ಬಡವರಿಗೆ ಊಟ, ಸುರಕ್ಷತೆ ಪಾಠ

– ಇನ್ನೂ 5 ತಿಂಗಳು 80 ಕೋಟಿ ಜನರಿಗೆ ಉಚಿತ ಪಡಿತರ | ಶೀಘ್ರವೇ ಏಕರೂಪ ರೇಷನ್‌ ಕಾರ್ಡ್‌. – ಪ್ರಧಾನಿ ನರೇಂದ್ರ ಮೋದಿ ಘೋಷಣೆ | ಅನ್‌ಲಾಕ್‌ ವೇಳೆ ನಿರ್ಲಕ್ಷ್ಯಕ್ಕೆ ಬೇಸರ, ಜನರ ಸಹಕಾರಕ್ಕೆ ಮನವಿ. ಹೊಸದಿಲ್ಲಿ: ದೇಶಾದ್ಯಂತ ಹೆಚ್ಚುತ್ತಿರುವ ಕೊರೊನಾ ಸೋಂಕಿನಿಂದ ಕಂಗಾಲಾಗಿರುವ ಜನತೆಗೆ, ಅದರಲ್ಲೂ ನಿರುದ್ಯೋಗಿಗಳು ಮತ್ತು ಹಸಿವಿನಿಂದ ಬಳಲುತ್ತಿರುವ ಬಡ ಜನರಿಗೆ ಪ್ರಧಾನಿ ಮೋದಿ ನೆರವಿನ ಪ್ಯಾಕೇಜ್‌ ಮುಂದುವರಿಸಿದ್ದಾರೆ. ‘ಗರೀಬ್‌ ಕಲ್ಯಾಣ್‌ ಯೋಜನೆ’ಯ ಅಡಿಯಲ್ಲಿ ಇನ್ನೂ 5 ತಿಂಗಳವರೆಗೆ ಬಡವರಿಗೆ ಉಚಿತ […]

Read More

ಡ್ರೋನ್‌ ಹಾರುಯಂತ್ರದಿಂದ ಮಿಡತೆ ಹಾವಳಿ ನಿಯಂತ್ರಣ – ಬಳಸಿದಷ್ಟೂ ವಿಸ್ತಾರವಾಗುತ್ತಿದೆ ಡ್ರೋನ್‌ಗಳ ಬಳಕೆಯ ಸಾಧ್ಯತೆ

– ಸುಧೀಂದ್ರ ಹಾಲ್ದೊಡ್ಡೇರಿ.  ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಜಗದ್ವಿಖ್ಯಾತ ವಿದ್ಯಾಸಂಸ್ಥೆ ಭಾರತೀಯ ವಿಜ್ಞಾನ ಮಂದಿರ (ಐಐಎಸ್‌ಸಿ) ನಿಮಗೆ ಗೊತ್ತು. ನವೀನ ವಿಜ್ಞಾನ-ತಂತ್ರಜ್ಞಾನ ಕನಸುಗಳನ್ನು ಹೊತ್ತಯುವ ಪ್ರತಿಭಾವಂತರಿಗೆ ಅಗತ್ಯ ಸಂಪನ್ಮೂಲಗಳನ್ನು, ಸಾಧನ-ಸಲಕರಣೆಗಳನ್ನು ಹಾಗೂ ವಿದ್ವಜ್ಜನರ ಮಾರ್ಗದರ್ಶನವನ್ನು ನೀಡಿ, ಸಾರ್ವತ್ರಿಕ ಒಳಿತಿಗೆ ಬಳಕೆಯಾಗಬಲ್ಲ ಉತ್ಪನ್ನಗಳ ಅಭಿವೃದ್ಧಿಗೆ ನೆರವಾಗುವಉದ್ದಿಶ್ಯ ಇಲ್ಲಿನ ‘ಸೊಸೈಟಿ ಫಾರ್‌ ಇನ್ನೋವೇಶನ್‌ ಆ್ಯಂಡ್‌ ಡೆವಲಪ್‌ಮೆಂಟ್‌’ ಒಕ್ಕೂಟದ್ದು. ಕೆಲ ವರ್ಷಗಳ ಹಿಂದೆ ವೈಮಾಂತರಿಕ್ಷ ಕ್ಷೇತ್ರದ ಉತ್ಸಾಹಿ ಸಮೂಹವೊಂದು ದೇಶದ ಹೆಮ್ಮೆಯ ಲಘು ಯುದ್ಧ ವಿಮಾನ ‘ತೇಜಸ್‌’ನ ವಿನ್ಯಾಸಗಾರ ಡಾ.ಕೋಟಾ ಹರಿನಾರಾಯಣ ಅವರ […]

