ದುಡ್ಡಿದ್ದವರಿಗೆ ಖಾಸಗಿ ಆಸ್ಪತ್ರೆ, ಬಡವರಿಗೆ ಸರಕಾರಿ ಆಸ್ಪತ್ರೆ ಎಂಬ ಸಮೀಕರಣ ಇದುವರೆಗೂ ನಮ್ಮ ದೇಶದಲ್ಲಿತ್ತು. ಯಾವಾಗ ಕೊರೊನಾ ಬಂದು ಎಲ್ಲ ಕಡೆಯೂ ಹಬ್ಬಿ ರೋಗಿಗಳ ಸಂಖ್ಯೆ ಊಹಿಸಲಾಗದಷ್ಟು ಹೆಚ್ಚಾಯಿತೋ, ಆಗ ಸರಕಾರಿ ಆಸ್ಪತ್ರೆಗಳ ಮಹತ್ವ ಮತ್ತು ಕಾರ್ಯಭಾರ ಎಲ್ಲರಿಗೆ ಅರ್ಥವಾಗತೊಡಗಿದೆ. ಕೋವಿಡ್ ರೋಗಿಗಳ ಸಂಖ್ಯೆ ಹೆಚ್ಚಾಗಿ ರಾಜಧಾನಿಯ ದೊಡ್ಡ ಸರಕಾರಿ ಆಸ್ಪತ್ರೆಗಳು ತುಂಬಿವೆ; ಜಿಲ್ಲಾಸ್ಪತ್ರೆಗಳೂ ತುಂಬಿ ತುಳುಕುತ್ತಿವೆ. ಸರಕಾರ ಎಷ್ಟೇ ಕಾಯಿದೆ ಕಾನೂನು ರೂಪಿಸಿದರೂ ಎಚ್ಚರಿಕೆ ನೀಡಿದರೂ ಖಾಸಗಿ ಆಸ್ಪತ್ರೆಗಳು ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನಿರಾಕರಿಸುತ್ತಿವೆ. ಹತ್ತಾರು […]
Read More
ತಳ ಸಮುದಾಯದಿಂದ ಬಂದು ಮೇಲ್ಮನೆ ಸೇರಿದ ಶಾಂತಾರಾಮ ಸಿದ್ದಿ ಹಿಂದಿದೆ ನಿಸ್ವಾರ್ಥ ಸೇವೆಯ ಚರಿತ್ರೆ – ಹರಿಪ್ರಕಾಶ ಕೋಣೆಮನೆ. ಇತ್ತೀಚೆಗೆ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ರಾಯಚೂರು ಜಿಲ್ಲೆಯ ಅಶೋಕ ಗಸ್ತಿ, ಬೆಳಗಾವಿ ಜಿಲ್ಲೆಯ ಈರಣ್ಣ ಕಡಾಡಿ, ಕರ್ನಾಟಕ ವಿಧಾನ ಪರಿಷತ್ತಿಗೆ ಹೊಸದಾಗಿ ನಾಮನಿರ್ದೇಶನಗೊಂಡಿರುವ ಸಾಯಬಣ್ಣ ತಳವಾರ್ ಹಾಗೂ ಬುಡಕಟ್ಟು ಸಮದಾಯದ ಶಾಂತಾರಾಮ್ ಸಿದ್ದಿ ಅವರ ಆಯ್ಕೆ ವಿಚಾರದಲ್ಲಿ ಒಂದು ರೀತಿಯ ಸದಭಿಪ್ರಾಯ ಸಾರ್ವತ್ರಿಕ ವಲಯದಲ್ಲಿ ಮೂಡಿದೆ. ಶಾಸನ ಸಭೆಗಳಲ್ಲಿ , ಅಧಿಕಾರದ ಆಯಕಟ್ಟಿನ ತಾಣಗಳಲ್ಲಿ ಸರ್ವರಿಗೂ ಪ್ರಾತಿನಿಧ್ಯ […]
Read More
