ರಸಗೊಬ್ಬರ ಅಭಾವ – ರೈತರಲ್ಲಿ ಹಾಹಾಕಾರ ನಿವಾರಿಸಿ

ಮಾರುಕಟ್ಟೆಯಲ್ಲಿ ರಸಗೊಬ್ಬರದ ತೀವ್ರ ಅಭಾವ ಉಂಟಾಗಿದೆ. ರಾಜ್ಯಾದ್ಯಂತ ಉತ್ತಮ ಮಳೆಯಾಗಿದ್ದು, ಕೃಷಿ ಚಟುವಟಿಕೆಗಳೂ ಗರಿಗೆದರಿ ನಡೆಯುತ್ತಿವೆ. ಹೀಗಾಗಿ ರಸಗೊಬ್ಬರ ಕೃಷಿ ವಲಯದ ತಕ್ಷಣದ ಬೇಡಿಕೆಯಾಗಿದೆ. ಒಂದು ತಿಂಗಳಿನಿಂದಲೂ ಮಾರುಕಟ್ಟೆಯಲ್ಲಿ ರಸಗೊಬ್ಬರದ ಅಭಾವ ಉಂಟಾಗಿದ್ದು, ರೈತರಲ್ಲಿ ಹಾಹಾಕಾರವೇ ಕಂಡುಬಂದಿದೆ. ಮುಖ್ಯವಾಗಿ ಯೂರಿಯಾದ ಕೊರತೆ ತಲೆದೋರಿದೆ. ಬಯಲುಸೀಮೆಯಲ್ಲಿ ಬೆಳೆಯುವ ಎಲ್ಲ ಬೆಳೆಗಳಿಗೂ ಸಾರಜನಕವನ್ನು ಪೂರೈಸುವ ಏಕೈಕ ರಸಗೊಬ್ಬರ ಎಂದರೆ ಯೂರಿಯಾ. ಮಳೆ ಚೆನ್ನಾಗಿ ಹನಿಯುತ್ತಿರುವ ಈ ಸಂದರ್ಭದಲ್ಲಿಯೇ ಬೆಳೆಗಳಿಗೆ ತಕ್ಕ ಯೂರಿಯಾ ಕೊಡುವುದು ರೈತರ ರೂಢಿ. ಅದನ್ನು ಸಿಂಪಡಿಸದಿದ್ದರೆ ವ್ಯತಿರಿಕ್ತವಾದ […]

Read More

ಯೂರಿಯಾಗೆ ಹಾಹಾಕಾರ

ಹಲವು ಜಿಲ್ಲೆಗಳಲ್ಲಿ ರಸಗೊಬ್ಬರ ಸಿಗದೆ ರೈತರು ಕಂಗಾಲು ಅಗತ್ಯಕ್ಕಿಂತ ಹೆಚ್ಚು ಪೂರೈಕೆ ಎನ್ನುವ ಸರಕಾರ | ಅಂಗಡಿಗಳಲ್ಲಿನೋ ಸ್ಟಾಕ್.‌ ಮಲ್ಲಪ್ಪ ಸಂಕೀನ್‌, ಯಾದಗಿರಿ. ಜಗನ್ನಾಥ್‌ ದೇಸಾಯಿ, ರಾಯಚೂರು. ರಾಜ್ಯದಲ್ಲಿ ಬಹುತೇಕ ಜಿಲ್ಲೆಗಳಲ್ಲಿ ಯೂರಿಯಾ ರಸಗೊಬ್ಬರ ಸಿಗದೆ ರೈತರು ಕಂಗಾಲಾಗಿದ್ದಾರೆ. ಉತ್ತಮ ಮಳೆಯಾಗಿದ್ದರಿಂದ ಉತ್ತಮ ಬೆಳೆಯ ನಿರೀಕ್ಷೆಯಲ್ಲಿದ್ದ ಅನ್ನದಾತರಿಗೆ ಗೊಬ್ಬರದ ಅಲಭ್ಯತೆ ಆತಂಕ ಮೂಡಿಸಿದೆ. ಜಿಲ್ಲೆಗಳಿಗೆ ಹಂಚಿಕೆ ಕಡಿತ, ನಿಧಾನಗತಿಯ ಪೂರೈಕೆಯಿಂದ ತೊಂದರೆಯಾಗಿದೆ ಎನ್ನುವುದು ರೈತರ ಆರೋಪ. ಆದರೆ, ಸರಕಾರ ಮಾತ್ರ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದ ರಸಗೊಬ್ಬರ ಪೂರೈಸಲಾಗಿದೆ […]

