ಸರ್ಕಾರ ಸ್ನೇಹಿತನಾಗಬೇಕೆ ವಿನಾ ದಾನಿಯಾಗಬಾರದು

ಧರ್ಮಸ್ಥಳ ದೇಶವಿದೇಶಗಳಲ್ಲಿಯೂ ಖ್ಯಾತಿ ಪಡೆದ ಪುಣ್ಯಕ್ಷೇತ್ರ, ಕಾರಣಿಕ ಕ್ಷೇತ್ರ. ಶ್ರೀ ಕ್ಷೇತ್ರದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ ಹೆಸರೂ ಅಷ್ಟೇ ಸುಪರಿಚಿತ. ಧಾರ್ವಿುಕ, ಸಾಮಾಜಿಕ ಕಾರ್ಯಗಳಲ್ಲಿ ನಿರಂತರವಾಗಿ ತೊಡಗಿಕೊಂಡಿರುವ ಹೆಗ್ಗಡೆಯವರು ಈಗ ಪಟ್ಟಾಭಿಷೇಕದ 50ನೇ ವರ್ಷದ ಮಹತ್ವದ ಕಾಲಘಟ್ಟದಲ್ಲಿದ್ದಾರೆ. ವಿಜಯವಾಣಿ ಹಾಗೂ ದಿಗ್ವಿಜಯ ನ್ಯೂಸ್ ಪ್ರಧಾನ ಸಂಪಾದಕ ಹರಿಪ್ರಕಾಶ ಕೋಣೆಮನೆಯವರಿಗೆ ನೀಡಿದ ಈ ವಿಶೇಷ ಸಂದರ್ಶನದಲ್ಲಿ ಡಾ.ಹೆಗ್ಗಡೆಯವರು ತಮ್ಮ ಸುದೀರ್ಘ ಪಯಣದ ವಿವರಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ. ಭಾಗ 1 # ಸಾಮಾಜಿಕ ಕಾರ್ಯ ಧರ್ಮಸ್ಥಳ ಕ್ಷೇತ್ರಕ್ಕೆ ವಿಶಿಷ್ಟ ಸ್ಥಾನಮಾನವನ್ನು […]

Read More

ದೇಶದ ಘನತೆ ಕಾಯದವರು ಆಳಲು ಅರ್ಹರೆ? (16 .09.2017)

ಕೆಲವು ಎನ್​ಜಿಒಗಳು ಭಾರತದ ಘನತೆ ಗೌರವವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಾಜು ಹಾಕಲೆಂದೇ ಕಾರ್ಯನಿರ್ವಹಿಸುತ್ತಿವೆ. ಈ ಘನಂದಾರಿ ಕೆಲಸಕ್ಕಾಗಿ ಅವಕ್ಕೆ ಅಪಾರ ಪ್ರಮಾಣದ ಧನ ಸಹಾಯವೂ ಬರುತ್ತದೆ. ಈ ಹುನ್ನಾರವನ್ನು ಅರಿಯದೆ ವಿದೇಶಿ ನೆಲದಲ್ಲಿ ಭಾರತವನ್ನು ಬೈಯುವುದಕ್ಕೆ ಏನೆನ್ನಬೇಕೋ ತಿಳಿಯದು. ರಾಹುಲ್ ಗಾಂಧಿ ಕೊನೆಗೂ ಕಾಂಗ್ರೆಸ್ ಗಾಡಿಯ ನೊಗಕ್ಕೆ ಹೆಗಲು ಕೊಡಲು ಮನಸ್ಸು ಮಾಡಿದ್ದಾರೆ. ಅಷ್ಟು ಮಾತ್ರವಲ್ಲ, ದೇಶದ ಪ್ರಧಾನಮಂತ್ರಿಯೂ ಆಗುತ್ತೇನೆಂದು ಹೇಳುವ ಧೈರ್ಯ ತೋರಿದ್ದಾರೆ. ಅದು ಒಳ್ಳೆಯದೇ ಅಂತಿಟ್ಟುಕೊಳ್ಳೋಣ. ಈ ಘೊಷಣೆಯಿಂದ ಯಾರಿಗೆ ಎಷ್ಟು ಸಮಾಧಾನ, ಖುಷಿಯಾಗಿದೆಯೋ […]

