ಕೊರೊನಾ ಹೋರಾಟದಲ್ಲಿ ಹತ್ತಾರು ಹೊಣೆ | ರಾಜ್ಯದೆಲ್ಲೆಡೆ ಜಾಗೃತಿಯ ಜಾಗರಣೆ ಅಪಾಯವನ್ನೂ ಲೆಕ್ಕಿಸದೆ ದುಡಿಯುತ್ತಿರುವರನ್ನು ಸರಕಾರ ವಾರಿಯರ್ಸ್ ಆಗಿ ಪರಿಗಣಿಸಬೇಕಿದೆ. ವಿಕ ಸುದ್ದಿಲೋಕ ಬೆಂಗಳೂರು: ‘ಶಿಕ್ಷಕರಿಗೆ ವರ್ಷವಿಡೀ ರಜೆ, ಕೆಲಸವೂ ಕಡಿಮೆ, ಸಂಬಳಕ್ಕೆ ಮಾತ್ರ ತೊಂದರೆ ಇಲ್ಲ’ ಎಂದು ಕೊಂಕು ನುಡಿಯುವವರೇ ಹೆಚ್ಚು. ಆದರೆ ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕ, ಶಿಕ್ಷಕಿಯರು ಸಂಕಷ್ಟ ಕಾಲದಲ್ಲಿ ಕೊರೊನಾ ವಾರಿಯರ್ಗಳಾಗಿ ಕೆಲಸ ಮಾಡುವ ಮೂಲಕ ಜೀವರಕ್ಷಣೆಯಲ್ಲಿ ದೊಡ್ಡ ಪಾತ್ರ ವಹಿಸಿದ್ದಾರೆ. ವೈದ್ಯರು, ನರ್ಸ್ಗಳು, ಪೊಲೀಸರು, ಆಶಾ ಕಾರ್ಯಕರ್ತೆಯರಂತೆಯೇ […]
Read More
ಕೊರೊನಾ ವೈರಸ್ಸನ್ನು ಯಶಸ್ವಿಯಾಗಿ ನಿಯಂತ್ರಿಸಿರುವ ಹಲವು ದೇಶಗಳಲ್ಲಿ ಶಾಲೆಗಳನ್ನು ಆಗಲೇ ತೆರೆಯಲಾಗಿದೆ. ಆದರೆ ಬಹಳ ಮುನ್ನೆಚ್ಚರಿಕೆ, ಕಠಿಣ ಸುರಕ್ಷತಾ ಕ್ರಮಗಳೊಂದಿಗೆ ಇವನ್ನು ನಡೆಸಲಾಗುತ್ತಿದೆ. ಈ ದೇಶಗಳ ಶಾಲೆಗಳ ಮಾದರಿ ನಮಗೆ ಒಂದು ಪಾಠ ಆಗಬಹುದು. ಸಣ್ಣ ಮಕ್ಕಳಿಗೆ ಭೀತಿಯಿಲ್ಲ ಈ ಸೋಂಕಿಗೆ ಸಂಬಂಧಿಸಿದ ಒಂದು ವಿಚಿತ್ರ ಸಗತಿಯೆಂದರೆ, ಮಕ್ಕಳು ಸಣ್ಣವರಾಗಿದ್ದಷ್ಟೂ ಈ ವೈರಸ್ ಬಾಧಿಸುವ ಸಾಧ್ಯತೆ ಕಡಿಮೆ. ಅಂದರೆ ಹೈಸ್ಕೂಲ್ ಮಕ್ಕಳನ್ನು ಬಾಧಿಸುವ ಪ್ರಮಾಣದಲ್ಲಿ ಪ್ರಾಥಮಿಕ ಶಾಲಾ ವಯೋಮಾನದ ಮಕ್ಕಳನ್ನು ಈ ವೈರಸ್ ಸೋಂಕುವುದೇ ಇಲ್ಲ; ಅಥವಾ […]
Read More
51422 ಒಟ್ಟು ಸೋಂಕಿತರು 35995 ಸೋಂಕುರಹಿತರು 1032 ಸಾವಿಗೀಡಾದವರು ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವುದು ನಿಜವಾದರೂ ಅದೇ ಹೊತ್ತಿಗೆ ಸೋಂಕುರಹಿತರ ಪ್ರಮಾಣವೂ ಹೆಚ್ಚಿರುವುದು ಸ್ವಲ್ಪ ನೆಮ್ಮದಿ ನೀಡಿದೆ. ರಾಜ್ಯದ 51422 ಸೋಂಕಿತರ ಪೈಕಿ 37,280 ಮಂದಿಯಲ್ಲಿ ಯಾವ ಕನಿಷ್ಠ ಲಕ್ಷಣಗಳೂ ಇಲ್ಲ. ಹೊಸದಾಗಿ ದಾಖಲಾಗುತ್ತಿರುವ ಪ್ರಕರಣಗಳಲ್ಲಿ ಮಾತ್ರ ಸ್ವಲ್ಪ ಮಟ್ಟಿಗೆ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ. ಲಕ್ಷಣರಹಿತರು ಹೆಚ್ಚಾದಷ್ಟೂ ಅವರ ಚಿಕಿತ್ಸೆ ಸಮಸ್ಯೆ ಕಡಿಮೆಯಾಗುತ್ತದೆ. ಮತ್ತು ಲಕ್ಷಣ ಇರುವವರ ಚಿಕಿತ್ಸೆಗೆ ಹೆಚ್ಚು ಅವಕಾಶ ದೊರೆಯುತ್ತದೆ. ಕೆಲವು ಜಿಲ್ಲೆಗಳಲ್ಲಂತೂ ಶೇ. […]
Read More
ದಶಕಗಳ ಕಾಲ ಕಾಯಿಲೆ ಇದ್ದರೂ ಬದುಕಿರುವವರು ಮಾತ್ರವಲ್ಲ, ಆರೋಗ್ಯವಂತ ವ್ಯಕ್ತಿಗಳೂ ಕೂಡ ಅತಿರಂಜಿತ ಸುದ್ದಿಯಿಂದಾಗಿ ಭಯಭೀತರಾಗಿ ಮಾನಸಿಕವಾಗಿ ಸಾಯುತ್ತಿದ್ದುದನ್ನು ನಾನು ಗಮನಿಸಿದ್ದೇನೆ. ಆದರೆ ಗುರುವಾರದ ‘ವಿಜಯ ಕರ್ನಾಟಕ’ ಪತ್ರಿಕೆಯ ಮುಖಪುಟ ವರದಿ ಹಾಗೂ ಸಂಪಾದಕೀಯವನ್ನು ಓದಿದರೆ ಜನರಿಗೆ ಧೈರ್ಯ ಬರುವುದು ಖಂಡಿತ. ಮಾಧ್ಯಮಗಳು ಸದ್ಯ ಮಾಡಬೇಕಿರುವುದು ಇಂಥ ಕೆಲಸವನ್ನೇ ಹೊರತು ಹೆದರುವವರ ಮೇಲೆ ಹಾವು ಎಸೆಯುವುದಲ್ಲ. ಸಕಾಲದಲ್ಲಿ ತಮ್ಮ ಪತ್ರಿಕೆಯಲ್ಲಿ ಕೊರೊನಾ ಕುರಿತು ವಾಸ್ತವವನ್ನು ಬಿಚ್ಚಿಟ್ಟಿದ್ದೀರಿ. ಧನ್ಯವಾದಗಳು. – ಬಿ.ಎಂ.ಶಿವಕುಮಾರ್ ಬೆಂಗಳೂರು ಕೊರೊನಾ ಸಾವು ಶೇ.25ರಷ್ಟು ಮಾತ್ರ […]
Read More
ದಿನ ಕಳೆದಂತೆ ಕೊರೊನಾ ಸೋಂಕಿನ ಬಗ್ಗೆ ಹೊಸ ಹೊಸ ಮಾಹಿತಿಗಳು ದೊರೆಯುತ್ತಿವೆ. ದೊರೆಯುತ್ತಿರುವ ಅಂಕಿ- ಅಂಶ, ಮಾಹಿತಿಗಳನ್ನು ಬಗೆದು ನೋಡಿದರೆ ನಾವು ಇದುವರೆಗೆ ಕೋವಿಡ್ ಬಗ್ಗೆ ನಂಬಿಕೊಂಡು ಬಂದಿರುವ ಹಲವು ಸಂಗತಿಗಳನ್ನೇ ನಿರಾಕರಿಸಬಹುದಾದ ಹಾಗಿದೆ. ಉದಾಹರಣೆಗೆ, ಕೋವಿಡ್ ಪಾಸಿಟಿವ್ ಬಂದ ಎಲ್ಲರನ್ನೂ ಸಾಂಸ್ಥಿಕ ಕ್ವಾರಂಟೈನ್ ಮಾಡಬೇಕು ಎಂದು ಆರಂಭದಲ್ಲಿ ಹೇಳಲಾಗಿತ್ತು. ಆದರೆ ಈಗ ನಮ್ಮ ರಾಜ್ಯ ಸರಕಾರ ಮತ್ತು ವಿಶ್ವ ಆರೋಗ್ಯ ಸಂಸ್ಥೆ ಕೂಡ, ಲಕ್ಷಣಗಳಿಲ್ಲದ ಸೋಂಕಿತರು ಅಷ್ಟೇನೂ ಅಪಾಯದ ಅಂಚಿನಲ್ಲಿರುವವರಲ್ಲ, ಹಾಗಾಗಿ ಅವರು ಮನೆ ಕ್ವಾರಂಟೈನ್ನಲ್ಲಿದ್ದರೆ […]
Read More
