ವೈರಾಣು ನಾಶಕ್ಕೆ ಆಯುರ್ ಬಾಣ

– ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ ಅಂತಾರೆ ಡಾ. ಗಿರಿಧರ ಕಜೆ.

ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದೇ ಕೊರೊನಾ ಮಣಿಸಲು ಇರುವ ಹೆದ್ದಾರಿ. ಆಯುರ್ವೇದದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಹಲವು ದಾರಿಗಳಿವೆ ಎನ್ನುತ್ತಾರೆ ಆಯುರ್ವೇದ ವೈದ್ಯರಾದ ಡಾ. ಗಿರಿಧರ ಕಜೆ. ಔಷಧೀಯ ಸಸ್ಯಗಳನ್ನು ಬಳಸಿಕೊಂಡು ಮನೆ ಮದ್ದು ಹಾಗೂ ಕಷಾಯ ತಯಾರಿಸಿಕೊಂಡು ಕೊರೊನಾದಿಂದ ರಕ್ಷಿಸಿಕೊಳ್ಳಬಹುದು ಎನ್ನುವುದು ಡಾ. ಕಜೆ ಅವರ ಅನುಭವದ ಮಾತು. ಜನರೇ ಮನೆಯಲ್ಲಿ ಸುಲಭವಾಗಿ ತಯಾರಿಸಿಕೊಳ್ಳುವ ಹಾಗೂ ಅಡ್ಡ ಪರಿಣಾಮಗಳಿಲ್ಲದ ಮನೆಮದ್ದಿಗೆ ಒತ್ತು ನೀಡಬೇಕು ಎಂದು ಡಾ.ಕಜೆ ಕಿವಿಮಾತು ಹೇಳಿದ್ದಾರೆ.
ಸರಳ ಕಷಾಯ ವೈವಿಧ್ಯಗಳು

1. ಒಂದು ಲೀಟರ್ ನೀರು ಕುದಿಸಿ, ಅದಕ್ಕೆ ಐದಾರು ತುಳಸಿ ಎಲೆಗಳನ್ನು ಹಾಕಿ ತಣ್ಣಗಾದ ನಂತರ ಕುಡಿಯಬೇಕು. ಒಬ್ಬ ವ್ಯಕ್ತಿ ದಿನಕ್ಕೆ ಒಂದು ಲೀಟರ್ ನೀರು ಕುಡಿಯಬೇಕು.

2. ಒಂದು ಲೋಟ ಹಾಲಿಗೆ ಕಾಲು ಅಥವಾ ಅರ್ಧ ಚಮಚ ಅರಿಶಿನ ಪುಡಿ ಹಾಕಿ ಮೂರು ನಿಮಿಷ ಕುದಿಸಿ ಸೋಸಿ ಕುಡಿಯಬೇಕು. ರುಚಿಗೆ ಬೇಕೆಂದರೆ ಸಕ್ಕರೆ, ಬೆಲ್ಲಹಾಕಿ

3.  ನೆಲ ನೆಲ್ಲಿ, ಭದ್ರಮುಷ್ಠಿ, ಅಮೃತಬಳ್ಳಿ- ಈ ಮೂರರಲ್ಲಿ ಯಾವುದಾದರೂ ಒಂದನ್ನು ತೆಗೆದುಕೊಂಡು ಒಂದು ಲೋಟ ನೀರಿಗೆ ಹಾಕಿ ಕುದಿಸಿ ಕಷಾಯ ತಯಾರಿಸಿ ಕುಡಿಯಬೇಕು. ನೆಲ ನೆಲ್ಲಿಯ ಬೇರು, ಎಲೆ, ಕಾಂಡ ಯಾವುದಾದರೂ ಭಾಗವನ್ನು ತೆಗೆದುಕೊಳ್ಳಬಹುದು. ಪ್ರತಿ ದಿನ ಕಷಾಯ ಸೇವಿಸಿದರೆ ಉತ್ತಮ.

4. ಹಿಪ್ಪಲಿ ಔಷಧೀಯ ಸಸ್ಯಗಳಲ್ಲೊಂದು. ಇದು ಕರಿಮೆಣಸಿನಂತೆಯೇ ಇರುತ್ತದೆ. ಹಿಪ್ಪಲಿಯನ್ನು (ಲಾಂಗ್ ಪೆಪ್ಪರ್) ಅರ್ಧ ಚಮಚ ಜೇನು ತುಪ್ಪದೊಂದಿಗೆ ತೇದು ಮಿಶ್ರಣ ಮಾಡಿ ಸೇವಿಸಬೇಕು.

