ಕೋವಿಡ್ ಟೆಸ್ಟ್ ನಿಖರತೆ, ಅದು ತೆಗೆದುಕೊಳ್ಳುವ ಸಮಯ ಇತ್ಯಾದಿಗಳ ಬಗ್ಗೆ ತಜ್ಞ ವೈದ್ಯರು ಇನ್ನೂ ತಲೆ ಕೆಡಿಸಿಕೊಳ್ಳುತ್ತ ಇದ್ದಾರೆ. ಇಂಥ ಸಮಯದಲ್ಲಿ, ರೂರ್ಕಿಯ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ)ಯ ಪ್ರೊಫೆಸರ್ ಒಬ್ಬರು ಕೋವಿಡ್ ಟೆಸ್ಟ್ಗೆ ಸುಲಭ ವಿಧಾನವೊಂದನ್ನು ಆವಿಷ್ಕರಿಸಿದ್ದಾರೆ. ಅವರ ಪ್ರಕಾರ ಎಕ್ಸ್ರೇ ಸ್ಕ್ಯಾನಿಂಗ್ ಬಳಸಿಕೊಂಡು, ಅದನ್ನು ಒಂದು ಸುಧಾರಿತ ಸಾಫ್ಟ್ವೇರ್ಗೆ ಫೀಡ್ ಮಾಡುವ ಮೂಲಕ ಕೇವಲ ಐದೇ ನಿಮಿಷದಲ್ಲಿ ಕೋವಿಡ್ ಫಲಿತಾಂಶ ಪಡೆಯಬಹುದಾಗಿದೆ. ಈ ಸಾಫ್ಟ್ವೇರ್ ಅನ್ನು ಅವರು ಆವಿಷ್ಕರಿಸಿದ್ದಾರೆ. ಇದು ಪರೀಕ್ಷಾ ವೆಚ್ಚವನ್ನು ಮಾತ್ರವಲ್ಲ […]
Read More
ರಾಜ್ಯದ ಮಂಗಳೂರಿನಲ್ಲಿ, ಮುಂಬಯಿ- ಚೆನ್ನೈ ಮುಂತಾದ ಹಲವು ಕಡೆ ಕೋವಿಡ್ ಕಾಯಿಲೆಗೆ ಬಲಿಯಾದವರ ಮೃತದೇಹಗಳ ಅಂತಿಮ ಸಂಸ್ಕಾರಕ್ಕೆ ಕೆಲವರು ಸ್ಥಳೀಯ ನಿವಾಸಿಗಳು ಅಡ್ಡಿಪಡಿಸಿರುವುದು ವರದಿಯಾಗಿದೆ. ಮಂಗಳೂರಿನ ಹಲವು ಕಡೆ ಗ್ರಾಮಸ್ಥರು ಪ್ರತಿರೋಧ ಮಾಡಿದ್ದು, ಕಡೆಗೂ ಒಂದು ಕಡೆ ಹೇಗೋ ಅಂತ್ಯಕ್ರಿಯೆ ನಡೆದಿದೆ. ಮುಂದೆ ನಿಂತು ಸಂಸ್ಕಾರ ನಡೆಸಬೇಕಿದ್ದ ಶಾಸಕರೊಬ್ಬರು ಸಕಾರಣವಿಲ್ಲದೆ ಅಡ್ಡಿಪಡಿಸಿದ್ದಾರೆ. ಚೆನ್ನೈಯಲ್ಲಿ ಒಂದು ಕಡೆ ಕೋವಿಡ್ಗೆ ಬಲಿಯಾದ ನರರೋಗ ವೈದ್ಯರೊಬ್ಬರ ಶವವನ್ನು ಸುಡುವುದಕ್ಕೆ ಬಿಡದೆ, ಆಂಬುಲೆನ್ಸ್ನಲ್ಲಿದ್ದ ವೈದ್ಯರು ಸೇರಿದಂತೆ ಎಲ್ಲರ ಮೇಲೂ ದಾರುಣವಾಗಿ ಹಲ್ಲೆ ನಡೆಸಿದ […]