Read More

ಜಮ್ಮುವಿನಲ್ಲಿ ಉಗ್ರರ ಖೇಲ್‌ ಖತಂ

(ಈ ವರ್ಷ ಕಾಶ್ಮೀರದಲ್ಲಿ ನೂರು ಉಗ್ರರ ಹತ್ಯೆ!) ಜಮ್ಮು ಪ್ರಾಂತ್ಯ ಈಗ ಭಯೋತ್ಪಾದನೆ ಮುಕ್ತವಾಗಿದೆ. ಒಂದೆಡೆ ಪಾಕಿಸ್ತಾನ ಹಾಗೂ ಪಾಕಿಸ್ತಾನ ಪ್ರೇರಿತ ಉಗ್ರರ ಶಿಬಿರಗಳು ಕೊರೊನಾ ತಾಂಡವದಿಂದ ತತ್ತರಿಸುತ್ತಿದ್ದರೆ, ಇನ್ನೊಂದೆಡೆ ಭಾರತೀಯ ಪಡೆಗಳು ಜಮ್ಮು- ಕಾಶ್ಮೀರದಲ್ಲಿ ಉಗ್ರರನ್ನು ಹುಡುಕಿ ಹುಡುಕಿ ಕೊಲ್ಲುತ್ತಿವೆ. ದಕ್ಷಿಣ ಕಾಶ್ಮೀರದ ಅನಂತನಾಗ್‌ ಜಿಲ್ಲೆಯಲ್ಲಿ ಹಿಜ್ಬುಲ್‌ ಮುಜಾಹಿದೀನ್‌ ಭಯೋತ್ಪಾದಕ ಸಂಘಟನೆಯ ನಾಯಕ ಮಸೂದ್‌ನನ್ನು ಪೊಲೀಸರು ಎನ್‌ಕೌಂಟರ್‌ನಲ್ಲಿ ಕೊಂದುಹಾಕಿದ್ದಾರೆ. ಈತ ಜಮ್ಮು ಪ್ರಾಂತ್ಯದಿಂದ ಬಂದ ಹಾಗೂ ದೋಡಾ ಜಿಲ್ಲೆಯಲ್ಲಿದ್ದ ಏಕೈಕ ಟೆರರಿಸ್ಟ್‌ ಆಗಿದ್ದ. ದೋಡಾದಲ್ಲಿ ಒಂದು […]

Read More

ಗಡಿಯತ್ತ ಘಾತಕ್

– ಬೆಳಗಾವಿಯಲ್ಲಿ ತರಬೇತಿ ಪಡೆದ ಯೋಧರು ಹೊಸದಿಲ್ಲಿ: ಭಾರತೀಯ ಯೋಧರೊಂದಿಗೆ ನಿಶ್ಯಸ್ತ್ರವಾಗಿ ಹೋರಾಟ ನಡೆಸಲು ಚೀನಾ ತನ್ನ ಸೈನಿಕರಿಗೆ ಸಮರ ಕಲೆ ಪರಿಣತರಿಂದ ತರಬೇತಿ ಕೊಡಿಸುತ್ತಿರುವ ಸಂಗತಿ ಬೆಳಕಿಗೆ ಬರುತ್ತಿದ್ದಂತೆಯೇ ಭಾರತವು ತನ ಶಕ್ತಿಶಾಲಿ ‘ಘಾತಕ್‌ ಕಮಾಂಡೊ’ಗಳನ್ನು ಗಡಿಯಲ್ಲಿ ನಿಯೋಜಿಸಿದೆ. ಗಡಿ ಪ್ರದೇಶಕ್ಕೆ ತೆರಳುವ ಮುನ್ನ ಈ ಕಮಾಂಡೊಗಳಿಗೆ ಬೆಳಗಾವಿಯಲ್ಲಿ 43 ದಿನಗಳ ಕಠಿಣ ತರಬೇತಿ ನೀಡಲಾಗಿದೆ. ಬೆಳಗಾವಿ ಸೇನಾ ತರಬೇತಿ ಕೇಂದ್ರವು ದೈಹಿಕ ಕಾದಾಟ ಕೌಶಲ ನೀಡುವ ವಿಷಯದಲ್ಲಿ ಅತ್ಯಂತ ಪರಿಣಿತ ಸಂಸ್ಥೆ ಎನಿಸಿದೆ. ಬೆನ್ನಿಗೆ […]

Read More

ಅಬ್ಬಾ… ಸಸ್ಪೆಂಡ್‌ ಅಂದ್ರೆ ಹಬ್ಬ!