Read More

ಆಗ ಚೀನಾದೆದುರು ಸೋತ ಭಾರತ ಈಗ ಗೆದ್ದಿದ್ದು ಹೇಗೆ? (02.09.2017)

ತನ್ನ ಸಾಮ್ರಾಜ್ಯವಾದ ವಿಸ್ತರಣೆಗೆ ಭಾರತವೇ ದೊಡ್ಡ ಅಡ್ಡಿ ಎಂಬುದು ಚೀನಾದ ಅಸಮಾಧಾನ. ಹೀಗಾಗಿ ಲಭ್ಯ ವೇದಿಕೆಗಳನ್ನೆಲ್ಲ ಬಳಸಿಕೊಂಡು ಭಾರತಕ್ಕೆ ತಲೆನೋವು ತರುವುದು ಅದರ ಕಾರ್ಯತಂತ್ರ. ಆದರೆ ಭಾರತ ಬದಲಾಗಿದೆ ಎಂಬ ಸ್ಪಷ್ಟ ಸಂದೇಶ ಡೋಕ್ಲಂ ಬಿಕ್ಕಟ್ಟಿನ ಸಂದರ್ಭದಲ್ಲಿ ರವಾನೆಯಾಗಿದೆ. ಇನ್ನೇನು ಭಾರತದ ಮೇಲೆ ಚೀನಾ ಯುದ್ಧ ನಡೆಸಿಯೇಬಿಟ್ಟಿತು ಎಂಬ ಸ್ಥಿತಿ ನಿರ್ಮಾಣ ಆದಾಗಲೂ ಪ್ರಧಾನಿ ನರೇಂದ್ರ ಮೋದಿ ಯಾಕೆ ಮೌನ ಮುರಿಯಲಿಲ್ಲ? ಚೀನಾದ ಸತತ ತರ್ಲೆಗಳಿಗೆ ಬಹಿರಂಗ ಉತ್ತರ ಕೊಡುವುದಕ್ಕೆ ಅವರೇಕೆ ಮುಂದಾಗಲಿಲ್ಲ ಎಂಬ ಪ್ರಶ್ನೆಗಳಿಗೆ ಈಗ […]

Read More

ಈಶ್ವರಪ್ಪ ರಾ.ಬ್ರಿ.ಯಿಂದ ಬಿಜೆಪಿಗೇಕೆ ಗಾಬರಿ?

  ಮಾಯಾವತಿ, ಮಹಂತ, ಕೇಜ್ರಿವಾಲ್ ಮುಂತಾದವರ ಮಾತು ಹಾಗಿರಲಿ, ಬಿಜೆಪಿಯಂತಹ ರಾಷ್ಟ್ರೀಯ ಪಕ್ಷದ ನೆಲೆಗಟ್ಟಿನಲ್ಲಿ ಬಲಾಢ್ಯ ಆಗಿರುವ ಮೋದಿಗೇ ಕೇವಲ ಸಿದ್ಧಾಂತದಿಂದ, ಜಾತಿಯಿಂದ, ಭಾವನಾತ್ಮಕ ಅಂಶಗಳಿಂದ ಜನರನ್ನು ಬಹಳ ಕಾಲ ಹಿಡಿದಿಟ್ಟುಕೊಳ್ಳಲು ಸಾಧ್ಯವಿಲ್ಲ ಎಂಬುದು ಮನವರಿಕೆಯಾದಂತಿದೆ. ಅಜಮಾಸು ನಾಲ್ಕು ವರ್ಷಗಳ ಹಿಂದಿನ ಮಾತು. ಆಗ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿತ್ತು. ಈಗ ಮುಖ್ಯಮಂತ್ರಿ ಆಗಿರುವ ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರಾಗಿದ್ದರು. ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಹಿಂದುಳಿದ ವರ್ಗಕ್ಕೆ ಸೇರಿದ ಜನಜಾತಿಗಳ ಸಮಾವೇಶ ನಡೆಯುತ್ತಿತ್ತು. ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಪ್ರತಿಷ್ಠಾಪನೆಗೊಳಿಸಲೇಬೇಕೆಂಬ […]

Read More

ಮೋದಿ ಸರ್ಕಾರಕ್ಕೆ ಜನರ ನಾಡಿಮಿಡಿತ ಅರ್ಥವಾಗುವುದಿಲ್ಲವೆ?

