ಅಂತ್ಯಕ್ರಿಯೆ ಮಾನವೀಯ ಆಗಿರಲಿ

– ಕೊರೊನಾ ಸೋಂಕಿನಿಂದ ಮೃತಪಟ್ಟವರ ಬಗ್ಗೆ ಅನಗತ್ಯ ಭಯ ಬೇಡ – ಸುರಕ್ಷಿತ ಕ್ರಮದೊಂದಿಗೆ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿದರೆ ಅಪಾಯವಿಲ್ಲ. ವಿಕ ಸುದ್ದಿಲೋಕ ಬೆಂಗಳೂರು. ಕೊರೊನಾ ಸೋಂಕಿನಿಂದ ದಾರುಣವಾಗಿ ಮೃತಪಡುವವರ ಅಂತಿಮ ಸಂಸ್ಕಾರ ಪ್ರಕ್ರಿಯೆ ಮತ್ತಷ್ಟು ದಯನೀಯವಾಗುತ್ತಿದೆ. ಶವ ಸಂಸ್ಕಾರದಿಂದ ರೋಗ ಹರಡಬಹುದೆಂಬ ಅನಗತ್ಯ ಭೀತಿ ಜನರಲ್ಲಿ ಆವರಿಸಿರುವುದೇ ಈ ಪರಿಸ್ಥಿತಿಗೆ ಕಾರಣವಾಗಿದೆ. ಅಂತ್ಯಸಂಸ್ಕಾರದ ವೇಳೆ ಸಮೀಪದ ಬಂಧುಗಳು ಸುರಕ್ಷಿತ ಕ್ರಮಗಳೊಂದಿಗೆ ಭಾಗವಹಿಸಬಹುದು ಎಂಬ ಅಂಶ ಕೇಂದ್ರ ಸರಕಾರದ ಮಾರ್ಗಸೂಚಿಯಲ್ಲೇ ಇದೆ. ಸುರಕ್ಷಿತ ವಿಧಾನ ಅನುಸರಿಸಿ ಸಮೀಪದ ಬಂಧುಗಳು […]

Read More

ಸಿಂಹಸದೃಶ ವ್ಯಕ್ತಿತ್ವದ ಮುಖರ್ಜಿ

– ತರುಣ್‌ ವಿಜಯ್‌. ಭಾರತೀಯ ರಾಜಕಾರಣದಲ್ಲಿ ಸಿಂಹಸದೃಶ ವ್ಯಕ್ತಿತ್ವದವರಾಗಿದ್ದ ಶ್ಯಾಮಪ್ರಸಾದ ಮುಖರ್ಜಿ ಅವರ 119ನೇ ಜನ್ಮದಿನವನ್ನು ಜುಲೈ 6ರಂದು ಆಚರಿಸಿದೆವು. ಅವರು ಬಹಳ ಕಾಲ ಬದುಕಿದ್ದರೆ ಇಂದಿನ ರಾಜಕೀಯದ ಸ್ವರೂಪವೇ ಬೇರೆ ರೀತಿ ಇರುತ್ತಿತ್ತು. ಆಧುನಿಕ ಅಮೆರಿಕದ ರಾಜಕೀಯವನ್ನು ಅಬ್ರಹಾಂ ಲಿಂಕನ್‌ ಹೇಗೆ ಪ್ರಭಾವಿಸಿದರೋ ಹಾಗೆಯೇ ಶ್ಯಾಮಪ್ರಸಾದ್‌ ಮುಖರ್ಜಿ ಭಾರತವನ್ನು ಪ್ರಭಾವಿಸಿದರು. ಎರಡೇ ದಶಕಗಳ ಕ್ಲುಪ್ತ ಕಾಲದ ರಾಜಕೀಯ ಜೀವನದಲ್ಲಿ ಅವರು ದೇಶದ ಹಿಂದೂಗಳ ಜೀವನವನ್ನು, ಅವರ ಸುರಕ್ಷತೆಯನ್ನು ಎತ್ತಿ ಹಿಡಿದರು. 1953ರಲ್ಲಿಯೇ ಜಮ್ಮು- ಕಾಶ್ಮೀರ ಭಾರದಲ್ಲಿ […]