– ವರ್ಗಾವಣೆ ತಪ್ಪಿಸಿಕೊಳ್ಳಲು ಶಾಲಾ ಶಿಕ್ಷಕರ ಹೊಸ ಸಿಲೆಬಸ್‌ – ಆರ್‌.ಶ್ರೀಧರ್‌ ರಾಮನಗರ. ಹೊಸದಾಗಿ ನಿಯೋಜನೆಗೊಂಡ ಶಾಲೆಯಲ್ಲಿ ಉದ್ದೇಶಪೂರ್ವಕವಾಗಿಯೇ ತಪ್ಪು ಮಾಡುವುದು. ಆ ಮೂಲಕ ಸಸ್ಪೆಂಡ್‌ ಆಗುವುದು. ಇಲಾಖಾ ತನಿಖೆಯಲ್ಲಿ ನಿರ್ದೋಷಿ ಎಂದು ಸಾಬೀತುಪಡಿಸಿ ತಾವು ಕೆಲಸ ಮಾಡುತ್ತಿದ್ದ ಹಳೆಯ ಶಾಲೆಯಲ್ಲೇ ಮರು ನಿಯೋಜನೆಗೊಳ್ಳುವುದು…! ಹೇಗೆ ಪ್ಲ್ಯಾನ್‌? ಹೌದು, ಕೆಲವು ಶಿಕ್ಷಕರು ವರ್ಗಾವಣೆಯಿಂದ ತಪ್ಪಿಸಿಕೊಳ್ಳಲು ಇಂಥದೊಂದು ಹೊಸ ಮಾರ್ಗವನ್ನು ಕಂಡುಕೊಂಡಿದ್ದಾರೆ. ರಾಮನಗರ ಜಿಲ್ಲೆಯಲ್ಲಿ ಈ ರೀತಿಯ ಪ್ರಕರಣಗಳು ವರದಿಯಾಗುತ್ತಿವೆ. ಈ ಜಿಲ್ಲೆಯೊಂದರಲ್ಲೇ ಆಗಿರುವ 105 ಶಿಕ್ಷಕರ ಅಮಾನತು […]

Read More

ಸಾವು ತಡೆಯೋಣ

– 11 ದಿನದ ಅವಧಿಯಲ್ಲಿ102 ಬಲಿ | ಬೆಂಗಳೂರಿನಲ್ಲೇ ಹೆಚ್ಚು – ಗಂಭೀರ ರೋಗಿಗಳು, ಹಿರಿಯರ ತುರ್ತು ಚಿಕಿತ್ಸೆಗೆ ವ್ಯವಸ್ಥೆ ಅಗತ್ಯ ಬೆಂಗಳೂರು: ರಾಜ್ಯದಲ್ಲಿಕೊರೊನಾ ಸೋಂಕಿತರ ಜತೆಗೆ ಸಾವಿನ ಸಂಖ್ಯೆಯೂ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಪ್ರಸಕ್ತ ಸೋಂಕನ್ನು ನಿಯಂತ್ರಿಸುವುದು ಕಷ್ಟ ಸಾಧ್ಯ ಎಂಬ ಪರಿಸ್ಥಿತಿ ಇದೆ. ಆದರೆ, ಕನಿಷ್ಠ ಸಾವನ್ನಾದರೂ ತಡೆಯುವಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂಬ ಬೇಡಿಕೆ ತೀವ್ರವಾಗಿದೆ. ರಾಜ್ಯದಲ್ಲಿ ಇದುವರೆಗೆ ಮೃತಪಟ್ಟವರ ಸಂಖ್ಯೆ 227. ಕಳೆದ ಎರಡೇ ದಿನದಲ್ಲಿ40 ಸೇರಿದಂತೆ 11 ದಿನದಲ್ಲಿ103 ಮಂದಿ ಪ್ರಾಣ […]