Read More
ಕೊರೊನಾ ವೈರಸ್ ಹರಡುವಿಕೆ ಕಾರಣದಿಂದಾಗಿ ಇಡೀ ದೇಶವೇ ತುರ್ತು ಸ್ಥಿತಿಗೆ ಸಿಲುಕಿದೆ. ಈ ಸಂಕಟದ ಸಮಯದಲ್ಲಿ ಜಾತಿ, ಧರ್ಮ, ನಂಬಿಕೆಗಳು ಮೇಲುಗೈ ಸಾಧಿಸಬಾರದು. ಮಂದಿರ, ಮಸೀದಿ, ಚರ್ಚುಗಳ ಚಟುವಟಿಕೆಗಳು ಸ್ತಬ್ಧವಾಗಿ, ಧಾರ್ಮಿಕ ಆಚರಣೆಗಳೆಲ್ಲ ಹೊಸ್ತಿಲೊಳಗೆ ಸೀಮಿತವಾಗಿವೆ. ಕೊರೊನಾ ಸೇನಾನಿಗಳು ತಮ್ಮ ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ. ಇದು ಇಡೀ ಭಾರತ ಕೊರೊನಾ ಮಹಾಮಾರಿ ವಿರುದ್ಧ ತೋರುತ್ತಿರುವ ಒಗ್ಗಟ್ಟಿನ ಝಲಕ್. ಆದರೆ, ಭಾನುವಾರ ರಾತ್ರಿ ಬೆಂಗಳೂರಿನ ಪಾದರಾಯನಪುರದಲ್ಲಿ ನಡೆದ ಘಟನೆ ಒಗ್ಗಟ್ಟಿನ ಹೋರಾಟಕ್ಕೆ ಭಂಗ ತರಲು ಕಾರಣವಾಗಿದೆ. […]
Read More
ಇಡೀ ವಿಶ್ವವೇ ತತ್ತರಿಸಿಹೋಗುವಂತೆ ಮಾಡಿರುವ ಕೊರೊನಾ ವೈರಸ್ ಪ್ರಾಕೃತಿಕವಾದುದ್ದಲ್ಲ, ಅದು ಮಾನವ ಸೃಷ್ಟಿಯಾಗಿರಬಹುದು ಎಂಬ ಒಂದು ವಾದ ಆರಂಭದಿಂದಲೇ ಚಾಲ್ತಿಯಲ್ಲಿತ್ತು. ಆದರೆ ಅದಕ್ಕೆ ಯಾರೂ ಹೆಚ್ಚು ಕಿವಿಗೊಟ್ಟಿರಲಿಲ್ಲ. ಈಗ ಫ್ರಾನ್ಸ್ನ ವೈದ್ಯಕೀಯ ತಜ್ಞ ಡಾ. ಲಕ್ ಮಾಂಟೆಗ್ನೈರ್ ಎಂಬುವರು, ಚೀನಾದ ವುಹಾನ್ನಲ್ಲಿನ ‘ನ್ಯಾಷನಲ್ ಬಯೋಸೇಫ್ಟಿ’ ಪ್ರಯೋಗಾಲಯದಲ್ಲಿಯೇ ಕೊರೊನಾ ವೈರಾಣು ಸೃಷ್ಟಿಯಾಗಿದೆ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ. ಕೊರೊನಾ ವೈರಾಣು ಕಣಗಳ ಅಧ್ಯಯನ ನಡೆಸಿರುವ ಅವರು “ಕೊರೊನಾ ವೈರಾಣು ರಚನೆಯನ್ನು ಗಮನಿಸಿದರೆ ಅದರಲ್ಲಿ ಎಚ್ಐವಿ ಮತ್ತು ಮಲೇರಿಯಾ ಕ್ರಿಮಿಯ ರಚನೆಗಳು […]
