ಹಾಲು ಮಾರಾಟಕ್ಕೂ ಕೊರೊನಾ ಎಫೆಕ್ಟ್

-ಹೆಚ್ಚಿದ ಉತ್ಪಾದನೆ, ಕುಸಿದ ಬೇಡಿಕೆ-ಹೆಚ್ಚಿದ ಉತ್ಪಾದನೆ, ಕುಸಿದ ಬೇಡಿಕೆ-ಶಾಲೆ, ಹೋಟೆಲ್‌ಗಳಿಂದ ಡಿಮಾಂಡಿಲ್ಲ. ಸಂತೋಷ್‌ ಕಾಚಿನಕಟ್ಟೆ ಶಿವಮೊಗ್ಗ. ರಾಜ್ಯದೆಲ್ಲೆಡೆ ಜನತೆಗೆ ಕ್ಷೀರಾಮೃತ ಉಣಿಸುವ, ರೈತರು ಮತ್ತು ಹೈನುಗಾರಿಕೆ ಪಾಲಿನ ಜೀವಾಳ ಎನಿಸಿದ ರಾಜ್ಯ ಸಹಕಾರ ಹಾಲು ಉತ್ಪಾದಕರ ಒಕ್ಕೂಟ(ಕೆಎಂಎಫ್‌)ಕ್ಕೂ ಕೊರೊನಾ ಸಂಕಷ್ಟ ತಂದಿಟ್ಟಿದೆ. ರೈತರಿಂದ ಹಾಲನ್ನು ಸಂಗ್ರಹಿಸಿ ಪೇಟೆ, ಪಟ್ಟಣಗಳಲ್ಲಿನ ಗ್ರಾಹಕರಿಗೆ ತಲುಪಿಸುವ ಸೇತುವೆಯಾಗಿ ಕೆಲಸ ಮಾಡುವ ಹಾಲು ಒಕ್ಕೂಟಕ್ಕೆ ಕೊರೊನಾ ಆರ್ಥಿಕ ಪೆಟ್ಟು ನೀಡಿದೆ. ಒಂದೆಡೆ ಹಾಲಿನ ಉತ್ಪಾದನೆ ಹೆಚ್ಚಾದ ಸಂತಸ ಮೂಡಿಸಿದರೆ, ಮತ್ತೊಂದು ಕಡೆ ಉತ್ಪಾದನೆಯಾದ […]

Read More

ಸಾವಿನ ಅರಿವಿಲ್ಲದೆ ಏಳು ಅಜ್ಜಾ ಎಂದು ಗೋಗರೆದ ಬಾಲಕ

ಕಾಶ್ಮೀರ ಕಣಿವೆಯಲ್ಲಿ ಉಗ್ರ ದಾಳಿಯ ಕ್ರೂರ ಮುಖ: ಮೊಮ್ಮಗನ ಕಣ್ಣೆದುರೇ ತಾತ ಗುಂಡಿಗೆ ಬಲಿ. ಹೊಸದಿಲ್ಲಿ: ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸಕ್ಕೆ ಬಲಿಯಾದ ತಾತನ ಶವದ ಮೇಲೆ ಬಿದ್ದು, ಅವರನ್ನು ಎಬ್ಬಿಸಲು ಮೂರು ವರ್ಷದ ಬಾಲಕನೊಬ್ಬ ಪ್ರಯತ್ನಿಸುತ್ತಿರುವ ಹೃದಯ ವಿದ್ರಾವಕ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಅಜ್ಜ ಮೃತಪಟ್ಟಿದ್ದಾರೆ, ಇನ್ನು ಏಳುವುದಿಲ್ಲ ಎಂಬ ವಾಸ್ತವವನ್ನು ಅರಿಯದ ಬಾಲಕ ಮೃತ ದೇಹದ ಮೇಲೆ ಕುಳಿತು ಅವರನ್ನು ಎಚ್ಚರಿಸಲು ಪ್ರಯತ್ನಿಸುವ ಸನ್ನಿವೇಶವು ಮನಕಲಕುವಂತಿದೆ. ಜಮ್ಮು-ಕಾಶ್ಮೀರದ ಸೊಪೊರದಲ್ಲಿ ಬುಧವಾರ ಉಗ್ರರು ಹಾಗೂ […]

