ಕೊರೊನಾ ಯೋಧರ ಕೊರತೆ – ವೈದ್ಯರೇ, ಸಮಾಜ ನಿಮ್ಮನ್ನೇ ನಂಬಿದೆ

ರಾಜ್ಯದಲ್ಲಿ ಕೊರೊನಾ ಸೋಂಕಿನ ಏರಿಕೆಯಿಂದ ಆಗಿರುವ ಹಲವು ದುಷ್ಪರಿಣಾಮಗಳ ನಡುವೆ, ವೈದ್ಯರ ಕೊರತೆಯೂ ಒಂದು ಹಾಗೂ ಹೆಚ್ಚು ಗಂಭೀರವಾದುದು. ಸರಕಾರಿ ಆಸ್ಪತ್ರೆಗಳಲ್ಲಿ ಮೊದಲೇ ವೈದ್ಯರ ಕೊರತೆಯಿದೆ. ನಿಗದಿತ ಸರಕಾರಿ ಆಸ್ಪತ್ರೆಗಳಲ್ಲಿ ಕೊರೊನಾ ಸೇವೆ ಕಡ್ಡಾಯಗೊಂಡಿರುವ ವೈದ್ಯರು ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಒಂದು ವಾರ ಕೋವಿಡ್‌ ರೋಗಿಗಳಿಗೆ ಚಿಕಿತ್ಸೆ ನೀಡಿದರೆ ಎರಡು ವಾರ ಐಸೋಲೇಶನ್‌ ಆಗಬೇಕಿರುವುದರಿಂದ ವೈದ್ಯರ ಸಂಖ್ಯೆ ಸಹಜವಾಗಿಯೇ ಇಳಿಮುಖವಾಗುತ್ತದೆ. ಅದರಲ್ಲೂ ಕೆಲವು ವೈದ್ಯರಿಗೆ ಸೋಂಕು ತಗುಲಿರುವುದರಿಂದ ಕ್ವಾರಂಟೈನ್‌ ಆಗಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿ ಕೆಲವೇ ಆಸ್ಪತ್ರೆಗಳು ಮಾತ್ರ […]

Read More

ವೈದ್ಯ ಯೋಧರೇ ಜೀವ ಉಳಿಸಿ

– ಸೇನಾನಿಗಳ ಕೈಯಲ್ಲಿದೆ ಕೊರೊನಾ ಮಣಿಸುವ ತಾಕತ್ತು | ಗಡಿ ಮೀರದಂತೆ ತಡೆಯಿರಿ – ಆತಂಕ, ಭಯ, ಬೇಡಿಕೆಗಳನ್ನು ಬದಿಗಿಡಿ | ನಿಮ್ಮನ್ನೇ ನಂಬಿದವರನ್ನು ಮೊದಲು ಕಾಪಾಡಿ. ವಿಕ ಸುದ್ದಿಲೋಕ ಬೆಂಗಳೂರು. ಭಾರತೀಯ ಯೋಧರು ಪಾಕಿಸ್ತಾನ, ಚೀನಾ ಗಡಿಯಲ್ಲಿ ಕೆಚ್ಚೆದೆಯ ಹೋರಾಟದ ಮೂಲಕ ವೈರಿಗಳನ್ನು ಹಿಮ್ಮೆಟ್ಟಿಸಿ ದೇಶದ ಜನರ ಹೃದಯ ಗೆಲ್ಲುತ್ತಿದ್ದಾರೆ. ಇತ್ತ ಕೊರೊನಾ ಎಂಬ ಕಣ್ಣಿಗೆ ಕಾಣದ ವೈರಿಯ ವಿರುದ್ಧ ನಿರ್ಣಾಯಕ ಹೋರಾಟಕ್ಕೆ ನಿಂತ ವೈದ್ಯಲೋಕವನ್ನೂ ಜನ ವೀರ ಯೋಧರಂತೆ ಕಾಣುತ್ತಿದ್ದಾರೆ, ಕೈ ಮುಗಿಯುತ್ತಿದ್ದಾರೆ… ಸರ್ವ […]