Read More

ಕ್ಲಾಸಿಕ್‌ ಕೃತಿಗಳೆಂಬ ಜಗತ್ತಿನಲ್ಲಿ ಪಿಸುಗುಡುವ ಪ್ರತಿಧ್ವನಿಗಳು

– ಹರೀಶ್‌ ಕೇರ. ಇಟೆಲಿಯ ಕಾದಂಬರಿಕಾರ ಇಟಾಲೊ ಕೆಲ್ವಿನೊ ಎಂಬಾತ ಮ್ಯಾಜಿಕ್‌ ರಿಯಲಿಸಂನ ಪ್ರಮುಖ ಬರಹಗಾರರಲ್ಲಿ ಒಬ್ಬ. ಈತ ‘ವೈ ರೀಡ್‌ ದಿ ಕ್ಲಾಸಿಕ್ಸ್‌?’ ಎಂಬ ಪ್ರಬಂಧವೊಂದನ್ನು ಬರೆದಿದ್ದಾನೆ. ಕ್ಲಾಸಿಕ್‌ ಎಂದು ಕರೆಯಬೇಕಾದ ಸಾಹಿತ್ಯ ಕೃತಿಗಳು ಯಾವುವು, ಅವುಗಳನ್ನು ಹೇಗೆ ಓದಬೇಕು, ಅವು ಯಾವಾಗಲೂ ಯಾಕೆ ಪ್ರಸ್ತುತ ಎಂದೆಲ್ಲ ಆತ ಈ ಪ್ರಬಂಧದಲ್ಲಿ ಪಟ್ಟಿ ಮಾಡುತ್ತಾನೆ. ನಮ್ಮ ಭಾರತೀಯ ನೆಲೆಯಲ್ಲಿ ಸರಳವಾಗಿ ಹೇಳಬಹುದಾದರೆ ರಾಮಾಯಣ, ಮಹಾಭಾರತ, ಕಾಳಿದಾಸನ ಕೃತಿಗಳು, ಕನ್ನಡದಲ್ಲಿ ಪಂಪಭಾರತ, ಗದುಗಿನ ಭಾರತ, ಮಲೆಗಳಲ್ಲಿ ಮದುಮಗಳು, […]

Read More

ಚೀನಾ ವೈರಸ್‌ಗೆ ಈಕೆ ಕನ್ನಡಿ

ಕೊರೊನಾ ವೈರಸ್‌ ಚೀನಾದ್ದೇ ಸೃಷ್ಟಿ ಎಂದು ದಿಟ್ಟವಾಗಿ ಹೇಳುತ್ತಿದ್ದಾರೆ ಈ ವೈರಾಲಜಿಸ್ಟ್‌. – ಕೇಶವಪ್ರಸಾದ್‌ ಬಿ. ಚೀನಾದ ಕಮ್ಯುನಿಸ್ಟ್‌ ಪಕ್ಷದ ಉಸ್ತುವಾರಿಯಲ್ಲಿಯೇ, ಮಿಲಿಟರಿ ಪ್ರಯೋಗಾಲಯದಲ್ಲಿ ಕೋವಿಡ್‌-19 ವೈರಸ್‌ ಅನ್ನು ಸೃಷ್ಟಿಸಲಾಗಿದೆಯೇ ಹೊರತು, ವುಹಾನ್‌ನ ಮಾರುಕಟ್ಟೆಯಲ್ಲಿ ಅಲ್ಲ ಎಂದು ಸ್ವತಃ ಚೀನಾದ ಹಾಂಕಾಂಗ್‌ ಯೂನಿವರ್ಸಿಟಿಯಲ್ಲಿ ವೈರಾಲಜಿಸ್ಟ್‌ ಆಗಿ ಸೇವೆ ಸಲ್ಲಿಸುತ್ತಿದ್ದ ಡಾ. ಲಿ-ಮೆಂಗ್‌ ಯಾನ್‌ ಗಂಭೀರವಾಗಿ ಆರೋಪಿಸಿದ್ದಾರೆ. ಇದರೊಂದಿಗೆ ಅಮೆರಿಕ, ಯುರೋಪ್‌ ಇತ್ಯಾದಿ ಪಾಶ್ಚಿಮಾತ್ಯ ರಾಷ್ಟ್ರಗಳ ಗುಮಾನಿಗೆ ಮತ್ತಷ್ಟು ಪುಷ್ಟಿ ಸಿಕ್ಕಿದಂತಾಗಿದೆ. ಚೀನಾದ ಕಮ್ಯುನಿಸ್ಟ್‌ ಸರಕಾರದ ಕೆಂಗಣ್ಣಿಗೆ ಗುರಿಯಾಗಿರುವ […]

