– ಎಚ್ ಎಸ್. ಶಿವಪ್ರಕಾಶ್. ಯೋಗದಲ್ಲಿ ಪಂಚಭೂತಗಳ ಮಹತ್ವಪೂರ್ಣತೆ ಅಪಾರವಾದುದು. ಕುಂಡಲಿನಿ ಯೋಗ, ಸ್ವರ ಯೋಗ, ಭೂತ ಶುಧ್ಧಿಯೋಗ ಇತ್ಯಾದಿಗಳಿಗೆ ಪೃಥಿವ್ಯಾದಿ ಪಂಚಭೂತಗಳೇ ಬುನಾದಿ. ಯೋಗಾಸನಗಳ ಆಚರಣೆಯೂ ಶರೀರರದ ಹಲವು ಅಂಗಗಳ ಮೇಲೆ ಒತ್ತಡ ಹಾಕಿ ಸಂಬಂಧಿತ ಚಕ್ರಗಳಿಗೆ ಹೊಂದಿಕೊಂಡ ಭೂತತತ್ತ್ವಗಳನ್ನು ಪ್ರಭಾವಿಸುತ್ತದೆ. ಪ್ರಾಣಾಯಾಮ ಮುಂತಾದ ಕ್ರಿಯೆಗಳು ಮುದ್ರಾಬಂಧಗಳ ಜೊತೆಗೆ ಆಚರಣೆಯಾಗುವುದರಿಂದ ಅವುಗಳಲ್ಲೂ ಪಂಚಭೂತಗಳ ಭೂಮಿಕೆಯಿದೆ. ಶರೀರ ಯೋಗದ ಬಹುಮಟ್ಟಿಗೆ ಉದಾಸೀನಕ್ಕೆ ಒಳಗಾಗಿರುವ ಮುದ್ರಾಯೋಗದ ಚೌಕಟ್ಟಿನಲ್ಲಿ ಪಂಚತತ್ತ್ವಗಳನ್ನು ಅರ್ಥ ಮಾಡಿಕೊಳ್ಳೋಣ. ಹೇಗೆ ಶರೀರದ ಬೇರೆ ಬೇರೆ ಭಾಗಗಳು […]
Read More
– ಅರುಣ್ ಪದಕಿ. ಕಳೆದ ಹಲವು ದಶಕಗಳಿಂದ ಉತ್ತಮ ಆದಾಯ ಗಳಿಸುವ ಉದ್ಯೋಗಗಳು, ಉದ್ಯಮಗಳು, ಕೃಷಿ ಆದಾಯ, ವೈದ್ಯಕೀಯ ಮತ್ತು ಶಿಕ್ಷಣ ಸೌಲಭ್ಯಗಳ ಕೊರತೆಗೆ ನಾವು ಸಾಕ್ಷಿಯಾಗುತ್ತಿದ್ದೇವೆ. ಇದು ಹೆಚ್ಚಿನ ಗ್ರಾಮೀಣ ಜನರು ನಗರಗಳಿಗೆ ವಲಸೆ ಹೋಗಲು ಕಾರಣವಾಗಿದೆ. ಏಕೆಂದರೆ ಜೀವನೋಪಾಯಗಳು, ಉದ್ಯೋಗಗಳು ಮತ್ತು ವೃತ್ತಿಜೀವನಗಳು ನಗರದಲ್ಲಿ ಹೆಚ್ಚು ಮತ್ತು ಸುಲಭ. ಸಣ್ಣ ಪಟ್ಟಣಗಳು ಮತ್ತು ಹಳ್ಳಿಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಬಗ್ಗೆ ಅಸಡ್ಡೆ ಇದೆ. ಕೆಲವೆಡೆ ಅಭಿವೃದ್ಧಿ ವೇಗವನ್ನು ಉಳಿಸಿಕೊಳ್ಳಲು ವಿಫಲವಾಗಿದೆ. ಈ ಆಕಾಂಕ್ಷೆಗಳು ಮೆಗಾಸಿಟಿಗಳನ್ನು […]