Read More

ಮಹಾಗುರುಗಳ ಮನಮುಟ್ಟುವ ಬೋಧನೆಯ ಝಲಕ್‌ಗಳು

– ಡಾ.ಆರತೀ ವಿ.ಬಿ. ಜಗತ್ತಿನ ಎಲ್ಲ ಮಹಾಗುರುಗಳು ಸ್ವಾನುಭವದ ಹಿನ್ನಲೆಯಲ್ಲಿ, ಸರಳ ಸುಭಗ ಶೈಲಿಯಲ್ಲಿ ಉಪದೇಶಗಳನ್ನಿತ್ತಿದ್ದಾರೆ. ಇತ್ತೀಚೆಗಷ್ಟೆ ಆಚರಿಸಿದ ಗುರುಪೂರ್ಣಿಮೆಯ ಹಿನ್ನಲೆಯಲ್ಲಿ ಕೆಲವು ಮಹಾಗುರುಗಳ ಉಪದೇಶದ ಬಿಂದುಗಳನ್ನು ಇಲ್ಲಿ ಆಸ್ವಾದಿಸೋಣ. ಶ್ರೀ ರಾಮಕೃಷ್ಣ ಪರಮಹಂಸರ ಬಳಿಗೆ ಒಬ್ಬಳು ಮಹಿಳೆ ಪುಟ್ಟ ಮಗನನ್ನು ಕರೆತಂದು ವಿನಂತಿಸಿದಳು- ‘‘ಮಹಾಶಯರೇ! ನನ್ನ ಮಗುವಿಗೆ ಕಾಯಿಲೆ. ನಾಟಿ ಚಿಕಿತ್ಸೆ ನಡೆಯುತ್ತಿದೆ. ಸಿಹಿ ತಿನ್ನುವಂತಿಲ್ಲ, ಆದರೆ ಮಗುವು ಸಿಹಿ ಬೇಕು ಎಂದು ಹಟ ಮಾಡುತ್ತಿದೆ. ಮಗುವಿಗೆ ಸ್ವಲ್ಪ ತಿಳಿಹೇಳುವಿರಾ?’’ ರಾಮಕೃಷ್ಣರು ನುಡಿದರು, ‘‘ಮೂರು ದಿನ […]

Read More

ಅಂಚೆ ಮತದಾನ ಜನತಂತ್ರ ವಿರೋಧಿ

– ಕೆ.ದಿವಾಕರ್‌.  ಚುನಾವಣೆಗಳು ಭಾರತದ ಜನತಂತ್ರವನ್ನು ಶಕ್ತಿಶಾಲಿಯಾಗಿ ಇಟ್ಟಿರುವ ಒಂದು ಪ್ರಮುಖ ಪ್ರಕ್ರಿಯೆ. ಒಬ್ಬನಿಗೆ ಒಂದೇ ಓಟು, ಎಲ್ಲರಿಗೂ ಅದರ ಹಕ್ಕು ಎಂಬುದು ಕೂಡಾ ಶಕ್ತಿಶಾಲಿಯಾಗಿರುವ ಆದರ್ಶ. ಎಲ್ಲ ದೋಷಗಳ ನಡುವೆಯೂ ಇದೊಂದು ಜನರ ಕೈಯಲ್ಲಿರುವ ಆಯುಧ. ಜನಸಂಖ್ಯೆಯ ಎಲ್ಲ ಜಾತಿ, ಪಂಥ, ಧರ್ಮ, ವಿದ್ಯಾವಂತರು, ನಿರಕ್ಷರಿಗಳೂ ಒಂದು ಪ್ರಜಾತಂತ್ರದ ಹಬ್ಬದಲ್ಲಿ ಸಂಭ್ರಮದಿಂದ ಭಾಗವಹಿಸುತ್ತಿರುವುದು, ಅವಿದ್ಯಾವಂತರು ಹಾಗೂ ಗ್ರಾಮೀಣ ಪ್ರದೇಶದ ಜನ ನಗರದ ಮತದಾರರಿಗಿಂತ ಹೆಚ್ಚು ಸಂಖ್ಯೆಯಲ್ಲಿ ಮತದಾನದಲ್ಲಿ ಭಾಗವಹಿಸುವ ಪ್ರಕ್ರಿಯೆಗೆ ಭಾರತದಲ್ಲಿ ಬಿಬಿಸಿಯ ಪ್ರತಿನಿಧಿಯಾಗಿದ್ದ ಖ್ಯಾತ […]

