– ವಿವಾದಾತ್ಮಕ ವಿಧೇಯಕ ಮಂಡನೆಗೆ ಸರಕಾರ ಸಿದ್ಧತೆ? – ಎಫ್ಆರ್ಡಿಐ ಬದಲಿಗೆ ಎಫ್ಎಸ್ಡಿಆರ್ ವಿಧೇಯಕ ಸಂಭವ. ಭವಿಷ್ಯದ ದಿನಗಳಲ್ಲಿ ಬ್ಯಾಂಕ್ಗಳಲ್ಲಿ ನೀವು ಇಡುವ ಹಣ ಎಷ್ಟು ಸುರಕ್ಷಿತ? ಬ್ಯಾಂಕ್ಗಳಲ್ಲಿ ನೀವು ಇಡುವ ಉಳಿತಾಯದ ಡಿಪಾಸಿಟ್ ಅಥವಾ ಹಣಕ್ಕೆ ನೇರವಾಗಿ ಸಂಬಂಧಿಸಿದ, ಮೂರು ವರ್ಷಗಳ ಹಿಂದೆ ಕೋಲಾಹಲ ಸೃಷ್ಟಿಸಿ ಕಣ್ಮರೆಯಾಗಿದ್ದ, ಎಫ್ಆರ್ಡಿಐ ಎಂಬ ವಿಧೇಯಕದ ಬದಲಿಗೆ, ಮತ್ತೊಂದು ಪರಿಷ್ಕೃತ ವಿಧೇಯಕವನ್ನು ಸಂಸತ್ತಿನಲ್ಲಿ ಮಂಡಿಸಲು ಸರಕಾರ ಯತ್ನಿಸುತ್ತಿದೆ. ಆದರೆ ಇದೂ ಕೂಡ ವಿವಾದಕ್ಕೀಡಾಗಿರುವುದೇ ಈ ಪ್ರಶ್ನೆಗೆ ಕಾರಣ. ‘‘ಹಳೆಯ ಫೈನಾನ್ಷಿಯಲ್ […]
Read More
ಒಂದೆಡೆ ಕೋವಿಡ್ ಕೇಸುಗಳು ಅನಿಯಂತ್ರತವಾಗಿ ಏರುತ್ತಿರುವಂತೆಯೇ, ಇನ್ನೊದೆಡೆ ಕೊರೊನೋತ್ತರ ಬದುಕಿನಲ್ಲಿ ಚೈತನ್ಯವನ್ನು ಇಮ್ಮಡಿಸುವ ಪ್ರಕ್ರಿಯೆಗಳು ಆರಂಭಗೊಂಡಿವೆ. ಆಗಸ್ಟ 1ರಿಂದ ಕೊರೊನಾ ಲಾಕ್ಡೌನ್ ನಿರ್ಬಂಧಗಳು ಇನ್ನಷ್ಟು ಸಡಿಲಿಕೆಯಾಗುವ ನಿರೀಕ್ಷೆ ಇದ್ದು ಥಿಯಟರ್ ಹಾಗೂ ಜಿಮ್ಗಳ ಕಾರ್ಯಾರಂಭಕ್ಕೆ ಷರತ್ತು ಬದ್ಧ ಅನುಮತಿ ಸಿಗುವ ನಿರೀಕ್ಷೆ ಇದೆ. ಗುಣಮುಖರ ಪ್ರಮಾಣ ಏರುಗತಿಯಲ್ಲಿರುವುದು ಹಾಗೂ ಅದರೊಟ್ಟಿಗೆ ಬದುಕುವುದು ಜನರಿಗೆ ಅಭ್ಯಾಸವಾಗಿರುವ ಹಿನ್ನೆಲೆಯಲ್ಲಿ ಈ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇನ್ನು ರಾಜ್ಯದಲ್ಲಿ, ಶಾಲೆಗಳ ಆರಂಭ ಅನಿಶ್ಚಿತತೆಯಿಂದ ಕೂಡಿರುವುದರಿಂದ ಸಾರ್ವಜನಿಕ ಶಿಕ್ಷಣ ಇಲಾಖೆ, ಈ ಬಾರಿ 1ರಿಂದ […]
