ಖಾಸಗಿ ಶಾಲೆಗಳು ಎಲ್ಕೆಜಿಯಿಂದ ಹತ್ತನೇ ತರಗತಿಯವರೆಗೆ ಆನ್ಲೈನ್ ಕ್ಲಾಸ್ಗಳನ್ನು ನಡೆಸುವುದಕ್ಕೆ ಸರಕಾರ ವಿಧಿಸಿರುವ ನಿರ್ಬಂಧಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ‘ಇದು ಸಂವಿಧಾನದ 21 ಹಾಗೂ 21ಎ ವಿಧಿಯಯನ್ವಯ ಪ್ರಜೆಗಳಿಗೆ ದತ್ತವಾಗಿರುವ ಬದುಕಿನ ಹಾಗೂ ಶಿಕ್ಷಣದ ಹಕ್ಕನ್ನು ನಿರಾಕರಿಸಿದಂತಾಗಿದೆ’ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಇದರಿಂದ, ಆನ್ಲೈನ್ ಕ್ಲಾಸ್ಗಳನ್ನು ನಡೆಸಲು ಮುಂದಾಗಿರುವ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಮುಕ್ತ ರಹದಾರಿ ದೊರೆತಂತಾಗಿದೆ. ಆದರೆ ಈ ಆದೇಶ, ಆನ್ಲೈನ್ ಶಿಕ್ಷಣದ ಹೆಸರಿನಲ್ಲಿ ಶುಲ್ಕ ವಸೂಲಿ ಮಾಡಲು ಅಥವಾ ಆನ್ಲೈನ್ ಕ್ಲಾಸುಗಳನ್ನು ಕಡ್ಡಾಯ ಮಾಡಲು […]
Read More
ಕೊರೊನಾದಿಂದ ಮೃತಪಟ್ಟವರ ಅಂತ್ಯಸಂಸ್ಕಾರದ ಪರಿಸ್ಥಿತಿ ಗೋಜಲಾಗಿದೆ. ಕೆಲವು ಕಡೆ ಶವಸಂಸ್ಕಾರಕ್ಕೆ ಅಡ್ಡಿಪಡಿಸಲಾಗುತ್ತಿದೆ. ಕೆಲವು ಕಡೆ ಅಮಾನವೀಯವಾಗಿ ನಾಲ್ಕಾರು ಹೆಣಗಳನ್ನು ಒಟ್ಟಿಗೇ ಗುಂಡಿಗೆಸೆದಿರುವುದು ವಿಡಿಯೋ ಚಿತ್ರೀಕೃತಗೊಂಡು ವೈರಲ್ ಆದ ಬಳಿಕ, ಜನರಲ್ಲಿ ಭೀತಿಯೂ ತಲೆದೋರಿದೆ. ಕೋವಿಡ್ ಪೀಡಿತರನ್ನು ದೂರವಿಟ್ಟು ನಡೆಸಿಕೊಳ್ಳುವುದು ಸಹಜ, ಯಾಕೆಂದರೆ ಸೋಂಕು ಹರಡುವ ಭಯವಿದೆ. ಆದರೆ ಶವಸಂಸ್ಕಾರ ಕನಿಷ್ಠ ಗೌರವಯುತವಾಗಿ ನಡೆಸಬೇಕು ಎಂಬುದು ಮಾನವೀಯ ಸಮಾಜದಲ್ಲಿ ನಂಬಿಕೆಯಿಟ್ಟಿರುವ ಎಲ್ಲರ ಕಳಕಳಿ. ಸತ್ತವರನ್ನು ಸರಿಯಾಗಿ ಕಳಿಸಿಕೊಡಲಿಲ್ಲವಲ್ಲ ಎಂಬುದು ಬಂಧುಗಳಿಗೆ ನಿರಂತರ ಶೋಕವಾಗಬಾರದು. ಕೋವಿಡ್ನಿಂದ ಮೃತರಾದವರನ್ನು ಮಣ್ಣು ಮಾಡುತ್ತಿರುವ […]
Read More
ಇತರ ಸಣ್ಣ ದೇಶಗಳನ್ನು ಸಾಲ ನೀಡಿ ವಶೀಕರಿಸಿಕೊಂಡಂತೆ ಭಾರತವನ್ನು ವಸಾಹತು ಮಾಡಿಕೊಳ್ಳಲು ಸಾಧ್ಯವಾಗದು ಎಂದು ಅರಿತಿರುವ ಚೀನಾ, ಗಡಿ ತಂಟೆಗಳ ಮೂಲಕ ಭಾರತವನ್ನು ಆಗಾಗ ಬೆದರಿಸಲು ಹಾಗೂ ವಶದಲ್ಲಿಟ್ಟುಕೊಳ್ಳಲು ಪ್ರಯತ್ನಿಸುತ್ತದೆ. ಕಳೆದ ತಿಂಗಳು ಲೇಹ್ ಸಮೀಪದ ಗಲ್ವಾನ್ ಕಣಿವೆಯಲ್ಲಿ ನಡೆದದ್ದು ಚೀನಾದ ಇಂತದೇ ಒಂದು ಪ್ರಯತ್ನ. ಚೀನಾ ಸೈನಿಕರೊಂದಿಗಿನ ಘರ್ಷಣೆಯಲ್ಲಿ 20 ಯೋಧರನ್ನು ಕಳೆದುಕೊಂಡ ಭಾರತ, ಅದಕ್ಕೆ ತಕ್ಕನಾದ ಪ್ರತಿಕ್ರಿಯೆಯನ್ನು ತೋರಿತು. ಉಲ್ಬಣಿಸಿದ ಸನ್ನಿವೇಶವನ್ನು ಸರಿಪಡಿಸಲು ಉಭಯ ಕಡೆಗಳ ಕಮಾಂಡರ್ ಮಟ್ಟದ ಹಾಗೂ ರಾಜತಾಂತ್ರಿಕ ಪ್ರತಿನಿಧಿಗಳ ಮಟ್ಟದ […]
Read More
ಕಳೆದ ಒಂದು ವಾರದಿಂದ ರಾಜ್ಯದಲ್ಲಿ, ಮುಖ್ಯವಾಗಿ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಗಾಬರಿಯಾಗುವಷ್ಟು ಏರುತ್ತಿದೆ. ಕಳೆದೆರಡು ದಿನಗಳಿಂದ ಬೆಂಗಳೂರಿನಲ್ಲೇ ಹೊಸ ರೋಗಿಗಳ ಸಂಖ್ಯೆ ಪ್ರತಿದಿನ ಒಂದು ಸಾವಿರಕ್ಕಿಂತಲೂ ಹೆಚ್ಚು ವರದಿಯಾಗುತ್ತಿದೆ. ಭಾನುವಾರ ರಾಜ್ಯದಲ್ಲಿ ಕೋವಿಡ್ನಿಂದ 37 ಮಂದಿ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಸೋಂಕಿತರ ಪ್ರಮಾಣ 20 ಸಾವಿರದ ಗಡಿ ದಾಟಿದೆ. ಇದು ಆರೋಗ್ಯ ತುರ್ತು ಪರಿಸ್ಥತಿಯೇ ಸರಿ. ಇತ್ತೀಚೆಗೆ ಕೋವಿಡ್ ನಿರ್ವಹಣೆಯಲ್ಲಿ ಕೇಂದ್ರದಿಂದ ಶ್ಲಾಘನೆ ಪಡೆದ ರಾಜ್ಯದಲ್ಲಿ, ವಾಸ್ತವ ಸ್ಥಿತಿ ಹಾಗಿಲ್ಲ ಎಂಬುದು ರುಜುವಾತಾಗಿದೆ. ಕೊರೊನಾದ ರುದ್ರ […]
Read More
ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಯಶಸ್ವಿಯಾಗಿ ಮುಕ್ತಾಯಗೊಂಡಿವೆ. ಕೊರೊನಾ ವೈರಸ್ನ ಆತಂಕಕಾರಿ ಹಬ್ಬುವಿಕೆಯ ನಡುವೆಯೂ ಜೂನ್ 25ರಿಂದ ಆರಂಭಗೊಂಡಿದ್ದ ಪರೀಕ್ಷೆ ಶುಕ್ರವಾರ ಪೂರ್ಣಗೊಂಡಿದೆ. ಸುಮಾರು 8.50 ಲಕ್ಷ ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಶುಕ್ರವಾರ ನಡೆದ ತೃತೀಯ ಭಾಷಾ ವಿಷಯಗಳ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಶೇ.98.10ರಷ್ಟಿತ್ತು. ಪ್ರತಿ ಪರೀಕ್ಷೆಗೂ ಶೇ.98 ವಿದ್ಯಾರ್ಥಿಗಳು ವೈರಾಣುವಿನ ಭಯ ಮೀರಿ ಹಾಜರಾಗಿದ್ದರು. 32 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ತಗುಲಿರುವುದು ಪತ್ತೆಯಾಗಿದ್ದು, ಇದು ಪರೀಕ್ಷಾ ಕೇಂದ್ರಗಳಿಂದ ಬಂದದ್ದಲ್ಲ ಎಂದು ಸರಕಾರ ಹೇಳಿದೆ. ಇವರೂ ಸೇರಿದಂತೆ, ಕ್ವಾರಂಟೈನ್ನಲ್ಲಿರುವ […]
