ಪ್ರಮಾದಗಳ ಸುಳಿಯಲ್ಲಿ ಕಾಂಗ್ರೆಸ್

– ಇಂದಿರಾ-ನೆಹರು ಕುಟುಂಬದ ಪ್ರಭುತ್ವವನ್ನು ಧಿಕ್ಕರಿಸುವ ಧೈರ್ಯ ಮೂಡಿದಾಗ ಮಾತ್ರ ಕಾಂಗ್ರೆಸಿಗೆ ಭವಿಷ್ಯ. – ಮಹದೇವ್ ಪ್ರಕಾಶ್. ಎಪ್ಪತ್ತರ ದಶಕದಲ್ಲಿಅ ಖಿಲ ಭಾರತ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ದೇವಕಾಂತ ಬರುವಾ, ‘ಕಾಂಗ್ರೆಸ್ ಎಂದರೆ ಇಂದಿರಾ, ಇಂದಿರಾ ಎಂದರೆ ಕಾಂಗ್ರೆಸ್’ ಎಂದಿದ್ದರು. ಇಂತಹ ಭಟ್ಟಂಗಿಗಳ ಉದ್ಘೋಷಗಳು ನಿರಂತರವಾಗಿ ಮುಂದುವರಿದ ಕಾರಣ ಕಾಂಗ್ರೆಸಿನಲ್ಲಿ ವಂಶ ಪಾರಂಪರ್ಯ ಆಡಳಿತ ಬಲವಾಗಿ ಬೇರೂರಿತು. ದೇವಕಾಂತ ಬರುವಾ ಅವರಂತಹ ಭಟ್ಟಂಗಿಗಳು ಕಾಂಗ್ರೆಸ್ ಎಂದರೆ ರಾಹುಲ್ ಗಾಂಧಿ, ರಾಹುಲ್ ಗಾಂಧಿ ಎಂದರೆ ಕಾಂಗ್ರೆಸ್ ಎಂದು ಈಗಲೂ ಜಪ […]

Read More

ಕೋವಿಡ್‌ ಪ್ರತಿರೋಧ – ಬೆಂಗಳೂರಲ್ಲೇ ಕಂಡುಬಂತು ಹೆಚ್ಚಿನ ಪ್ರತಿಕಾಯ

ಭಾರತೀಯರಲ್ಲಿ ಸುಮಾರು 18 ಕೋಟಿ ಮಂದಿ ಈಗಾಗಲೇ ಕೋವಿಡ್‌ಗೆ ರೋಗನಿರೋಧಕ ಶಕ್ತಿ ಬೆಳೆಸಿಕೊಂಡಿದ್ದಾರೆಯೇ? ಹೌದು ಎನ್ನುತ್ತಿದೆ ಒಂದು ಅಧ್ಯಯನ. ಇದರಲ್ಲಿ ಬೆಂಗಳೂರಿನಲ್ಲಿ ನಡೆಸಿದ ಅಧ್ಯಯನದಲ್ಲಿ ಅತಿ ಹೆಚ್ಚಿನ ಪ್ರತಿಕಾಯ(ಆ್ಯಂಟಿಬಾಡಿ)ಗಳು ಕಂಡುಬಂದಿವೆ. ಪ್ರತಿಕಾಯಗಳೆಂದರೇನು? ಯಾವುದೇ ಕಾಯಿಲೆಯ ವೈರಸ್‌ ಅಥವಾ ಬ್ಯಾಕ್ಟೀರಿಯಾ ಮನುಷ್ಯನೊಳಗೆ ಪ್ರವೇಶಿಸಿದಾಗ, ಅದನ್ನು ಪ್ರತಿರೋಧಿಸುವ ಜೀವಕಣಗಳನ್ನು ದೇಹವೇ ಉತ್ಪತ್ತಿ ಮಾಡುತ್ತದೆ. ಇದನ್ನೇ ಪ್ರತಿಕಾಯ(ಆ್ಯಂಟಿಬಾಡಿ) ಎನ್ನುತ್ತಾರೆ. ಈ ಪ್ರತಿಕಾಯಗಳು ದೇಹದಲ್ಲಿದ್ದರೆ, ಈಗಾಗಲೇ ಆಯಾ ನಿರ್ದಿಷ್ಟ ಕಾಯಿಲೆಗೆ ಮನುಷ್ಯ ಒಂದಲ್ಲ ಒಂದು ರೀತಿಯಲ್ಲಿ ತೆರೆದುಕೊಂಡಿದ್ದಾನೆ ಎಂದೇ ಅರ್ಥ. ಆ್ಯಂಟಿಬಾಡಿ ಟೆಸ್ಟ್‌ನಲ್ಲಿ […]