Read More
ತವರಿಗೆ ಮರಳಿದ ಟೆಕ್ಕಿಗಳಿಗೆ ನೆಟ್ವರ್ಕ್ ಸಮಸ್ಯೆ. ಗುರುದತ್ತ ಭಟ್ ಕಾರವಾರ. ಐಟಿ ಉದ್ಯೋಗಿಗಳು ಬೃಹತ್ ನಗರಗಳ ಐಶಾರಾಮಿ ಕಚೇರಿಗಳಲ್ಲೇ ಕೆಲಸ ಮಾಡಬೇಕು ಎಂಬ ಅಲಿಖಿತ ನಿಯಮವನ್ನು ಕೊರೊನಾ ಮುರಿದು ಹಾಕಿದೆ. ವರ್ಕ್ ಫ್ರಂ ಹೋಮ್ ವ್ಯವಸ್ಥೆಯಡಿ ಹಳ್ಳಿ ಮನೆಯ ಕೊಟ್ಟಿಗೆಗಳೂ ಕೂಡ ಐಟಿ ಉದ್ಯೋಗಿಗಳಿಗೆ ಕಚೇರಿಯಾಗಿವೆ. ಕೊರೊನಾ ಸೋಂಕು ವ್ಯಾಪಕವಾದ ಬಳಿಕ ಬೆಂಗಳೂರು, ಮುಂಬಯಿ, ಪೂನಾ ಸೇರಿದಂತೆ ಹಲವು ಬೃಹತ್ ನಗರಗಳಲ್ಲಿನ ಐಟಿ ಕಚೇರಿಗಳು ತಮ್ಮ ಉದ್ಯೋಗಿಗಳಿಗೆ ಮನೆಧಿಯಿಂದ ಕೆಲಸ ಮಾಡಲು ಅವಕಾಶ ನೀಡಿವೆ. ನಗರಗಳಲ್ಲಿ ಕೆಲಸ […]
Read More
ಆನ್ಲೈನ್ ಪೋಕರ್ಗಳಲ್ಲಿ ಡ್ರ್ಯಾಗನ್ನದ್ದೇ ಪ್ರಾಬಲ್ಯ ಕಪ್ಪು ಹಣ ದಂಧೆಗೂ ರಹದಾರಿ. ಗಿರೀಶ್ ಕೋಟೆ ಬೆಂಗಳೂರು. ಚೀನಾದ ಟಿಕ್ಟಾಕ್ ಸೇರಿದಂತೆ 56 ಆ್ಯಪ್ಗಳನ್ನು ಕೇಂದ್ರ ಸರಕಾರ ನಿಷೇಧಿಸಿದ್ದರೂ ಆನ್ಲೈನ್ ಪೋಕರ್ನಲ್ಲಿ ಇವತ್ತಿಗೂ ಚೀನಾ ಆ್ಯಪ್ಗಳ ಪ್ರಾಬಲ್ಯವೇ ಮುಂದುವರಿದಿದೆ. ವಿಶ್ವದಾದ್ಯಂತ ಆನ್ಲೈನ್ನಲ್ಲಿ ಬಾಜಿ ಕಟ್ಟಿ ಜೂಜಾಡುವವರು ಕೋಟ್ಯಂತರ ಮಂದಿ ಇದ್ದಾರೆ. ಬೆಂಗಳೂರಿನಲ್ಲೂ ಸಾವಿರಾರು ಮಂದಿ ಆನ್ಲೈನ್ ಪೋಕರ್ನ ಚಟಕ್ಕೆ ಬಿದ್ದು ಬೀದಿಗೆ ಬಿದ್ದವರಿದ್ದಾರೆ. ಚಿಕ್ಕಪೇಟೆಯೊಂದರಲ್ಲೇ ನೂರಾರು ವ್ಯಾಪಾರಿಗಳು ನಿತ್ಯ ಆನ್ಲೈನ್ ಪೋಕರ್ಗೆ ಲಕ್ಷಗಟ್ಟಲೆ ಬಾಜಿ ಕಟ್ಟುವವರಿದ್ದಾರೆ. ಕಾನೂನುಬಾಹಿರ ಆ್ಯಪ್ಗಳು ಪೋಕರ್ಬಾಜಿ, […]
Read More
