೆ ಕರ್ನಾಟಕದಿಂದ ಗಣನೀಯ ಪ್ರಮಾಣದ ಪ್ರತಿಭಾವಂತರು ಅಖಿಲ ಭಾರತ ಆಡಳಿತ ಸೇವೆಗಳಿಗೆ ಆಯ್ಕೆಯಾಗಿದ್ದಾರೆ. ಅದರಲ್ಲೂ ಸಣ್ಣ ಪುಟ್ಟ ಪಟ್ಟಣಗಳು, ಗ್ರಾಮೀಣ ಪ್ರದೇಶದ ಪ್ರತಿಭಾನ್ವಿತರು ಹೆಚ್ಚಿನ ಸಂಖ್ಯೆಯಲ್ಲಿ ಉತ್ತೀರ್ಣರಾಗಿರುವುದು ಹೊಸ ಭರವಸೆ ಮೂಡಿಸಿದೆ. ಯುಪಿಎಸ್ಸಿ ನಡೆಸಿದ ಪರೀಕ್ಷೆಯಲ್ಲಿ ಆಯ್ಕೆಯಾದ ಒಟ್ಟು 927 ಅಭ್ಯರ್ಥಿಗಳ ಪೈಕಿ ಕರ್ನಾಟಕದ 40 ಪ್ರತಿಭಾನ್ವಿತರಿರುವುದು ವಿಶೇಷ. ಈ ಬೆಳವಣಿಗೆ ಸಾವಿರಾರು […]
Read More
ಜಗತ್ತಿನ ಎಲ್ಲ ದೇಶಗಳಲ್ಲೂ ರಾಮನಾಮವಿದೆ, ರಾಮನ ಮರ್ಯಾದೆ ಪಾಲನೆ ಇಂದಿನ ಅಗತ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರಕ್ಕೆ ಶಿಲಾನ್ಯಾಸ ನೆರವೇರಿಸಿ ನುಡಿದಿದ್ದಾರೆ. ಮಂದಿರ ನಿರ್ಮಾಣ ರಾಷ್ಟ್ರವನ್ನು ಜೋಡಿಸುವ ಪ್ರಕ್ರಿಯೆಯಾಗಬೇಕು ಎಂದೂ ಆಶಿಸಿದ್ದಾರೆ. ಅವರ ಭಾಷಣದ ಪೂರ್ಣ ಸಾರ ಇಲ್ಲಿದೆ. || ಜೈ ಶ್ರೀರಾಮ್ || ಇಂದು ಈ ಜಯಘೋಷ ಕೇವಲ ಶ್ರೀರಾಮನ ನೆಲದಲ್ಲಿ ಮಾತ್ರವಲ್ಲ, ಇದರ ಕಂಪನ ಇಡೀ ವಿಶ್ವದಲ್ಲಿ ಅನುರಣಿಸುತ್ತಿದೆ. ಇಡೀ ದೇಶವಾಸಿಗಳಲ್ಲಿ, ವಿಶ್ವಾದ್ಯಂತ ತುಂಬಿದ ಭಾರತದ ಭಕ್ತರಲ್ಲಿ, ರಾಮಭಕ್ತರಲ್ಲಿ […]
Read More
ಪಿತೃವಾಕ್ಯ ಪರಿಪಾಲನೆಗೆ ವನಾಭಿಗಮನ ಮಾಡಿದ ಶ್ರೀರಾಮ ಹದಿನಾಲ್ಕು ವರ್ಷದ ಬಳಿಕ ಅಯೋಧ್ಯೆಗೆ ಮರಳಿದ. ರಾಮನಿಗೆ ಪಟ್ಟಾಭಿಷೇಕವೂ ಆಯಿತು. ಈ ಪವಿತ್ರ ಕ್ಷಣಗಳನ್ನು ಕಣ್ತುಂಬಿಸಿಕೊಳ್ಳುತ್ತ ಇಕ್ಷ್ವಾಕು ವಂಶದ ರಾಜ ಪರಿವಾರದ ಜತೆಜತೆಗೇ ಓಡಾಡಿಕೊಂಡಿದ್ದವ ಅಂಜನಾದೇವಿಯ ಗರ್ಭ ಸಂಜಾತ ಆಂಜನೇಯ. ಈ ಆಂಜನೇಯ ಶ್ರೀ ರಾಮನ ಕಿಂಕರ. ಜತೆಗೆ ಕನ್ನಡದ ನೆಲದ ಮಹಾಮಹಿಮ. ಈಗ ಆಧುನಿಕ ಭಾರತದಲ್ಲಿ ಶ್ರೀರಾಮನ ಜನ್ಮಭೂಮಿಯಲ್ಲಿಯೇ ಭುವನ ಮನೋಹರವಾದ ರಾಮಮಂದಿರ ನಿರ್ಮಾಣಗೊಳ್ಳಲಿದೆ. ಮಂದಿರಕ್ಕಾಗಿ ನಡೆದ ಹೋರಾಟದಲ್ಲಿಯೂ ಕರ್ನಾಟಕದ ಪವಿತ್ರ ಭೂಮಿಯ ಕೊಡುಗೆ ಅನನ್ಯವಾದುದು. ಯಜ್ಞಸದೃಶವಾದ ಈ […]
Read More
– ಎಸ್. ಪ್ರಕಾಶ್. ಡಿಸೆಂಬರ್ 6, 1992ರ ವಿವಾದಿತ ಕಟ್ಟಡದ ಧ್ವಂಸದ ಘಟನೆಗೆ ನಾನು ಪ್ರತ್ಯಕ್ಷ ಸಾಕ್ಷಿಯಾಗಿದ್ದೆ. ಆ ನೆನಪು ಸದಾ ಹಸಿರು; ರೋಮಾಂಚನಕಾರಿ. ಕರ್ನಾಟಕದಲ್ಲಿ ಅಯೋಧ್ಯೆ ಹೋರಾಟದ ಪ್ರಭಾವ ದಟ್ಟವಾಗಿತ್ತು. ನಿತ್ಯ ಬೆಂಗಳೂರಿನಿಂದ ಕರ್ನಾಟಕ ಎಕ್ಸ್ಪ್ರೆಸ್ನಲ್ಲಿ ತಂಡ ತಂಡವಾಗಿ ಉತ್ಸಾಹಿ ರಾಮಭಕ್ತರು ಅಯೋಧ್ಯೆಯತ್ತ ಹೊರಡುತ್ತಿದ್ದರು. ಕರಸೇವಕರನ್ನು ಬೀಳ್ಕೊಡಲು ನಿಲ್ದಾಣಕ್ಕೆ ಹೋಗುತ್ತಿದ್ದ ನಾವು ಅಲ್ಲಿನ ವಾತಾವರಣದಿಂದ ಉತ್ತೇಜಿತರಾಗಿ ಕರಸೇವೆಯಲ್ಲಿ ಭಾಗಿಯಾಗಲು ನಾನು, ಎನ್.ಎಸ್. ಗೋಪಾಲ್, ಅವರ ಇಬ್ಬರು ತಮ್ಮಂದಿರು, ಅವರ ಪತ್ನಿ, ಮಗಳು ಹೊರಟೆವು. ಅಲಹಾಬಾದಿನಿಂದ ಡಿ.2ರ […]
Read More
ಕೋಟ್ಯಂತರ ಭಾರತೀಯರ ಶ್ರದ್ಧೆ- ನಂಬಿಕೆಗಳ ನೆಲೆಯಾಗಿ, ಆಸ್ತಿಕತೆಯ ಅಸ್ತಿಭಾರವಾಗಿ ರೂಪುಗೊಳ್ಳಲಿರುವ ಅಯೋಧ್ಯೆಯ ಶ್ರೀ ರಾಮಜನ್ಮಭೂಮಿ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸದ ಕಾರ್ಯಕ್ರಮ ಇಂದು ನಡೆಯುತ್ತಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಶಿಲಾನ್ಯಾಸ ನೆರವೇರಿಸಲಿದ್ದಾರೆ. ಕಳೆದ ವರ್ಷ ಸುಪ್ರೀಂ ಕೋರ್ಟ್ ತೀರ್ಪು ಬರುವವರೆಗೂ ಈ ಜಾಗ ದಾಖಲೆಗಳಲ್ಲಿ ವಿವಾದಿತವಾಗಿಯೇ ಉಳಿದಿತ್ತು; ಆದರೆ ಭಾರತೀಯರ ಭಾವಕೋಶದಲ್ಲಿ ಅದು ಯಾವತ್ತಿಗೂ ಶ್ರೀ ರಾಮಚಂದ್ರನಿಗೆ ಸೇರಿದ್ದಾಗಿತ್ತು. ಪುರಾತತ್ವ ಇಲಾಖೆಯ ಉತ್ಖನನ ಸಾಕ್ಷ್ಯಗಳು, ಸುಪ್ರೀಂ ಕೋರ್ಟ್ನ ತೀರ್ಪು ನಿಸ್ಸಂಶಯವಾಗಿ ಅದನ್ನು ದೃಢಪಡಿಸಿದವು. ಈಗ ಭವ್ಯ […]
