ಪಕ್ಷಕ್ಕಿಂತ ವ್ಯಕ್ತಿ ದೊಡ್ಡವ ಎಂದುಕೊಳ್ಳುವುದು ವಿಕೃತ ಮಾನಸಿಕತೆ ಎಂದಿದ್ದರು ಮೋದಿ ! ಅನಿರೀಕ್ಷಿತ ಬೆಳವಣಿಗೆಯಲ್ಲಿ ಉತ್ತರಾಖಂಡ ರಾಜ್ಯದ ಮುಖ್ಯಮಂತ್ರಿಯಾಗಿ ವಾರ ಕಳೆಯುವಷ್ಟರಲ್ಲೆ ಅಚ್ಚರಿಯ ಹೇಳಿಕೆಗಳನ್ನು ನೀಡಿದವರು ತೀರ್ಥ್ ಸಿಂಗ್ ರಾವತ್. ಹರಿದ್ವಾರದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಾವತ್, ಈ ಹಿಂದೆ ಶ್ರೀರಾಮನು ಸಮಾಜಕ್ಕೆ ಉತ್ತಮ ಕೆಲಸ ಮಾಡಿದ್ದರಿಂದ ನಂತರ ಜನರು ರಾಮನನ್ನು ದೇವರೆಂದು ಪರಿಗಣಿಸಲು ಆರಂಭಿಸಿದರು. ಅದೇ ರೀತಿ ಪ್ರಧಾನಿ ನರೇಂದ್ರ ಮೋದಿಯವರನ್ನೂ ಮುದೊಂದು ದಿನ ಜನರು ದೇವರಂತೆ ಕಾಣುತ್ತಾರೆ ಎಂದರು. ಹೌದು. ಮಾನವನು ಮಾಧವನಾಗಬಲ್ಲ ಭಾರತ ದೇಶ […]
Read More
– ಶಶಿಧರ ಹೆಗಡೆ ಬೆಂಗಳೂರು. ದಾರುಕ ಶ್ರೀಕೃಷ್ಣನ ಸಾರಥಿ. ಕೃಷ್ಣ ತನ್ನ ಸೋದರತ್ತೆ ಕುಂತಿಗೆ ‘ಮಮ ಪ್ರಾಣಾಹಿ ಪಾಂಡವಾಃ’ (ಪಾಂಡವರನ್ನು ನನ್ನ ಪ್ರಾಣದಂತೆಯೇ ರಕ್ಷಿಸುತ್ತೇನೆ) ಎಂದು ಮಾತು ಕೊಟ್ಟಿರುತ್ತಾನೆ. ಪಾಂಡವರಿಗೆ ಏನೇ ತಾಪತ್ರಯವಾದರೂ ಧೈರ್ಯ ಹೇಳಲು ಕೃಷ್ಣ ಅಲ್ಲಿ ಹಾಜರಿರುತ್ತಿದ್ದ. ಪಾಂಡವರು ವನವಾಸದಲ್ಲಿದ್ದಾಗ ಗಯ ಎನ್ನುವ ಗಂಧರ್ವನ ನಿಮಿತ್ತದಿಂದ ಕೃಷ್ಣಾರ್ಜುನರ ನಡುವೆಯೇ ಭಿನ್ನಾಭಿಪ್ರಾಯ ತಲೆದೋರುತ್ತದೆ. ಅರ್ಜುನನ ರಕ್ಷಣೆಯಲ್ಲಿರುವ ಗಯನನ್ನು ಹಿಡಿದು ಶಿಕ್ಷಿಸುವ ಬಗೆ ಹೇಗೆಂದು ಕೃಷ್ಣ ಯೋಚಿಸುತ್ತ ಇರುವಾಗ ಸಾರಥಿ ದಾರುಕ ತನಗೆ ಈ ಹೊಣೆ ವಹಿಸುವಂತೆ […]
Read More