– ಮಂಜುನಾಥ ಅಜ್ಜಂಪುರ. ಬೇಹುಗಾರರ ಬಗೆಗೆ ನಮಗೆ ಒಂದಿಷ್ಟು ರೊಮ್ಯಾಂಟಿಕ್ ಕಲ್ಪನೆಗಳಿವೆ. ಅವನು ಸೀಕ್ರೆಟ್ ಏಜಂಟ್, ಯುವಕ, ಅವನ ಬಳಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳಿರುತ್ತವೆ. ಅರ್ಧಂಬರ್ಧ ಬಟ್ಟೆ ಉಟ್ಟ ಸುಂದರಿಯರು ಅವನನ್ನು ಕಂಡರೆ ಮುಗಿಬೀಳುತ್ತಾರೆ. ಕ್ಷಣಾರ್ಧದಲ್ಲಿ ವೇಷ ಬದಲಾಯಿಸುತ್ತಾನೆ. ಹಾಡಬಲ್ಲ, ಕುಣಿಯಬಲ್ಲ, ರಿಜರ್ವೇಷನ್ ಇಲ್ಲದೆಯೇ ಯಾವುದೇ ವಿಮಾನದಲ್ಲಿ, ಟ್ರೈನಿನಲ್ಲಿ, ಹಡಗಿನಲ್ಲಿಯೂ ಓಡಾಡಬಲ್ಲ. ಒಮ್ಮೆಗೇ ಹತ್ತಾರು ಜನ ಗೂಂಡಾಗಳನ್ನು ಹೊಡೆದುರುಳಿಸಬಲ್ಲ, ಇತ್ಯಾದಿ. ಕಲ್ಪಿತ ಕಥನಗಳಿಗೂ ನಿಜಜೀವನಕ್ಕೂ ಎಷ್ಟು ಅಂತರ ಎಂಬುದನ್ನು ತಿಳಿಯಲು ಈ ಬೇಹುಗಾರರ ಬಗೆಗೆ ಓದಬೇಕು, ತಿಳಿಯಬೇಕು. ಉತ್ತರ […]
Read More
ಅಯೋಧ್ಯೆಯಲ್ಲಿ ಆಗಸ್ಟ್ 5ರಂದು ಶ್ರೀರಾಮ ಮಂದಿರಕ್ಕೆ ಭೂಮಿಪೂಜೆ ನಡೆಯಲಿದೆ. ಸ್ವತಃ ಪ್ರಧಾನಿ ಭಾಗವಹಿಸುತ್ತಿದ್ದಾರೆ. ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಮಂದಿರ ಹೇಗಿರುತ್ತದೆ ಎಂಬ ಕುತೂಹಲ ಎಲ್ಲರಲ್ಲಿದೆ. ಈ ಬಗ್ಗೆ ಒಂದು ನೋಟ ಇಲ್ಲಿದೆ. ಹೇಗೆ ನಡೆಯಲಿದೆ ಭೂಮಿ ಪೂಜೆ? ಅಯೋಧ್ಯೆಯಲ್ಲಿ ರಾಮಲಲ್ಲಾನಿಗೆ ನಿರ್ಮಾಣವಾಗುವ ಮಂದಿರದ ಭೂಮಿಪೂಜೆ ಕಾರ್ಯಕ್ರಮ ಆ.5ರಂದು ಮಧ್ಯಾಹ್ನ 12.15ರ ಅಭಿಜಿನ್ ಮುಹೂರ್ತ ಕಾಲಕ್ಕೆ ಸರಿಯಾಗಿ ನಡೆಯಲಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಂದ ನೆರವೇರಲಿದೆ. ‘ಹೌಡಿ ಮೋದಿ’ ಕಾರ್ಯಕ್ರಮದಂತೆ, ದೇಶಾದ್ಯಂತ ಮತ್ತು ವಿದೇಶಗಳಲ್ಲಿಯೂ ಲೈವ್ ಪ್ರಸಾರ ಕಾಣಲಿದೆ […]
