ಬದ್ಧತೆ ಪ್ರದರ್ಶಿಸೋಣ -ಲಾಕ್‌ಡೌನ್‌ ಇರಲಿ ಬಿಡಲಿ, ಶಿಸ್ತು ಪಾಲಿಸೋಣ

ವಾಸ್ತವದಲ್ಲಿ ನಾವೆಲ್ಲರೂ ಮುಷ್ಕರ, ಹರತಾಳ ಮತ್ತು ಬಂದ್‌ನಂಥ ಪ್ರವೃತ್ತಿಗಳನ್ನು ವಿರೋಧಿಸುವ ಮನಸ್ಥಿತಿ ಉಳ್ಳವರು ನಿಜ. ಈ ನೆಲದ ನ್ಯಾಯಾಲಯಗಳೂ ಬಂದ್‌ಗೆ ಸಮ್ಮತಿಯನ್ನು ನೀಡುವುದಿಲ್ಲ; ಬಂದ್‌ ವೇಳೆ ಉಂಟಾಗುವ ನಷ್ಟವನ್ನು ಆಯೋಜಕರಿಂದಲೇ ವಸೂಲಿ ಮಾಡಬೇಕೆಂಬ ಐತಿಹಾಸಿಕ ಆದೇಶಗಳನ್ನು ನೀಡಿವೆ. ಪರಿಸ್ಥಿತಿ ಹೀಗಿರುವಾಗ ನಾವೆಲ್ಲ ಈ ಲಾಕ್‌ಡೌನ್‌ ಎಂಬ 21 ದಿನಗಳ ಅಜ್ಞಾತವಾಸವನ್ನು ಒಪ್ಪಿಕೊಂಡಿದ್ದೆವೆ. ಯಾಕೆಂದರೆ, ಇಡೀ ಮನುಕುಲಕ್ಕೆ ಅಪಾಯ ತಂದೊಡ್ಡಿರುವ ಕೊರೊನಾ ವೈರಸ್‌ ಸೋಂಕು ಹರಡುವುದನ್ನು ತಡೆಯಲು ಇರುವ ಸದ್ಯದ ಏಕೈಕ ಪರಿಹಾರ ಎಂಬ ಕಾರಣಕ್ಕಾಗಿ. ವಿಶೇಷ ಎಂದರೆ, […]

Read More

ಸಂಕಷ್ಟವಷ್ಟೇ ಅಲ್ಲ, ಭರವಸೆ ಉಂಟು – ಭವಿಷ್ಯದ ಸವಾಲಿಗೊಂದು ಹಾಲಿ ರಿಹರ್ಸಲ್

ಎಲ್ಲ ಸರಾಗವಾಗಿ ನಡೆದುಕೊಂಡು ಹೋಗುತ್ತಿರುವಾಗ ದಿಢೀರ್ ಎದುರಾಗುವ ಸವಾಲುಗಳು ನಮ್ಮ ಮನೋಬಲವನ್ನು ಕುಂದಿಸಿ, ನಾವು ಋಣಾತ್ಮಕವಾಗಿ ಚಿಂತಿಸುವಂತೆ ಮಾಡುವುದು ಸಹಜ. ಕೊರೊನಾ ಸೃಷ್ಟಿಸಿರುವ ಆವಾಂತರವೂ ಇದಕ್ಕೆ ಹೊರತಲ್ಲ. ಈ ಆರೋಗ್ಯ ಸಂಬಂಧಿ ತುರ್ತು ಪರಿಸ್ಥಿತಿಯಿಂದಾಗಿ ನಾವು ಎಲ್ಲವನ್ನು ಕಳೆದುಕೊಂಡು ಬಿಟ್ಟೆವು; ಎಲ್ಲವೂ ಮುಗಿದೇ ಹೋಯಿತು; ಬದುಕು ಹಾಳಾಯಿತು ಎಂದು ಭಾವಿಸಲು ಕಾರಣವಿಲ್ಲ. ನಮ್ಮನ್ನು ನಾವು ಮತ್ತು ನಮ್ಮ ಶಕ್ತಿಯನ್ನು ಮರುಪೂರಣಗೊಳಿಸಿಕೊಳ್ಳಲು ಸೃಷ್ಟಿಯಾಗಿರುವ ಅವಕಾಶ ಎಂದು ಏಕೆ ತಿಳಿಯಬಾರದು. ಸಕಾರಾತ್ಮಕ ದೃಷ್ಟಿಕೋನದಿಂದ ಈಗಿನ ಪರಿಸ್ಥಿತಿಯನ್ನು ನೋಡಿದರೆ, ಮುಂಬರುವ ದಿನಗಳು […]