ಶ್ರೀಮಂತ ವ್ಯಾಪಾರಿಗಳು ಹಾಗೂ ಮಧ್ಯವರ್ತಿಗಳು ರೈತರನ್ನು ಸುಲಿಗೆ ಮಾಡುವುದನ್ನು ತಡೆಯಲೆಂದು ಎಪಿಎಂಸಿ ಕಾಯಿದೆ ರೂಪಿಸಿ ಜಾರಿಗೆ ತರಲಾಗಿತ್ತು. ಈಗ ಆ ಎಪಿಎಂಸಿ ಕಾಯಿದೆಯಲ್ಲಿ ದಿಢೀರ್ ತಿದ್ದುಪಡಿ ಮಾಡಲು ಸರಕಾರ ಮುಂದಾಗಿದೆ. ತಿದ್ದುಪಡಿ ಕಾಯಿದೆ ಸಂಬಂಧ ಸುಗ್ರೀವಾಜ್ಞೆ ಪ್ರಸ್ತಾಪವನ್ನು ಕೇಂದ್ರ ಸರಕಾರದ ಒತ್ತಡದ ಹಿನ್ನೆಲೆಯಲ್ಲಿ ರಾಜ್ಯಪಾಲರಿಗೆ ಕಳುಹಿಸಲಾಗಿದೆ. ಇದಕ್ಕೆ ಮುನ್ನ ತಿದ್ದುಪಡಿ ಸಂಬಂಧಿಸಿ ವಿಧಾನಮಂಡಲದಲ್ಲಿ ಚರ್ಚೆಯಾಗಬೇಕಿತ್ತು; ಸಂಪುಟ ಸಭೆಯಲ್ಲಿ ಅನುಮೋದನೆ ಆಗಬೇಕಿತ್ತು. ಎರಡೂ ಆಗಿಲ್ಲ. ಇಷ್ಟೊಂದು ತರಾತುರಿಯಲ್ಲಿ ಲಾಕ್ಡೌನ್ ನಡುವೆಯೇ, ಎಪಿಎಂಸಿ ಕಾಯಿದೆ ಬದಲಾಯಿಸುವ ತರಾತುರಿ ಏನಿದೆ? ಇದು […]
Read More
ಕೊರೊನಾ ಲಾಕ್ಡೌನ್ ಹೊಡೆತದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಶ್ರಮಿಕ ವರ್ಗ ಮತ್ತು ವೃತ್ತಿಪರರ ನೆರವಿಗೆ ರಾಜ್ಯ ಸರಕಾರ ಧಾವಿಸಿದ್ದು, 1610 ಕೋಟಿ ರೂಪಾಯಿಗಳ ಪ್ಯಾಕೇಜ್ ಘೋಷಿಸಿದೆ. ಕರ್ನಾಟಕ ಸರಕಾರದ ಈ ಕ್ರಮ ಇತರ ರಾಜ್ಯಗಳಿಗೆ ಮತ್ತು ಕೇಂದ್ರ ಸರಕಾರಕ್ಕೆ ಮಾದರಿ. ಅಗಸರು, ಕ್ಷೌರಿಕರು, ಆಟೋ- ಟ್ಯಾಕ್ಸಿ ಚಾಲಕರು, ಹೂವು ಬೆಳೆಗಾರರು, ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಒಂದು ಬಾರಿಗೆ ಅನ್ವಯವಾಗುವಂತೆ ಈ ನೆರವು ಘೋಷಿಸಲಾಗಿದ್ದು, ಫಲಾನುಭವಿಗಳ ಖಾತೆಗೆ ಹಣ ನೇರವಾಗಿ ಜಮೆಯಾಗಲಿದೆ. ಅದರಂತೆ ಹೂ ಬೆಳೆಗಾರರು ಹೆಕ್ಟೇರ್ಗೆ 25 […]