Read More

ಭಾರತದ ಎದುರು ಬಾಲ ಮಡಚಿದ ಚೀನಾ

ಹದಿನೈದು ದಿನಗಳ ಹಿಂದೆ ಕಾಳಗಕ್ಕೆ ಸಜ್ಜಾದಂತೆ ಹೂಂಕರಿಸುತ್ತಿದ್ದ, ‘ಗಲ್ವಾನ್‌ ಪ್ರಾಂತ್ಯ ನಮ್ಮದೇ’ ಎಂದಿದ್ದ ಚೀನಾ ಇದ್ದಕ್ಕಿದ್ದಂತೆ ತಣ್ಣಗಾಗಿ, ಘರ್ಷಣೆ ನಡೆದ ಜಾಗದಿಂದ ಎರಡು ಕಿಲೋಮೀಟರ್‌ ಹಿಂದೆ ಸರಿದಿದ್ದೇಕೆ? ಇದರ ಹಿಂದಿದ್ದ ಭಾರತದ ಒತ್ತಡ ತಂತ್ರಗಳ್ಯಾವುವು? ಗಲ್ವಾನ್‌ ನದಿಯ ತೀರವನ್ನು ಪೂರ್ತಿಯಾಗಿ ಕಬಳಿಸುವ ಯೋಜನೆಯೇ ಚೀನಾಕ್ಕೆ ಇತ್ತು. ಆದರೆ ಘರ್ಷಣೆ ಪಡೆದುಕೊಂಡ ಸ್ವರೂಪ, ಭಾರತ ಪ್ರಯೋಗಿಸಿದ ಒತ್ತಡ ತಂತ್ರಗಳು, ಅಂತಾರಾಷ್ಟ್ರೀಯವಾಗಿ ಈ ನಡೆ ತನಗೆ ರಿವರ್ಸ್‌ ಹೊಡೆಯಬಹುದಾದ ಸಾಧ್ಯತೆ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಚೀನಾ ಈಗ ಎರಡು ಕಿಲೋಮೀಟರ್‌ನಷ್ಟು ಹಿಂದೆ […]

Read More

117 ದಿನಗಳ ಬಳಿಕ ಮತ್ತೆ ಕ್ರಿಕೆಟ್ ಕಮಾಲ್

– ಕೊರೊನಾ ನಡುವೆ ಪ್ರೇಕ್ಷಕರಿಲ್ಲದ ಪಂದ್ಯ – ನಾಳೆಯಿಂದ ಇಂಗ್ಲೆಂಡ್-ವಿಂಡೀಸ್ ಟೆಸ್ಟ್ ಸರಣಿ. ಹೊಸದಿಲ್ಲಿ: ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ತಂಡದ ಆಟಗಾರರು ಬುಧವಾರ ಬೆಳಗ್ಗೆ (ಭಾರತೀಯ ಕಾಲಮಾನ ಮಧ್ಯಾಹ್ನ 3.30) ಸೌತಾಂಪ್ಟನ್ನ ಏಜಸ್ ಬೌಲ್ ಸ್ಟೇಡಿಯಮ್‌ಗೆ ಕಾಲಿಡುವ ಘಳಿಗೆ ಇತಿಹಾಸದ ಪುಟಗಳಲ್ಲಿ ದಾಖಲಾಗಲಿದೆ. ದೀರ್ಘ ಅವಧಿಯ ಕೋವಿಡ್-19 ಲಾಕ್‌ಡೌನ್‌ ಬಳಿಕ ಅಂದರೆ ಸತತ 117 ದಿನಗಳ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವೊಂದಕ್ಕೆ ಚಾಲನೆ ದೊರೆಯಲಿದ್ದು, ಐತಿಹಾಸಿಕ ಕ್ಷಣವೊಂದು ಸೃಷ್ಟಿಯಾಗಲಿದೆ. ಕೊರೊನಾ ಹಾವಳಿ ಅಂತ್ಯವಾಗದಿದ್ದರೂ, ಜೈವಿಕ ಸುರಕ್ಷಿತ […]