ಕೇಂದ್ರ ಸರ್ಕಾರ ಯಾಕೆ ಹೀಗೆ ಕೆಲವೊಂದು ಮುಖ್ಯ ವಿಷಯಗಳಲ್ಲಿ ವಿವೇಚನಾರಹಿತವಾಗಿ ನಡೆದುಕೊಳ್ಳುತ್ತಿದೆ ಎಂಬ ಚರ್ಚೆಗೆ ಪರಿಚಿತರೊಬ್ಬರು ಮುಂದಿಟ್ಟ ತರ್ಕ ಬಹಳ ಕುತೂಹಲಕರವಾಗಿತ್ತು. ‘ಕಾರಣ ಸರಳ. ಮೋದಿ ಸರ್ಕಾರವೇ ಒಂದು ಕಾರ್ಪೆರೇಟ್ ಕಂಪನಿಯ ರೀತಿಯಲ್ಲಿ ನಡೆಯುತ್ತಿದೆ. ಬಹಳಷ್ಟು ಸಚಿವರು ಅದರಲ್ಲೂ ಆಯಕಟ್ಟಿನ ಖಾತೆಗಳನ್ನು ನಿರ್ವಹಿಸುವ ಮತ್ತು ಸರ್ಕಾರದಲ್ಲಿ ನಿರ್ಣಾಯಕ ಪಾತ್ರ ವಹಿಸುವ ಬಹುತೇಕ ಸಚಿವರು ಜನರಿಂದ ಆಯ್ಕೆಯಾದವರಲ್ಲ. ಜನಸಾಮಾನ್ಯರ ಕಷ್ಟ-ಸುಖ ಅರಿತವರಲ್ಲ. ಎಸಿ ರೂಮಲ್ಲಿ ಕುಳಿತು, ಪವರ್ ಪಾಯಿಂಟ್ ಪ್ರಸೆಂಟೇಶನ್ ಮಾಡುತ್ತ, ನೋಡುತ್ತ ಬೆಳೆದವರು. ಅವರು ಮತ್ತಿನ್ನೇನು ಮಾಡಿಯಾರು? […]

Read More

ಈ ಗುಲ್ಲಿನ ಹಿ೦ದಿರುವ ಗುಟ್ಟೇನೆ೦ದರೆ…

ಹ್ಯೆದರಾಬಾದ್ ವಿವಿಯಲ್ಲಿ ನಡೆದ ರೋಹಿತ್ ವೇಮುಲ ಆತ್ಮಹತ್ಯೆ ರಾದ್ಧಾ೦ತ, ಜೆಎನ್‍ಯುನಲ್ಲಿ ಅಫ್ಜಲನ ಬೆ೦ಬಲಿಸುವ ವಗ೯ ಹುಟ್ಟಿಕೊ೦ಡದ್ದು ಮತ್ತು ಸ೦ಸತ್ತಿನಲ್ಲಿ ಸತತ ಎರಡು ವಷ೯ಗಳಿ೦ದ ನಡೆಯುತ್ತಿರುವ ಪ್ರಹಸನ ಇವೆಲ್ಲವನ್ನು ಬಿಡಿಬಿಡಿಯಾಗಿ ನೋಡಲಾದೀತೆ? ಕನ್ಹಯ್ಯಾ ಕುಮಾರ್ ತಾನೇ ಹೆಣೆದ ಬಲೆಯಲ್ಲಿ ಹೇಗೆ ಸಿಕ್ಕಿಬಿದ್ದರು ನೋಡಿ. ಅಷ್ಟು ಮಾತ್ರವಲ್ಲ ಮಾಡಬಾರದ್ದನ್ನು ಮಾಡಲು ಹೋದ ಕಾಮೆ್ರೀಡ್ಗಳ ಮುಖವಾಡವೂ ಕಳಚಿತು ಅನ್ನಿ. ಈ ದೇಶದಲ್ಲಿ ಯಾರು ಯಾವ ಪಕ್ಷದ ಪರ ಬೇಕಾದರೂ ಪ್ರಚಾರ ಮಾಡಬಹುದು. ಅದು ಅವರು ಹೊ೦ದಿರುವ ಸ೦ವಿಧಾನಬದ್ಧ ಹಕ್ಕು. ಯಾರೂ ಅದನ್ನು […]