Read More
ತಪ್ಪು ಯೋಧನದ್ದೋ ಪೊಲೀಸರದೋ? ತನಿಖೆಗೆ ಆದೇಶ – ಮಾಸ್ಕ್ ಧರಿಸದ ಕಮಾಂಡೊನ ಬಂಧನದ ವಿವಾದ ಸ್ಫೋಟ – ಬಂಧನ ಖಂಡಿಸಿ ಸಿಆರ್ಪಿಎಫ್ನಿಂದ ರಾಜ್ಯ ಡಿಜಿಪಿಗೆ ಪತ್ರ – ಯೋಧನ ಸೆರೆಗೆ ಕಾರಣ ಅನುಚಿತ ವರ್ತನೆ: ಪೊಲೀಸರ ಸಮರ್ಥನೆ ಬೆಳಗಾವಿ: ಚಿಕ್ಕೋಡಿ ತಾಲೂಕಿನ ಸದಲಗಾ ಗ್ರಾಮದಲ್ಲಿ ಏ.23ರಂದು ಸಿಆರ್ಪಿಎಫ್ ಕೋಬ್ರಾ ಕಮಾಂಡೋ ಘಟಕದ ಯೋಧ ಮತ್ತು ಪೊಲೀಸ್ ಸಿಬ್ಬಂದಿ ನಡುವಿನ ಜಟಾಪಟಿ – ಯೋಧನ ಬಂಧನ ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ. ಈ ಘಟನೆಯ ತನಿಖೆ ನಡೆಸುವಂತೆ ಒತ್ತಾಯಿಸಿ ಸಿಆರ್ಪಿಎಫ್ […]
Read More
ಚೀನಾ ವೈರಸ್ ಎಂದೇ ಕರೆಸಿಕೊಳ್ಳುವ ಕೋವಿಡ್-19 ಜಗತ್ತಿನಾದ್ಯಂತ ವ್ಯಾಪಿಸುತ್ತಿದೆ. ಹಿಂದೆಂದೂ ಕಂಡರಿಯದ ಸಾವು-ನೋವು, ಕಷ್ಟ-ನಷ್ಟ ಎದುರಾಗಿದೆ. ಪರಿಸ್ಥಿತಿಯನ್ನು ನಿಭಾಯಿಸುವುದು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಸವಾಲಾಗಿ ಪರಿಣಮಿಸಿದೆ. ವಿಶ್ವ ಆರೋಗ್ಯ ಸಂಸ್ಥೆ ಸೇರಿದಂತೆ ಜಗತ್ತಿನ ಎಲ್ಲಾ ವೈದ್ಯಕೀಯ ಹಾಗೂ ವೈರಾಣು ತಜ್ಞರು, ವಿಜ್ಞಾನಿಗಳು ಬಹಳಷ್ಟು ತಲೆಕೆಡಿಸಿಕೊಂಡು ಈ ಸಮಸ್ಯೆಯ ಪರಿಹಾರಕ್ಕೆ ಮಾರ್ಗೋಪಾಯ ಕಂಡುಹಿಡಿಯುವಲ್ಲಿ ನಿರತರಾಗಿದ್ದಾರೆ. ಇಂತಹ ವಿಷಮ ಪರಿಸ್ಥಿತಿಯನ್ನು ಸವಾಲಾಗಿ ಸ್ವೀಕರಿಸಿ ನಿರೀಕ್ಷೆಗೂ ಮೀರಿ ಎದುರಿಸುತ್ತಿರುವ ದೇಶಗಳಲ್ಲಿ ಭಾರತ ಮುಂಚೂಣಿಯಲ್ಲಿದೆ. ಸಕಾಲಿಕ ಹಾಗೂ ಸಮರ್ಪಕ ನಿರ್ಧಾರಗಳನ್ನು […]