Read More

ಚೀನಾ ರಸ್ತೆ ಬ್ಲಾಕ್

ಹೆದ್ದಾರಿ ಕಾಮಗಾರಿಗಳಿಂದ ಚೀನಿ ಕಂಪನಿಗಳು ಔಟ್‌ ಕೈಗಾರಿಕೋದ್ಯಮಗಳಲ್ಲೂ ಡ್ರ್ಯಾಗನ್‌ ಹೂಡಿಕೆಗೆ ಬ್ರೇಕ್‌. ಹೊಸದಿಲ್ಲಿ: ಪೂರ್ವ ಲಡಾಖ್‌ ಗಡಿ ಸಂಘರ್ಷದ ಬಳಿಕ ಚೀನಾ ವಿರುದ್ಧ ಭಾರತ ದಿಟ್ಟ ಕ್ರಮಗಳನ್ನು ಮುಂದುವರಿಸಿದೆ. 59 ಆ್ಯಪ್‌ಗಳ ನಿಷೇಧದ ಮೂಲಕ ಚೀನಾಗೆ ಬಿಸಿ ಮುಟ್ಟಿಸಿದ್ದ ಭಾರತ ಈಗ ಹೆದ್ದಾರಿ ಕಾಮಗಾರಿಗಳಿಂದ ಚೀನಿ ಕಂಪನಿಗಳನ್ನು ಸಂಪೂರ್ಣವಾಗಿ ಹೊರಗಿಡಲು ನಿರ್ಧರಿಸಿದೆ. ಅಲ್ಲದೆ, ಅತಿಸಣ್ಣ, ಸಣ್ಣ, ಮತ್ತು ಮಧ್ಯಮ ಗಾತ್ರದ ಕೈಗಾರಿಕೆ ಸೇರಿದಂತೆ ಇತರೆ ವಲಯಗಳಲ್ಲೂ ಚೀನಿ ಹೂಡಿಕೆಗೆ ಅವಕಾಶ ನೀಡದಿರಲು ತೀರ್ಮಾನಿಸಲಾಗಿದೆ. ಹೆದ್ದಾರಿ ಖಾತೆ ಸಚಿವ […]

Read More

ಇನ್ನು ಮನೆಯಲ್ಲೇ ಚಿಕಿತ್ಸೆ

-ಲಕ್ಷಣರಹಿತರು ಆಸ್ಪತ್ರೆ ಸೇರಬೇಕಿಲ್ಲ -ಗಂಭೀರ ರೋಗಿಗಳ ಜೀವ ರಕ್ಷಣೆಗೆ ಆದ್ಯತೆ -ತಜ್ಞರ ಸಲಹೆಗೆ ಸರಕಾರದ ಒಪ್ಪಿಗೆ -ಹೋಮ್‌ ಐಸೊಲೇಶನ್‌ ಬಗ್ಗೆ ಶೀಘ್ರ ಮಾರ್ಗಸೂಚಿ ವಿಕ ಸುದ್ದಿಲೋಕ ಬೆಂಗಳೂರು.  ಬೆಂಗಳೂರಿನಲ್ಲಿ ಯಾವುದೇ ರೋಗ ಲಕ್ಷಣಗಳಿಲ್ಲದ ಸೋಂಕಿತರಿಗೆ ಇನ್ನು ಮುಂದೆ ಮನೆಯಲ್ಲೇ ಚಿಕಿತ್ಸೆ ನೀಡಲು ರಾಜ್ಯ ಸರಕಾರ ಮಹತ್ವದ ತೀರ್ಮಾನ ಕೈಗೊಂಡಿದೆ. ಗಂಭೀರ ಸಮಸ್ಯೆ ಎದುರಿಸುತ್ತಿರುವ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಿ ಜೀವ ರಕ್ಷಣೆ ಮಾಡುವ ನಿಟ್ಟಿನಲ್ಲಿಈ ಕ್ರಮ ಕೈಗೊಳ್ಳಲಾಗಿದೆ. ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ತೀವ್ರಗತಿಯಲ್ಲಿ ಏರುತ್ತಿದ್ದು, ಆಸ್ಪತ್ರೆಗಳು ತುಂಬಿಕೊಳ್ಳುತ್ತಿವೆ. […]