Read More

ಮನ ಕಲಕುವ ಕೊರೊನೇತರರ ಸಂಕಟ

ಕೊರೊನಾ ಅಬ್ಬರದ ಮಧ್ಯೆ ಕೊರೊನೇತರ ರೋಗಿಗಳ ಗೋಳನ್ನು ಯಾರೂ ಕೇಳುತ್ತಿಲ್ಲ. ಬಹುತೇಕ ಆಸ್ಪತ್ರೆಗಳು ಇಂಥ ರೋಗಿಗಳನ್ನು ಅನುಮಾನದಿಂದ ನೋಡುತ್ತಿವೆ; ಆಸ್ಪತ್ರೆಗಳಿಗೂ ಸೇರಿಸಿಕೊಳ್ಳುತ್ತಿಲ್ಲ. ಪರಿಣಾಮವಾಗಿ ಕೆಲವರು ಬೀದಿಯಲ್ಲಿ ನರಳಾಡುತ್ತ ಬಿದ್ದರೆ, ಮತ್ತೆ ಕೆಲವರು ಸೂಕ್ತ ಚಿಕಿತ್ಸೆ ಸಿಗದೇ ಸತ್ತೇ ಹೋಗುತ್ತಿದ್ದಾರೆ. ಅಂಥ ಹೃದಯವಿದ್ರಾವಕ ಇತ್ತೀಚಿನ ಕೆಲವು ಘಟನೆಗಳು ಇಲ್ಲಿವೆ. ರಕ್ತಸ್ರಾವದಿಂದ ಮಹಿಳೆ ಸಾವು ಕನಕಪುರ ತಾಲೂಕಿನ ಟಿ.ಹೊಸಹಳ್ಳಿ ಗ್ರಾಮದ 40 ವರ್ಷದ ಮಹಿಳೆಗೆ ರಕ್ತಸ್ತ್ರಾವ ಉಂಟಾಗಿತ್ತು. ಇದರಿಂದಾಗಿ ಉಸಿರಾಟದ ಸಮಸ್ಯೆಯೂ ಎದುರಾಗಿತ್ತು. ಆದರೆ, ಕನಕಪುರ, ರಾಮನಗರ, ಬೆಂಗಳೂರಿನ ಜಯದೇವ, […]

Read More

ಆರೋಗ್ಯ ಸೇವೆಯೇ ಗಂಭೀರ – ತುರ್ತುಸ್ಥಿತಿ ರೋಗಿಗಳಿಗೆ ಚಿಕಿತ್ಸೆ ಲಭ್ಯವಾಗಲಿ

ಹಿಂದೆಂದೂ ವೈದ್ಯಲೋಕ ಇಂಥದೊಂದು ಕಠೋರ, ನಿರ್ದಯಿ ವ್ಯವಸ್ಥೆಗೆ ಸಾಕ್ಷಿಯಾಗಿರಲಿಲ್ಲ. ಬೆಂಗಳೂರಿನಲ್ಲಿ ಈಗ ಯಾವುದೇ ಗಂಭೀರ ಆರೋಗ್ಯ ಸಮಸ್ಯೆ ಹೊತ್ತುಕೊಂಡು ಆಸ್ಪತ್ರೆಗೆ ಹೋದರೂ, ಮೊದಲು ಕೋವಿಡ್‌ ಪರೀಕ್ಷೆ ಮಾಡಿಸಿಕೊಂಡು ಬನ್ನಿ, ಇಲ್ಲವೇ ಸಾಯಿರಿ ಎಂಬರ್ಥದ ಉತ್ತರಗಳೇ ಸಿಗುತ್ತಿವೆ. ರಾಜ್ಯದ ಇತರ ಕಡೆಗಳ ಆಸ್ಪತ್ರೆಗಳೂ ಇದೇ ಮಾದರಿಯನ್ನು ಅನುಸರಿಸಲಾರಂಭಿಸಿವೆ. ಶುಲ್ಕದ ಮಾತು, ಪರೀಕ್ಷೆ ನಂತರ; ರೋಗಿಯ ಪ್ರಾಣ ಉಳಿಸುವ ಹೊಣೆಯನ್ನು ಮೊದಲು ಹೊರಬೇಕಾದ ಆಸ್ಪತ್ರೆಗಳು ತಮ್ಮ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಿವೆ. ಇದರಿಂದಾಗಿ ಕಳೆದ ಒಂದು ತಿಂಗಳಿನಲ್ಲಿ ಹತ್ತಾರು ರೋಗಿಗಳು ಆಸ್ಪತ್ರೆಗಳಿಗೆ […]