Read More
– ವಿಮಾನಯಾನ ಶುರುವಾದ ಕೂಡಲೇ ಮರಳಲು ಕಂಪನಿಗಳ ಸೂಚನೆ – ಕೆಲವು ಉದ್ಯಮಿಗಳೂ ಅತಂತ್ರ – ವಿಜಯ ಕೋಟ್ಯಾನ್, ಮಂಗಳೂರು ಕೊರೊನಾ ಮಹಾಮಾರಿ ದೇಶದಲ್ಲಿ ಕಾರ್ಮಿಕ ವಲಯವನ್ನು ಕಂಗಾಲುಗೊಳಿಸಿರುವಂತೆಯೇ ಭಾರತದಿಂದ ಕೊಲ್ಲಿ ರಾಷ್ಟ್ರಗಳಿಗೆ ಹೋಗಿ ದುಡಿಯುತ್ತಿರುವ ಕಾರ್ಮಿಕ ವರ್ಗವನ್ನೂ ಚಿಂತೆಗೀಡು ಮಾಡಿದೆ. ಒಂದು ಮೂಲದ ಪ್ರಕಾರ ಅಲ್ಲಿರುವ ಸುಮಾರು 10 ಲಕ್ಷ ಭಾರತೀಯರು ಉದ್ಯೋಗ ಕಳೆದುಕೊಳ್ಳುವ ಅಪಾಯದಲ್ಲಿದ್ದಾರೆ. ವಿದೇಶಕ್ಕೆ ಹೋಗಿರುವ ಭಾರತೀಯರಲ್ಲಿ ಶೇ. 30 ಮಂದಿ ಅರಬ್ ರಾಷ್ಟ್ರಗಳಾದ ಕುವೈಟ್, ಒಮಾನ್, ಬಹರೈನ್, ಕತಾರ್, ಸೌದಿ, ಯುಎಇ […]
Read More
ಪೌರತ್ವ ಕಾಯಿದೆ : ಅಪಾಯ ಬಿತ್ತಿ ಬೆಳೆದ ಅರ್ಧಸತ್ಯಗಳು ಜತನದಿಂದ ಕಾಪಾಡಿಕೊಂಡು ಬಂದ ಮತೀಯ ಸಾಮರಸ್ಯಕ್ಕೆ ಪೆಟ್ಟು, ದೇಶದ ಪ್ರತಿಷ್ಠೆಗೆ ಘಾಸಿ ಮಾಡಿದ ಅಶಾಂತಿ ಭಾರತದ ಜನತಂತ್ರಾತ್ಮಕ ಗಣರಾಜ್ಯ ಎಂದೂ ಕೂಡ ಬನಾನಾ ರಿಪಬ್ಲಿಕ್ ಆಗಲು ಸಾಧ್ಯವೇ ಇಲ್ಲ. ಈ ಅದಮ್ಯ ಆತ್ಮವಿಶ್ವಾಸಕ್ಕೆ ಕಾರಣ ನಮ್ಮ ಶ್ರೇಷ್ಠ ಸಂವಿಧಾನ. ಜಗತ್ತಿನ 220 ದೇಶಗಳ ಪೈಕಿ 180 ಪ್ರಜಾತಂತ್ರ ದೇಶಗಳಲ್ಲಿರುವ ಶ್ರೇಷ್ಠ ಮಾದರಿಗಳನ್ನು ಅಧ್ಯಯನ ನಡೆಸಿ, ರೂಪುಗೊಂಡಿರುವ ಸರ್ವಶ್ರೇಷ್ಠವಾದ ಸಂವಿಧಾನ ನಮ್ಮದು. ಹಾಗಾಗಿ ಇದು ಇಡೀ ಜಗತ್ತಿನಲ್ಲೇ ಅತ್ಯಂತ […]