Read More

ಮನೆ ಮದ್ದು, ಕೊರೊನಾಗೆ ಗುದ್ದು – ಕಷಾಯ ಮಾಡಿ ಕುಡಿಯಿರಿ, ಆರೋಗ್ಯವಾಗಿರಿ…

ವಿಕ ಸುದ್ದಿಲೋಕ ಬೆಂಗಳೂರು. ರಾಜ್ಯದಲ್ಲಿ ಸಮುದಾಯದ ಮಟ್ಟದಲ್ಲಿ ಸೋಂಕು ಹರಡುತ್ತಿರುವುದು ಮತ್ತು ಲಕ್ಷ ಣರಹಿತ ಸೋಂಕಿತರು ಹೆಚ್ಚುತ್ತಿರುವುದರಿಂದ ‘ಮನೆ ಆರೈಕೆ ಕ್ರಮ’ ಜಾರಿಗೊಳಿಸಲು ಸರಕಾರ ಚಿಂತನೆ ನಡೆಸಿದೆ. ಅಂದರೆ ಜನರು ತಮ್ಮ ಆರೋಗ್ಯವನ್ನು ತಾವೇ ಕಾಪಾಡಿಕೊಳ್ಳುವ ಅನಿವಾರ್ಯತೆ ಎದುರಾಗಿದೆ. ಸೋಂಕಿತರು ‘ಮನೆ ಆರೈಕೆ’ಗೆ ಒಳಪಟ್ಟರೆ ಆರೋಗ್ಯ ವೃದ್ಧಿಗೆ ಕೆಲ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ಹಾಗೆಯೇ ಉಳಿದವರೂ ಕೂಡ ಸೋಂಕಿಗೆ ಒಳಗಾಗದಂತೆ ದೂರ ಇರಲು ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕಾಗುತ್ತದೆ.   ಮನೆ ಮದ್ದು ಬಳಸಿ ಅಮೃತಬಳ್ಳಿ, ಅಶ್ವಗಂಧ, ಬೇವು, ತುಳಸಿ, […]

Read More

ಆಯ್ತು ವರ್ಷ 3, ಅಡ್ಡಿ ಹತ್ತಾರು

2017ರ ಜುಲೈ 1ರಂದು ಮಧ್ಯರಾತ್ರಿ ನಡೆದ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಜಾರಿಯಾದ  ಸರಕು ಮತ್ತು ಸೇವಾ ತೆರಿಗೆಗೆ(ಜಿಎಸ್‌ಟಿ) ಈಗ ಮೂರು ವರ್ಷ ಭರ್ತಿ. ಜಿಎಸ್‌ಟಿ ಸಾಧಕ – ಬಾಧಕಗಳತ್ತ ಕ್ವಿಕ್‌ ಲುಕ್‌. ಮುಂದಿರುವ ಸವಾಲುಗಳು ಏನು? – ಕೊರೊನಾ ಬಿಕ್ಕಟ್ಟಿನ ಪರಿಣಾಮ ಜಿಎಸ್‌ಟಿ ಸಂಗ್ರಹ ಇಳಿಕೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಮಾರ್ಚ್‌ನಲ್ಲಿ ಜಿಎಎಸ್‌ಟಿಟಿ ಸಂಗ್ರಹ 87 ಪಸೆಂರ್‍ಟ್‌ ಕುಸಿದಿದೆ. ಸಂಗ್ರಹ ಕುಸಿತದ ಪರಿಣಾಮ ಏಪ್ರಿಲ್‌-ಮೇ ತಿಂಗಳಿನ ಜಿಎಸ್‌- ಸಂಗ್ರಹದ ಅಂಕಿ ಅಂಶ ಬಿಡುಗಡೆಯಾಗಿಲ್ಲ. – ರಾಜ್ಯಗಳಿಗೆ ಜಿಎಸ್‌ಟಿ ಪರಿಹಾರ ವಿತರಣೆ ಸಮರ್ಪಕವಾಗಿಲ್ಲ.  […]

Read More

ಹೋದರೆ ಹೋಗು ಚೀನಾ – ಇರೋದು ನೀನೊಬ್ನೇನಾ!