Read More

45 ಸಾವಿರ ಕನ್ನಡಿಗರು ಅತಂತ್ರ

– ವಲಸೆ ತಡೆ ವಿಧೇಯಕ ಮಂಡನೆಗೆ ಕುವೈತ್ ಸಜ್ಜು – ಭಾರತದ 15 ಲಕ್ಷ ಉದ್ಯೋಗಿಗಳಿಗೆ ಆತಂಕ. – ಆರ್.ಸಿ.ಭಟ್. ಮಂಗಳೂರು : ಕೊರೊನಾ ಸಂಕಷ್ಟದಿಂದಾಗಿ ಕೊಲ್ಲಿ ರಾಷ್ಟ್ರಗಳಲ್ಲಿ ಲಕ್ಷಾಂತರ ಭಾರತೀಯರು ಉದ್ಯೋಗ ನಷ್ಟ ಅನುಭವಿಸುತ್ತಿರುವ ನಡುವೆಯೇ, ಕುವೈತ್ ಸರಕಾರ ವಿದೇಶೀಗರನ್ನು ಹೊರದಬ್ಬುವ ವಿಧೇಯಕವನ್ನು ಸಂಸತ್‌ನಲ್ಲಿ ಮಂಡಿಸಲು ಸಿದ್ಧತೆ ನಡೆಸಿದೆ. ಈ ಕಾಯಿದೆ ಜಾರಿಗೆ ಬಂದರೆ ಕುವೈತ್‌ನಲ್ಲಿ ಅತಿ ದೊಡ್ಡ ವಲಸಿಗರಾಗಿರುವ ಭಾರತೀಯರಿಗೆ ಸಂಕಷ್ಟ ಎದುರಾಗಲಿದೆ. ವಿದೇಶಿಗರ ಸಂಖ್ಯೆ ಹೆಚ್ಚಿ, ತನ್ನ ಪ್ರಜೆಗಳೇ ಅಲ್ಪಸಂಖ್ಯಾತರಾಗುತ್ತಿರುವುದನ್ನು ಗಮನಿಸಿದ ಅಲ್ಲಿನ […]

Read More

ವೈದ್ಯರು ಬೇಕಾಗಿದ್ದಾರೆ

– ಆರೋಗ್ಯ ಇಲಾಖೆಯಲ್ಲಿ 30% ಹುದ್ದೆ ಖಾಲಿ, ಖಾಸಗಿಯಲ್ಲೂ ಸಮಸ್ಯೆ – ಹೆಲ್ತ್ ಯೋಧರಿಗೂ ಸೋಂಕು | ಗುತ್ತಿಗೆ ವೈದ್ಯರ ಪದತ್ಯಾಗ ಬೆದರಿಕೆ. ಕಾರ್ತಿಕ್ ಯು.ಎಚ್. ಬೆಂಗಳೂರು : ಕೊರೊನಾ ವಿರುದ್ಧದ ಹೋರಾಟದಲ್ಲಿ ಸೇನಾನಿಗಳಂತೆ ಹೋರಾಡುವ ವೈದ್ಯ ಸಿಬ್ಬಂದಿಗಳ ಕೊರತೆ ರಾಜ್ಯದಲ್ಲಿ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಮೊದಲೇ ವೈದ್ಯರು ಮತ್ತು ವೈದ್ಯ ಸಿಬ್ಬಂದಿಗಳ ಹುದ್ದೆ ಖಾಲಿ ಇದೆ. ಇದರ ಜತೆಗೆ ಹಲವಾರು ವೈದ್ಯರು, ಸಿಬ್ಬಂದಿ ಸೋಂಕು, ಭೀತಿ ಮತ್ತಿತರ ಕಾರಣಗಳಿಗಾಗಿ ಗೈರುಹಾಜರಾಗುತ್ತಿದ್ದಾರೆ. ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳೆರಡರಲ್ಲೂ […]