ಮಾನಸಿಕ ಉದ್ವೇಗ ನಿವಾರಣೆಗೆ ಕೊರೊನಾ ಸಮಯದಲ್ಲಿ ಜನರು ಮಾನಸಿಕ ಒತ್ತಡಕ್ಕೆ ಒಳಗಾಗಿರುತ್ತಾರೆ. ಇದಕ್ಕಾಗಿ ರುದ್ರಾಕ್ಷಿ ನೆನೆಸಿದ ನೀರು ಕುಡಿಯುವುದು ಒಳ್ಳೆಯದು. ಬೆಳಗ್ಗೆ ಮೂರು ರುದ್ರಾಕ್ಷಿ ಬೀಜಗಳನ್ನು ಒಂದು ಲೋಟ ನೀರಿನಲ್ಲಿ ನೆನೆಸಿ ಇಡಬೇಕು. ರಾತ್ರಿ ಆ ನೀರನ್ನು ಕುಡಿದು ನಿದ್ರಿಸಬೇಕು. ಇದರಿಂದ ಮಾನಸಿಕ ಒತ್ತಡ, ಉದ್ವೇಗ ಕಡಿಮೆಯಾಗುತ್ತದೆ. ಪ್ರತಿ ದಿನ ಕುಡಿಯಬಹುದು.

ನಾವೆಲ್ಲ ಹೀಗ್ಮಾಡ್ತೇವೆ…

ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಗೆ ಹಸಿ ಬೆಳ್ಳುಳ್ಳಿಯನ್ನು ಹುರಿದು ತಿನ್ನುತ್ತೇವೆ. ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಇದು ಕೆಟ್ಟ ಕೊಲೆಸ್ಟ್‌ರಾಲ್‌ನ್ನ ನಿವಾರಿಸುತ್ತದೆ. ಶುಂಠಿ, ಹುಣಸೆ ರಸ ಮತ್ತು ಅರಸಿನವನ್ನು ರುಬ್ಬಿ ಅದಕ್ಕೆ ಒಗ್ಗರಣೆ ಹಾಕಿ ಊಟಕ್ಕೆ ಬಳಸಿದರೆ ಶೀತ, ಕಫ ಕಡಿಮೆಯಾಗುತ್ತದೆ. ನಾವು ಅದನ್ನೇ ಮಾಡೋದು. -ವೈಷ್ಣವಿ, ಚಾಮರಾಜನಗರ.

ಲಾಕ್‌ಡೌನ್‌ ಆದಾಗಿನಿಂದ ಪ್ರತಿದಿನ ಬೆಳಗ್ಗೆ ಮತ್ತು ರಾತ್ರಿ ಎರಡು ಚಮಚ ಅಮೃತಾರಿಷ್ಟವನ್ನು ಅಷ್ಟೇ ನೀರಿಗೆ ಬೆರೆಸಿ ಸೇವಿಸುತ್ತಿದ್ದೇನೆ. ಹಾಲು ಕುಡಿಯುವಾಗ ಅರಸಿನ ಬೆರೆಸುತ್ತೇನೆ. ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. – ರವಿಪ್ರಸಾದ್ ಇನ್ನಂಜೆ, ಉಡುಪಿ.

ನಾವು ಬೆಳಗ್ಗೆ ಎದ್ದ ಕೂಡಲೇ ಜೇನು ತುಪ್ಪ ಹಾಗೂ ಬೆಳ್ಳುಳ್ಳಿ ಕುಟ್ಟಿ ಬೆರೆಸಿ ತಯಾರಿಸಿದ ಲೇಹವನ್ನು ಒಂದು ಚಮಚ ಸೇವಿಸುತ್ತೇವೆ. ಆಮೇಲೆ ಒಂದು ಲೋಟ ಬಿಸಿ ನೀರಲ್ಲಿ ಎರಡು ಚಮಚ ಜೇನು ತುಪ್ಪ ಮತ್ತು ಅರ್ಧ ನಿಂಬೆ ಹಣ್ಣಿನ ರಸ ಸೇವಿಸುತ್ತೇವೆ. ರಾತ್ರಿ ಮಲಗುವ ಮುಂಚೆ ಎರಡು ಲೋಟ ನೀರಿಗೆ ಪುದಿನ, ಪುಡಿ ಮಾಡಿದ ಮೆಣಸು, ಏಲಕ್ಕಿ, ಲವಂಗ ಅರಿಶಿನ ದೊಡ್ಡಪತ್ರೆ ಸೊಪ್ಪು, ರುಚಿಗೆ ಸ್ವಲ್ಪ ಬೆಲ್ಲಹಾಕಿ ಒಂದು ಲೋಟ ಆಗುವರೆಗೆ ಕುದಿಸಿ ಕುಡಿಯುವುದು. -ಜಗದೀಶ್ ನಂದಿನಿ.