Read More

ವೈದ್ಯರು ವಿವೇಚನೆ ಬಳಸಲಿ: ರೋಗಿಗಳ ಹಿತಚಿಂತನೆಯ ಆದ್ಯತೆ

ಕೊರೊನಾ ವೈರಸ್‌ ವಿರುದ್ಧದ ಯುದ್ಧದಲ್ಲಿ ವೈದ್ಯರೇ ಸೇನಾನಿಗಳು ಎಂಬುದು ರುಜುವಾತಾಗಿ ಹೋಗಿದೆ. ಕೋವಿಡ್‌ ಕಾಯಿಲೆಯ ಲಕ್ಷಣಗಳನ್ನು ಸಮರ್ಪಕವಾಗಿ ಗುರುತಿಸುವುದು, ಅಗತ್ಯ ಪ್ರತ್ಯೇಕ ನಿಗಾ ವ್ಯವಸ್ಥೆ ಮಾಡುವುದು, ರಾಷ್ಟ್ರೀಯ ವೈದ್ಯಕೀಯ ಸಂಸ್ಥೆ ನಿಗದಿಪಡಿಸಿದ ಮಾನದಂಡಗಳಿಗೆ ಅನುಗುಣವಾಗಿ ಚಿಕಿತ್ಸೆ ನೀಡುವುದು, ಸೋಂಕಿತರ ಜೊತೆ ಸಂಪರ್ಕಕ್ಕೆ ಬಂದ ಎಲ್ಲರನ್ನೂ ಗುರುತಿಸಿ ಪರೀಕ್ಷೆಗೆ ವ್ಯವಸ್ಥೆ ಮಾಡಲು ಅಧಿಕಾರಿಗಳಿಗೆ ನೆರವಾಗುವುದು- ಇವೆಲ್ಲವನ್ನೂ ವೈದ್ಯಕೀಯ ಸೇವೆಯಲ್ಲಿರುವವರು ಮಾಡಬೇಕಿದೆ. ಕೋವಿಡ್‌ ಚಿಕಿತ್ಸೆಗಾಗಿ ಸರಕಾರ ಪ್ರತ್ಯೇಕ ಕೇಂದ್ರಗಳನ್ನು ತೆರೆದಿದ್ದರೂ ಇಂಥ ತುರ್ತು ಸಂದರ್ಭಗಳಲ್ಲಿ ಖಾಸಗಿ ವೈದ್ಯಕೀಯ ಸೇವೆಯ ಮೇಲೆ […]

Read More

ವೆಚ್ಚ ಕಡಿತ ಇಲ್ಲಿಂದಲೇ ಆರಂಭವಾಗಲಿ ಸಿಎಂ ಸಾಹೇಬರೆ…

ವೆಚ್ಚ ಕಡಿತದ ಪ್ರಸ್ತಾವನೆ ಓಕೆ, ನಿಗಮ, ಮಂಡಳಿ ನೇಮಕ ಬೇಕೆ? ಕೊರೊನಾ ಮಹಾಮಾರಿ ದೇಶದ ಆರ್ಥಿಕತೆ ಮೇಲೆ ಬೀರಿರುವ ಪರಿಣಾಮ ನಿರೀಕ್ಷೆಗೂ ಮೀರಿದ್ದು. ಆರ್ಥಿಕ ಮುಗ್ಗಟ್ಟನ್ನು ನಿಭಾಯಿಸುವ ಕ್ರಮವಾಗಿ ರಾಷ್ಟ್ರಪತಿ, ಉಪರಾಷ್ಟ್ರಪತಿ, ರಾಜ್ಯಪಾಲರು, ಕೇಂದ್ರ ಸಚಿವರು ಹಾಗೂ ಸಂಸದರ ವೇತನವನ್ನು ಶೇ.30ರಷ್ಟು ವೇತನವನ್ನು ಒಂದು ವರ್ಷದ ಅವಧಿಗೆ ಕಡಿತ ಮಾಡುವ ತೀರ್ಮಾನವನ್ನು ಕೇಂದ್ರ ಸರಕಾರ ಪ್ರಕಟಿಸಿದೆ. ಇದೇ ಮಾದರಿಯಲ್ಲಿರಾಜ್ಯ ಸರಕಾರವೂ ಕ್ರಮಕ್ಕೆ ಮುಂದಾಗಿದೆ. ”ಸಚಿವರು, ಶಾಸಕರ ವೇತನವನ್ನು 2 ವರ್ಷದ ಅವಧಿಗೆ ಶೇ.30ರಷ್ಟು ಕಡಿತಗೊಳಿಸುವ ತೀರ್ಮಾನವನ್ನು ಸಂಪುಟ […]