Read More
ನೂತನ ಶಿಕ್ಷಣ ನೀತಿಗೂ ಭಾರತೀಯ ಪರಂಪರೆಯ ಶಿಕ್ಷಣಕ್ಕೂ ಸಂಬಂಧ ಇದೆಯಾ? ಸನಾತನ ವಿದ್ಯಾಭ್ಯಾಸ ಪದ್ಧತಿಯನ್ನು ಲಕ್ಷ್ಯದಲ್ಲಿಟ್ಟುಕೊಂಡು ಹೊಸ ನೀತಿಯನ್ನು ಸಿದ್ಧಪಡಿಸಲಾಗಿದೆ ಎಂದು ಕೆಲವರು ತಜ್ಞರು ಹೇಳುತ್ತಿದ್ದಾರೆ. ಅದು ಹೇಗೆ? ಮಾಳವೀಯರ ತತ್ವ ಸಿದ್ಧಾಂತ ನೂತನ ಶಿಕ್ಷಣ ನೀತಿಯನ್ನು ಭಾರತದ ದೊಡ್ಡ ಪಂಡಿತ, ಮದನ ಮೋಹನ ಮಾಳವೀಯರ ತತ್ವ ಸಿದ್ಧಾಂತದಂತೆ ವೈದಿಕ ಜ್ಞಾನ ಹಾಗೂ ವಿಜ್ಞಾನಗಳೆರಡನ್ನೂ ಮನದಲ್ಲಿಟ್ಟುಕೊಂಡು ರೂಪಿಸಲಾಗಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಕ್ರಿಯಾಲ್ ಅವರು ಹಿಂದೆಯೇ ಹೇಳಿದ್ದರು. ಮಾಳವೀಯರು ಭಾರತೀಯ ಶಿಕ್ಷಣತಜ್ಞ, […]
Read More
ಕಾರವಾರದಲ್ಲಿ ವೃದ್ಧರೊಬ್ಬರು ಹೃದಯಾಘಾತದಿಂದ ಆಸ್ಪತ್ರೆಗೆ ತೆರಳಿದಾಗ, ಕೋವಿಡ್ ಟೆಸ್ಟ್ನ ನೆಪ ಒಡ್ಡಿ ಚಿಕಿತ್ಸೆ ನಿರಾಕರಿಸಿದ, ಆಸ್ಪತ್ರೆಗಳಿಗೆ ಅಲೆದಾಡಿದ ಹಾಗೂ ಅವರು ಇದರಿಂದಾಗಿ ಉಂಟಾದ ವಿಳಂಬದಿಂದ ಮೃತಪಟ್ಟ ಘಟನೆ ವರದಿಯಾಗಿದೆ. ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ಇಂಥ ಹಲವಾರು ಘಟನೆಗಳು ನಡೆದಿದ್ದವು. ಹೆಚ್ಚಾಗಿ ಖಾಸಗಿ ಅಸ್ಪತ್ರೆಗಳವರು, ಗಂಭೀರ ಆರೋಗ್ಯ ಸ್ಥಿತಿಯಿಟ್ಟುಕೊಂಡು ಬರುತ್ತಿದ್ದ ರೋಗಿಗಳನ್ನು ಕೋವಿಡ್ ಟೆಸ್ಟ್ ಮಾಡಿಸಿಕೊಂಡು ಬನ್ನಿ ಎಂಬ ನೆಪ ನೀಡಿ ಮರಳಿ ಕಳುಹಿಸುತ್ತಿದ್ದರು ಹಾಗೂ ಅಂಥ ರೋಗಿಗಳು ದಾರಿಮಧ್ಯೆ ಅಸುನೀಗಿದ ಪ್ರಕರಣಗಳು ನಡೆದಿದ್ದವು. ಇದನ್ನು ಅನುಸರಿಸಿ […]
Read More
ಆಟೊಮೊಬೈಲ್ ಮಾರುಕಟ್ಟೆಯಲ್ಲಿ ಭರವಸೆ | ಜುಲೈನಲ್ಲಿ ಸೇಲ್ಸ್ ಸುಧಾರಣೆ. ಎಕನಾಮಿಕ್ ಟೈಮ್ಸ್ ಮುಂಬಯಿ. ಕೆಲವು ಕಂಪನಿಗಳ ಪ್ಯಾಸೆಂಜರ್ ವಾಹನಗಳ ಮಾರಾಟ ಜೂನ್ಗೆ ಹೋಲಿಸಿದರೆ, ಜುಲೈನಲ್ಲಿ ದ್ವಿಗುಣಗೊಂಡಿದೆ. ಕೋವಿಡ್ ಪೂರ್ವ ದಿನಗಳ ಮಟ್ಟಕ್ಕೆ ಮಾರಾಟ ತಲುಪಿದೆ. ಸಣ್ಣ ಕಾರುಗಳು, ಸೆಡಾನ್ ಮತ್ತು ಎಸ್ಯುವಿಗಳ ಮಾರಾಟ ಸುಧಾರಿಸುತ್ತಿದ್ದು, ಆರ್ಥಿಕತೆ ಚೇತರಿಕೆಗೆ ಈ ಅಂಶವು ಸೂಚಕದಂತಿದೆ. ಇತ್ತ, ಟ್ರ್ಯಾಕ್ಟರ್ಗಳ ಮಾರಾಟ ಜುಲೈನಲ್ಲಿ ಏರಿಕೆಯಾಗಿದೆ. ಮಹೀಂದ್ರಾ ಕಂಪನಿಯ ಟ್ರ್ಯಾಕ್ಟರ್ಗಳ ಮಾರಾಟವು ಜುಲೈನಲ್ಲಿ ಶೇ.28ರಷ್ಟು ಏರಿಕೆಯಾಗಿದೆ. ಉದ್ಯಮದ ಅಂದಾಜುಗಳ ಪ್ರಕಾರ, 1,97,523 ಪ್ಯಾಸೆಂಜರ್ ವಾಹನಗಳು […]
Read More
ಕೊರೊನಾದಿಂದಾಗಿ ಊರಲ್ಲೇ ಇದ್ದಾರೆ ಸೋದರರು | ಅಂಚೆಯಣ್ಣನಿಗೆ ಕೆಲಸ ಕಡಿಮೆ. ಬೆಳಗಾವಿ: ರಕ್ಷಾ ಬಂಧನ ಮಾರಾಟ ನಡೆದರೂ ಯಾರೂ ಪಾರ್ಸೆಲ್ ರವಾನೆ ಮಾಡುತ್ತಿಲ್ಲ. ಎಲ್ಲರೂ ಮನೆಯಲ್ಲೇ ಇಟ್ಟುಕೊಂಡಿದ್ದಾರೆ. ಹೀಗಾಗಿ ಈ ಸಲ ಕೊರಿಯರ್, ಅಂಚೆಯಣ್ಣನಿಗೆ ಕೆಲಸ ಕಡಿಮೆ!! ಉದ್ಯೋಗದ ಕಾರಣ ಎಷ್ಟೋ ಸಹೋದರ, ಸಹೋದರಿಯರಿಗೆ ಹಬ್ಬಕ್ಕೆ ಊರಿಗೆ ಹೋಗಲು ಆಗುತ್ತಿರಲಿಲ್ಲ. ಹಾಗಾಗಿ ಅಂಚೆಯೇ ಮಾಧ್ಯಮವಾಗಿತ್ತು. ಕೆಲವರಿಗೆ ಹಬ್ಬ ಕಳೆದು ವಾರದ ನಂತರ ರಾಖಿ ತಲುಪುತ್ತಿತ್ತು. ಅದರೆ ಈ ಸಲ ಕೊರೊನಾ ಕಾರಣಕ್ಕೆ ಹೆಚ್ಚಿನ ಅಣ್ಣ- ತಂಗಿ, ಅಕ್ಕ- […]