Read More
ಪಿಒಕೆ ಗಡಿದಾಟಿ ಹೋಗಿ ಭಯೋತ್ಪಾದಕರ ನೆಲೆಗಳ ಮೇಲೆ ಭಾರತೀಯ ಸೇನೆ ದಾಳಿ ನಡೆಸಿದ ದಿಟ್ಟಕ್ರಮದಿಂದಾಗಿ ಕೇಂದ್ರ ಸರ್ಕಾರದ ಮೇಲೆ ಜನರಲ್ಲಿ ಮೆಚ್ಚುಗೆ ಮೂಡಿತ್ತು. ಇದೀಗ ಕಪ್ಪುಹಣದ ಮೇಲೆ ನಡೆದ ಸರ್ಜಿಕಲ್ ದಾಳಿ ಸರ್ಕಾರದ ವರ್ಚಸ್ಸನ್ನು ಮತ್ತಷ್ಟು ಹೆಚ್ಚಿಸಿದೆ. ಇದು ವಿಪಕ್ಷಗಳವರ ನಿದ್ದೆಗಡಿಸಿದೆ ಎಂಬುದು ಸ್ಪಷ್ಟ. ಭ್ರಷ್ಟಾಚಾರ ಕುರಿತ ಚರ್ಚೆ ಇಂದು ನಿನ್ನೆಯದಲ್ಲ. ಅದಕ್ಕೊಂದು ಸುದೀರ್ಘ ಇತಿಹಾಸವೇ ಇದೆ. ಅದರ ಸ್ವರೂಪಗಳೂ ಹಲವು. ಆದರೆ ಕಾಲಾಂತರದಲ್ಲಿ ಅದು ಲಂಚಸ್ವೀಕಾರಕ್ಕೆ ಸೀಮಿತವಾಗಿಬಿಟ್ಟಿದೆ ಅಷ್ಟೆ. ವಾಸ್ತವದಲ್ಲಿ ಭ್ರಷ್ಟಾಚಾರ ಎನ್ನುವುದು ಮನುಷ್ಯನ ಮಾನಸಿಕತೆಗೆ […]
Read More
ದೇಶದಲ್ಲಿ ಹಲವು ಸಮಸ್ಯೆಗಳಿರಬಹುದು. ಆದರೆ ಕಿತ್ತು ತಿನ್ನುತ್ತಿರುವುದು ಭ್ರಷ್ಟಾಚಾರ, ಕಪ್ಪುಹಣ ಮತ್ತು ಭಯೋತ್ಪಾದನೆ ಈ ಮೂರೇ ಅಂಶಗಳು. ಚಾಲ್ತಿ ನೋಟುಗಳ ಹಠಾತ್ ರದ್ದತಿ ಈ ಪಿಡುಗಿಗೆ ಸಿಂಹಪಾಲು ಪರಿಹಾರ ನೀಡಿದೆ ಎಂಬುದು ಸಾಮಾನ್ಯ ಅಭಿಪ್ರಾಯ. ಇಂತಹ ಇನ್ನಷ್ಟು ಉಪಕ್ರಮಗಳನ್ನು ನಾವು ನಿರೀಕ್ಷೆ ಮಾಡೋಣ. `ಕುರಿ ಕೇಳಿಕೊಂಡೇ ಮಸಾಲೆ ಅರೀಬೇಕು’- ಇದು ಈ ದೇಶದಲ್ಲಿ ಇದುವರೆಗಿನ ಸಂಪ್ರದಾಯ. ಏಕೆಂದರೆ ನಮ್ಮದು ಪ್ರಜಾತಂತ್ರ ದೇಶ ನೋಡಿ! ಇದೇ ಮೊದಲ ಬಾರಿಗೆ ಆ ಸಂಪ್ರದಾಯ ಮುರಿದ ಪ್ರಧಾನಿ ನರೇಂದ್ರ ಮೋದಿ ಕುರಿ, […]