Read More
– ಗೋವಿಂದ ಎಂ. ಕಾರಜೋಳ. ಮಾನ್ಯ ಬಿ.ಎಸ್. ಯಡಿಯೂರಪ್ಪ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಇದೇ ಜುಲೈ 26ಕ್ಕೆ ಒಂದು ವರುಷವಾಗುತ್ತದೆ. ಆಡಳಿತವನ್ನು ಕನ್ನಡ ನಾಡಿನ ಜನಮೆಚ್ಚುವಂತೆ ನಿರ್ವಹಿಸುವುದು ಸುಲಭವಲ್ಲ. ದಕ್ಷ ಮತ್ತು ಪಾರದರ್ಶಕ ಆಡಳಿತಕ್ಕೆ ನಮ್ಮ ನಾಡು ಭಾರತದಲ್ಲೇ ಹೆಸರುವಾಸಿಯಾಗಿದೆ. ಖ್ಯಾತನಾಮರಾದ ಜನನಾಯಕರಲ್ಲಿ ಇಂದಿನ ಮುಖ್ಯಮಂತ್ರಿಗಳು ಮುಂಚೂಣಿಯಲ್ಲಿ ನಿಂತಿದ್ದಾರೆ. ಈ ಕಾಲಾವಧಿಯ ವಿಶೇಷತೆಯೆಂದರೆ ಹಿಂದೆಂದೂ ಕಂಡರಿಯದಷ್ಟು, ಕೇಳರಿಯದಷ್ಟು ಕಷ್ಟ ಸಂಕೋಲೆಗಳನ್ನು ಕರ್ನಾಟಕ ಈ ಒಂದು ವರುಷದ ಅವಧಿಯಲ್ಲಿ ಕಂಡಿದೆ. ಬರ, ಅತಿವೃಷ್ಟಿ, ಪ್ರವಾಹ, ಪ್ರಕೃತಿವಿಕೋಪ […]
Read More
ಮುಂದಿನ 5 ವರ್ಷಗಳಲ್ಲಿ 20 ಲಕ್ಷ ಉದ್ಯೋಗ ಸೃಷ್ಟಿಸುವ ಮಹತ್ವಾಕಾಂಕ್ಷೆಯ ನೂತನ ಕೈಗಾರಿಕಾ ನೀತಿ 2020-25ಕ್ಕೆ ರಾಜ್ಯ ಸಚಿವ ಸಂಪುಟ ಸಭೆ ಗುರುವಾರ ಒಪ್ಪಿಗೆ ನೀಡಿದೆ. ಈ ನೂತನ ನೀತಿಯ ಫಲವಾಗಿ 5 ವರ್ಷದಲ್ಲಿ 5 ಲಕ್ಷ ಕೋಟಿ ರೂ. ಬಂಡವಾಳ ಹರಿದು ಬರುವ ನಿರೀಕ್ಷೆಯಿದೆ. ಬೆಂಗಳೂರು ಹೊರತು ಪಡಿಸಿ 2ನೇ ಮತ್ತು 3ನೇ ಹಂತದ ನಗರಗಳಿಗೂ ಉದ್ಯಮ ವಲಯ ವಿಸ್ತರಿಸಲು ಈ ನೀತಿ ಸಹಾಯಕವಾಗಲಿದೆ ಎಂದು ಸಚಿವರು ಹೇಳಿದ್ದಾರೆ. ವರ್ಷಾಂತ್ಯದಲ್ಲಿ ನಡೆಸಲು ಉದ್ದೇಶಿಸಲಾಗಿರುವ ವಿಶ್ವ ಬಂಡವಾಳ […]
Read More
