ಬಿತ್ತಿದಂತೆಯೇ ವೃಕ್ಷ ಎಂಬುದು ರಾಜಕೀಯಕ್ಕೂ ಅನ್ವಯ

ಸಾಮಾಜಿಕ ಬದಲಾವಣೆಗಾಗಿ ಹೋರಾಟ ಮಾಡುವ ರೀತಿ ಹೇಗೆಂದು ದಕ್ಷಿಣ ಆಫ್ರಿಕಾದಲ್ಲಿ ಗಾಂಧೀಜಿ ಕಲಿತರು. ಅದು ಅವರ ಪಾಲಿಗೆ ಒಂದು ರೀತಿಯಲ್ಲಿ ಪ್ರಯೋಗಶಾಲೆಯಂತಿತ್ತು. ಅಲ್ಲಿಂದ ಭಾರತಕ್ಕೆ ಬಂದಾಗ, ದಕ್ಷಿಣ ಆಫ್ರಿಕಾದಲ್ಲಿ ಕಲಿತ ಅನುಭವವನ್ನು ಪರಿಸ್ಥಿತಿಗೆ ಅನುಗುಣವಾಗಿ ಅಳವಡಿಸುವುದೊಂದೇ ಬಾಕಿ ಉಳಿದಿತ್ತು. ಅದಕ್ಕಾಗಿ ವಿವಿಧ ಸಂಘಟನೆ, ಸಂಸ್ಥೆಗಳಲ್ಲಿ ಸಂಚರಿಸಿದ ಗಾಂಧೀಜಿ, ಕೊನೆಗೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಲ್ಲಿ ತಮ್ಮ ಹುಡುಕಾಟ ಕೊನೆಗೊಳಿಸಿದರು. ಏಕೆಂದರೆ ರಾಜಕೀಯ ಎಂದರೆ ತಕ್ಷಣಕ್ಕೆ ಬೇಕಾದ ಅಧಿಕಾರದ ಪ್ರಾಪ್ತಿ ಎಂಬುದನ್ನು ಗಾಂಧೀಜಿ ಸುತಾರಾಂ ಒಪ್ಪುತ್ತಿರಲಿಲ್ಲ. ಅವರ ಅಭಿಪ್ರಾಯದಲ್ಲಿ […]

Read More

ಮೊದಲು ಕನ್ನಡಿಗನೋ, ಭಾರತೀಯನೋ?

ಕರ್ನಾಟಕ ಮಾತೆ ಭಾರತ ಜನನಿಯ ತನುಜಾತೆ ಎಂದ ಕುವೆಂಪು ಅವರನ್ನು ನೆನಪಿಸಿಕೊಳ್ಳೋಣ. -ಡಾ. ರೋಹಿಣಾಕ್ಷ ಶಿರ್ಲಾಲು. ಮೇಲ್ಸೇತುವೆಯೊಂದಕ್ಕೆ ಸ್ವಾತಂತ್ರ್ಯವೀರ ಸಾವರ್ಕರ್ ಹೆಸರು ಪ್ರಸ್ತಾಪಗೊಂಡಾಗ ಅವರು ಕನ್ನಡಿಗರಲ್ಲ, ಕರ್ನಾಟಕದೊಳಗೆ ಕನ್ನಡಿಗರ ಹೆಸರನ್ನೇ ಇಡಬೇಕು ಎಂದು ಆರಂಭಗೊಂಡ ವಾದ ‘ಮೊದಲು ನಾನು ಕನ್ನಡಿಗ, ನಂತರ ಭಾರತೀಯ, ಕರ್ನಾಟಕದಿಂದ ಭಾರತ’ ಎನ್ನುವ ಮಾತುಗಳಾಗಿ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ. ತಮ್ಮನ್ನು ತಾವು ಕನ್ನಡಪರ ಹೋರಾಟಗಾರರೆಂದು ಕರೆದುಕೊಳ್ಳುವ ಕೆಲವರು ತಮ್ಮ ಕನ್ನಡ ಹೋರಾಟದ ಮುಖವಾಣಿಯಂತೆ ಈ ಮಾತುಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಹಾಗಾದರೆ ಕನ್ನಡದ […]

Read More

ಗ್ರಾಮೀಣ ಆರ್ಥಿಕತೆ ಮೇಲೆತ್ತಿದ ಕ್ಷೀರ ಕ್ರಾಂತಿ

ಬಡತನದಿಂದ ಬಳಲುತ್ತಿದ್ದ ಭಾರತದ ಗ್ರಾಮೀಣ ಜನತೆ ತುಸುವಾದರೂ ಹಣದ ಮುಖ ನೋಡಲು ಸಾಧ್ಯವಾದದ್ದು ಕ್ಷೀರ ಕ್ರಾಂತಿಯಿಂದ. ಮಹಿಳೆಯರು ಸ್ವಾವಲಂಬಿಗಳಾಗಲು, ಮಕ್ಕಳು ಪೌಷ್ಟಿಕ ಆಹಾರ ಪಡೆಯಲು ಕಾರಣವಾದ ಈ ಕ್ಷೀರ ಕ್ರಾಂತಿ, ಹಸಿರು ಕ್ರಾಂತಿಯ ಜೊತೆಗೇ ಉಲ್ಲೇಖಿಸಬೇಕಾದ್ದು. 1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ದೊರೆತಾಗ, ನಮ್ಮ ಜನತೆಗೆ ಅಗತ್ಯವಾದಷ್ಟು ಆಹಾರಧಾನ್ಯ ಬೆಳೆಯುತ್ತಿರಲಿಲ್ಲ. ಇದನ್ನು ನಿವಾರಿಸಲು ಬೃಹತ್‌ ಕೃಷಿಕ್ಷೇತ್ರಗಳ ಬಳಕೆ, ಆಧುನಿಕ ಯಂತ್ರೋಪಕರಣಗಳು, ರಸಗೊಬ್ಬರಗಳು, ಹೈಬ್ರಿಡ್‌ ತಳಿಗಳು ಇತ್ಯಾದಿಗಳನ್ನು ಬಳಸಿ ‘ಹಸಿರು ಕ್ರಾಂತಿ’ ನಡೆಸಲಾಯಿತು. 60ರ ದಶಕದಲ್ಲಿ ಇದಕ್ಕೆ ವೇಗ ದೊರೆಯಿತು. […]

Read More

ಕರುನಾಡ ಕಟ್ಟೋಣ… ಜೊತೆಯಾಗಿ ಮುನ್ನಡೆಯೋಣ ಬನ್ನಿ – ಕೊರೊನೋತ್ತರ ಕರ್ನಾಟಕದ ಪುನಃಶ್ಚೇತನಕ್ಕೆ ವಿಕ ಅಭಿಯಾನ -ಸ್ವಾವಲಂಬೀ ಕರ್ನಾಟಕ ನಿರ್ಮಾಣಕ್ಕೆ ಒಂದು ಹೆಜ್ಜೆ

ಕೊರೊನಾ ಇಡೀ ಜಗತ್ತನ್ನೇ ಕಾಡಿದ ಸಂಕಷ್ಟ. ಇದರ ಹೊಡೆತಕ್ಕೆ ವಿಶ್ವದ ಬಲಾಢ್ಯ ದೇಶಗಳೇ ನಲುಗಿವೆ. ಆರ್ಥಿಕ ಪ್ರಬಲ ರಾಷ್ಟ್ರಗಳೇ ಭವಿಷ್ಯದ ಆತಂಕಕ್ಕೆ ಸಿಲುಕಿವೆ. ಅದೇ ವೇಳೆ ಭಾರತ ಕೊರೊನಾ ಸವಾಲನ್ನು ಎದುರಿಸಿದ ರೀತಿಗೆ ಜಗತ್ತಿನ ಮೆಚ್ಚುಗೆ ಸಿಕ್ಕಿದೆ. ಭಾರತದೊಳಗಿನ ರಾಜ್ಯಗಳಿಗೆ ಸಂಬಂಧಿಸಿ ಹೇಳುವುದಾದರೆ ಕರ್ನಾಟಕವು ಕೊರೊನಾ ವಿರುದ್ಧ ಯಶಸ್ವಿಯಾಗಿ ಸೆಣಸಿದ ರಾಜ್ಯಗಳ ಪೈಕಿ ಎರಡನೇ ಸ್ಥಾನದಲ್ಲಿದೆ. ಕೊರೊನಾವನ್ನು ನಾವು ಸಂಘಟಿತವಾಗಿ, ಸಮರ್ಥವಾಗಿ ಎದುರಿಸಿದ್ದನ್ನು ಎಲ್ಲರೂ ಮನಗಾಣಬೇಕಿರುವ ಸತ್ಯ. ಈ ವಿಚಾರದಲ್ಲಿ ದೇಶ ಮತ್ತು ರಾಜ್ಯದ ಯಶಸ್ವಿ ನಾಯಕತ್ವಕ್ಕೆ, […]