ಶಶಿಧರ ಹೆಗಡೆ ಬೆಂಗಳೂರು. ಮುಖ್ಯಮಂತ್ರಿ ಹುದ್ದೆಯಲ್ಲಿ ಒಂದು ವರ್ಷ ಕಳೆದಿರುವ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಸಾಕಷ್ಟು ಒತ್ತಡಗಳ ನಡುವೆಯೂ ನಿರಾಳವಾಗಿರುವುದರ ಹಿಂದೆ ಗೋ ಪ್ರೀತಿಯೂ ಮಿಳಿತವಾಗಿದೆ. ಬಿಎಸ್ವೈ ಅವರು ಮುಂಜಾನೆ ಅಂಬಾ ಎನ್ನುವ ಕರೆ ಕೇಳುತ್ತಲೇ ತಮ್ಮ ನಿವಾಸದ ಬಲ ಪಾರ್ಶ್ವದಲ್ಲಿರುವ ಪುಟ್ಟ ಗೋಶಾಲೆಯತ್ತ ಧಾವಿಸುತ್ತಾರೆ. ಅಲ್ಲಿರುವ ಗೋವುಗಳು ಇವರನ್ನು ಕಂಡ ಕೂಡಲೇ ಪ್ರೀತಿಯ ನೋಟ ಬೀರುತ್ತವೆ. ಕರುಗಳು ಚಂಗನೆ ಜಿಗಿಯುತ್ತವೆ. ಮುಖ್ಯಮಂತ್ರಿಯವರು ಕೆಲ ಸಮಯ ಅಲ್ಲಿಯೇ ಕಳೆದು ಗೋವುಗಳ ಮೈದಡವುತ್ತಾರೆ. ಕರುಗಳನ್ನು ಮುದ್ದಾಡುತ್ತಾರೆ. ಜತೆಗೆ […]
Read More
– ಎನ್. ರವಿಶಂಕರ್. ಕಳೆದ ಹತ್ತು ದಿನಗಳಲ್ಲಿ ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ(ಕೋವಿಡ್ ಹೊರತುಪಡಿಸಿ) ಅತಿಹೆಚ್ಚು ಚರ್ಚೆಯಾದ ವಿಷಯಗಳಿವು. – ಡ್ರೋನ್ ಪ್ರತಾಪ್ ತನಗೆ ಅನ್ವರ್ಥನಾಮವಾಗಿರುವ ತಂತ್ರಜ್ಞಾನ ಸಾಧನದ ಕುರಿತು ಮಾಡಿರುವ ಮೋಸ! – ಭೂಪನೊಬ್ಬ ಮ್ಯಾಟ್ರಿಮೊನಿ ವೆಬ್ಸೈಟ್ಗಳನ್ನು ಬಳಸಿ ಭಾವಿ ವಧುಗಳಿಗೆ ಮಾಡಿರುವ ವಂಚನೆ! – ಇವೆಲ್ಲಕ್ಕೂ ಕಳಶವಿಟ್ಟಂತೆ- ತಮಿಳುನಾಡಿನಲ್ಲಿ ಮಹಾ ವಂಚಕನೊಬ್ಬ ಎಸ್ಬಿಐ ನಕಲಿ ಶಾಖೆಯೊಂದನ್ನು ಸ್ಥಾಪಿಸಿ, ಮೂರು ತಿಂಗಳು ಯಶಸ್ವಿಯಾಗಿ ವಹಿವಾಟು ನಡೆಸಿದ್ದು! ಜಗತ್ತಿನಲ್ಲಿ ನಡೆಯುವ ಎಲ್ಲ ಮೋಸಗಳ ವಿಷಯದಲ್ಲಿ ಒಂದು ಸಾಮ್ಯವಿರುತ್ತದೆ. […]
Read More