Read More

ಈ ಬೃಹನ್ನಾಟಕದ ಪರಿಗೆ ಏನೆನುವುದು…

ಗಣಿ ದುಡ್ಡು ಮತ್ತು ರೆಸಾರ್ಟ್ ರಾಜಕಾರಣ ಜನರಲ್ಲಿ ಅಸಹ್ಯ ಹುಟ್ಟಿಸಿದ್ದರಿಂದಲೇ ಬಿಜೆಪಿ ಅಧಿಕಾರ ಕಳೆದುಕೊಂಡು ಕಾಂಗ್ರೆಸ್ ಸರ್ಕಾರ ಸ್ಥಾಪನೆ ಆಗಿರುವುದು. ಈಗ ಅದೇ ರೆಸಾರ್ಟ್ ರಾಜಕಾರಣ ಪಾಲಿಕೆ ಅ ಧಿಕಾರ ಹಿಡಿಯುವುದಕ್ಕೂ ಬಳಕೆಯಾಗುತ್ತಿರುವುದು ಸೋಜಿಗದ ಸಂಗತಿ. ರಾಜಕೀಯ ವ್ಯವಸ್ಥೆಯ ಬಗೆಗೇ ವಾಕರಿಗೆ ಹುಟ್ಟುತ್ತಿರುವ ಕಾಲ ಇದು. ಅಂಥದ್ದರಲ್ಲಿ ಬಿಬಿಎಂಪಿ ಎಂಬ ಸಂಪತ್ತಿನ ಕೋಟೆಗೆ ಲಗ್ಗೆ ಹಾಕಲು ಮೂರೂ ಪಕ್ಷಗಳಲ್ಲಿ ಅದಿನ್ನೆಂತಹ ಅಸಹ್ಯಕರ ಪೈಪೋಟಿ ಶುರುವಾಗಿದೆ ನೋಡಿ. ದೂರ ನಿಂತು ನೋಡುವ ಜನರು ಹಾದಿಬೀದಿಯಲ್ಲಿ ಹಿಡಿಶಾಪ ಹಾಕತೊಡಗಿದ್ದಾರೆ. ಆದರೆ ಲಜ್ಜೆಗೆಟ್ಟು […]

Read More

ಬಿಹಾರದಲ್ಲಿ ‘ಮಹಾಮೈತ್ರಿ’ಯ ಸವಾಲು

ಮೋದಿ ಅಲೆಯಲ್ಲಿ ಹಾಯಾಗಿ ತೇಲುತ್ತಿದ್ದ ಬಿಜೆಪಿಗೆ ದೆಹಲಿಯಲ್ಲಿ ಕೇಜ್ರಿವಾಲ್ ಮೊದಲ ಆಘಾತ ನೀಡಿದರೆ, ಎರಡನೇ ಆಘಾತ ಬಿಹಾರದಲ್ಲಿನ ಮಹಾಮೈತ್ರಿ. ಸಾಲದೆಂಬಂತೆ ನಿತೀಶ್ ಕುಮಾರ್  ಅವರು ಕೇಜ್ರಿವಾಲ್  ನೆರವು ಪಡೆಯಲು ಮುಂದಾಗಿರುವುದು ಬಿಜೆಪಿಗೆ ಮತ್ತೊಂದು ತಲೆಬೇನೆಯೇ ಸರಿ.  ‘ಮಾತು ಬೆಳ್ಳಿ ಮೌನ ಬಂಗಾರ’ ಅನ್ನುವುದನ್ನು ಪ್ರಧಾನಿ ನರೇಂದ್ರ ಮೋದಿ ತಮ್ಮ ಅನುಕೂಲಕ್ಕೆ ತಕ್ಕ ಹಾಗೆ ಅರ್ಥಮಾಡಿಕೊಂಡು ಬಿಟ್ಟರೋ ಹೇಗೆ ಅಂತ ಆಮ್ ಆದ್ಮಿ ಪಕ್ಷದವರು ಇತ್ತೀಚೆಗೆ ಟ್ವೀಟ್ ಮಾಡಿದ್ದರು. ಮಾತಿನಿಂದಲೇ ಮೋಡಿ ಮಾಡುವ ಮೋದಿ, ಬಿಜೆಪಿ ಸರ್ಕಾರಕ್ಕೆ ಮುಜುಗರದ […]