Read More

ಕೊರೊನಾ ಕಾಲದಲ್ಲಿ ಆತ್ಮನಿರ್ಭರತೆ ಮತ್ತು ಉದಾರೀಕರಣ 2.0!

– ಎನ್‌.ರವಿಶಂಕರ್.  ‌ ಜೀವವಿಕಸನ ಕ್ರಿಯೆಯ ತತ್ವವನ್ನು ಜಗತ್ತಿಗೆ ಹೇಳಿಕೊಟ್ಟ ಪಿತಾಮಹ ಚಾರ್ಲ್ಸ್ ಡಾರ್ವಿನ್‌ರ ಮಾತುಗಳು- “It is not the strongest of the species that survives, nor the most intelligent; it is the one most adaptable to change.” ‘‘ಬದುಕುಳಿಯುವುದು ಅತ್ಯಂತ ಬಲಿಷ್ಠ ಪ್ರಾಣಿಯೂ ಅಲ್ಲ, ಅತ್ಯಂತ ಬುದ್ಧಿವಂತ ಪ್ರಾಣಿಯೂ ಅಲ್ಲ. ಬದಲಿಗೆ ಬದಲಾವಣೆಗೆ ಒಗ್ಗಿಕೊಳ್ಳುವ ಶಕ್ತಿಯುಳ್ಳವು.’’ ಮಾನವನ ವಿಕಾಸದ ಎಲ್ಲ ಹಂತಗಳಲ್ಲಿಯೂ ಈ ಮಾತು ನಿಜವಾಗಿರುವುದನ್ನು ಕಂಡಿದ್ದೇವೆ. […]

Read More

ಜಿಡಿಪಿಗೆ ಬಿತ್ತು ಹೊಡೆತ

– 2019-20ನೇ ಸಾಲಿನಲ್ಲಿ 4.2% ದಾಖಲು | 11 ವರ್ಷದಲ್ಲೇ ಕನಿಷ್ಠ ಪ್ರಗತಿ – ತ್ರೈಮಾಸಿಕ ಜಿಡಿಪಿ ದರ 3.1%ಗೆ ಇಳಿಕೆ | ಕೊರೊನಾ ಸವಾಲಿನ ಸ್ಯಾಂಪಲ್ ಹೊಸದಿಲ್ಲಿ: ಕೊರೊನಾದಿಂದಾಗಿ ದೇಶದ ಆರ್ಥಿಕತೆ ಪಾತಾಳಕ್ಕೆ ಕುಸಿಯುವ ಆತಂಕದ ನಡುವೆಯೇ ಭಾರತದ ಜಿಡಿಪಿ ಪ್ರಗತಿ ಕಳೆದ 11 ವರ್ಷಗಳಲ್ಲೇ ಕನಿಷ್ಠ ಮಟ್ಟಕ್ಕೆ ಕುಸಿದಿದೆ. 2019-20ನೇ ಸಾಲಿನ ಒಟ್ಟು ವಾರ್ಷಿಕ ಜಿಡಿಪಿ ಪ್ರಗತಿ ದರ ಶೇ. 4.2ಕ್ಕೆ ಇಳಿಕೆಯಾಗಿದೆ. ಕಳೆದ 2018-19ನೇ ಸಾಲಿನಲ್ಲಿ ವಾರ್ಷಿಕ ಜಿಡಿಪಿ ಶೇ 6.1ರಷ್ಟಿತ್ತು. ಈ […]