Read More

ಶಿಕ್ಷಣ ವ್ಯವಸ್ಥೆಯ ಬದಲಿಸಿದ ಭಾರತದ ನವೋದ್ಯಮಗಳು

ಖಾಸಗಿಯವರನ್ನೂ ಪಾಲುದಾರರನ್ನಾಗಿಸಿಕೊಳ್ಳಬೇಕಿದೆ ಹೊಸ ಶಿಕ್ಷಣ ನೀತಿ – ಎನ್‌ ರವಿಶಂಕರ್.‌ ಇದು, ಕೇಂದ್ರ ಸರ್ಕಾರ ರೂಪಿಸಿರುವ ಹೊಸ ಶಿಕ್ಷಣ ನೀತಿಯ ಬಗೆಗಿನ ಲೇಖನವಲ್ಲ! ಅದರ ಬಗ್ಗೆ ಚರ್ಚಿಸಲು ಇರಬೇಕಾದ ಜ್ಞಾನ, ಅನುಭವಗಳು ಬೇರೆಯೇ ಅನಿಸುತ್ತದೆ. ಆದರೆ, ಹೊಸ ಶಿಕ್ಷಣ ನೀತಿಯ ಹಿನ್ನೆಲೆಯಲ್ಲಿ, ಹೆಚ್ಚು ಚರ್ಚೆಯಾಗದ ಮತ್ತೊಂದು ವಿಷಯದ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನವಿದು. ಹೊಸ ಶಿಕ್ಷಣ ನೀತಿಗೆ ಖಾಸಗಿ ವಲಯ ಅದರಲ್ಲೂ ಖಾಸಗಿ ನವೋದ್ಯಮಗಳು, ಪರೋಕ್ಷವಾಗಿಯಾದರೂ ನೀಡಿರುವ ಅಮೂಲ್ಯ ಕೊಡುಗೆಯನ್ನೂ ಸ್ಮರಿಸಬೇಕಿದೆ. ನೆನಪಿರಲಿ, ಇಲ್ಲಿರುವುದು ಖಾಸಗಿಯವರು ನೀಡಿರುವ […]

Read More

ರಾಮಮಂದಿರ ನಿರ್ಮಾಣಕ್ಕೆ ಸ್ವಾಗತದ ಧ್ವನಿ – ಸಾಂಸ್ಕೃತಿಕ ರಾಜಕಾರಣಕ್ಕೆ ಎಂಟ್ರಿ ಪಡೆಯಿತಾ ಕಾಂಗ್ರೆಸ್‌?

– ಶಶಿಧರ ಹೆಗಡೆ. ಸೋಮನಾಥ ಮಂದಿರದ ಜೀರ್ಣೋದ್ಧಾರದ ವೇಳೆ ಕಾಂಗ್ರೆಸ್‌ ಹೇಗೆ ನಡೆದುಕೊಂಡಿತು ಎನ್ನುವುದು ದೇಶದ ಚರಿತ್ರೆಯ ಪುಟಗಳಲ್ಲಿ ದಾಖಲಾಗಿ ಹೋಗಿದೆ. ಭಾರತದ ಸಾಂಸ್ಕೃತಿಕ ಪರಂಪರೆಯ ಅಭಿಮಾನದ ಪ್ರತೀಕವಾದ ಸೋಮನಾಥ ದೇಗುಲ ಪುನರುತ್ಥಾನಗೊಂಡು ಸುಮಾರು ಏಳು ದಶಕಗಳೇ ಉರುಳಿದೆ. ಇದೀಗ ಭಾರತೀಯರ ಸಂಸ್ಕೃತಿ, ತತ್ತ್ವಾದರ್ಶದ ಮೇಲ್ಮೆಯನ್ನು ಪ್ರತಿಬಿಂಬಿಸುವ ಶ್ರೀರಾಮನ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸವಾಗಿದೆ. ಜಗನ್ನಾಥನಾದ ರಾಮನ ಮಂದಿರದ ಭೂಮಿ ಪೂಜೆಯ ಶುಭಾವಸರದಲ್ಲಿ ಕಾಂಗ್ರೆಸ್‌ನ ಸ್ಪಂದನೆ ಮಾತ್ರ ಅನಿರೀಕ್ಷಿತ. ಯಾಕೆಂದರೆ ಮಂದಿರ ನಿರ್ಮಾಣವನ್ನು ಕಾಂಗ್ರೆಸ್‌ ಸ್ವಾಗತಿಸಿದೆ. ಪ್ರಾರಂಭದಿಂದಲೂ ರಾಮ […]