Read More

ಚೀನಾ ಆ್ಯಪ್‌ ಬ್ಯಾನ್‌

– ಟಿಕ್‌-ಟಾಕ್‌, ಶೇರ್‌ಇಟ್‌, ಹೆಲೋ ಸಹಿತ 59 ಅಪ್ಲಿಕೇಷನ್‌ ಸ್ಟಾಪ್‌ – ಡ್ರ್ಯಾಗನ್‌ ದರ್ಪಕ್ಕೆ ಭಾರತದ ಪೆಟ್ಟು | ಬಾಯ್ಕಾಟ್‌ ಚೀನಾ ಆಂದೋಲನಕ್ಕೆ ಬಲ ಹೊಸದಿಲ್ಲಿ: ಪೂರ್ವ ಲಡಾಖ್‌ ಗಡಿಯಲ್ಲಿ ಚೀನಿ ಸೇನೆಗೆ ದಿಟ್ಟ ಉತ್ತರ ಕೊಟ್ಟಿದ್ದ ಭಾರತ, ಈಗ ಡ್ರ್ಯಾಗನ್‌ ರಾಷ್ಟ್ರಕ್ಕೆ ಮತ್ತೊಂದು ಪೆಟ್ಟು ನೀಡಿದೆ. ಅತ್ಯಂತ ಜನಪ್ರಿಯ ‘ಟಿಕ್‌-ಟಾಕ್‌’, ‘ಶೇರ್‌ಇಟ್‌’ ಸೇರಿದಂತೆ ಚೀನಾ ಮೂಲದ 59 ಆ್ಯಪ್‌ಗಳನ್ನು ಕೇಂದ್ರ ಸರಕಾರ ಸೋಮವಾರ ನಿಷೇಧಿಸಿದೆ. ಚೀನಾದ ಸರಕು-ಸೇವೆಗಳನ್ನು ನಿಷೇಧಿಸಬೇಕೆಂದು ಆಗ್ರಹಿಸಿ ದೇಶಾದ್ಯಂತ ನಡೆಯುತ್ತಿರುವ ‘ಬಾಯ್ಕಾಟ್‌ ಚೀನಾ’ […]

Read More

ಅತಿಥಿ ಉಪನ್ಯಾಸಕರು ಅತಂತ್ರ

ಪ್ರಮೋದ ಹರಿಕಾಂತ ಬೆಳಗಾವಿ/ಎನ್‌.ಡಿ.ತಿಪ್ಪೇಸ್ವಾಮಿ ಬಳ್ಳಾರಿ. ಹಲವು ವರ್ಷಗಳಿಂದ ಪದವಿ ಕಾಲೇಜುಗಳಲ್ಲಿ ಕಡಿಮೆ ವೇತನಕ್ಕೆ ದುಡಿಸಿಕೊಂಡಿದ್ದ ಅತಿಥಿ ಉಪನ್ಯಾಸಕರನ್ನು ರಾಜ್ಯ ಸರಕಾರ ಕೊರೊನಾ ಕಾರಣಕ್ಕೆ ಕೈ ಬಿಟ್ಟಿದ್ದರಿಂದ ಸಾವಿರಾರು ಅತಿಥಿ ಉಪನ್ಯಾಸಕರು ಅತಂತ್ರರಾಗಿದ್ದಾರೆ. ಆರ್ಥಿಕ ಸಂಕಷ್ಟ ಮತ್ತು ಮಾನಸಿಕ ಒತ್ತಡದಿಂದ ಸುಮಾರು ಎಂಟು ಅತಿಥಿ ಉಪನ್ಯಾಸಕರು ಈಗಾಗಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಲವರು ಕೂಲಿ ಕೆಲಸಕ್ಕೆ ಇಳಿದಿದ್ದಾರೆ. ಹೀಗಿರುವಾಗಲೇ ಈ ವರ್ಷ ಅತಿಥಿ ಉಪನ್ಯಾಸಕರ ಸೇವೆಯನ್ನೇ ಕಡಿತ ಮಾಡುವ ಕುರಿತು ಸರಕಾರದ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಇದು ಅತಿಥಿ ಉಪನ್ಯಾಸಕರನ್ನು ಇನ್ನಷ್ಟು […]