Read More

ಚೀನಾಗೆ ಮರೆಯಲಾಗದ ಪಾಠ – ವಿಸ್ತರಣಾಕಾಂಕ್ಷಿ ಚೀನಾವನ್ನು ನಂಬಲಾಗದು

ಇತರ ಸಣ್ಣ ದೇಶಗಳನ್ನು ಸಾಲ ನೀಡಿ ವಶೀಕರಿಸಿಕೊಂಡಂತೆ ಭಾರತವನ್ನು ವಸಾಹತು ಮಾಡಿಕೊಳ್ಳಲು ಸಾಧ್ಯವಾಗದು ಎಂದು ಅರಿತಿರುವ ಚೀನಾ, ಗಡಿ ತಂಟೆಗಳ ಮೂಲಕ ಭಾರತವನ್ನು ಆಗಾಗ ಬೆದರಿಸಲು ಹಾಗೂ ವಶದಲ್ಲಿಟ್ಟುಕೊಳ್ಳಲು ಪ್ರಯತ್ನಿಸುತ್ತದೆ. ಕಳೆದ ತಿಂಗಳು ಲೇಹ್‌ ಸಮೀಪದ ಗಲ್ವಾನ್‌ ಕಣಿವೆಯಲ್ಲಿ ನಡೆದದ್ದು ಚೀನಾದ ಇಂತದೇ ಒಂದು ಪ್ರಯತ್ನ. ಚೀನಾ ಸೈನಿಕರೊಂದಿಗಿನ ಘರ್ಷಣೆಯಲ್ಲಿ 20 ಯೋಧರನ್ನು ಕಳೆದುಕೊಂಡ ಭಾರತ, ಅದಕ್ಕೆ ತಕ್ಕನಾದ ಪ್ರತಿಕ್ರಿಯೆಯನ್ನು ತೋರಿತು. ಉಲ್ಬಣಿಸಿದ ಸನ್ನಿವೇಶವನ್ನು ಸರಿಪಡಿಸಲು ಉಭಯ ಕಡೆಗಳ ಕಮಾಂಡರ್‌ ಮಟ್ಟದ ಹಾಗೂ ರಾಜತಾಂತ್ರಿಕ ಪ್ರತಿನಿಧಿಗಳ ಮಟ್ಟದ […]

Read More

ತೊಲಗಿದ ಚೀನಾ

– ಭಾರತ ಒತ್ತಡಕ್ಕೆ ಮಣಿದ ಡ್ರ್ಯಾಗನ್ – ದೋವಲ್-ವಾಂಗ್ ಮಾತುಕತೆ ಯಶಸ್ವಿ. ಹೊಸದಿಲ್ಲಿ: ಭಾರತದ ಹಲವು ಬಗೆಯ ಒತ್ತಡ ಹಾಗೂ ಅಂತಾರಾಷ್ಟ್ರೀಯ ಸಮುದಾಯದ ಎಚ್ಚರಿಕೆಗೆ ಮಣಿದ ಚೀನಾವು ಗಲ್ವಾನ್ ಕಣಿವೆಯಿಂದ ಸೇನೆಯನ್ನು ಹಿಂದಕ್ಕೆ ಕರೆಸಿಕೊಂಡಿದೆ. ಇದರಿಂದಾಗಿ ಎರಡು ತಿಂಗಳಿಂದ ಕದನ ಭೀತಿಯಿಂದ ಕುದಿಯುತ್ತಿದ್ದ ವಾಸ್ತವ ಗಡಿ ನಿಯಂತ್ರಣ ರೇಖೆಯ ಗಲ್ವಾನ್ ವ್ಯಾಲಿ ಶಾಂತವಾಗುವ ಲಕ್ಷಣಗಳು ಗೋಚರಿಸಿವೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಜತೆ ದೂರವಾಣಿ ಸುಮಾರು ಎರಡು […]