Read More

ಸರಳ ಜೀವನ ಕಲಿಯೋಣ – ಸುರಂಗದ ಕೊನೆಯಲ್ಲಿ ಬೆಳಕಿದೆ

ಕೊರೊನಾ ವೈರಸ್ ಹಬ್ಬದಿರಲಿ ಎಂಬ ಮುಂದಾಲೋಚನೆಯಿಂದ ಭಾರತವೂ ಸೇರಿದಂತೆ ಹಲವು ದೇಶಗಳು ಲಾಕ್‌ಡೌನ್ ಮಾಡಿವೆ. ಕಳೆದ ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಜಾಗತಿಕ ಆರ್ಥಿಕ ಹಿಂಜರಿತ ಆರಂಭವಾಗಿದ್ದ ಹೊತ್ತಿನಲ್ಲೇ ಕೋವಿಡ್ ಸೋಂಕು ಕಾಣಿಸಿಕೊಂಡು, ಜಗತ್ತಿನಾದ್ಯಂತ ವ್ಯಾಪಿಸಲು ಆರಂಭವಾಗಿತ್ತು. ಇದನ್ನು ತಡೆಗಟ್ಟುವುದು, ಅದಕ್ಕಾಗಿ ಲಾಕ್‌ಡೌನ್‌ಗಳು ಅನಿವಾರ್ಯವಾಗಿದ್ದವು. ಲಾಕ್‌ಡೌನ್‌ಗಳ ಪರೋಕ್ಷ ಪರಿಣಾಮ ಆರ್ಥಿಕತೆಯ ಮೇಲೆ ಆಗಿದ್ದು ಅಂತಾರಾಷ್ಟ್ರೀಯ ವ್ಯಾಪಾರ- ವಹಿವಾಟುಗಳು ಕುಸಿದಿವೆ. ಹಲವು ವಲಯಗಳು ಕೆಲಸ ಮಾಡುವುದನ್ನು ನಿಲ್ಲಿಸಿದ್ದು, ಕಂಪನಿಗಳು ಮುಚ್ಚಿವೆ. ಇದು ಇನ್ನಷ್ಟು ಕಾಲ ಮುಂದುವರಿಯಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. […]

Read More

ವೈದ್ಯಕೀಯ ಸನ್ನದ್ಧತೆ ಅಗತ್ಯ: ಆರೋಗ್ಯ ಸೇವೆಯ ಗುಣಮಟ್ಟ ಪರೀಕ್ಷೆಯಾಗಲಿದೆ

ನಮ್ಮ ವೈದ್ಯಕೀಯ ವ್ಯವಸ್ಥೆ ಎಷ್ಟು ದೃಢವಾಗಿದೆ ಎಂಬ ಪರೀಕ್ಷೆಗೆ ರಂಗ ಸಜ್ಜಾಗುತ್ತಿರುವಂತಿದೆ. ಕಳೆದೆರಡು ದಿನಗಳಲ್ಲಿ ದಿನವಹಿ ಆರುನೂರಕ್ಕೂ ಹೆಚ್ಚು ಕೋವಿಡ್‌-19 ಕೇಸುಗಳು ದಾಖಲಾಗಿವೆ. ಮಾರ್ಚ್‌ 24ರಿಂದಲೇ ಲಾಕ್‌ಡೌನ್‌ ಘೋಷಿಸಿದ್ದರೂ ಈಗಾಗಲೇ ವೈರಸ್‌ ಅಜ್ಞಾತ ದಾರಿಗಳಲ್ಲಿ ಹಲವರನ್ನು ತಲುಪಿರುವ ಶಂಕೆ ಇದ್ದು, ಮುಂದಿನ ವಾರದಲ್ಲಿ ಅದರ ನಿಜಸಂಖ್ಯೆ ಗೊತ್ತಾಗಲಿದೆ. ದೇಶದಲ್ಲಿ ವೈರಸ್‌ ಹರಡುವಿಕೆ ಈ ವಾರದಲ್ಲಿ ಇಳಿಯಬಹುದೆಂಬ ಭರವಸೆ ನಮಗೆ ಅಗತ್ಯ; ಆದರೆ ಲಕ್ಷಾಂತರ ರೋಗಿಗಳ ಸಂಖ್ಯೆ ಹಾಗೂ ಅವರಿಂದ ನಮ್ಮ ಆರೋಗ್ಯ ಸೇವೆಯ ಮೇಲೆ ಆಗಬಹುದಾದ ಒತ್ತಡದ […]