Read More
ಕೊರೊನಾ ವಿರುದ್ಧದ ಹೋರಾಟದಲ್ಲಿ ಸರಕಾರದ ಮಹತ್ವದ ನಿರ್ಧಾರಗಳನ್ನು ಜನತೆಯ ಮುಂದೆ ಆಗಾಗ ಬಂದು ಪ್ರಕಟಿಸುತ್ತಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಂಗಳವಾರ ಇನ್ನೊಂದು ಪ್ರಮುಖ ಉಪಕ್ರಮವನ್ನು ಘೋಷಿಸಿದ್ದಾರೆ. ಗರೀಬ್ ಕಲ್ಯಾಣ್ ಯೋಜನೆಯ ಅಡಿಯಲ್ಲಿ ಇನ್ನೂ 5 ತಿಂಗಳವರೆಗೆ ಬಡವರಿಗೆ ಉಚಿತ ಪಡಿತರ ನೀಡಲಾಗುವುದು ಎಂದು ಅವರು ತಿಳಿಸಿದ್ದು, ನಿರುದ್ಯೋಗಿಗಳು, ಹಸಿವಿನಿಂದ ನರಳುತ್ತಿರುವ ಬಡ ಜನರಿಗೆ ಇದು ಶುಭ ಸುದ್ದಿಯಾಗಿದೆ. ಹಾಗೇ ಕೆಲಸ ಅರಸಿ ವಲಸೆ ಹೋಗುವ ಕಾರ್ಮಿಕರಿಗೆ, ಬಡವರಿಗೆ ಅನುಕೂಲವಾಗುವ ರೀತಿ ದೇಶಾದ್ಯಂತ ಏಕರೂಪ ದಿನಸಿ […]
Read More
ರಾಜ್ಯದಲ್ಲಿ ಕೊರೊನಾ ಸೋಂಕಿತರಾಗಿ ಸಣ್ಣಪುಟ್ಟ ಲಕ್ಷಣಗಳಿಂದ ಗುಣಮುಖರಾಗುವ ಹಾಗೂ ಪಾಸಿಟಿವ್ ಆಗಿದ್ದೂ ಯಾವುದೇ ಲಕ್ಷಣಗಳನ್ನು ತೋರಿಸದ ರೋಗಿಗಳು ಸಾಕಷ್ಟಿದ್ದಾರೆ. ಇಂಥವರನ್ನೂ ಪತ್ತೆ ಹಚ್ಚಿ ಈಗ ನಿಗದಿತ ಸರಕಾರಿ ಕೋವಿಡ್ ಚಿಕಿತ್ಸಾ ಕೇಂದ್ರಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಈಗಿನ ಪರಿಸ್ಥಿತಿ ಹೇಗಿದೆಯೆಂದರೆ, ಎಲ್ಲ ಕಡೆಯೂ ಆಸ್ಪತ್ರೆಗಳಲ್ಲಿ ಹಾಸಿಗೆಗಳು ಭರ್ತಿಯಾಗುತ್ತಿವೆ ಹಾಗೂ ವೈದ್ಯ ಸಿಬ್ಬಂದಿಯ ಸಂಖ್ಯೆಯೂ ಸಾಕಷ್ಟಿಲ್ಲ. ಇದರಿಂದಾಗಿ, ಕೋವಿಡ್ ರೋಗಿಗಳ ಪರಿಸ್ಥಿತಿ ಉಲ್ಬಣಗೊಂಡರೆ ಗತಿಯೇನು ಎಂಬ ಆತಂಕ ಆ ರೋಗಿಗಳನ್ನೂ, ಅವರ ಸಂಬಂಧಿಕರನ್ನೂ ಹಾಗೂ ಇತರರನ್ನೂ ಕಾಡುತ್ತಿದೆ. ಇದನ್ನು […]
Read More
ರಾಜಧಾನಿ ಬೆಂಗಳೂರಲ್ಲಿ ಕೋವಿಡ್-19 ಸೋಂಕಿತರ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದಂತೆ ಜನರಲ್ಲಿ ಸಹಜವಾಗಿಯೇ ಆತಂಕ ಹೆಚ್ಚಾಗುತ್ತಿದೆ. ಜೊತೆಗೆ ಸೋಂಕು ನಿಯಂತ್ರಣಕ್ಕೆ ಮತ್ತೆ ಲಾಕ್ಡೌನ್ ಅಥವಾ ಸೀಮಿತ ಲಾಕ್ಡೌನ್ ಹೇರಬೇಕೇ, ಬೇಡವೇ ಎಂಬ ಚರ್ಚೆ ಸರಕಾರದ ಮಟ್ಟದಲ್ಲೇ ಶುರುವಾಗಿದೆ. ಇದನ್ನು ಗಮನಿಸಿದರೆ ಈ ವಿಷಯದಲ್ಲಿ ಸರಕಾರಕ್ಕೆ ಸ್ಪಷ್ಟತೆ ಇಲ್ಲವೇ ಎಂಬ ಸಂದೇಹ ಉಂಟಾಗುತ್ತದೆ. ಕಾರಣ ಇಷ್ಟೇ, ಸೋಂಕು ತಡೆಯಲು ಲಾಕ್ಡೌನ್ ಒಂದೇ ಪರಿಹಾರ ಎಂಬುದಾಗಿದ್ದರೆ ಈ ಹಿಂದೆ ಲಾಕ್ಡೌನ್ ತೆರವು ಮಾಡಿದ್ದೇಕೆ ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಸೋಂಕು ಹೆಚ್ಚಾಗಲು […]
Read More
ಶೈಕ್ಷಣಿಕ ಜೀವನದ ಅತಿ ಮಹತ್ವದ ಘಟ್ಟವಾದ ಎಸ್ಸೆಸ್ಸೆಲ್ಸಿ ಪರೀಕ್ಷೆ ನಾಳೆಯಿಂದ ಕಟ್ಟೆಚ್ಚರದ ನಡುವೆ ಆರಂಭಗೊಳ್ಳಲಿದೆ. ಸಾಮಾನ್ಯ ಪರಿಸ್ಥಿತಿಯಲ್ಲಿಯೇ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಈ ವಾತಾವರಣದಲ್ಲಿ ಒಂದು ಬಗೆಯ ಉದ್ವಿಗ್ನತೆ ನಿರ್ಮಿಸುತ್ತವೆ. ಈಗಂತೂ ಕೊರೊನಾ ಕಾಲಘಟ್ಟದಲ್ಲಿ ಅದು ನಡೆಯುತ್ತಿರುವುದರಿಂದ, ಅದಕ್ಕೆ ಇನ್ನಷ್ಟು ಆತಂಕದ ಅವರಣ ನಿರ್ಮಾಣವಾಗಿದೆ. ಜೂನ್ 25ರಂದು ಪರೀಕ್ಷೆ ನಡೆಯಲಿ ಎಂದು ಸರಕಾರ ಹಾಗೂ ತಜ್ಞರು ತೀರ್ಮಾನಿಸುವಾಗ, ಕೊರೊನಾ ಕೇಸುಗಳು ಇಷ್ಟೊಂದು ಪ್ರಮಾಣದಲ್ಲಿ ವೃದ್ಧಿಯಾಗುತ್ತವೆ ಎಂಬ ನಿರೀಕ್ಷೆಯಿರಲಿಲ್ಲ. ಆದರೆ ಕಳೆದ ಒಂದು ವಾರದಿಂದ ಸೋಂಕು ಹಾಗೂ ಮರಣ ಪ್ರಮಾಣ […]
Read More
ಖಾಸಗಿ ಆಸ್ಪತ್ರೆಗಳಲ್ಲೂ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ಒದಗಿಸಲು ಸರಕಾರ ಮುಂದಾಗಿದೆ. ಆದರೆ ಈ ಬಗ್ಗೆ ಒಂದು ಒಮ್ಮತ ಹಾಗೂ ದರ ನಿಗದಿ ಮಾಡುವುದು ಇನ್ನೂ ಸರಕಾರಕ್ಕೆ ಸಾಧ್ಯವಾಗಿಲ್ಲ. ದರ ನಿಗದಿಯ ಬಗ್ಗೆ ಖಾಸಗಿ ಆಸ್ಪತ್ರೆಗಳು ಹಗ್ಗ ಜಗ್ಗಾಟ ನಡೆಸುವುದು ಖಂಡಿತ. ಯಾಕೆಂದರೆ ಕೋವಿಡ್ ಚಿಕಿತ್ಸೆ ಸುಲಭದ್ದಲ್ಲ. ಇದು ಇನ್ನೊಬ್ಬರಿಗೆ ಸುಲಭವಾಗಿ ಹರಡಬಹುದಾದ್ದರಿಂದ, ಅದನ್ನು ತಡೆಯಲು ಸಾಕಷ್ಟು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕಾದ್ದರಿಂದ, ಚಿಕಿತ್ಸೆ ವೆಚ್ಚವೂ ಹೆಚ್ಚಾಗುವುದು ಖಚಿತ. ಈ ವಿಚಾರದಲ್ಲಿ ಒಂದು ಮಾರ್ದದರ್ಶಿ ಸೂತ್ರವನ್ನು ಸರಳವಾಗಿ ರೂಪಿಸುವುದು ಹಾಗೂ […]
Read More