Read More

ನೆಹರೂ ಕುಟುಂಬಕ್ಕೆ ಮತ್ತೆ ತನಿಖೆಯ ಸಂಕಟ

ನೆಹರೂ ಕುಟುಂಬದ ಒಡೆತನದಲ್ಲಿರುವ ಮೂರು ಟ್ರಸ್ಟ್‌ಗಳ ಹಣಕಾಸಿನ ವ್ಯವಹಾರದ ಬಗೆಗೆ ತನಿಖೆ ನಡೆಸಲು ಗೃಹ ಇಲಾಖೆ ನಿರ್ದೇಶನ ನೀಡಿದೆ. ಯಾವುವೀ ಟ್ರಸ್ಟ್‌ಗಳು? ಇದರ ಹಿನ್ನೆಲೆಯೇನು? ಯಾರ ತನಿಖೆ? ನೆಹರೂ ಕುಟುಂಬದ ಒಡೆತನದಲ್ಲಿರುವ ಮೂರು ಟ್ರಸ್ಟ್‌ಗಳ ಹಣದ ವ್ಯವಹಾರ- ಅವ್ಯವಹಾರದ ತನಿಖೆ ನಡೆಸಲು ಕೇಂದ್ರ ಗೃಹ ಸಚಿವಾಲಯವು ಅಂತರ್‌-ಸಚಿವಾಲಯ ಸಮಿತಿಯನ್ನು ರಚಿಸಿದೆ. ಹವಾಲಾ ವ್ಯವಹಾರ ತಡೆ ತಡೆ ಕಾಯಿದೆ (ಪಿಎಂಎಲ್‌ಎ), ಆದಾಯ ತೆರಿಗೆ ಕಾಯಿದೆ, ವಿದೇಶಿ ದೇಣಿಗೆ ನಿಯಂತ್ರಣ ಕಾಯಿದೆ (ಎಫ್‌ಸಿಆರ್‌ಎ)ಗಳ ಅಡಿಯಲ್ಲಿ ಕೇಸುಗಳನ್ನು ದಾಖಲಿಸಿಕೊಳ್ಳಲಾಗಿದೆ. ಜಾರಿ ನಿರ್ದೇಶನಾಲಯದ […]

Read More

ಆನ್‌ಲೈನ್‌ ಕ್ಲಾಸ್‌ಗೆ ಸವಾಲುಗಳು : ಉಳ್ಳವರ – ಇಲ್ಲದವರ ಅಂತರ ಹೆಚ್ಚಾಗದಿರಲಿ

ಖಾಸಗಿ ಶಾಲೆಗಳು ಎಲ್‌ಕೆಜಿಯಿಂದ ಹತ್ತನೇ ತರಗತಿಯವರೆಗೆ ಆನ್‌ಲೈನ್‌ ಕ್ಲಾಸ್‌ಗಳನ್ನು ನಡೆಸುವುದಕ್ಕೆ ಸರಕಾರ ವಿಧಿಸಿರುವ ನಿರ್ಬಂಧಕ್ಕೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ. ‘ಇದು ಸಂವಿಧಾನದ 21 ಹಾಗೂ 21ಎ ವಿಧಿಯಯನ್ವಯ ಪ್ರಜೆಗಳಿಗೆ ದತ್ತವಾಗಿರುವ ಬದುಕಿನ ಹಾಗೂ ಶಿಕ್ಷಣದ ಹಕ್ಕನ್ನು ನಿರಾಕರಿಸಿದಂತಾಗಿದೆ’ ಎಂದು ಕೋರ್ಟ್‌ ಅಭಿಪ್ರಾಯಪಟ್ಟಿದೆ. ಇದರಿಂದ, ಆನ್‌ಲೈನ್‌ ಕ್ಲಾಸ್‌ಗಳನ್ನು ನಡೆಸಲು ಮುಂದಾಗಿರುವ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಮುಕ್ತ ರಹದಾರಿ ದೊರೆತಂತಾಗಿದೆ. ಆದರೆ ಈ ಆದೇಶ, ಆನ್‌ಲೈನ್‌ ಶಿಕ್ಷಣದ ಹೆಸರಿನಲ್ಲಿ ಶುಲ್ಕ ವಸೂಲಿ ಮಾಡಲು ಅಥವಾ ಆನ್‌ಲೈನ್‌ ಕ್ಲಾಸುಗಳನ್ನು ಕಡ್ಡಾಯ ಮಾಡಲು […]