Read More

ವೈದ್ಯರ ಮೇಲೆ ಹಲ್ಲೆ ಖಂಡನೀಯ: ಸಮುದಾಯಕ್ಕೆ ಹಾನಿ ಮಾಡಲಿರುವ ವರ್ತನೆ

ಕೊರೊನಾ ವೈರಸ್ ಶಂಕಿತರ ಆರೋಗ್ಯ ತಪಾಸಣೆಗಾಗಿ ತೆರಳುತ್ತಿರುವ ವೈದ್ಯಕೀಯ ಸಿಬ್ಬಂದಿಯ ಮೇಲೆ ಕೆಲವರು ಗುಂಪುಗೂಡಿ ಹಲ್ಲೆ ನಡೆಸುತ್ತಿರುವ ಘಟನೆ ದೇಶದ ಕೆಲವು ಕಡೆಗಳಲ್ಲಿ ವರದಿಯಾಗಿದೆ. ಬೆಂಗಳೂರಿನ ಒಂದು ಬಡಾವಣೆಯಲ್ಲಿ ವೈದ್ಯಕೀಯ ತಪಾಸಣೆಗೆ ಹೋದ ಆಶಾ ಕಾರ್ಯಕರ್ತರ ಮೇಲೆ ಸ್ಥಳೀಯ ನಿವಾಸಿಗಳ ಗುಂಪು ಹಲ್ಲೆ ನಡೆಸಿದೆ. ಮಧ್ಯಪ್ರದೇಶದ ಇಂದೋರ್ ನಗರದಲ್ಲಿ ನಿವಾಸಿಗಳ ತಪಾಸಣೆಗೆ ಬಂದಿದ್ದ ಆರೋಗ್ಯ ಸೇವೆ ಸಿಬ್ಬಂದಿಯನ್ನು ಸ್ಥಳೀಯರ ಗುಂಪು ಹಿಗ್ಗಾಮುಗ್ಗಾ ಥಳಿಸಿ ಓಡಿಸಿದೆ. ಮಧ್ಯಪ್ರದೇಶದ ಸಿಲಾವತ್‌ಪುರದಲ್ಲಿ, ಪಂಜಾಬ್‌ನ ಮೋಗಾ ಜಿಲ್ಲೆಯಲ್ಲಿ, ಉತ್ತರ ಪ್ರದೇಶದ ಮೀರತ್‌ನಲ್ಲೂ ಹೀಗೆ […]

Read More

ರೈತರೇ ನಿಮಗೆ ನ್ಯಾಯಸಿಗಬೇಕು ಆದರೆ ಈ ಸಂದರ್ಭದಲ್ಲಿ‌ ತುಸು ತಾಳ್ಮೆಯೂ ಬೇಕು!

ರೈತರನ್ನು ಕಾಡದಿರಲಿ ಲಾಕ್‌ಡೌನ್‌: ಬೆಲೆ ರೈತನಿಗೆ, ಬೆಳೆ ಗ್ರಾಹಕನಿಗೆ ತಲುಪಲಿ ದೇಶಾದ್ಯಂತ ಕೊರೊನಾ ಲಾಕ್‌ಡೌನ್‌ನಿಂದ ಕೃಷಿಕರು ಹೆಚ್ಚು ಸಂಕಷ್ಟಕ್ಕೆ ಸಿಲುಕಿದ್ದಾರೆ. ತಾವು ಬೆಳೆದ ಬೆಳೆಗಳನ್ನು ಮಾರಲು ಪಟ್ಟಣಗಳನ್ನು, ಮಾರುಕಟ್ಟೆಗಳನ್ನು ಅವಲಂಬಿಸಿದ ರೈತರು ಕಂಗಾಲಾಗಿದ್ದಾರೆ. ಅದರಲ್ಲೂ ಹೆಚ್ಚಿನ ಸಂಕಟ ಅನುಭವಿಸುತ್ತಿರುವವರು ಹಣ್ಣುಗಳು ಹಾಗೂ ತರಕಾರಿಯಂಥ ಬೇಗನೆ ಹಾಳಾಗಬಲ್ಲ ಪದಾರ್ಥಗಳನ್ನು ಬೆಳೆದ ತೋಟಗಾರಿಕೆ ರೈತರು. ಕಲ್ಲಂಗಡಿ ಬೆಳೆಗಾರರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವುದು, ಕೆಲವು ರೈತರು ಕಲ್ಲಂಗಡಿ, ದ್ರಾಕ್ಷಿ , ಟೊಮೇಟೊ ಮುಂತಾದ ಬೆಳೆಗಳನ್ನು ರಸ್ತೆಯಲ್ಲಿ ಸುರಿದು ಹೋಗಿರುವುದು ಪರಿಸ್ಥಿತಿಯ ತೀವ್ರತೆಯನ್ನು ಪ್ರತಿಬಿಂಬಿಸುತ್ತದೆ. […]

