ಕಳೆದ ಒಂದು ವಾರದಿಂದ ರಾಜ್ಯದಲ್ಲಿ, ಮುಖ್ಯವಾಗಿ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಗಾಬರಿಯಾಗುವಷ್ಟು ಏರುತ್ತಿದೆ. ಕಳೆದೆರಡು ದಿನಗಳಿಂದ ಬೆಂಗಳೂರಿನಲ್ಲೇ ಹೊಸ ರೋಗಿಗಳ ಸಂಖ್ಯೆ ಪ್ರತಿದಿನ ಒಂದು ಸಾವಿರಕ್ಕಿಂತಲೂ ಹೆಚ್ಚು ವರದಿಯಾಗುತ್ತಿದೆ. ಭಾನುವಾರ ರಾಜ್ಯದಲ್ಲಿ ಕೋವಿಡ್ನಿಂದ 37 ಮಂದಿ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಸೋಂಕಿತರ ಪ್ರಮಾಣ 20 ಸಾವಿರದ ಗಡಿ ದಾಟಿದೆ. ಇದು ಆರೋಗ್ಯ ತುರ್ತು ಪರಿಸ್ಥತಿಯೇ ಸರಿ. ಇತ್ತೀಚೆಗೆ ಕೋವಿಡ್ ನಿರ್ವಹಣೆಯಲ್ಲಿ ಕೇಂದ್ರದಿಂದ ಶ್ಲಾಘನೆ ಪಡೆದ ರಾಜ್ಯದಲ್ಲಿ, ವಾಸ್ತವ ಸ್ಥಿತಿ ಹಾಗಿಲ್ಲ ಎಂಬುದು ರುಜುವಾತಾಗಿದೆ. ಕೊರೊನಾದ ರುದ್ರ […]
Read More
– ರಾಧಾಕೃಷ್ಣ ಕಲ್ಚಾರ್. ದಕ್ಷಿಣ ಹಾಗೂ ಉತ್ತರ ಕನ್ನಡಗಳ ಮೂಲದ ಯಕ್ಷಗಾನ ಹಾಗೂ ತಾಳಮದ್ದಳೆ ಕಲಾ ಪ್ರಕಾರಗಳು ಇಂದು ನಾಡಿನಾದ್ಯಂತ ಜನಪ್ರಿಯತೆ ಪಡೆಯುತ್ತಿವೆ. ಪುರಾಣದ ಕತೆಯೊಂದನ್ನು ಹಾಡು ಹಾಗೂ ಪಾತ್ರಾಭಿನಯ ಹಾಗೂ ವ್ಯಾಖ್ಯಾನಗಳ ಮೂಲಕ ಮರಳಿ ಹೊಸತಾಗಿ ಕಟ್ಟುವ ಕಲೆಯೇ ತಾಳಮದ್ದಳೆ. ಇಲ್ಲಿನ ಅರ್ಥಧಾರಿಗಳು ಪಾತ್ರವೇ ತಾವಾಗಿ, ಆ ಪಾತ್ರದ ಭಾವ ಹಾಗೂ ನಿಲುವುಗಳನ್ನು ಕೇಳುಗರ ಮುಂದೆ ಸಮರ್ಥವಾಗಿ ಮಂಡಿಸಲು ಭಾಷೆ, ರಸ, ಧ್ವನಿ, ಸಾಹಿತ್ಯದ ನೆರವು ಪಡೆಯುತ್ತಾರೆ. ಅದು ಹೇಗೆ? ಸಾಹಿತ್ಯ ಅಥವಾ ಇನ್ನಾವುದೇ ಭಾಷಾಸಂವಹನವುಳ್ಳ […]
Read More
ಡಿಕೆಶಿ ಪಟ್ಟಾಭಿಷೇಕದ ಹುರುಪು, ರಾಷ್ಟ್ರೀಯ ಕಾಂಗ್ರೆಸ್ನಲ್ಲೂ ಪುನಶ್ಚೇತನದ ಮಿಂಚು. – ಶಶಿಧರ ಹೆಗಡೆ. ‘ಕೃಷ್ಣ ಸಾರಥ್ಯ’ದೊಂದಿಗೆ 1999ರ ವಿಧಾನಸಭೆ ಚುನಾವಣೆ ಎದುರಿಸಲು ಕಾಂಗ್ರೆಸ್ ವರಿಷ್ಠ ಮಂಡಳಿಯಲ್ಲಿ ಸಹಮತ ಮೂಡಿತ್ತು. ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರೂ ಸೋಮನಹಳ್ಳಿ ಮಲ್ಲಯ್ಯ ಕೃಷ್ಣ (ಎಸ್.