ಚೀನೀ ಆ್ಯಪ್‌ಗೆ ಪರ್ಯಾಯಗಳು. ಗುರ್‌ ಎಂದ ಚೀನಾ 59 ಚೀನಾ ಆ್ಯಪ್‌ಗಳನ್ನು ಬ್ಯಾನ್‌ ಮಾಡಿದ ಭಾರತದ ಕ್ರಮ ತನಗೆ ಕಳವಳ ಉಂಟುಮಾಡಿದೆ ಎಂದು ಚೀನಾ ಹೇಳಿದೆ. ಅಂತಾರಾಷ್ಟ್ರೀಯ ಹೂಡಿಕೆದಾರರ ಹಿತ ಹಾಗೂ ಕಾನೂನಾತ್ಮಕ ಹಕ್ಕುಗಳನ್ನು ರಕ್ಷಿಸುವ ಹೊಣೆ ಭಾರತ ಸರಕಾರದ ಮೇಲೆ ಇದೆ ಎಂದು ಚೀನಾ ಗುರುಗುಟ್ಟಿದೆ. ಚೀನದ ಕಂಪನಿಗಳು ಯಾವಾಗಲೂ ಅಂತಾರಾಷ್ಟ್ರೀಯ ಹಾಗೂ ಸ್ಥಳೀಯ ಸರಕಾರಗಳ ಕಾನೂನುಗಳಿಗೆ ಬದ್ಧವಾಗಿರುವಂತೆ ನಾವು ನೋಡಿಕೊಳ್ಳುತ್ತೇವೆ ಎಂದು ಚೀನಾ ವಿದೇಶಾಂಗ ಖಾತೆ ವಕ್ತಾರ ಝಾವೊ ಲಿಜಿಯನ್‌ ಹೇಳಿದ್ದಾರೆ. ಇದು ಅಂತಾರಾಷ್ಟ್ರೀಯ […]

Read More

ವೈದ್ಯನ ಜೀವನದ ಒಳನೋಟ

– ಡಾ. ಅಜಿತ್‌ ಈಟಿ, ಶ್ವಾಸಕೋಶ ತಜ್ಞರು. ದೇಶ ಕಂಡ ಅಪ್ರತಿಮ ವೈದ್ಯರು ಹಾಗೂ 14 ವರ್ಷ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸಿದ ಭಾರತರತ್ನ ಪುರಸ್ಕೃತ ಡಾ. ಬಿಧಾನ್‌ ಚಂದ್ರ ರಾಯ್‌ ಅವರ ಜನ್ಮ ಮತ್ತು ಮರಣ ದಿನ – ಜುಲೈ 1ನ್ನು ರಾಷ್ಟ್ರೀಯ ವೈದ್ಯರ ದಿನ ಎಂದು ಗುರುತಿಸಲಾಗಿದೆ. ಡಾ.ಬಿ.ಸಿ. ರಾಯ್‌ ಅವರು ದೇಶದ ವೈದ್ಯಕೀಯ ವ್ಯವಸ್ಥೆಗೆ ನೀಡಿರುವ ಅಪಾರ ಕೊಡುಗೆಗೆ ಗೌರವ ಸೂಚಿಸುವ ಜೊತೆಗೆ ಸಮಾಜದಲ್ಲಿ ವೈದ್ಯರ ಪಾತ್ರ, ಶ್ರಮ ಹಾಗೂ ಮಹತ್ವವನ್ನು […]

Read More

ದೇಸಿ ಆ್ಯಪ್‌ಗಳಲ್ಲಿ ಸಂಚಲನ

– ಚೀನಾ ಬ್ಯಾನ್‌ ವರದಾನ | ಪರ್ಯಾಯ ಆ್ಯಪ್‌ಗೆ ಹೆಚ್ಚಿದ ಬೇಡಿಕೆ. ಹೊಸದಿಲ್ಲಿ: ಟಿಕ್‌ಟಾಕ್‌, ಹೆಲೋ ಸೇರಿದಂತೆ ಚೀನಾ ಮೂಲದ 59 ಮೊಬೈಲ್‌ ಆ್ಯಪ್‌ಗಳ ನಿಷೇಧದಿಂದ ಭಾರತದ ಸ್ಟಾರ್ಟ್‌ಅಪ್‌ಗಳಿಗೆ ಉತ್ತಮ ಅವಕಾಶಗಳ ಬಾಗಿಲು ತೆರೆದಂತಾಗಿದೆ. ಚೀನಾ ಅಪ್ಲಿಕೇಷನ್‌ಗಳಿಗೆ ಪ್ರತಿಯಾಗಿ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಸ್ವದೇಶಿ ಆ್ಯಪ್‌ಗಳಿಗೆ ಭಾರಿ ಬೇಡಿಕೆ ಬಂದಿದೆ. ಚಿಂಗಾರಿ, ಬೊಲೊ ಇಂಡ್ಯಾ, ಸ್ವೂಪ್‌ ಇತ್ಯಾದಿಗಳು ಗ್ರಾಹಕರನ್ನು ಸೆಳೆಯಲು ಕಸರತ್ತು ತೀವ್ರಗೊಳಿಸಿವೆ. ಟಿಕ್‌-ಟಾಕ್ ಬ್ಯಾನ್‌ ಆದ ಮರುದಿನವೇ ಭಾರತದಲ್ಲಿ ‘ಚಿಂಗಾರಿ’ ಆ್ಯಪ್‌ ಡೌನ್‌ಲೋಡ್‌ ಸಂಖ್ಯೆ ಗಂಟೆಗೆ ಸುಮಾರು 1 ಲಕ್ಷ ತಲುಪಿದೆ. ಒಂದು ಗಂಟೆಯಲ್ಲಿವೀಕ್ಷಿಸುವ […]

Read More

ಆಹಾರ ಭದ್ರತೆ ಖಾತರಿ – ಆರ್ಥಿಕ ಪುನಶ್ಚೇತನ ಮುಂದುವರಿಕೆ

ಕೊರೊನಾ ವಿರುದ್ಧದ ಹೋರಾಟದಲ್ಲಿ ಸರಕಾರದ ಮಹತ್ವದ ನಿರ್ಧಾರಗಳನ್ನು ಜನತೆಯ ಮುಂದೆ ಆಗಾಗ ಬಂದು ಪ್ರಕಟಿಸುತ್ತಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಂಗಳವಾರ ಇನ್ನೊಂದು ಪ್ರಮುಖ ಉಪಕ್ರಮವನ್ನು ಘೋಷಿಸಿದ್ದಾರೆ. ಗರೀಬ್‌ ಕಲ್ಯಾಣ್‌ ಯೋಜನೆಯ ಅಡಿಯಲ್ಲಿ ಇನ್ನೂ 5 ತಿಂಗಳವರೆಗೆ ಬಡವರಿಗೆ ಉಚಿತ ಪಡಿತರ ನೀಡಲಾಗುವುದು ಎಂದು ಅವರು ತಿಳಿಸಿದ್ದು, ನಿರುದ್ಯೋಗಿಗಳು, ಹಸಿವಿನಿಂದ ನರಳುತ್ತಿರುವ ಬಡ ಜನರಿಗೆ ಇದು ಶುಭ ಸುದ್ದಿಯಾಗಿದೆ. ಹಾಗೇ ಕೆಲಸ ಅರಸಿ ವಲಸೆ ಹೋಗುವ ಕಾರ್ಮಿಕರಿಗೆ, ಬಡವರಿಗೆ ಅನುಕೂಲವಾಗುವ ರೀತಿ ದೇಶಾದ್ಯಂತ ಏಕರೂಪ ದಿನಸಿ […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top