Read More

ಪ್ರಯತ್ನ ಪರಿಶ್ರಮ ಅಭ್ಯಾಸ – ಯುಪಿಎಸ್‌ಸಿ ಟಾಪರ್ಸ್ ಯಶಸ್ಸಿನ ಕೀಲಿಕೈ

– ಪರೀಕ್ಷೆ ಆಕಾಂಕ್ಷಿಗಳಿಗೆ ಸೂಕ್ತ ಸಲಹೆ, ಮಾರ್ಗದರ್ಶನ. ವಿಕ ಸುದ್ದಿಲೋಕ ಬೆಂಗಳೂರು. ‘‘ಸತತ ಪ್ರಯತ್ನ, ಕಠಿಣ ಪರಿಶ್ರಮ, ನಿರಂತರ ಅಭ್ಯಾಸದಿಂದಾಗಿ ಐಎಎಸ್, ಐಪಿಎಸ್, ಐಎಫ್ಎಸ್, ಐಆರ್‌ಎಸ್‌ ಸೇರಿದಂತೆ ಇತರ ಹುದ್ದೆಗಳ ಭರ್ತಿಗೆ ‘ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ)’ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರೈಸಬಹುದೇ ಹೊರತು, ಬಡತನ, ಕನ್ನಡ ಮಾಧ್ಯಮ, ಗ್ರಾಮೀಣ ಪ್ರದೇಶ ಹಾಗೂ ಇತರೆ ಯಾವುದೇ ಸಮಸ್ಯೆಗಳು ಸಾಧನೆಗೆ ಅಡ್ಡಿ ಬರುವುದಿಲ್ಲ,’’ ಎಂಬುದು ಈ ಬಾರಿ ಯುಪಿಎಸ್‌ಸಿ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರೈಸಿರುವ ರಾಜ್ಯದ ಅಗ್ರ ಶ್ರೇಯಾಂಕಿತರ […]

Read More

ಚೀನಾದಲ್ಲಿ ಇನ್ನೊಂದು ಮಾರಕ ವೈರಸ್‌ – ಜಗತ್ತಿನ ಮೇಲೆ ವೈರಾಣು ಯುದ್ಧ ಸಾರುತ್ತಿದೆಯಾ ಚೀನಾ?

ಚೀನಾದಲ್ಲಿ ಕಾಣಿಸಿಕೊಂಡಿರುವ ಇನ್ನೊಂದು ವೈರಸ್‌ ಈಗಾಗಲೇ 7 ಜನರ ಬಲಿ ಪಡೆದಿದೆ. ಯಾವುದೀ ಹೊಸ ವೈರಸ್‌? ಚೀನಾ ಏಕೆ ಕೊರೊನಾ ಸೇರಿದಂತೆ ಅನೇಕ ಮಾರಕ ವೈರಾಣುಗಳ ಆಡುಂಬೊಲವಾಗಿದೆ? ಉಣ್ಣಿಯಿಂದ ಹರಡುವ ಜ್ವರ ಕೊರೊನಾವನ್ನು ಹುಟ್ಟಿಸಿ ನಿರ್ಲಕ್ಷ್ಯದಿಂದ ಜಗತ್ತಿನಾದ್ಯಂತ ಹರಿಬಿಟ್ಟು ಅಲ್ಲೋಲ ಕಲ್ಲೋಲಕ್ಕೆ ಕಾರಣವಾಗಿರುವ ಚೀನಾದಲ್ಲಿ ಇನ್ನೊಂದು ಮಾರಕ ವೈರಸ್‌ ಹರಡಲು ಆರಂಭವಾಗಿದೆ. ಇದರ ಮರಣ ಪ್ರಮಾಣ ಶೇ.30. ಅಂದರೆ ನೂರು ಮಂದಿಗೆ ಸೋಂಕು ತಾಕಿದರೆ ಮೂವತ್ತು ಮಂದಿ ಸಾಯುತ್ತಾರೆ. ವೈರಸ್ಸನ್ನು ಸಿವಿಯರ್‌ ಫಿವರ್‌ ವಿದ್‌ ತ್ರೋಂಬೋಸೈಟೋಪೇನಿಯಾ ಸಿಂಡ್ರೋಮ್‌ […]