– ಆತಂಕ, ಭಯದಿಂದ ಮನೋತಜ್ಞರ ಮೊರೆಹೋದ ಜನ | ರಾಜ್ಯ ಸರಕಾರದ ಟೆಲಿ ಕನ್ಸಲ್ಟೆನ್ಸಿಗೆ 3 ಲಕ್ಷ ಕರೆ. ಮಂಜುನಾಥ ನಾಗಲೀಕರ್, ಬೆಂಗಳೂರು. ಕೊರೊನಾ ಸೋಂಕಿಗಿಂತ ಅದಕ್ಕೆ ಸಂಬಂಸಿದ ಕಳಂಕ, ಭಯ, ಸಾಮಾಜಿಕ ಅಂತರ ಮತ್ತು ಸಹಜ ಜೀವನದಿಂದ ಪ್ರತ್ಯೇಕವಾಗಿರಬೇಕಾದ ಪರಿಸ್ಥಿತಿಯೇ ವೈದ್ಯಕೀಯ ಸಮುದಾಯ ಮತ್ತು ರಾಜ್ಯದ ಜನರನ್ನು ತೀವ್ರವಾಗಿ ಕಾಡುತ್ತಿದೆ. ಸೋಂಕಿತರು ಅಥವಾ ಸೋಂಕು ಹರಡಬಾರದು ಎಂಬ ಕಾರಣಕ್ಕೆ ಮಾಡಿದ ಕ್ವಾರಂಟೈನ್ನಿಂದ ಆದ ಮಾನಸಿಕ ಒತ್ತಡದಿಂದ ಕಾಪಾಡಲು 3 ಲಕ್ಷ ಕ್ಕೂ ಹೆಚ್ಚು ಜನರೊಂದಿಗೆ ರಾಜ್ಯದ […]
Read More
– ಡಾ.ಆರತೀ ವಿ.ಬಿ. ಶ್ರಾವಣ ಹುಣ್ಣಿಮೆಯು ಉಪಾಕರ್ಮ, ರಕ್ಷಾಬಂಧನ ಮುಂತಾದ ವೈದಿಕ ಪೌರಾಣಿಕ ಜಾನಪದೀಯ ಆಚರಣೆಗಳ ಸುಂದರ ಸಂಗಮವಷ್ಟೇ ಅಲ್ಲ, ‘ಸಂಸ್ಕೃತದಿನ’ವೆಂದೂ ಮಾನ್ಯ. ಹುಣ್ಣಿಮೆಯನ್ನುಳ್ಳ ಈ ಸಪ್ತಾಹವು ಸಂಸ್ಕೃತಸಪ್ತಾಹವೆಂದೂ ಮಾನ್ಯ. ದೇಶಾದ್ಯಂತವಷ್ಟೇ ಅಲ್ಲ, ವಿದೇಶದಲ್ಲೂ ಸಂಸ್ಕೃತ ಭಾಷಾಸಂಬಂಧಿತವಾದ ಗೋಷ್ಠಿಗಳು ಸಾಂಸ್ಕೃತಿಕ ಕಲಾಪಗಳೂ ಕವಿವಿದ್ವಾಂಸರುಗಳ ಸಮ್ಮಾನ ಪುರಸ್ಕಾರಾದಿಗಳು ಜರುಗುತ್ತವೆ. ಅಷ್ಟಾಧ್ಯಾಯಿಯಂತಹ ಅದ್ಭುತ ವ್ಯಾಕರಣ ಶಾಸ್ತ್ರಗ್ರಂಥವನ್ನು ನಿರ್ಮಿಸಿ ಭಾಷಾಜಗತ್ತಿಗೇ ಅನುಪಮ ಯೋಗದಾನವಿತ್ತ ಪಾಣಿನೀ ಮಹರ್ಷಿಗಳ ಪುಣ್ಯದಿನವೆಂದು ಮಾನ್ಯವಾದ ಶ್ರಾವಣಹುಣ್ಣಿಮೆಯನ್ನು ಸಂಸ್ಕೃತದಿನವೆಂದು ಆಚರಿಸುವುದು ಅರ್ಥಪೂರ್ಣವಾಗಿದೆ. ಸಂಸ್ಕೃತಭಾಷೆಯ ಒಂದು ವೈಶಿಷ್ಟ್ಯವೇನು ಗೊತ್ತೆ? ಅದು […]
Read More