ಕಾರ್ಗಿಲ್ ಗಡಿಯಲ್ಲಿ ಒಳನುಗ್ಗಿ ಟೆಂಟ್ ಹೂಡಿದ ಪಾಕಿ ಅತಿಕ್ರಮಣಕಾರರನ್ನು ಹೊಡೆದೋಡಿಸಿ, ಹಿಮಬೆಟ್ಟಗಳ ಮೇಲೆ ವಿಜಯ ಧ್ವಜ ನೆಟ್ಟ ನೆನಪಿನ ದಿನ ಇಂದು. 1999ರ ಜುಲೈ 25ರ, 21 ವರ್ಷಗಳ ಹಿಂದಿನ, ನಮ್ಮ ಯೋಧರ ಸಾಹಸಗಾಥೆಯನ್ನು ನೆನಪಿಸಿಕೊಳ್ಳಲು ಇದು ಸುಸಮಯ. ಕಡಿದಾದ ಬೆಟ್ಟಗಳ ಮೇಲಿನಿಂದ ದಾಳಿ ನಡೆಸುತ್ತಿದ್ದ ವೈರಿಗಳನ್ನು ಹೊಡೆದುರುಳಿಸಿದ ಪ್ರತಿಯೊಬ್ಬ ಯೋಧನ ಕತೆಯೂ ರೋಮಾಂಚಕವೇ. ಒಳನುಸುಳಿದ ಪಾಕಿಗಳು 1999ರ ಫೆಬ್ರವರಿಯಲ್ಲಿ ಪಾಕ್ನೊಂದಿಗೆ ಶಾಂತಿ ಸಂದೇಶದೊಂದಿಗೆ ಅಂದಿನ ನಮ್ಮ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಪಾಕಿಸ್ತಾನದ ಲಾಹೋರ್ಗೆ […]
Read More
– ಶಶಿಧರ ಹೆಗಡೆ. ಮೌನಕ್ಕೆ ಅಪೂರ್ವವಾದ ಶಕ್ತಿಯಿದೆ. ಮೌನ ವ್ರತಧಾರಣೆ ಮಾಡಿದವ ದಿವ್ಯಾನುಭೂತಿಗೆ ಒಳಗಾಗುತ್ತಾನೆ. ಮೌನ ಹೃದಯದ ಭಾಷೆ. ಅದು ಮರ್ಕಟ ಮನಸ್ಸನ್ನು ನಿಯಂತ್ರಿಸುತ್ತದೆ ಎನ್ನುವ ಹಾಗೆ ವ್ಯಾಖ್ಯಾನಗಳಿವೆ. ಮೌನವಾಗಿದ್ದು ಆತ್ಮಾವಲೋಕನ ಮಾಡಿಕೊಂಡವರ ಎದುರು ಹೊಸ ದಾರಿಗಳು ತೆರೆದುಕೊಳ್ಳುತ್ತವೆ. ಹಿಂದಿನ ತಪ್ಪನ್ನು ತಿದ್ದಿಕೊಳ್ಳಲು ಅವಕಾಶ ದೊರಕುತ್ತದೆ. ಮೌನದ ಗವಿಯಿಂದ ಹೊರಬಂದು ಆಡುವ ಮಾತುಗಳಿಗೂ ಅಷ್ಟೇ ಮಹತ್ವವಿರುತ್ತದೆ. ಚತುರರಾದವರು ಮೌನ ಮತ್ತು ಮೌನೋತ್ತರ ಸಂದರ್ಭವನ್ನು ಭವಿಷ್ಯದ ದಾರಿ ಸುಗಮಗೊಳಿಸಲು ಬಳಸುತ್ತಾರೆ. ಅದರಲ್ಲೂ ರಾಜಕಾರಣಿಗಳಿಗೆ ತಂತ್ರಗಾರಿಕೆಯೇ ಜೀವದ್ರವ್ಯ. ರಾಜಕೀಯದ ಜಂಜಾಟದಲ್ಲಿ […]