Read More
ರಾತ್ರಿ 8ರಿಂದ ಬೆಳಗ್ಗೆ 4ರವರೆಗೆ ನಿದ್ದೆಗೆ ಅವಕಾಶ * ರಾತ್ರಿ ಟಿವಿ ಇರಬಾರದು * ಪುತ್ತಿಗೆ ಶ್ರೀ ಸಲಹೆ. ವಿಕ ಸುದ್ದಿಲೋಕ ಉಡುಪಿ. ಮನುಷ್ಯನ ಪ್ರತಿರೋಧ ಶಕ್ತಿ ವೃದ್ಧಿಗೆ ಪೂರಕವಾಗುವ ನಿಟ್ಟಿನಲ್ಲಿ ರಾತ್ರಿ 8ರಿಂದ ಬೆಳಗ್ಗೆ 4ರ ತನಕ ರಾಷ್ಟ್ರೀಯ ವಿಶ್ರಾಂತಿ ಸಮಯವೆಂದು ಘೋಷಿಸಲು ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥರು ಸಲಹೆ ನೀಡಿದ್ದಾರೆ. ಸೋಂಕಿನಿಂದ ಗುಣಮುಖರಾದ ಅವರು ಪ್ರಕಟಣೆಯಲ್ಲಿ ಸಂದೇಶ ನೀಡಿದ್ದು ಈ ಬಗ್ಗೆ ಪ್ರಧಾನಿ ಮೋದಿಗೆ ಮನವಿ ಮಾಡಿದ್ದಾರೆ. ಆರೋಗ್ಯ ವ್ಯವಸ್ಥೆಯನ್ನು ಪುನರ್ ನವೀಕರಿಸುವ ಯೋಗ, ಪ್ರಾಣಾಯಾಮ, […]
Read More
ಕೊರೊನಾ ಭಯಕ್ಕೆ ಕೈ ಹಿಡಿದು ನಡೆಸೋರಿಲ್ಲ, ಬಸ್ ಹತ್ತಿಸುವುದಕ್ಕೂ ಹಿಂಜರಿಯುತ್ತಿರುವ ಜನರು. ಗಿರೀಶ ಎಸ್. ಕಲ್ಗುಡಿ ತುಮಕೂರು. ಯಾರನ್ನೂ ಸ್ಪರ್ಶಿಸಬಾರದು, ಸಾಮಾಜಿಕ ಅಂತರ ಕಾಯಬೇಕೆಂಬ ಕೊರೊನಾ ನಿಯಮಾವಳಿ ವಿಶೇಷಚೇತನರ ಜೀವನವನ್ನು ಇನ್ನಷ್ಟು ಹದಗೆಡಿಸಿದೆ. ಹೀಗಾಗಿ ರಸ್ತೆ ದಾಟಲು ಸಹಾಯ ಮಾಡೋರಿಲ್ಲ, ಕೈ ಹಿಡಿದು ಬಸ್ ಹತ್ತಿಸೋರಿಲ್ಲ, ಕಚೇರಿಗಳಲ್ಲಿ ನೆರವು ನೀಡೋರಿಲ್ಲದೆ ಅವರು ತೊಂದರೆ ಅನುಭವಿಸುತ್ತಿದ್ದಾರೆ. ಹೆಚ್ಚಿನವರಿಗೆ ಸಹಾಯ ಮಾಡುವ ಮನಸ್ಸಿದ್ದರೂ ಕೊರೊನಾ ಭಯ, ಸಾಮಾಜಿಕ ಕಿರಿಕಿರಿಗಳು ಅವರನ್ನು ಹತ್ತಿರ ಬರದಂತೆ ಮಾಡಿ, ಮನದಲ್ಲೇ ಮರುಗುವಂತೆ ಮಾಡಿದೆ. ರಾಜ್ಯದಲ್ಲಿ […]
Read More