Read More

ಮಂದಿರವೆಂಬುದು ಸ್ಥಾವರವಲ್ಲ, ಮೌಲ್ಯಗಳ ಪ್ರತೀಕ

ಪ್ರತಿಪಕ್ಷದಲ್ಲೂ ಕೇಳಿಬಂತು ರಾಮನೇ ರಾಷ್ಟ್ರೀಯ ಏಕತೆಯ ಸಂಕೇತ ಎಂಬ ಒಕ್ಕೊರಲ ದನಿ – ಹರಿಪ್ರಕಾಶ್‌ ಕೋಣೆಮನೆ. ‘‘ಶ್ರೀ ರಾಮನ ಗುಣಸಂಪನ್ನತೆಯು ಇಡೀ ಭರತ ಖಂಡಕ್ಕೆ ಏಕತೆಯ ಸಂದೇಶವನ್ನು ಸಾರಿತ್ತು. ಭಾರತವಷ್ಟೇ ಏಕೆ, ಇಡೀ ವಿಶ್ವದ ನಾಗರಿಕತೆಯಲ್ಲಿ ರಾಮನ ಹೆಜ್ಜೆಗುರುತುಗಳನ್ನು ಅಳಿಸಲಾಗದು. ಶ್ರೀರಾಮ ಎಲ್ಲರಿಗೂ ಸೇರಿದವನು. ಆತ ಮರ್ಯಾದಾ ಪುರುಷೋತ್ತಮನೇ ಹೌದು…,’’ -ಕಾಂಗ್ರೆಸ್‌ನ ವರಿಷ್ಠ ಮುಖಂಡರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ರಾಮಭಜನೆ ಮಾಡುತ್ತಿರುವ ಪರಿ ಇದು. ನಿಸ್ಸಂದೇಹವಾಗಿ ಇದೊಂದು ಒಳ್ಳೆಯ ಬೆಳವಣಿಗೆ. ಅಜಮಾಸು ಮೂವತ್ತು ವರ್ಷಗಳ ನಂತರ ಕಾಂಗ್ರೆಸ್‌ನ […]

Read More

ಒಂದು ವರ್ಷ, ಎರಡು ಮಹಾ ನಿರ್ಧಾರ – 370ನೇ ವಿಧಿ ರದ್ದು ಮತ್ತು ಮಂದಿರ ಶಿಲಾನ್ಯಾಸ ಐತಿಹಾಸಿಕ

– ಮಹದೇವ ಪ್ರಕಾಶ್‌. ದಿಕ್ಕು ತಪ್ಪಿದ್ದ ಭಾರತದ ಅಖಂಡತೆಯಯನ್ನು ರಾಜಪಥದತ್ತ ಎಳೆದುತಂದ ಐತಿಹಾಸಿಕ ಸಂವತ್ಸರ. 2019ರ ಆಗಸ್ಟ್‌ 5ರಂದು ಸಂವಿಧಾನದ 370ನೇ ವಿಧಿ ರದ್ದು. 2020ರ ಆಗಸ್ಟ್‌ 5ರಂದು ಭಾರತದ ಬಹುಜನರ ಮಹಾ ನಿರೀಕ್ಷೆಯ ರಾಮಜನ್ಮಭೂಮಿ ಶಿಲಾನ್ಯಾಸ. ಒಮ್ಮೊಮ್ಮೆ ಐತಿಹಾಸಿಕ ತಪ್ಪುಗಳು ದಶಕಗಳು ಕಳೆದರೂ ಉಳಿದುಕೊಂಡಿರುತ್ತವೆ. ಇಂತಹ ಸ್ಥಗಿತ ವ್ಯವಸ್ಥೆಗೆ ಚಲನಶೀಲತೆ ನೀಡುವ ಯುಗಪ್ರವರ್ತಕ ನಾಯಕತ್ವದ ಉದಯ ಆಗುತ್ತದೆ. ಅಂತಹ ನಾಯಕತ್ವದಲ್ಲಿ ಅತಿದೊಡ್ಡ ಸಮಸ್ಯೆಗಳಾಗಿದ್ದ ಐತಿಹಾಸಿಕ ತಪ್ಪುಗಳನ್ನು ತಿದ್ದುವ ಕೆಲಸ ನಡೆದು ಹೋಗುತ್ತದೆ. ಬ್ರಿಟಿಷ್‌ ಚಕ್ರಾಧಿಪತ್ಯದಲ್ಲಿ ಐನೂರ […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top