ಎಂ.ಕೃಷ್ಣ) ಅವರಿಗೊಂದು ಅವಕಾಶ ನೀಡಲು ಒಲವು ತೋರಿದ್ದರು. ಆದರೆ, ಕೃಷ್ಣ ಹೆಸರು ಪ್ರಕಟವಾಗುವ ಹಂತದಲ್ಲಿ ಯಾರೋ ಪಿನ್ ಇಟ್ಟಿದ್ದರು. ಅಖಾಡದ ರಾಜಕಾರಣ ಕೃಷ್ಣ ಅವರಿಗೆ ಒಗ್ಗಿ ಬರುವುದಿಲ್ಲ. ಅವರದ್ದು ಹೈಫೈ ಶೈಲಿ. ಸದಾ ಟೆನ್ನಿಸ್ ಆಡುತ್ತ […]
Read More
– ಶಂಕರಾನಂದ. ಮಾನವ ಜೀವನದ ಕುರಿತ ನಮ್ಮ ಋಷಿ ಚಿಂತನೆ ನಿಜಕ್ಕೂ ಅದ್ಭುತವೇ ಸರಿ. ಪ್ರತಿ ಹೆಜ್ಜೆಯಲ್ಲೂ ವ್ಯಕ್ತಿಯ ವಿಕಾಸದೊಂದಿಗೆ ಬೆಸೆದುಕೊಂಡಿರುವ ಸಂಗತಿ ‘ಸಮಷ್ಟಿ ಹಿತ’. ವ್ಯಕ್ತಿ ಶರೀರ, ಮನಸ್ಸು, ಬುದ್ಧಿ ಮತ್ತು ಆತ್ಮ ಈ ನಾಲ್ಕು ಪ್ರಕಾರದ ಸುಖಗಳನ್ನು ಅನುಭವಿಸುತ್ತಾ ಧರ್ಮ, ಅರ್ಥ, ಕಾಮ, ಮೋಕ್ಷ ಗಳೆಂಬ ಚತುರ್ವಿಧ ಪುರುಷಾರ್ಥಗಳ ಪಾಲನೆಯ ಮೂಲಕ ವ್ಯಕ್ತಿಗತ ವಿಕಾಸ ಮತ್ತು ಸಮಷ್ಟಿ ಹಿತಗಳನ್ನು ಜೋಡಿಸಿಕೊಂಡು ಪರಮ ಲಕ್ಷ್ಯವನ್ನು ಸೇರುವ ಸುಂದರ ಸಮನ್ವಯ ಮಾರ್ಗವನ್ನು ನಮ್ಮ ಋುಷಿಗಳು ತಮ್ಮ ಜೀವನದ […]
Read More
ಇಂದು ಗುರು ಪೌರ್ಣಿಮೆ. ಗುರು ಎಂದರೆ ಕೇವಲ ಜ್ಞಾನ ನೀಡಿದ, ಅಕ್ಷರ ಕಲಿಸಿದವರು ಮಾತ್ರವಲ್ಲ. ‘ಗುರು’ವಿನ ಪಾತ್ರವನ್ನು ನಿರ್ವಹಿಸಿದವರು ಎಲ್ಲರ ಜೀವನದಲ್ಲೂ ಇರುತ್ತಾರೆ. ಯಾವುದೇ ಒಂದು ಸಣ್ಣ ಬೈಗುಳ, ಹಿತ ವಚನಗಳು ನಮ್ಮ ಜೀವನದ ದಿಕ್ಕನ್ನೇ ಬದಲಿಸುತ್ತವೆ. ಅಂಥ ಘಟನೆಗಳಿಗೆ ಕಾರಣರಾದವರ ಬಗ್ಗೆ ಬರೆಯುವಂತೆ ವಿಜಯ ಕರ್ನಾಟಕ ಕರೆ ನೀಡಿತ್ತು. ನಮ್ಮ ಈ ಆಹ್ವಾನಕ್ಕೆ ಸಾವಿರಾರು ಓದುಗರು ಸ್ಪಂದಿಸಿದ್ದಾರೆ. ನಮಗೆ ಬಂದ ಪತ್ರಗಳ ಪೈಕಿ ಕೆಲವು ಆಯ್ದ ಪತ್ರಗಳನ್ನು ಇಲ್ಲಿಪ್ರ ಕಟಿಸಿದ್ದೇವೆ. ಓದಿಕೊಳ್ಳಿ… ಶಿಕ್ಷಕಿಯಾಗಲು ಪ್ರೇರಣೆ : […]
Read More