ಕೋವಿಡ್-19ಗೆ ಲಸಿಕೆಯ ಅಂತಿಮ ಹಂತದ ಪ್ರಯೋಗಗಳು ಮೂರು ಕಡೆ ನಡೆಯುತ್ತಿದ್ದು, ಕಂಪನಿಗಳು ದೊಡ್ಡ ಪ್ರಮಾಣದ ಉತ್ಪಾದನೆಗೆ ಸಿದ್ಧತೆ ಮಾಡಿಕೊಳ್ಳುತ್ತಿವೆ. ಲಸಿಕೆ ಸಿದ್ಧಗೊಂಡ ಬಳಿಕ ಏನೇನಾಗಲಿದೆ? ಮೊದಲು ಅದನ್ನು ಯಾರು ಪಡೆಯಲಿದ್ದಾರೆ? ಎರಡನೇ ಹಂತ ಸಫಲ ಜನವರಿಯಲ್ಲಿ ಕೊರೊನಾ ವೈರಸ್ ಜಗತ್ತಿಡೀ ವ್ಯಾಪಿಸಲು ಆರಂಭಿಸಿದಾಗಲೇ ಅದಕ್ಕೊಂದು ಲಸಿಕೆ ಕಂಡುಹಿಡಿಯಬೇಕು ಎಂಬ ಹಾಹಾಕಾರ ಎಲ್ಲೆಡೆ ಎದ್ದಿತ್ತು. ಚೀನಾ ಹಾಗೂ ಬ್ರಿಟನ್ಗಳು ಈ ಬಗ್ಗೆ ಮೊದಲು ಎಚ್ಚೆತ್ತುಕೊಂಡು ವ್ಯಾಕ್ಸೀನ್ ಟ್ರಯಲ್ ಆರಂಂಭಿಸಿದ್ದವು. ನಂತರ ಇದಕ್ಕೆ ಅಮೆರಿಕ, ರಷ್ಯ, ಭಾರತ ಸೇರಿಕೊಂಡವು. ಇದೀಗ […]
Read More
ರಾಜಸ್ಥಾನದಲ್ಲಿ ಸರಕಾರ ಸಂದಿಗ್ಧ ಸ್ಥಿತಿಯಲ್ಲಿದೆ. ಆಳುವ ಕಾಂಗ್ರೆಸ್ ಪಕ್ಷದ ಒಂದು ಬಣ ಮುಖ್ಯಮಂತ್ರಿ ಹಾಗೂ ಹೈಕಮಾಂಡ್ನ ವಿರುದ್ಧ ಸಿಡಿದೆದ್ದು, ಯುವ ನಾಯಕ ಸಚಿನ್ ಪೈಲಟ್ ನೇತೃತ್ವದಲ್ಲಿ ಐಷಾರಾಮಿ ರೆಸಾರ್ಟ್ಗಳಲ್ಲಿ ಬೀಡು ಬಿಟ್ಟಿದೆ. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನೇತೃತ್ವದ ಇನ್ನೊಂದು ಬಣ, ಹೆಚ್ಚಿನ ಶಾಸಕ ಬಲವನ್ನು ಹೊಂದಿದ್ದರೂ ಒಂದು ಬಗೆಯ ಆತಂಕದಲ್ಲೇ ಅಸ್ತಿತ್ವವನ್ನು ಕಾಪಾಡಿಕೊಂಡಿದೆ. ಪಕ್ಷ ನೀಡಿದ ವಿಪ್ ಉಲ್ಲಂಘಿಸಿದ ಪ್ರಕರಣವನ್ನು ಹೈಕೋರ್ಟ್ ಶುಕ್ರವಾರ ವಿಚಾರಣೆಗೆ ಎತ್ತಿಕೊಳ್ಳಲಿದೆ. ಪ್ರತಿಪಕ್ಷ ಬಿಜೆಪಿ ‘ಕಾದು ನೋಡುವ’ ತಂತ್ರವನ್ನು ಅನುಸರಿಸುತ್ತಿದ್ದೇನೆ ಎಂದು ಹೇಳಿಕೊಂಡಿದೆ. […]
Read More