Read More

ಮನೆ ಆರೈಕೆ ಉಪಕ್ರಮ – ಗಂಭೀರ ರೋಗಿಗಳಿಗೆ ಹಾಸಿಗೆ ಉಳಿಸೋಣ

ರಾಜ್ಯದಲ್ಲಿ ಕೊರೊನಾ ಸೋಂಕಿತರಾಗಿ ಸಣ್ಣಪುಟ್ಟ ಲಕ್ಷಣಗಳಿಂದ ಗುಣಮುಖರಾಗುವ ಹಾಗೂ ಪಾಸಿಟಿವ್‌ ಆಗಿದ್ದೂ ಯಾವುದೇ ಲಕ್ಷಣಗಳನ್ನು ತೋರಿಸದ ರೋಗಿಗಳು ಸಾಕಷ್ಟಿದ್ದಾರೆ. ಇಂಥವರನ್ನೂ ಪತ್ತೆ ಹಚ್ಚಿ ಈಗ ನಿಗದಿತ ಸರಕಾರಿ ಕೋವಿಡ್‌ ಚಿಕಿತ್ಸಾ ಕೇಂದ್ರಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಈಗಿನ ಪರಿಸ್ಥಿತಿ ಹೇಗಿದೆಯೆಂದರೆ, ಎಲ್ಲ ಕಡೆಯೂ ಆಸ್ಪತ್ರೆಗಳಲ್ಲಿ ಹಾಸಿಗೆಗಳು ಭರ್ತಿಯಾಗುತ್ತಿವೆ ಹಾಗೂ ವೈದ್ಯ ಸಿಬ್ಬಂದಿಯ ಸಂಖ್ಯೆಯೂ ಸಾಕಷ್ಟಿಲ್ಲ. ಇದರಿಂದಾಗಿ, ಕೋವಿಡ್‌ ರೋಗಿಗಳ ಪರಿಸ್ಥಿತಿ ಉಲ್ಬಣಗೊಂಡರೆ ಗತಿಯೇನು ಎಂಬ ಆತಂಕ ಆ ರೋಗಿಗಳನ್ನೂ, ಅವರ ಸಂಬಂಧಿಕರನ್ನೂ ಹಾಗೂ ಇತರರನ್ನೂ ಕಾಡುತ್ತಿದೆ. ಇದನ್ನು […]

Read More

ಲಡಾಖಿನಲ್ಲಿ ನಕಾಶೆ ನೂಕುವ ಯತ್ನ

– ನಿರಂಜನ ಸಂಗ್ರಹ ನಿರೂಪಣೆ: ಸುಧೀಂದ್ರ ಹಾಲ್ದೊಡ್ಡೇರಿ ಉತ್ತರದಲ್ಲಿ ಹಿಮಾಲಯ ಪರ್ವತಶ್ರೇಣಿ ಆವೃತವಾಗಿರುವ ದೇಶ, ಭಾರತ. ಆ ದಿಕ್ಕಿನಲ್ಲಿ ನಮ್ಮ ಸೀಮಾರೇಖೆ ಮೂರು ಸಾವಿರ ವರ್ಷಗಳ ಅವಧಿಯಲ್ಲಿ ಎಂದೂ ಬದಲಾದುದಿಲ್ಲ. ಇದು, ಉತ್ತರದ ಕ್ಯುವೆನ್‌ಲುನ್‌ ಪರ್ವತಗಳಿಂದ ಪೂರ್ವದಿಕ್ಕಿನಲ್ಲಿ ಬರ್ಮವನ್ನು ಸಂಧಿಸುವವರೆಗೆ ಈ ಗಡಿಯು 2500 ಮೈಲುಗಳ ಉದ್ದವಿದೆ. ಪ್ರಾಚೀನಗ್ರಂಥವಾದ ವಿಷ್ಣು ಪುರಾಣದಲ್ಲಿ ಹಿಮಾಲಯವೇ ಭಾರತದ ಉತ್ತರ ಸೀಮೆ ಎಂಬ ಉಲ್ಲೇಖವಿದೆ. ‘‘ಹಿಮಾಲಯದ ದಕ್ಷಿಣಕ್ಕೆ ಹಿಂದೂ ಮಹಾಸಾಗರದ ಉತ್ತರಕ್ಕೆ ಇರುವ ಭೂಭಾಗವೆಲ್ಲ ಭಾರತ’’ ಎನ್ನುತ್ತದೆ ಆ ಪುರಾಣ. ಕ್ರಿಸ್ತಪೂರ್ವ […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top