Read More
ರಾಜ್ಯಕಾರಣ : ಬಿಎಸ್ವೈ ಎದುರು ಆರೋಗ್ಯ ಕ್ಷೇತ್ರಕ್ಕೆ ಕಾಯಕಲ್ಪ ನೀಡುವ ಸವಾಲು – ಶಶಿಧರ ಹೆಗಡೆ. ರಾಮರಾಜ್ಯ ನಿರ್ಮಾಣವೆನ್ನುವುದು ಸುಂದರ ಕನಸು. ವಾಸ್ತವದಲ್ಲಿ ರಾಮರಾಜ್ಯ ಕಟ್ಟಿ ನಿಲ್ಲಿಸುವುದು ಸುಲಭ ಸಾಧ್ಯವಲ್ಲ. ಆದರೆ, ಅಧಿಕಾರದ ಗದ್ದುಗೆಯೇರಿದವರಿಗೆ ದೂರದರ್ಶಿತ್ವ ಅವಶ್ಯಕ. ರಾಮನಂತೆ ರಾಜ್ಯವಾಳಲು ಆಗದಿದ್ದರೂ ತುಘಲಕ್ ದರ್ಬಾರು ಸಲ್ಲ ಎಂಬ ವಿವೇಕ ಜಾಗೃತವಾಗಿರಬೇಕು. ಯಾಕೆಂದರೆ ಶ್ರೀರಾಮ ಯಾವತ್ತಿಗೂ ರಾಜಾರಾಮ ಎನಿಸಿಕೊಂಡಿದ್ದ. ಪ್ರಜಾರಂಜಕನೂ ಆಗಿದ್ದ ರಾಮ ಭಾರತೀಯ ಪರಂಪರೆಯಲ್ಲಿ ಆದರ್ಶಪ್ರಾಯ ವ್ಯಕ್ತಿ. ನಮ್ಮ ಮುಂದಿರುವ ಉತ್ಕೃಷ್ಟ ಪ್ರತಿಮೆ ರಾಮನಾದರೆ ಲಂಗುಲಗಾಮಿಲ್ಲದ ನಿರ್ಧಾರ ಕೈಗೊಂಡು ಪ್ರಜಾಪೀಡಕನೆನಿಸಿದ್ದವನು […]
Read More
ಹೀಗೊಂದು ಕಥೆ…ಸಾವಿಲ್ಲದ ಮನೆಯಿಂದ ಸಾಸಿವೆ ಕಾಳು ತೆಗೆದುಕೊಂಡು ಬಾ ಎಂದು ಬುದ್ಧ ಕಿಸಾಗೌತಮಿಗೆ ಹೇಳಿದ ಕಥೆಯ ರೀತಿಯಲ್ಲಿರುವ ಇನ್ನೊಂದು ಕಥೆಯಿದು. ಒಂದಾನೊಂದು ಕಾಲದಲ್ಲಿ ಬಲೇ ಪ್ರಖ್ಯಾತನಾದ ಓರ್ವ ರಾಜ ಇದ್ದ. ಅಧಿಕಾರ, ಐಶ್ವರ್ಯ, ಆರೋಗ್ಯ ಎಲ್ಲವೂ ಅವನಲ್ಲಿ ಇತ್ತು. ಅಪಾರ ಪ್ರಜಾ ಬೆಂಬಲವೂ ಇತ್ತು. ವಿರೋಧಿಗಳಿಗೂ ಆತನೆಂದರೆ ಒಂದು ತೆರನಾದ ಭಯ. ಕಾಲಕಾಲಕ್ಕೆ ಮಳೆ ಬೆಳೆ ಆಗಿ ರಾಜ್ಯ ಸುಭಿಕ್ಷ ವಾಗಿತ್ತು. ಇಷ್ಟಾದರೂ ರಾಜನಿಗೆ ನೆಮ್ಮದಿ ಎಂಬುದಿರಲಿಲ್ಲ. ಸದಾ ದುಃಖ, ಕೊರಗಿನಲ್ಲೇ ಇರುತ್ತಿದ್ದ. ಮನೋ ಸಂತೋಷ ಅರಸಿಕೊಂಡು […]