Read More

ಗಾಳಿಯಲ್ಲಿ ಕೋವಿಡ್‌ ವೈರಸ್‌ ಪಸರಿಸುವ ಸಾಧ್ಯತೆ ಕಡಿಮೆ

-ಸುಧೀಂದ್ರ ಹಾಲ್ದೊಡ್ಡೇರಿ.  ಕೊರೊನಾ ವೈರಸ್‌ ಗಾಳಿಯಿಂದಲೂ ಹರಡಬಹುದೆಂಬ ಮುನ್ನೆಚ್ಚರಿಕೆಯನ್ನು ನೂರಾರು ವಿಜ್ಞಾನಿಗಳು ವಿಶ್ವ ಸ್ವಾಸ್ಥ್ಯ ಸಂಸ್ಥೆಗೆ ನೀಡಿದ್ದಾರೆಂಬ ಸುದ್ದಿ ಎಲ್ಲೆಡೆ ಹರಡುತ್ತಿದೆ. ಈ ಬಗ್ಗೆ ನಾವು ತೀರಾ ಭಯಭೀತರಾಗಬೇಕಿಲ್ಲ. ಆ ಹೇಳಿಕೆಯೇ ನಿಜವಾಗಿದ್ದಲ್ಲಿ, ಇಷ್ಟು ಹೊತ್ತಿಗೆ ಈ ಜಗತ್ತಿನ ಮುಕ್ಕಾಲು ಮಂದಿ ಕೋವಿಡ್‌-19 ಸೋಂಕಿತರಾಗುತ್ತಿದ್ದರು. ಕೋಟಿಗಟ್ಟಲೆ ಜನ ಸಾವಿಗೀಡಾಗುತ್ತಿದ್ದರು. ಹಾಗಿದ್ದರೆ, ಈ ಸುದ್ದಿಯ ಹಿನ್ನೆಲೆಯೇನು? ವಿದ್ವಜ್ಜನರು ವೈರಸ್‌ ಸೋಂಕಿತರ ಉಗುಳು, ಸಿಂಬಳದ ಹನಿಗಳ ಸಿಂಚನ ನಮಗೆ ತಾಕಿದರೆ, ಅದರಲ್ಲಿರಬಹುದಾದ ವೈರಸ್‌ಗಳು ನಮ್ಮ ಮೂಗು, ಬಾಯಿ, ಕಣ್ಣುಗಳ ಮೂಲಕ […]

Read More

ಮುಕ್ತಿ ದೊರಕಿಸುವುದಕ್ಕೂ ವಾರಿಯರ್ಸ್

– ಕೋವಿಡ್‌ಗೆ ಬಲಿಯಾದವರ ಅಂತ್ಯಕ್ರಿಯೆಗೆ ಕೊಡಗಿನಲ್ಲಿ ಸ್ವಯಂಸೇವಕರ ಟೀಮ್ ರೆಡಿ  – ಕೊಡಗು ಜಿಲ್ಲಾಡಳಿತದಿಂದ ತರಬೇತಿ.    ಸುನಿಲ್ ಪೊನ್ನೇಟಿ, ಮಡಿಕೇರಿ. ಕೊರೊನಾ ಶಂಕೆ ಕಂಡುಬಂದರೂ ಸಾಕು ಅಂತಹವರನ್ನು ಅಸ್ಪೃಶ್ಯರಂತೆ ನೋಡಲಾಗುತ್ತದೆ. ಸೋಂಕಿನಿಂದ ಮೃತಪಟ್ಟರಂತೂ ಸಂಬಂಧಿಗಳೇ ಅಂತ್ಯಸಂಸ್ಕಾರದಿಂದ ದೂರ ಸರಿಯುವ ಸುದ್ದಿಗಳು ಸಾಮಾನ್ಯವಾಗಿದೆ.  ಇಂಥ  ಪರಿಸ್ಥಿತಿಯಲ್ಲಿ ಕೊರೊನಾದಿಂದ ಮೃತಪಟ್ಟವರಿಗೆ ಗೌರವಯುತವಾಗಿ ಮೋಕ್ಷ  ಕೊಡಲು ಸ್ವಯಂ ಸೇವಕರ ತಂಡಗಳು ಜಿಲ್ಲೆಯಲ್ಲಿ ಸಿದ್ಧವಾಗಿದೆ. ಇವರಿಗೆ ಜಿಲ್ಲಾಡಳಿತವೇ ತರಬೇತಿ ನೀಡಿದೆ. ಶನಿವಾರ ಮಡಿಕೇರಿ ಕೋವಿಡ್ ಆಸ್ಪತ್ರೆಯಲ್ಲಿ ಮೃತಪಟ್ಟ ಕುಶಾಲನಗರದ ದಂಡಿನಪೇಟೆಯ 58 ವರ್ಷದ […]

Read More

ಭಾರತದಿಂದಲೇ ಬರಲಿದೆಯಾ ಮೊದಲ ಕೊರೊನಾ ಲಸಿಕೆ?