– ಕಾರ್ಯಕರ್ತರನ್ನು ಹುರಿದುಂಬಿಸಿದ ಪ್ರಧಾನಿ – ಪ್ರಧಾನಿಗೆ ಮೋದಿ, ಅಧ್ಯಕ್ಷ ನಡ್ಡಾಗೆ ರಾಜ್ಯದ ಕೊರೊನಾ ಮಾಹಿತಿ ನೀಡಿದ ರವಿಕುಮಾರ್. ಹೊಸದಿಲ್ಲಿ: ಕೊರೊನಾ ಸಂಕಷ್ಟದ ಸಂದರ್ಭದಲ್ಲಿಜನರ ನೆರವಿಗೆ ಧಾವಿಸಿರುವ ಬಿಜೆಪಿ ಕಾರ್ಯಕರ್ತರ ಗುಣಗಾನ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಹೆಚ್ಚಿನ ಸೇವೆಗೆ ಅನುಕೂಲವಾಗುವ ದಿಸೆಯಲ್ಲಿ ಕಾರ್ಯಕರ್ತರಿಗೆ ಸಪ್ತ ಸೂತ್ರಗಳನ್ನು ನೀಡಿದ್ದಾರೆ. ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಕಾರ್ಯಕರ್ತರು ಯಾವ ರೀತಿ ಜನರ ನೆರವಿಗೆ ಧಾವಿಸಿದ್ದಾರೆ ಎಂಬ ಕುರಿತು ‘ಸೇವಾ ಹಿ ಸಂಘಟನಾ ಅಭಿಯಾನ್’ ವರ್ಚುವಲ್ ಸಭೆಯಲ್ಲಿ ಮಾಹಿತಿ ಪಡೆದ ಬಳಿಕ […]
Read More
ಡಾ. ರೋಹಿಣಾಕ್ಷ ಶಿರ್ಲಾಲು. The class room with all its limitations, remains a location of great possibility ಎನ್ನುವ ಮಾತಿದೆ. ಇಂದಿಗೂ ತರಗತಿ ಕೊಠಡಿಗಳ ಬೋಧನೆಗೆ ಪರ್ಯಾಯವಿಲ್ಲ. ಜಗತ್ತಿನಾದ್ಯಂತ ಮಕ್ಕಳ ಶಿಕ್ಷಣ ಎನ್ನುವುದು ತರಗತಿ ಕೊಠಡಿಗಳ ಮೂಲಕವೇ ಸಾಕಾರಗೊಳ್ಳುವುದು. ಅದಕ್ಕೆ ಪೂರಕವಾಗಿ ಬೇರೆ ಬೇರೆ ತಂತ್ರಜ್ಞಾನ, ಮಾಧ್ಯಮಗಳ ಬಳಕೆಯಾಗುತ್ತಿದೆಯೇ ಹೊರತು ಪರ್ಯಾಯ ಮಾರ್ಗವೇನು ಆಗಿಲ್ಲ. ಆದರೆ ಇತ್ತೀಚಿನ ಕೋವಿಡ್ ಸಾಂಕ್ರಾಮಿಕ ರೋಗಭೀತಿಯು ಪರ್ಯಾಯದ ಹುಡುಕಾಟವನ್ನು ಒತ್ತಾಯಿಸಿದೆ. ಕೋವಿಡ್ ಕಾರಣದಿಂದ ಕಳೆದ ಮಾರ್ಚ್ನಿಂದ ಅನಿರ್ದಿಷ್ಟ […]
Read More
ದೇಶದ ಜನಸಂಖ್ಯೆಯ ಅರ್ಧಕ್ಕಿಂತಲೂ ಹೆಚ್ಚು ಮಂದಿ 25ಕ್ಕಿಂತ ಹೆಚ್ಚು ವಯಸ್ಸಿನವರು! ಇತಿಹಾಸದಲ್ಲೇ ವೊತ್ತ ವೊದಲ ಬಾರಿಗೆ, ಭಾರತದ ಅರ್ಧಕ್ಕಿಂತಲೂ ಹೆಚ್ಚು ಜನಸಂಖ್ಯೆ ಈಗ 25 ವರ್ಷದವರು ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರು. ಪುರುಷ- ಸ್ತ್ರೀ ಎಂಬ ವ್ಯತ್ಯಾಸವಿಲ್ಲದೆ, ನಗರ- ಹಳ್ಳಿ ಎಂಬ ವ್ಯತ್ಯಾಸವಿಲ್ಲದ ಸರಾಸರಿ ಚಿತ್ರಣ ಹೀಗಿದೆ. ಭಾರತೀಯ ರಿಜಿಸ್ಟ್ರಾರ್ ಜನರಲ್ ಮತ್ತು ಜನಗಣತಿ ಕಮಿಷನರ್ ನಡೆಸಿದ ಮಾದರಿ ನೋಂದಣಿ ವ್ಯವಸ್ಥೆ-2018ರ ವರದಿಯಲ್ಲಿ ಈ ವಿಚಾರ ಕಂಡುಬಂದಿದೆ. ಇದರಿಂದ ಏನು ತಿಳಿಯಬಹುದು? ಏನೆಂದರೆ, ಭಾರತದ ಜನಸಂಖ್ಯೆ ಹೆಚ್ಚು […]