Read More
– ಲಾಲ್ಕೃಷ್ಣ ಆಡ್ವಾಣಿ. ದೇಶಾದ್ಯಂತ ರಥಯಾತ್ರೆ ಮಾಡಿ ರಾಮ ಜನ್ಮಭೂಮಿ ಆಂದೋಲನ ಬಿರುಗಾಳಿಯಂತೆ ವ್ಯಾಪಿಸುವಂತೆ ಮಾಡಿದವರು ಬಿಜೆಪಿಯ ಹಿರಿಯ ಮುಖಂಡ ಲಾಲ್ಕೃಷ್ಣ ಆಡ್ವಾಣಿ. ಜನ್ಮಭೂಮಿ ಸಂಘರ್ಷದ ವೃತ್ತಾಂತ, ರಥಯಾತ್ರೆಯ ಆ ದಿನಗಳು- ಎಲ್ಲದರ ಕುರಿತು ಆಡ್ವಾಣಿಯವರು ತಮ್ಮ ಆತ್ಮಕತೆ ‘ಮೈ ಕಂಟ್ರಿ, ಮೈ ಲೈಫ್’ನಲ್ಲಿ ಬರೆದುದರ ಆಯ್ದ ಭಾಗ ಇಲ್ಲಿದೆ. ದೇಶಾದ್ಯಂತ ಸುಂಟರಗಾಳಿ ಎಬ್ಬಿಸಿದ ಅಯೋಧ್ಯೆ ಮಹಾ ಆಂದೋಲನವು ನನ್ನ ರಾಜಕೀಯ ಜೀವನದ ಅತ್ಯಂತ ಕ್ಲಿಷ್ಟಕರ ಮತ್ತು ಸ್ಥಿತ್ಯಂತರದ ವಿದ್ಯಮಾನ. ನಮ್ಮ ಸಮಾಜ ಮತ್ತು ರಾಜಕೀಯ ಸ್ಥಿತಿಗತಿಯ […]
Read More
– ಗೋಪಾಲ ನಾಗರಕಟ್ಟೆ. ಶ್ರೀರಾಮನ ನಿರ್ಯಾಣದ ನಂತರ ಆತನ ಸುಪುತ್ರ ಕುಶನು ತನ್ನ ಪಿತನ ಜನ್ಮಸ್ಥಾನದಲ್ಲಿ ಭವ್ಯವಾದ ಮಂದಿರ ನಿರ್ಮಿಸಿದ. ಸಹಸ್ರಾರು ವರ್ಷಗಳ ನಂತರ ರಾಜಾ ವಿಕ್ರಮಾದಿತ್ಯನಿಂದ ಆ ಭವ್ಯ ಮಂದಿರ ಜೀರ್ಣೋದ್ಧಾರದ ಪವಿತ್ರ ಕಾರ್ಯ ನೆರವೇರಿತು. ಅಯೋಧ್ಯಾ ಶ್ರೀರಾಮ ಜನ್ಮಸ್ಥಾನದ ದರ್ಶನವು ಮೋಕ್ಷ ಪ್ರಾಪ್ತಿಯ ಮಾರ್ಗವೆಂಬ ಶ್ರದ್ಧೆಯಿಂದ ಜೀವನದಲ್ಲೊಮ್ಮೆಯಾದರೂ ಅಯೋಧ್ಯಾ ದರ್ಶನ ಮಾಡಲೇಬೇಕೆಂದು ಹಂಬಲಿಸಿ ತೀರ್ಥಯಾತ್ರೆ ಮಾಡುತ್ತಾರೆ. 1528ರಲ್ಲಿ ಮತಾಂಧ ಆಕ್ರಮಣಕಾರಿ ಬಾಬರನ ಆದೇಶದಂತೆ ಆತನ ಸೇನಾಧಿಪತಿ ಮೀರ್ ಬಾಕಿ ಮಂದಿರವನ್ನು ಧ್ವಂಸಗೊಳಿಸಿ ಆ ಸ್ಥಾನದಲ್ಲಿ […]
Read More