ಪ್ರತಿದಿನ ಖಾಲಿ ಹೊಟ್ಟೆಗೆ ಎರಡು ಎಸಳು ಹಸಿ ಬೆಳ್ಳುಳ್ಳಿ ತಿನ್ನುವುದರಿಂದ ರೋಗ ನಿರೋಧಕ ಶಕ್ತಿಯ ಜೊತೆಗೆ ಶ್ವಾಸಕೋಶ ಸ್ವಚ್ಛವಾಗುತ್ತದೆ. ಇದಕ್ಕಿಂತ ಮೊದಲು ಎಣ್ಣೆಯಿಂದ ಬಾಯಿ ಮುಕ್ಕಳಿಸಿದರೆ ಬಹಳ ಉಪಯೋಗವಿದೆ.- ಮಲ್ಲೇಶ ಸೋಮಶೇಖರ್ ಕೋಣನಕುಂಟೆ, ಬೆಂಗಳೂರು.

ಆಶಾ ಕಾರ್ಯಕರ್ತೆಯಾಗಿ ಕೊರೊನಾ ನಿಯಂತ್ರಣಕ್ಕೆ ಸಮುದಾಯ ಮಟ್ಟದಲ್ಲಿ ಕೆಲಸ ಮಾಡ್ತಾ ಇರುವ ನಾನು ನನ್ನ ಮತ್ತು ನನ್ನ ಮನೆಯವರ ಆರೋಗ್ಯ ರಕ್ಷಣೆ ಬಹಳ ಪ್ರಯತ್ನ ನಡೆಸುತ್ತಿದ್ದೇನೆ. ಜತೆಗೆ ಗ್ರಾಮದವರಿಗೂ ನನ್ನಿಂದ ತೊಂದರೆಯಾಗಬಾರದು ಎಂಬ ಕಾಳಜಿ ನನ್ನದು. ಹೀಗಾಗಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ದಿನಾ ಬೆಳಗ್ಗೆ ಅಮೃತಬಳ್ಳಿ ಎಲೆ ತಿನ್ನುತ್ತೇನೆ. ದಿನಕ್ಕೆ  ಒಂದು ಚಮಚ ಚ್ಯವನಪ್ರಾಶ ತಿನ್ನುತ್ತೇನೆ. ರಾತ್ರಿ ಮಲಗುವ ಮುನ್ನ ಅರಸಿನ ಹಾಕಿದ ಹಾಲು ಕುಡಿಯುತ್ತೇನೆ. – ಸುಹಾಸಿನಿ ಶೆಟ್ಟಿ ಆಶಾ ಕಾರ್ಯಕರ್ತೆ, ತೆಕ್ಕಟ್ಟೆ.

ಎರಡು ಬೆಳ್ಳುಳ್ಳಿ ಎಸಳು, ಎರಡು ದೊಡ್ಡ ಪತ್ರೆ, ಎರಡು ಬೇವಿನ ಎಲೆ, ಎರಡು ಎಲೆ ಅಮೃತಬಳ್ಳಿ, ಎರಡು ಎಲೆ ಬಿಲ್ವ,  ಎರಡು ಎಲೆ ತುಳಸಿ, ಎರಡೆಲೆ ಪುದಿನಾ ಒಟ್ಟಿಗೆ ಸೇರಿಸಿ ಬೆಳಗ್ಗೆ ಖಾಲಿ ಹೊಟ್ಟೆಗೆ ಮತ್ತು ರಾತ್ರಿ ಜಗಿದು ತಿನ್ನುತ್ತೇವೆ. ಇದು ದೇಹದ ಅಂಗಾಂಗಗಳನ್ನು ಸ್ಯಾನಿಟೈಸ್ ಮಾಡುತ್ತದೆ. 

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top