Read More
ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅನಿರೀಕ್ಷಿತ ಫಲಿತಾಂಶ ಪಡೆದಿರುವುದು ಗೊತ್ತೇ ಇದೆ. ಅನಿರೀಕ್ಷಿತ ಫಲಿತಾಂಶ ಎಂದು ಉದ್ಗರಿಸಿದ ತಕ್ಷಣ ಪ್ರಮುಖವಾಗಿ ಎರಡು ಪ್ರಶ್ನೆಗಳು ಏಳುವುದು ಸಹಜ. ಗುಜರಾತಲ್ಲಿ ಬಿಜೆಪಿ ಸರಳ ಬಹುಮತ ಗಳಿಸುವ ಸಂಭವ ಇರಲಿಲ್ಲವೇ ಎಂಬ ಒಂದು ಅರ್ಥವನ್ನು ಈ ಪ್ರಶ್ನೆ ಧ್ವನಿಸಿದರೆ, ಬಿಜೆಪಿ ಇದಕ್ಕೂ ಹೆಚ್ಚಿನ ಸ್ಥಾನ ಗಳಿಸಲು ಸಾಧ್ಯವಿತ್ತೇ ಎಂಬ ಅರ್ಥವನ್ನೂ ಹೊರಹೊಮ್ಮಿಸುತ್ತದೆ. ವಾಸ್ತವದಲ್ಲಿ ಇವೆರಡೂ ಸಂಗತಿಗಳು ಸಹ ನಿಜವೆ. ಈಗ ಮೊದಲನೆಯ ಅಂಶವನ್ನು ಅವಲೋಕಿಸೋಣ. ಬಿಜೆಪಿ ಗುಜರಾತಲ್ಲಿ ಸರಳ ಬಹುಮತವನ್ನು ಗಳಿಸಲು […]
Read More
ಈಗ ಬೇಕಿರುವುದು ಜಾತಿ, ಮತ, ಪಂಥವನ್ನು ಮೀರಿದ ಸ್ಮಾರ್ಟ್ ನಾಯಕತ್ವ ಮತ್ತು ‘ರೋಟಿ, ಕಪಡಾ ಔರ್ ಮಕಾನ್’ ಘೊಷಣೆಯನ್ನು ಯಥಾರ್ಥದಲ್ಲಿ ಜಾರಿಗೊಳಿಸುವ ಸಮಗ್ರ ವಿಕಾಸದ ರಾಜಕೀಯ ಸಿದ್ಧಾಂತ. ಸೆಕ್ಯುಲರ್ ಅಥವಾ ಕಮ್ಯೂನಲ್ವಾದದ ಚರ್ಚೆಗೆ ಈಗ ಎಲ್ಲಿಯ ಜಾಗ… ಕೆಲವೊಮ್ಮೆ ನಿರೀಕ್ಷೆಗಳೆಲ್ಲ ತಲೆಕೆಳಗಾಗಿಬಿಡುತ್ತವೆ! ಈಗ ಸುಮಾರು ಹತ್ತು ಹನ್ನೆರಡು ದಿನಗಳ ಹಿಂದಿನ ಮಾತು. ಮಹಾರಾಷ್ಟ್ರದ ಹತ್ತು ಪಾಲಿಕೆಗಳಿಗೆ ನಡೆದ ಚುನಾವಣೆ ಫಲಿತಾಂಶ ಹೊರಬರಲು ಕ್ಷಣಗಣನೆ ಶುರುವಾಗಿತ್ತು. ಆ ವೇಳೆ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷ(ಎನ್ಸಿಪಿ)ದ ಮುಖ್ಯಸ್ಥ ಶರದ್ ಪವಾರ್ ಮಾಧ್ಯಮದವರೊಂದಿಗೆ […]
Read More