Read More

ಸವಾಲುಗಳ ನಡುವೆ ಮೋದಿ ಸೆಕೆಂಡ್‌ ಇನಿಂಗ್ಸ್‌ ಸಾಧನೆ

ಕೊರೊನಾದಿಂದ ನೆಲಕಚ್ಚಿದ ಆರ್ಥಿಕತೆಯ ನಡುವೆಯೂ ಆತ್ಮನಿರ್ಭರ ಭಾರತದ ಕನಸಿನ ಹಾದಿಯಲ್ಲಿ. – ಹರಿಪ್ರಕಾಶ್‌ ಕೋಣೆಮನೆ. ಎಷ್ಟು ಬೇಗ ದಿನಗಳು ಉರುಳಿ ಹೋದವು! ಹದಿನೈದು ವರ್ಷದಷ್ಟು ದೀರ್ಘ ಕಾಲ ಗುಜರಾತ್‌ ಮುಖ್ಯಮಂತ್ರಿ ಆಗಿದ್ದ ನರೇಂದ್ರ ಮೋದಿ ರಾಷ್ಟ್ರ ರಾಜಕಾರಣ ಮುಖ್ಯ ಭೂಮಿಕೆಗೆ ಬರುತ್ತಾರೆಂಬ ಊಹಾತ್ಮಕ ಚರ್ಚೆ ಶುರುವಾದದ್ದು, ಅದರ ಬೆನ್ನಲ್ಲೇ 2014ರ ಲೋಕಸಭಾ ಚುನಾವಣೆಯ ಬಿಜೆಪಿ ಪ್ರಚಾರ ಸಮಿತಿ ಅಧ್ಯಕ್ಷರಾಗಿ ನೇಮಕಗೊಂಡದ್ದು, ಮತ್ತೆ ಕೆಲವೇ ದಿನಗಳಲ್ಲಿ ಅವರು ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿ ಹೊರ ಹೊಮ್ಮಿದ್ದೆಲ್ಲ ಇನ್ನೂ ಕಣ್ಣಿಗೆ ಕಟ್ಟಿದಂತಿದೆ. […]

Read More

ದೃಢಚಿತ್ತದ ಕರ್ಮಯೋಗಿ ಸಾವರ್ಕರ್

– ಡಾ.ವಿ.ಬಿ.ಆರತೀ.   ಜೀವನವು ಎಲ್ಲ ಮನುಷ್ಯರಿಗೂ ಸುಖದುಃಖಗಳನ್ನು ಒಡ್ಡುತ್ತದೆ. ಈ ಅನುಭವಗಳಿಗೆ ಮನುಷ್ಯರು ಬಗೆಬಗೆಯಾಗಿ ಪ್ರತಿಕ್ರಿಯಿಸುತ್ತಾರೆ! ಕಷ್ಟನಷ್ಟಗಳಿಗೆ ಹೆಚ್ಚು ತಲೆ ಕೆಡಿಸಿಕೊಳ್ಳದೇ ಮುಂದುವರಿಯುವ ಸಕಾರಾತ್ಮಕ ಮನೋಭಾವದವರು ಕೆಲವರಾದರೆ, ಚಿಕ್ಕಪುಟ್ಟ ಕಷ್ಟಗಳಿಗೂ ಅತಿಯಾಗಿ ದುಃಖಿಸಿ ಖಿನ್ನರಾಗುವವರು ಕೆಲವರು. ಜೀವನದ ಸುಖದುಃಖಗಳನ್ನು ಸಮಭಾವದಿಂದ ನೋಡುತ್ತ ಪಕ್ವರಾಗುವವರು ವಿರಳ. ಜೀವನದ ಎಲ್ಲಸಂದರ್ಭಗಳಲ್ಲೂ ಸ್ಥಿತಪ್ರಜ್ಞರಾಗಿರುತ್ತ, ದೇಶಧರ್ಮಗಳಲ್ಲಿ ನಿಷ್ಠರಾಗಿರುವವರು, ತಮ್ಮ ಸುತ್ತಲಿನ ಜನರಲ್ಲೂ ಜಾಗೃತಿ ಮೂಡಿಸುವ ವ್ರತ ತೊಡುವವರು ವಿರಳಾತಿ ವಿರಳರು. ಇಂತಹ ಪುರುಷಸಿಂಹರು ಎಷ್ಟೋ ಮಂದಿ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿ ಮಡಿದಿದ್ದಾರೆ. […]

Read More

ಚೀನಾ… ನಮ್ಮ ಗಡೀನೂ ನಿಂದೇನಾ?