Read More

ಸಿದ್ದರಾಮಯ್ಯ ಅದೃಷ್ಟರೇಖೆಯೂ ಬೆಂಗಳೂರಿನ ಅಗ್ನಿಪರೀಕ್ಷೆಯೂ…

ಬಿಬಿಎಂಪಿ ಚುನಾವಣೆ ಒಂಥರಾ ಸಾರ್ವತ್ರಿಕ ಚುನಾವಣೆ ಇದ್ದಂತೆ. ಇದು ರಾಜ್ಯರಾಜಕಾರಣದ ದಿಕ್ಸೂಚಿಯೂ ಹೌದು. ರಾಜಕೀಯವಾಗಿ ರಾಷ್ಟ್ರಮಟ್ಟದಲ್ಲಿ ಗಮನಸೆಳೆಯುವ ಸಾಧ್ಯತೆಯೂ ಹೆಚ್ಚು. ಈ ಎಲ್ಲ ಕಾರಣಗಳಿಗಾಗಿ ಈ ಚುನಾವಣೆ ಸಿಎಂ ಸಿದ್ದರಾಮಯ್ಯ ಪಾಲಿಗೆ ನಿಜವಾದ ಸವಾಲು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅದೃಷ್ಟದ ಕೈಚಳಕವನ್ನು ನಂಬುತ್ತಾರೋ ಇಲ್ಲವೋ? ಅದು ಬೇರೆ ವಿಚಾರ. ಆದರೆ ಅವರು ಈ ರಾಜ್ಯ ಕಂಡ ಮಹಾ ಅದೃಷ್ಟವಂತ ಮುಖ್ಯಮಂತ್ರಿ ಎಂಬುದರಲ್ಲಿ ಅನುಮಾನವಿಲ್ಲ. ರಾಜಕೀಯ ಏರಿಳಿತದ ಹಾದಿಯಲ್ಲಿ ಅನಿರೀಕ್ಷಿತ ತಿರುವಿನಲ್ಲಿ ಸಾಗಿ ಕಾಂಗ್ರೆಸ್ ಪಕ್ಷದ ಕದ ತಟ್ಟಿದ […]

Read More

ಕನ್ನಡದ ಪ್ರಶ್ನೆಗಳ ಸಮುದಾಯ ಶೋಧ

ಭಾಷೆಯ ಪ್ರಶ್ನೆಯನ್ನು ಚರ್ಚಿಸುವಾಗ ಅದೊಂದೇ ಪ್ರಶ್ನೆಯಂತೆ ಚರ್ಚಿಸಿದರೆ, ನಾನಾರೀತಿಯ ವಿರೋಧಾಭಾಸಗಳಿಗೆ, ಗೊಂದಲಗಳಿಗೆ ಕಾರಣವಾಗುತ್ತದೆ. ಭಾಷೆಯ ಪ್ರಶ್ನೆಯು ಅಭಿವೃದ್ಧಿಯ ಶೈಲಿ, ಜೀವನದ ಶೈಲಿಯ ಪ್ರಶ್ನೆಗಳೊಂದಿಗೂ ತಳುಕು ಹಾಕಿಕೊಂಡಿರುತ್ತದೆ ಎಂಬುದು ನಿಜ. ಆದರೆ ಅಭಿವೃದ್ಧಿಯ, ಜೀವನಶೈಲಿಯ ಪ್ರಶ್ನೆಗಳನ್ನು ಎದುರಿಸಿಬಿಟ್ಟರೆ ಭಾಷೆ, ಶಿಕ್ಷಣ ಮಾಧ್ಯಮದ ಪ್ರಶ್ನೆ ತನಗೆ ತಾನೇ ಪರಿಹಾರವಾಗುತ್ತದೆ ಎಂಬ ಭಾವನೆ ತಪ್ಪು. ಈ ದೃಷ್ಟಿಯಿಂದ ಅಭಿಯಾನವು ಸಕಾರಣವಾಗಿಯೇ ಭಾಷೆ ಮತ್ತು ಶಿಕ್ಷಣ ಮಾಧ್ಯಮದ ಪ್ರಶ್ನೆಗಳನ್ನು ಸ್ವತಂತ್ರ ಪ್ರಶ್ನೆಯಾಗಿ ಮುನ್ನೆಲೆಗೆ ತಂದಿದೆ. =====  ಕೆ.ಸತ್ಯನಾರಾಯಣ ವಿಜಯವಾಣಿಯ ಕನ್ನಡ ಅಭಿಯಾನದಲ್ಲಿ ಮೂಡಿ […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top