Read More
– ರಾಜ್ಯದಲ್ಲಿ ಪರ್ಯಾಯ ನಾಯಕತ್ವ ಇದ್ದೇ ಇದೆ, ಆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತೀರ್ಮಾನಿಸುತ್ತಾರೆ. – ಶಶಿಧರ ಹೆಗಡೆ, ಬೆಂಗಳೂರು. ನನ್ನ ಸಾರ್ವಜನಿಕ ಜೀವನದಲ್ಲಿ 40-45 ವರ್ಷದಿಂದ ಎಂದೂ ವಿಶ್ರಾಂತಿ ತೆಗೆದುಕೊಂಡಿಲ್ಲ. ವಿಶ್ರಾಂತಿ ತೆಗೆದುಕೊಂಡರೆ ನನ್ನ ಆರೋಗ್ಯ ಕೆಟ್ಟು ಹೋಗುತ್ತದೆ. ಜೀವನದ ಕೊನೆಯ ಉಸಿರು ಇರುವವರೆಗೆ ಕರ್ತವ್ಯ ನಿರ್ವಹಿಸುತ್ತೇನೆ. ಇದಲ್ಲದೆ ಪರ್ಯಾಯ ಎನ್ನುವುದು ಇದ್ದೇ ಇರುತ್ತದೆ. ಈ ಬಗ್ಗೆ ಪ್ರಧಾನಿಯವರು ಯೋಚನೆ ಮಾಡುತ್ತಾರೆ. ರಾಜ್ಯದಲ್ಲಿ ಬಿಜೆಪಿ ಸದೃಢವಾಗಿದ್ದು, ಯಾವುದೇ ಕೊರತೆಯಾಗುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟವಾಗಿ […]
Read More
ಅಮೆರಿಕ ಹಾಗೂ ಚೀನ ದೇಶಗಳ ನಡುವಿನ ವೈಷಮ್ಯ ದಿನೇ ದಿನೆ ಉಲ್ಬಣಿಸುತ್ತಿದೆ. ಉಭಯ ದೇಶಗಳ ವೈಷಮ್ಯಕ್ಕೆ ಕಾರಣವಾದ ಬೆಳವಣಿಗೆಗಳೇನು? ಅವು ಹೇಗೆ ಮುಂದುವರಿದಿವೆ? ರಾಯಭಾರ ಕಚೇರಿಗಳು ಕ್ಲೋಸ್ ಎರಡು ದಿನ ಹಿಂದೆ, ಚೀನಾದ ರಾಯಭಾರ ಕಚೇರಿಯ ಮೂಲಕ ನಮ್ಮ ದೇಶದ ರಹಸ್ಯಗಳನ್ನು ಅಲ್ಲಿಗೆ ಕದ್ದು ಸಾಗಿಸಲಾಗುತ್ತಿದೆ ಎಂದು ಆರೋಪಿಸಿದ ಅಮೆರಿಕ, ಹ್ಯೂಸ್ಟನ್ನಲ್ಲಿದ್ದ ಆ ಕಚೇರಿಯನ್ನು ಮುಚ್ಚಿಸಿತು. ಇದಕ್ಕೆ ಪ್ರತಿಯಾಗಿ, ಚೆಂಗ್ಡುವಿನಲ್ಲಿದ್ದ ಅಮೆರಿಕದ ರಾಯಭಾರಿ ಕಚೇರಿಯನ್ನು ಚೀನಾ ಮುಚ್ಚಿಸಿದೆ. ಇದಕ್ಕೂ ಮೊದಲು, ಚೀನಾದ ಇಬ್ಬರು ಪ್ರಜೆಗಳು ತನ್ನ ಮಿಲಿಟರಿ […]
Read More