Read More

ಕೊರೊನೇತರರ ಕಾಪಾಡಿ

– ಕೊರೊನಾ ವರದಿ ಇಲ್ಲದೆ ನೋ ಎಂಟ್ರಿ ಎನ್ನುತ್ತಿರುವ ಆಸ್ಪತ್ರೆಗಳು – ತುರ್ತು ಪರಿಸ್ಥಿತಿಯಲ್ಲೂ ನಿಲ್ಲದ ಅಲೆದಾಟ – ಸರಕಾರದ ಅಂತಿಮ ಎಚ್ಚರಿಕೆ ಮಧ್ಯೆಯೂ ಇತರ ರೋಗಿಗಳ ಸರಣಿ ಸಾವು. – ಗಿರೀಶ್ ಕೋಟೆ ಬೆಂಗಳೂರು. ಉಸಿರಾಟದ ತೊಂದರೆ, ಹೃದ್ರೋಗ ಸಮಸ್ಯೆ, ಹೆರಿಗೆ ನೋವಿನಿಂದ ಬಳಲುತ್ತಿರುವ ವ್ಯಕ್ತಿಗೆ ಪ್ರತಿ ಕ್ಷಣವೂ ಅಮೂಲ್ಯ. ಒಂದು ಕ್ಷಣವೂ ತಡ ಮಾಡದೆ ಅವರನ್ನು ಆಸ್ಪತ್ರೆಗೆ ಕರೆತರಬೇಕು… ಇತ್ತೀಚಿನವರೆಗೂ ವೈದ್ಯ ಜಗತ್ತು ಈ ಮಾತನ್ನು ಮಂತ್ರದಂತೆ ಪಠಿಸುತ್ತಿತ್ತು. ಆದರೆ ಈಗ ಕೊರೊನಾ ರೋಗಿಗಳಷ್ಟೇ […]

Read More

ಶ್ರಾವಣ ಪ್ರತಿದಿನವೂ ಪಾವನ

– ಡಾ. ಆರತೀ ವಿ.ಬಿ. ಸನಾತನ ಧರ್ಮವು ಪ್ರಕೃತಿಯಲ್ಲಿ ದೇವರನ್ನೂ ಅವನ ಪೋಷಕಶಕ್ತಿಯನ್ನೂ ಗುರುತಿಸಿ ಆರಾಧಿಸುವ ಸುಂದರ ಸಂಸ್ಕೃತಿಯಾಗಿದೆ. ಪ್ರತಿದಿನವೂ ಸೂರ್ಯನ ಉದಯಾಸ್ತಮಾನಗಳನ್ನೂ ಸೋಜಿಗದ ಕಣ್ಣಿಂದ ನೋಡಿ ನಲಿಯುತ್ತ, ಅದು ನಮಗೀಯುವ ಆಯುರಾಗ್ಯಗಳಿಗಾಗಿ ಕೃತಜ್ಞತೆಯಿಂದ ಅಘ್ರ್ಯ ನೀಡುತ್ತಲೇ ದಿನವನ್ನು ಪ್ರಾರಂಭಿಸುತ್ತೇವೆ. ಪ್ರತಿಯೊಂದು ನೈಸರ್ಗಿಕ ಬದಲಾವಣೆಗಳನ್ನೂ ತತ್ಸಂಬಂಧಿತ ಫಲ ಪುಷ್ಪ ಶಾಖಾದಿಗಳ ವಿಕಾಸವನ್ನೂ ಚಳಿ- ಗಾಳಿ- ಬಿಸಿಲು- ಮಳೆಗಳನ್ನೂ ‘ಬದುಕಿನ ಸ್ವಾರಸ್ಯಕರ ಅನುಭವಗಳು’ ಎಂದು ಅಂಗೀಕರಿಸುತ್ತ, ಅದೆಲ್ಲವನ್ನೂ ದೇವರ ಪ್ರಸಾದವಾಗಿ ಸ್ವೀಕರಿಸುವ ಭಾವ ನಮ್ಮದು. ಪ್ರಕೃತಿಯಲ್ಲೇ ದೇವರನ್ನು ಆರಾಧಿಸುವವರಾದ […]