-ಇನ್ನೂ ಸುಧಾರಣೆ ಕಾಣದ ಕರ್ನಾಟಕ ಲೋಕಸೇವಾ ಆಯೋಗ -ನಿರಂತರ ವಿವಾದ, ಅಕ್ರಮದ ಕಾರಣ ನೇಮಕಾತಿ ನಡೆಯದ ಸ್ಥಿತಿ. ಶ್ರೀಕಾಂತ್ ಹುಣಸವಾಡಿ, ಬೆಂಗಳೂರು. ದಕ್ಷತೆ ಹಾಗೂ ಜೇಷ್ಠತೆ ಆಧರಿಸಿ ಪಾರದರ್ಶಕವಾಗಿ ನೇಮಕಾತಿ ಮಾಡಬೇಕಿದ್ದ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ಅಕ್ರಮಗಳ ಕೂಪದೊಳಗೆ ಸಿಲುಕಿ ಉದ್ಯೋಗಾಕಾಂಕ್ಷಿಗಳ ಪಾಲಿಗೆ ಕಂಟಕವಾಗಿದೆ. ಹಾಗಾಗಿ, ರಾಜ್ಯದಲ್ಲಿ ಸಾವಿರಾರು ಸರಕಾರಿ ಹುದ್ದೆಗಳು ಖಾಲಿ ಇದ್ದರೂ ಅವುಗಳನ್ನು ನಿಷ್ಪಕ್ಷಪಾತವಾಗಿ ಭರ್ತಿ ಮಾಡುವಂತಹ ದಕ್ಷ ಸಂಸ್ಥೆ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಆಯೋಗಕ್ಕೆ ‘ಅಕ್ರಮಗಳ ಕೂಪ’ವೆಂಬ ಹಣೆಪಟ್ಟಿ […]
Read More
– ಹರೀಶ್ ಕೇರ. ರಾವಣನಿಂದ ಅಪಹೃತಗೊಂಡ ಸೀತೆಯ ಶೋಧಕ್ಕಾಗಿ ಹನುಮಂತ ಸಮುದ್ರವನ್ನೇ ಹಾರುತ್ತಾನೆ. ಅಲ್ಲಿ ಸೀತೆಯನ್ನು ಕಂಡು, ಆಕೆಯಿಂದ ಚೂಡಾಮಣಿಯನ್ನು ಪಡೆದು, ಮರಳಿ ಸಮುದ್ರದ ಮೇಲೆ ಹಾರಿ ಬರುತ್ತಿರುವಾಗ ಚೂಡಾಮಣಿ ಕೈಜಾರಿ ಸಮುದ್ರದೊಳಗೆ ಬಿತ್ತು. ಕೂಡಲೇ ಆಂಜನೇಯ ಸಮುದ್ರಕ್ಕೆ ಧುಮುಕಿ, ಉಂಗುರವನ್ನು ಹುಡುಕುತ್ತ ನೇರವಾಗಿ ಪಾತಾಳಕ್ಕೆ ಹೋದ. ಅಲ್ಲಿ ಬಲಿ ಚಕ್ರವರ್ತಿಯಿದ್ದ. ಅವನ ಬಳಿ ಹೋಗಿ ಮಾರುತಿ, ಚೂಡಾಮಣಿಯ ಬಗ್ಗೆ ಕೇಳಿದ. ಬಲಿಯೇಂದ್ರ ನೂರಾರು ಚೂಡಾಮಣಿಗಳಿದ್ದ ತಟ್ಟೆಯೊಂದನ್ನು ಹನುಮನ ಮುಂದಿರಿಸಿ, ‘‘ಇದರಲ್ಲಿ ನಿನ್ನ ಚೂಡಾಮಣಿ ಯಾವುದು ತೆಗೆದುಕೋ,’’ […]
Read More