Read More
ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಯಶಸ್ವಿಯಾಗಿ ಮುಕ್ತಾಯಗೊಂಡಿವೆ. ಕೊರೊನಾ ವೈರಸ್ನ ಆತಂಕಕಾರಿ ಹಬ್ಬುವಿಕೆಯ ನಡುವೆಯೂ ಜೂನ್ 25ರಿಂದ ಆರಂಭಗೊಂಡಿದ್ದ ಪರೀಕ್ಷೆ ಶುಕ್ರವಾರ ಪೂರ್ಣಗೊಂಡಿದೆ. ಸುಮಾರು 8.50 ಲಕ್ಷ ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಶುಕ್ರವಾರ ನಡೆದ ತೃತೀಯ ಭಾಷಾ ವಿಷಯಗಳ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಶೇ.98.10ರಷ್ಟಿತ್ತು. ಪ್ರತಿ ಪರೀಕ್ಷೆಗೂ ಶೇ.98 ವಿದ್ಯಾರ್ಥಿಗಳು ವೈರಾಣುವಿನ ಭಯ ಮೀರಿ ಹಾಜರಾಗಿದ್ದರು. 32 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ತಗುಲಿರುವುದು ಪತ್ತೆಯಾಗಿದ್ದು, ಇದು ಪರೀಕ್ಷಾ ಕೇಂದ್ರಗಳಿಂದ ಬಂದದ್ದಲ್ಲ ಎಂದು ಸರಕಾರ ಹೇಳಿದೆ. ಇವರೂ ಸೇರಿದಂತೆ, ಕ್ವಾರಂಟೈನ್ನಲ್ಲಿರುವ […]
Read More
– ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ ಅಂತಾರೆ ಡಾ. ಗಿರಿಧರ ಕಜೆ. ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದೇ ಕೊರೊನಾ ಮಣಿಸಲು ಇರುವ ಹೆದ್ದಾರಿ. ಆಯುರ್ವೇದದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಹಲವು ದಾರಿಗಳಿವೆ ಎನ್ನುತ್ತಾರೆ ಆಯುರ್ವೇದ ವೈದ್ಯರಾದ ಡಾ. ಗಿರಿಧರ ಕಜೆ. ಔಷಧೀಯ ಸಸ್ಯಗಳನ್ನು ಬಳಸಿಕೊಂಡು ಮನೆ ಮದ್ದು ಹಾಗೂ ಕಷಾಯ ತಯಾರಿಸಿಕೊಂಡು ಕೊರೊನಾದಿಂದ ರಕ್ಷಿಸಿಕೊಳ್ಳಬಹುದು ಎನ್ನುವುದು ಡಾ. ಕಜೆ ಅವರ ಅನುಭವದ ಮಾತು. ಜನರೇ ಮನೆಯಲ್ಲಿ ಸುಲಭವಾಗಿ ತಯಾರಿಸಿಕೊಳ್ಳುವ ಹಾಗೂ ಅಡ್ಡ ಪರಿಣಾಮಗಳಿಲ್ಲದ ಮನೆಮದ್ದಿಗೆ ಒತ್ತು […]
Read More