ಕಳೆದ ಕೆಲವು ದಿನಗಳಿಂದ ಭಾರತದಲ್ಲಿ ಕೋವಿಡ್‌ ವೈರಸ್‌ ತಡೆಗಟ್ಟುವ ಲಸಿಕೆ ಪಡೆಯಲು ಎರಡು ಪ್ರಯೋಗಾಲಯ ಪ್ರಯತ್ನಗಳು ಆರಂಭವಾಗಿವೆ. ಈ ಎರಡೂ ಪ್ರಯತ್ನಗಳು ಈಗ ಯಾವ ಹಂತದಲ್ಲಿವೆ? ಭಾರತದಲ್ಲಿ ಈ ಹಿಂದೆಯೂ ಲಸಿಕೆಗಳನ್ನು ಸಿದ್ಧಪಡಿಸಲಾಗಿತ್ತೆ? ಇತ್ಯಾದಿ ವಿವರ ಇಲ್ಲಿವೆ. ಆಗಸ್ಟ್‌ 15ರ ಒಳಗೆ ಭಾರತದಲ್ಲಿ ಕೋವಿಡ್‌ಗೆ ಪರಿಣಾಮಕಾರಿ ಲಸಿಕೆ ಸಿದ್ಧವಾಗಲಿದೆ ಎಂಬುದು ಬಿಸಿಬಿಸಿ ಚರ್ಚೆಯ ವಿಷಯ. ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಿ ಅದನ್ನು ಕೆಂಪು ಕೋಟೆಯ ಮೇಲಿನಿಂಧ ಘೋಷಿಸುವಂತೆ ಆಗಬೇಕು ಎಂಬುದು ಭಾರತೀಯ ವೈದ್ಯಕೀಯ ಸಂಶೋಧನ ಮಂಡಳಿ (ಐಸಿಎಂಆರ್‌)ಯ ಕನಸು. […]

Read More

ಮಾನವೀಯ ಅಂತ್ಯಸಂಸ್ಕಾರದ ಅಗತ್ಯ – ಕೋವಿಡ್‌ ಮೃತರನ್ನು ಗೌರವದಿಂದ ಕಳಿಸಿಕೊಡೋಣ

ಕೊರೊನಾದಿಂದ ಮೃತಪಟ್ಟವರ ಅಂತ್ಯಸಂಸ್ಕಾರದ ಪರಿಸ್ಥಿತಿ ಗೋಜಲಾಗಿದೆ. ಕೆಲವು ಕಡೆ ಶವಸಂಸ್ಕಾರಕ್ಕೆ ಅಡ್ಡಿಪಡಿಸಲಾಗುತ್ತಿದೆ. ಕೆಲವು ಕಡೆ ಅಮಾನವೀಯವಾಗಿ ನಾಲ್ಕಾರು ಹೆಣಗಳನ್ನು ಒಟ್ಟಿಗೇ ಗುಂಡಿಗೆಸೆದಿರುವುದು ವಿಡಿಯೋ ಚಿತ್ರೀಕೃತಗೊಂಡು ವೈರಲ್‌ ಆದ ಬಳಿಕ, ಜನರಲ್ಲಿ ಭೀತಿಯೂ ತಲೆದೋರಿದೆ. ಕೋವಿಡ್‌ ಪೀಡಿತರನ್ನು ದೂರವಿಟ್ಟು ನಡೆಸಿಕೊಳ್ಳುವುದು ಸಹಜ, ಯಾಕೆಂದರೆ ಸೋಂಕು ಹರಡುವ ಭಯವಿದೆ. ಆದರೆ ಶವಸಂಸ್ಕಾರ ಕನಿಷ್ಠ ಗೌರವಯುತವಾಗಿ ನಡೆಸಬೇಕು ಎಂಬುದು ಮಾನವೀಯ ಸಮಾಜದಲ್ಲಿ ನಂಬಿಕೆಯಿಟ್ಟಿರುವ ಎಲ್ಲರ ಕಳಕಳಿ. ಸತ್ತವರನ್ನು ಸರಿಯಾಗಿ ಕಳಿಸಿಕೊಡಲಿಲ್ಲವಲ್ಲ ಎಂಬುದು ಬಂಧುಗಳಿಗೆ ನಿರಂತರ ಶೋಕವಾಗಬಾರದು. ಕೋವಿಡ್‌ನಿಂದ ಮೃತರಾದವರನ್ನು ಮಣ್ಣು ಮಾಡುತ್ತಿರುವ […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top