Read More

ಕೊರೊನಾ ಸಂಕಷ್ಟ ಎದುರಿಸಲು ಅಷ್ಟಸೂತ್ರ

– ಪ್ರತಿ ಮನೆಯೂ ಒಂದು ವೈದ್ಯಶಾಲೆ. ಶ್ರೀಕಾಂತ್ ಹುಣಸವಾಡಿ ಬೆಂಗಳೂರು. ಕೊರೊನಾ ನಮ್ಮ ಜೀವನಶೈಲಿಯನ್ನೇ ಬದಲಿಸಿದೆ. ಶ್ರೀಮಂತರು, ಬಡವರೆನ್ನದೆ ಪ್ರತಿಯೊಬ್ಬರೂ ಹೊಸ ಆಹಾರ ಪದ್ಧತಿ, ದಿನಚರಿಗೆ ಒಗ್ಗಿಕೊಂಡಿದ್ದಾರೆ. ಕೊರೊನಾವನ್ನು ಎದುರಿಸುವ ನಿಟ್ಟಿನಲ್ಲಿ ಹೆಚ್ಚಿನವರು ನಾನಾ ತಂತ್ರಗಳನ್ನು ಅಳವಡಿಸಿಕೊಂಡಿದ್ದು, ಇದರಲ್ಲಿ ಆಯುರ್ವೇದ ಔಷಧ, ಕಷಾಯಗಳ ಬಳಕೆ, ಉತ್ತಮ ಆಹಾರ ಸೇವನೆ ಪ್ರಮುಖವಾಗಿದೆ. ಇದರ ಜತೆಗೆ ದೈಹಿಕ ದೃಢತೆಗಾಗಿ ಯೋಗ-ವ್ಯಾಯಾಮ, ಮಾನಸಿಕ ದೃಢತೆಗಾಗಿ ಧ್ಯಾನ, ದೇವರ ಪೂಜೆ, ಮಂತ್ರ ಪಠಣ, ಹೋಮಹವನಗಳು ಕೂಡಾ ಹೆಚ್ಚಾಗಿವೆ. ರಾಜ್ಯದ ನಾನಾ ಕಡೆ ನಡೆಯುತ್ತಿರುವ […]

Read More

ಕೃಷಿಯ ಮೇಲೆ ನಿರೀಕ್ಷೆ – ಎಲ್ಲ ವಲಯ ಸೋತಿರುವಾಗ ಕೃಷಿಗೆ ಅವಕಾಶ

ಕೊರೊನಾ ಸೃಷ್ಟಿಸಿರುವ ಬಿಕ್ಕಟ್ಟಿಗೆ ನಮ್ಮ ದೇಶದ ಎಲ್ಲ ವಲಯಗಳೂ ಸ್ತಬ್ಧವಾಗಿವೆ. ಕೈಗಾರಿಕೆ, ಆಟೊಮೊಬೈಲ್‌, ಸಾರಿಗೆ, ರಿಯಲ್‌ ಎಸ್ಟೇಟ್‌ ವಲಯಗಳು ಮತ್ತು ಸೇವಾ ಕ್ಷೇತ್ರಗಳು ತತ್ತರಿಸಿದ್ದರೆ; ಉತ್ಪಾದನೆ, ಬೇಡಿಕೆ, ಪೂರೈಕೆ, ಅನುಭೋಗ, ಉಪಭೋಗ, ಹಣದುಬ್ಬರ… ಹೀಗೆ ಅರ್ಥಶಾಸ್ತ್ರದ ಎಲ್ಲ ಲೆಕ್ಕಾಚಾರಗಳು ತಲೆಕೆಳಗಾಗಿವೆ. ಭಾರತದ ಜಿಡಿಪಿ ಕೂಡ ಋುಣಾತ್ಮಕವಾಗಿ ಸಾಗಲಿದೆ ಎಂದು ಅಂತಾರಾಷ್ಟ್ರೀಯ ಸಂಸ್ಥೆಗಳು ಎಚ್ಚರಿಸಿವೆ. ಹೀಗಿದ್ದೂ ಭಾರತೀಯರಾದ ನಾವು ಸ್ವಲ್ಪ ಮಟ್ಟಿಗೆ ಖುಷಿ ಕೊಡುವ ಸಂಗತಿಯೊಂದಿದೆ. ಅದರಲ್ಲೂ ವಿಶೇಷವಾಗಿ ಕರ್ನಾಟಕದ ಮಟ್ಟಿಗೆ ಇದು ಧನಾತ್ಮಕವಾದ ವಿಚಾರ. ಯಾಕೆಂದರೆ, ಕರ್ನಾಟಕದಲ್ಲಿ […]