ಬೆಂಗಳೂರು: ಕೋವಿಡ್ನಿಂದ ಗುಣಮುಖರಾದವರು ಪ್ಲಾಸ್ಮಾ ಚಿಕಿತ್ಸೆಗೆ ರಕ್ತದಾನ ಮಾಡಿದರೆ 5 ಸಾವಿರ ರೂ. ಪ್ರೋತ್ಸಾಹ ಧನ ನೀಡುವುದಾಗಿ ರಾಜ್ಯ ಸರಕಾರ ಘೋಷಿಸಿದೆ. ಬುಧವಾರ ಮಾತನಾಡಿದ ವೈದ್ಯ ಶಿಕ್ಷ ಣ ಸಚಿವ ಡಾ.ಕೆ.ಸುಧಾಕರ್, ‘‘ಪ್ಲಾಸ್ಮಾ ಚಿಕಿತ್ಸೆಯಿಂದ ಕೋವಿಡ್ ರೋಗಿಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಇದಕ್ಕಾಗಿ ಈ ಮೊದಲು ಕೊರೊನಾ ಸೋಂಕು ಪೀಡಿತರಾಗಿ ಸಂಪೂರ್ಣ ಗುಣಮುಖರಾದವರ ರಕ್ತವನ್ನು ನೀಡಬೇಕಾಗುತ್ತದೆ,’’ ಎಂದರು. ಡಿಕ್ಟೇಟ್ ಮಾಡಬೇಡಿ ಕೋವಿಡ್ ಟೆಸ್ಟ್ ಮಾಡದ ಖಾಸಗಿ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಖಾಸಗಿಯವರು ಸರಕಾರಕ್ಕೆ […]
Read More
ಪ್ರತಿಭೆಗೆ ಬಡತನ ಎಂದೂ ಅಡ್ಡಿಯಲ್ಲ. ಬಹಳಷ್ಟು ವಿಷಯ ಮತ್ತು ಸಂದರ್ಭದಲ್ಲಿ ಇದು ಸಾಬೀತಾಗಿದೆ. ದ್ವಿತೀಯ ಪಿಯು ಫಲಿತಾಂಶದಲ್ಲೂ ಅನೇಕ ಪ್ರತಿಭಾವಂತರು ಬಡತನ ಸೇರಿದಂತೆ ಇರುವ ಇತರ ಅಡ್ಡಿ, ಆತಂಕಗಳನ್ನು ಮೀರಿ ಅದ್ಭುತ ಸಾಧನೆ ತೋರಿದ್ದಾರೆ. ಅಂಥ ವಿದ್ಯಾರ್ಥಿಗಳ ಪರಿಚಯ ಇಲ್ಲಿದೆ. ಮುಂದುವರಿದ ಯಶೋಗಾಥೆ ಮೈಸೂರು: ಇಲ್ಲಿನ ಲಕ್ಷ್ಮಿಪುರಂನ ಗೋಪಾಲಸ್ವಾಮಿ ಶಿಶು ವಿಹಾರ ಪಿಯು ಕಾಲೇಜಿನ ವಿದ್ಯಾರ್ಥಿ ಎಂ.ಎಸ್.ಯಶಸ್ ವಿಜ್ಞಾನದ ವಿಭಾಗದಲ್ಲಿ ರಾಜ್ಯಕ್ಕೆ ತೃತೀಯ ಸ್ಥಾನ ಪಡೆದಿದ್ದಾನೆ. ವಿದ್ಯಾರಣ್ಯಪುರಂನ ನಿವಾಸಿಯಾದ ಶಿವಮಲ್ಲಪ್ಪ ಹಾಗೂ ಚಂದ್ರಕಲಾ ದಂಪತಿ ಮಗನಾದ ಯಶಸ್ […]
Read More
-ಎಲ್ಲ ಮೃತ್ಯುವಿಗೂ ಸೋಂಕು ಕಾರಣವಲ್ಲ -ಅನ್ಯ ರೋಗಗಳಿದ್ದವರ ಸಂಖ್ಯೆಯೇ ಅಧಿಕ -850 ಸಾವಿನಲ್ಲಿ ಕೊರೊನಾದಿಂದಲೇ ಪ್ರಾಣ ಕಳೆದುಕೊಂಡವರು 212 ಮಂದಿ ಮಾತ್ರ. ರಾಜ್ಯದಲ್ಲಿ ದಿನೇದಿನೆ ಕೊರೊನಾ ಸೋಂಕು ಮತ್ತು ಸಾವು ಹೆಚ್ಚಾಗುತ್ತಿದೆ. ಆದರೆ, ಸಂಭವಿಸುತ್ತಿರುವ ಸಾವುಗಳಿಗೆಲ್ಲ ಕೊರೊನಾ ಒಂದೇ ಕಾರಣವಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ. ರಾಜ್ಯದಲ್ಲಿ ಜುಲೈ 14ರವರೆಗೆ ದಾಖಲಾದ ಸುಮಾರು 850 ಸಾವುಗಳಲ್ಲಿ ಶೇಕಡಾ ೭೫ರಷ್ಟು ಪ್ರಕರಣಗಳಲ್ಲಿ ಮೃತರು ಈಗಾಗಲೇ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದವರು ಮತ್ತು ಹಲವಾರು ಕಾರಣಗಳಿಂದ ರೋಗ ನಿರೋಧಕ ಶಕ್ತಿ ಕಡಿಮೆ […]
Read More
– ಶ್ರೀ ತರಳಬಾಳು ಜಗದ್ಗುರು ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿ ಸಿರಿಗೆರೆ. History repeats itself (ಇತಿಹಾಸ ಮರುಕಳಿಸುತ್ತದೆ) ಎಂಬ ಮಾತೊಂದು ಆಂಗ್ಲಭಾಷೆಯಲ್ಲಿದೆ. ಯಾವುದೇ ಘಟನೆ ವಿಶಿಷ್ಟವಾದುದಲ್ಲ. ಅದು ಮೇಲ್ನೋಟಕ್ಕೆ ವಿಶಿಷ್ಟವಾದ ಘಟನೆ ಎಂದು ಕಂಡುಬಂದರೂ ಅಂಥದೊಂದು ಘಟನೆ ಹಿಂದೆ ಆಗಿರುತ್ತದೆ. ಈಗ ನಡೆದದ್ದು ವಿಶೇಷವೇನಲ್ಲ. ಹಿಂದೆ ಒಮ್ಮೆಯಲ್ಲ ಅನೇಕ ಬಾರಿ ನಡೆದಿರುವುದರ ಪುನರಾವರ್ತನೆ ಮಾತ್ರ ಎಂದು 19 ನೆಯ ಶತಮಾನದ ಪಾಶ್ಚಾತ್ಯ ತತ್ವಜ್ಞಾನಿಗಳು ಹೇಳುತ್ತಾರೆ. ಇದನ್ನು ‘ನಿರಂತರ ಪುನರಾವರ್ತನಾ ಸಿದ್ಧಾಂತ’ (Doctrine of Eternal Recurrence) […]
Read More
ಒಂದೆಡೆ ಬಿಜೆಪಿ ಹೊಸ ಹೊಸ ಮುಖಗಳಿಗೆ ಮನ್ನಣೆ ಕೊಡುತ್ತಾ ಮುನ್ನಡೆದಿದ್ದರೆ, ಅದರ ಎದುರು ತಕ್ಕ ಹೋರಾಟ ನೀಡಬೇಕಿದ್ದ ಪ್ರತಿಪಕ್ಷ ಕಾಂಗ್ರೆಸ್ ತನ್ನ ಯುವ ನಾಯಕರನ್ನೆಲ್ಲ ಕಳೆದುಕೊಳ್ಳುತ್ತಾ ಸಾಗಿದೆ. ಈ ವಿದ್ಯಮಾನದ ಬಗ್ಗೆ ಒಂದು ನೋಟ ಇಲ್ಲಿದೆ. ರಾಜಸ್ಥಾನದಲ್ಲಿ ಬಿರುಗಾಳಿ: ರಾಜಸ್ಥಾನದ ರಾಜಕಾರಣದಲ್ಲಿ ಎದ್ದಿರುವ ಬಿರುಗಾಳಿ, ಕಾಂಗ್ರೆಸ್ನ ಒಳಗಿನ ವಿದ್ಯಮಾನಗಳನ್ನು ಅವಲೋಕಿಸುವಂತೆ ಮಾಡಿದೆ. ಉಪ ಮುಖ್ಯಮಂತ್ರಿಯಾಗಿದ್ದ ಸಚಿನ್ ಪೈಲಟ್ ಅವರು ಶಾಸಕರನ್ನು ಕರೆದುಕೊಂಡು ಪಕ್ಷದೊಳಗೆ ಬಂಡಾಯ ಎದ್ದಿದ್ದಾರೆ. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹಾಗೂ ಹೈಕಮಾಂಡ್ನ ಹಿರಿಯ ನಾಯಕರ ಮೇಲಿನ […]
Read More