Read More

ಪಂಜಾಬ್‌ ಮೇಲೆ ಪಾಪಿ ಪಾಕ್‌ ಕಣ್ಣು

ಐಎಸ್‌ಐ ಮೂಲಕ ಖಲಿಸ್ತಾನ್‌ ಭಯೋತ್ಪಾದನೆಗೆ ಮರುಜೀವ. ಜಮ್ಮು- ಕಾಶ್ಮೀರದಲ್ಲಿ ಭದ್ರತಾ ಪಡೆಗಳ ಕಟ್ಟೆಚ್ಚರದಿಂದ ವಿಚಲಿತವಾಗಿರುವ ಪಾಕಿಸ್ತಾನದ ಗೂಢಚರ ಸಂಸ್ಥೆ ಐಎಸ್‌ಐ, ಭಾರತದಲ್ಲಿ ಹೇಗಾದರೂ ಭಯ ಸೃಷ್ಟಿಸುವ ಯತ್ನದಲ್ಲಿ ಪಂಜಾಬ್‌ನ ಖಲಿಸ್ತಾನ್‌ ಭಯೋತ್ಪಾದನೆಗೆ ಜೀವ ತುಂಬಲು ಯತ್ನಿಸುತ್ತಿದ್ದಾರೆ. ಅವರ ಯೋಜನೆಗಳೇನು, ಎಲ್ಲಿಂದ ಅನುಷ್ಠಾನಗೊಳ್ಳುತ್ತಿದೆ ಎಂಬ ವಿವರಗಳು ಇಲ್ಲಿವೆ. ಪಂಜಾಬ್‌ನಲ್ಲಿ ಬಹುತೇಕ ಅಳಿದೇ ಹೋಗಿದ್ದ ಖಲಿಸ್ತಾನ್‌ ಚಳವಳಿ ಹಾಗೂ ಭಯೋತ್ಪಾದನೆಗೆ ಮತ್ತೆ ಮರುಜೀವ ಬಂದಿದೆ. ಪಂಜಾಬ್‌ನ ಅಲ್ಲಲ್ಲಿ ಬಾಂಬ್‌ ಸ್ಫೋಟ, ಗುಂಡಿನ ದಾಳಿ ನಡೆಸಲು ಉಗ್ರರು ಸಂಚು ನಡೆಸುತ್ತಿದ್ದು, ಇದು […]

Read More

ಚೀನಾ ಎದುರಿಸಲು ಬೇಕು ದೇಶಿ ಮೊಬೈಲ್‌ ಆ್ಯಪ್‌

ಸ್ಥಳೀಯ ಮೊಬೈಲ್‌ ಅಪ್ಲಿಕೇಶನ್‌ ಅಭಿವೃದ್ಧಿಯಲ್ಲಿ ಉನ್ನತ ಶಿಕ್ಷ ಣ ಸಂಸ್ಥೆಗಳ ಪಾತ್ರವೇನು? – ಪ್ರೊ. ನಾಗೇಶ್ವರ ರಾವ್‌. ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷ ನ್‌ 69ಎ ಅಡಿಯಲ್ಲಿರುವ ತನ್ನ ಅಧಿಕಾರವನ್ನು ಬಳಸಿ 59 ಚೀನೀ ಮೊಬೈಲ್‌ ಅಪ್ಲಿಕೇಶನ್‌ಗಳನ್ನು ನಿಷೇಧಿಸಿದೆ. ಅವುಗಳು ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆ, ರಕ್ಷಣೆ, ಭದ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತರುವ ಚಟುವಟಿಕೆಗಳಲ್ಲಿ ತೊಡಗಿರುವ ಮಾಹಿತಿಯನ್ವಯ ಈ ಕ್ರಮ ಕೈಗೊಳ್ಳಲಾಗಿದೆ. ನಿಷೇಧಿತ 59 ಆ್ಯಪ್‌ಗಳ […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top