ಯಾವಾಗಲೂ ಕಿರಿಕಿರಿಯುಂಟು ಮಾಡುವ ನೆರೆಮನೆಯವನ ರೀತಿಯಲ್ಲಿವರ್ತಿಸುವ ಚೀನಾ ಭಾರತವೂ ಸೇರಿದಂತೆ  ತನ್ನ ನೆರೆಯ ಬಹುತೇಕ ರಾಷ್ಟ್ರಗಳ ಜೊತೆಗೆ ಗಡಿ ಸಂಘರ್ಷವನ್ನು ಕಾಯ್ದುಕೊಂಡು ಬಂದಿದೆ. ಇದೀಗ ಭಾರತದ ಲಡಾಖ್ ಪ್ರದೇಶದಲ್ಲಿನ ಗ್ಯಾಲ್ವನ್ ನದಿ ಕಣಿವೆ, ಗಡಿ ನಿಯಂತ್ರಣ ರೇಖೆಯ ಪಾಂಗೊಂಗ್ ತ್ಸೋ ಗಡಿಗೆ ಸಂಬಂಧಿಸಿದಂತೆ ಭಾರತದ ಜೊತೆ ತಿಕ್ಕಾಟಕ್ಕೆ ಇಳಿದಿದೆ. ಕೊರೊನಾ ವೈರಸ್ಗೆ ಸಂಬಂಧಿಸಿದ ಮಾಹಿತಿ ಮುಚ್ಚಿಟ್ಟಿದ್ದಕ್ಕಾಗಿ ಜಗತ್ತಿನ ಬಹುತೇಕ ರಾಷ್ಟ್ರಗಳ ಕೆಂಗಣ್ಣಿಗೆ ಗುರಿಯಾಗಿರುವ ಚೀನಾ ಇದೀಗ ಭಾರತದ ಜತೆಗೆ ಗಡಿ ಕ್ಯಾತೆ ತೆಗೆದಿದೆ. ಈ ಚೀನಾದ ಗಡಿ […]

Read More

ಚೀನಾಗೆ ಜಾಗತಿಕ ಮುಖಭಂಗ – ಮತ್ತೆ ಗಡಿ ಕ್ಯಾತೆಯ ಹಿಂದಿನ ನಿಜ ಮರ್ಮ

ಏಷ್ಯಾದ ‘ದೊಡ್ಡಣ್ಣ’ನಾಗುವ ಚಪಲಕ್ಕೆ ಬಿದ್ದಿರುವ ಚೀನಾ, ಭಾರತದ ಜೊತೆಗೆ ಗಡಿ ವಿಷಯದಲ್ಲಿ ಸದಾ ಜಗಳ ತೆಗೆಯುವ ತನ್ನ ಚಾಳಿಯನ್ನು ಮುಂದುವರೆಸಿದೆ. ಇಡೀ ಜಗತ್ತೇ ಕೊರೊನಾದಿಂದ ತತ್ತರಿಸಿರುವ ಹೊತ್ತಿನಲ್ಲಿ ಚೀನಾ ಮಾತ್ರ ಭಾರತದ ಜೊತೆಗೆ ಗಡಿ ಕ್ಯಾತೆಗೆ ಮುಂದಾಗಿದೆ ಎಂದರೆ ಆ ದೇಶದ ಅಂತರಾಳದ ಉದ್ದೇಶ ಎಲ್ಲರಿಗೂ ಅರ್ಥವಾಗುವಂಥದ್ದೇನೆ. ಕೊರೊನಾ ವೈರಸ್ ಚೀನ ನಿರ್ಮಿತ ಎಂಬುದು ಅಮೆರಿಕ ಆದಿಯಾಗಿ ಹಲವು ರಾಷ್ಟ್ರಗಳ ಅನುಮಾನ. ಕೊರೊನಾ ವೈರಸ್ಸಿಗೆ ಸಂಬಂಧಿಸಿದ ಮಾಹಿತಿಯನ್ನು ಆ ದೇಶ ಮುಚ್ಚಿಟ್ಟಿದ್ದು ಅನುಮಾನಕ್ಕೆ ಇಂಬು ನೀಡುವಂತಿದೆ. ಆ […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top