Read More

ಕೊರೊನಾ ಲಸಿಕೆಯತ್ತ ಮೊದಲ ಹೆಜ್ಜೆ

– ಮಾನವರ ಮೇಲೆ ಪ್ರಯೋಗಕ್ಕೆ ಏಮ್ಸ್ ಸಜ್ಜು | ಆಕ್ಸ್‌ಫರ್ಡ್‌ ಮೊದಲ ಟ್ರಯಲ್ ಸಕ್ಸಸ್ ಹೊಸದಿಲ್ಲಿ: ಕೊರೊನಾ ಪ್ರಕರಣಗಳು ಸತತ ಏರುಗತಿಯಲ್ಲಿರುವ ಸಂದರ್ಭದಲ್ಲಿಯೇ ಸೋಂಕು ನಿಯಂತ್ರಿಸುವ ‘ಲಸಿಕೆ’ಯ ಆಶಾಕಿರಣ ಸೋಮವಾರ ಗೋಚರಿಸಿದೆ. ದಿಲ್ಲಿಯ ಏಮ್ಸ್‌ನಲ್ಲಿ ಸ್ವದೇಶಿ ಲಸಿಕೆ ‘ಕೊವ್ಯಾಕ್ಸಿನ್’ ಅನ್ನು ಮಾನವರ ಮೇಲೆ ಪ್ರಯೋಗಿಸುವ ಪ್ರಕ್ರಿಯೆ ಆರಂಭವಾಗಿದ್ದರೆ, ಬ್ರಿಟನ್‌ನಲ್ಲಿ ಮೊದಲ ಹಂತದಲ್ಲಿ ನಡೆದ ಕ್ಲಿನಿಕಲ್ ಟ್ರಯಲ್ಸ್ ಪರಿಣಾಮಕಾರಿಯಾಗಿದೆ ಎಂಬ ವರದಿ ಹೊರಬಿದ್ದಿದೆ. ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಮತ್ತು ನ್ಯಾಷನಲ್ ಇನ್ಸ್‌ಟಿಟ್ಯೂಟ್‌ ಆಫ್ ವೈರಾಲಜಿ ಅಭಿವೃದ್ಧಿಪಡಿಸುತ್ತಿರುವ ‘ಕೊವ್ಯಾಕ್ಸಿನ್’ […]

Read More

ಕೋವಿಡ್‌ ಲೆಕ್ಕಾಚಾರಕ್ಕೊಂದು ಸೂತ್ರ

ಕೊರೊನಾ ವೈರಾಣು ಸೋಂಕು ಸಮುದಾಯದಲ್ಲಿ ಯಾವಾಗ ಹೆಚ್ಚಾಗುತ್ತದೆ, ಯಾವಾಗ ಇಳಿಯುತ್ತದೆ ಎಂಬುದನ್ನು ಮುಂಚಿತವಾಗಿಯೇ ಲೆಕ್ಕ ಹಾಕಲು ಸಾಧ್ಯವೇ ಎಂದು ಬಹಳಷ್ಟು ಗಣಿತ ತಜ್ಞರು, ವಿಜ್ಞಾನಿಗಳು ಪ್ರಯತ್ನಿಸುತ್ತಲೇ ಇದ್ದಾರೆ. ಅದರಲ್ಲಿ ಮೈಖೇಲ್‌ ಲೆವಿಟ್‌ ಎಂಬ ನೊಬೆಲ್‌ ಪುರಸ್ಕೃತ ಕೆಮಿಸ್ಟ್ರಿ ವಿಜ್ಞಾನಿಯೊಬ್ಬರು ಬಹುತೇಕ ಯಶಸ್ವಿಯಾಗಿದ್ದಾರೆ. ಅವರು ಕೋವಿಡ್‌ನ ಏರಿಳಿತ ಲೆಕ್ಕಹಾಕುವ ಸೂತ್ರವೊಂದನ್ನು ಅಭಿವೃದ್ಧಿಪಡಿಸಿದ್ದಾರೆ. ಅವರು ಹೇಳುವ ಪ್ರಕಾರ, ಜಾಗತಿಕವಾಗಿ ಕೋವಿಡ್‌ ಸೋಂಕು ಇಳಿಯುವ ಕಾಲ ಹತ್ತಿರವಾಗಿದೆ. ಆತಂಕ ಬೇಡ. ಇದನ್ನು ತಡೆಯಲು ನಾವು ಅನುಸರಿಸಬೇಕಾದ ಸರಳ ಕ್ರಮಗಳೆಂದರೆ ಸೋಶಿಯಲ್‌ ಡಿಸ್ಟೆನ್ಸ್‌ […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top