Read More
ಧರ್ಮದ ಹೆಸರಿನಲ್ಲಿ ಹಾದಿ ತಪ್ಪಿರುವ ಒಂದು ವರ್ಗದ ಕೆಲವರನ್ನು ಸರಿದಾರಿಗೆ ತರಲು ಸಂಬಂಧಿಸಿದ ಧಾರ್ವಿುಕ ನಾಯಕರು ಯಾಕೆ ಪ್ರಯತ್ನಿಸಬಾರದು? ಕೆಲ ಮತಾಂಧರು ಮಾಡುವ ದುಷ್ಟ ಕಾರ್ಯದಿಂದ ಒಂದು ಉದಾತ್ತ ಧರ್ಮಕ್ಕೆ ಕಳಂಕ ಬರುತ್ತಿರುವುದನ್ನು ತಡೆಯುವುದಕ್ಕಾದರೂ ಧಾರ್ವಿುಕ ನಾಯಕರೆಲ್ಲ ಒಕ್ಕೊರಲ ಧ್ವನಿ ಮೊಳಗಿಸಿದರೆ ಒಳಿತಾಗಬಹುದು. ಅಮೆರಿಕದಲ್ಲಿ ಗುಂಡಿನ ದಾಳಿ ನಡೆಯುವುದು ಹೊಸತೇನಲ್ಲ. ಪ್ರತಿ ವರ್ಷವೂ ಅಲ್ಲಿ ಅಂಥ ಹಲವು ಘಟನೆಗಳು ವರದಿಯಾಗುತ್ತಲೇ ಇರುತ್ತವೆ. ಹತ್ತಾರು ಮಂದಿ ಪ್ರಾಣ ಕಳೆದುಕೊಳ್ಳುತ್ತಾರೆ. ಜಗತ್ತಿಗೆಲ್ಲ ‘ದೊಡ್ಡಣ್ಣ’ ಎಂದು ಬೀಗುವ ಆ ದೇಶಕ್ಕೆ ಇದು […]
Read More
ವಾರ್ಷಿಕ ಅಂದಾಜು 22,250 ಕೋಟಿ ರೂ. ಮೌಲ್ಯದ ಗೋಮಾಂಸವನ್ನು ಭಾರತದಿಂದ ರಫ್ತು ಮಾಡಲಾಗುತ್ತಿದೆ. ಅದೇ ಗೋ ಸಂತತಿಯನ್ನು ರಕ್ಷಿಸಿದರೆ ಆರೋಗ್ಯ, ಕೃಷಿ, ಇಂಧನ ಇತ್ಯಾದಿಗಳಿಂದ ಹಲವು ಸಹಸ್ರ-ಲಕ್ಷ ಕೋಟಿ ರೂಪಾಯಿಗಳನ್ನು ಗಳಿಸಲು, ಉಳಿಸಲು ಸಾಧ್ಯವಿದೆ. ಆ ಬಗ್ಗೆ ಯೋಚನೆ ಮಾಡಲು ನಮ್ಮ ಸರ್ಕಾರಗಳಿಗೆ ಮನಸ್ಸಿಲ್ಲ, ವ್ಯವಧಾನವೂ ಇಲ್ಲ. *** ಉತ್ತರಪ್ರದೇಶದ ದಾದ್ರಿಯಲ್ಲಿ ಅಖ್ಲಾಕ್ ಎಂಬ ಮುಸ್ಲಿಂ ವ್ಯಕ್ತಿಯ ಹತ್ಯೆ ಸಂಬಂಧವಾಗಿ ಗೋಮಾಂಸ ಭಕ್ಷಣೆ ಕುರಿತು ಕಳೆದ ಹದಿನೈದು ಇಪ್ಪತ್ತು ದಿನಗಳಿಂದ ದೇಶಾದ್ಯಂತ ತೆರಪಿಲ್ಲದೆ ಚರ್ಚೆ ನಡೆಯುತ್ತಿರುವುದು ಗೊತ್ತೇ […]
Read More