Read More

ಸಾಮಾಜಿಕ ಹೊಣೆಗಾರಿಕೆ ಇರಲಿ: ಸಮುದಾಯ ಕಾಯಿಲೆ ಹರಡುವಿಕೆ ತಡೆಯಬೇಕು

ದಿಲ್ಲಿಯ ನಿಜಾಮುದ್ದೀನ್‌ ತಬ್ಲಿಘ್‌-ಇ-ಜಮಾತ್‌ ಮಸೀದಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನೂರಾರು ಮಂದಿಗೆ ಕೊರೊನಾ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿರುವುದು ದೇಶದ ಆತಂಕಕ್ಕೆ ಕಾರಣವಾಗಿದೆ. ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ, ಪಶ್ಚಿಮ ಬಂಗಾಳ, ಬಿಹಾರ ಹಾಗೂ ಇತರ ರಾಜ್ಯಗಳಿಗೆ ಸೇರಿದ ಸಾವಿರಾರು ಮಂದಿ ಜಮಾತ್‌ ಸಭೆಯಲ್ಲಿ ಭಾಗವಹಿಸಿ ವಾಪಸಾಗಿ ನಾನಾ ಕಡೆ ಸಂಚರಿಸಿರುವುದು ಆತಂಕ ಹೆಚ್ಚಾಗುವಂತೆ ಮಾಡಿದೆ. ತಬ್ಲಿಘ್‌-ಇ-ಜಮಾತ್‌ ಸಭೆಯಲ್ಲಿ ಭಾಗವಹಿಸಿ ವಾಪಸಾದ ಕರ್ನಾಟಕದ ಸಿರಾದ ವೃದ್ಧ, ಆಂಧ್ರ ಮತ್ತು ತೆಲಂಗಾಣದ ತಲಾ ಓರ್ವರು ಸೇರಿ ಒಟ್ಟು ಹತ್ತಕ್ಕೂ […]

Read More

ಬಡವರ ಮರುವಲಸೆ ಸಮಸ್ಯೆ ನೀಗಿಸುವುದು‌ ತುರ್ತು ಆದ್ಯತೆಯಾಗಲಿ

ಉತ್ತರ ಭಾರತದ ನಾನಾ ಮೆಟ್ರೋ ನಗರಗಳಿಂದ ಹಳ್ಳಿಗಳ ಕಡೆಗೆ ದೊಡ್ಡ ಪ್ರಮಾಣದ ಮರು ವಲಸೆ ಆರಂಭವಾಗಿದೆ. ದಿನದ ಕೂಳು ಸಂಪಾದಿಸಲೆಂದು ನಗರಗಳಿಗೆ ಬಂದು ಕೂಲಿ ಮಾಡಿ ಹೊಟ್ಟೆಪಾಡು ನೋಡಿಕೊಳ್ಳುತ್ತಿದ್ದವರು, ನಾನಾ ಬಗೆಯಲ್ಲಿ ದಿನದ ಸಂಪಾದನೆಯನ್ನೇ ನೆಚ್ಚಿಕೊಂಡು ಇದ್ದವರು ಈಗ ಲಾಕ್‌ಡೌನ್‌ ಪರಿಣಾಮ ಸಂಪಾದನೆಗೆ ದಾರಿ ಕಾಣದೆ, ತಮ್ಮ ಹಳ್ಳಿಗಳ ದಾರಿ ಹಿಡಿದಿದ್ದಾರೆ. ರೈಲ್ವೆ ಸೇರಿದಂತೆ ಸಾರಿಗೆ ಸಂಪರ್ಕಗಳನ್ನು ರದ್ದುಪಡಿಸಿರುವುದರಿಂದ ಲಕ್ಷಾಂತರ ಸಂಖ್ಯೆಯಲ್ಲಿರುವ ಈ ಕಾರ್ಮಿಕರು ನಡೆದೇ ಹೊರಟಿದ್ದಾರೆ. ಇಂಥದೊಂದು ಅಡ್ಡ ಪರಿಣಾಮವನ್ನು ಊಹಿಸಿರದ ಸರಕಾರ ಥಟ್ಟನೆ ಎಚ್ಚೆತ್ತುಕೊಂಡು […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top