ಮಾರುಕಟ್ಟೆಯಲ್ಲಿ ರಸಗೊಬ್ಬರದ ತೀವ್ರ ಅಭಾವ ಉಂಟಾಗಿದೆ. ರಾಜ್ಯಾದ್ಯಂತ ಉತ್ತಮ ಮಳೆಯಾಗಿದ್ದು, ಕೃಷಿ ಚಟುವಟಿಕೆಗಳೂ ಗರಿಗೆದರಿ ನಡೆಯುತ್ತಿವೆ. ಹೀಗಾಗಿ ರಸಗೊಬ್ಬರ ಕೃಷಿ ವಲಯದ ತಕ್ಷಣದ ಬೇಡಿಕೆಯಾಗಿದೆ. ಒಂದು ತಿಂಗಳಿನಿಂದಲೂ ಮಾರುಕಟ್ಟೆಯಲ್ಲಿ ರಸಗೊಬ್ಬರದ ಅಭಾವ ಉಂಟಾಗಿದ್ದು, ರೈತರಲ್ಲಿ ಹಾಹಾಕಾರವೇ ಕಂಡುಬಂದಿದೆ. ಮುಖ್ಯವಾಗಿ ಯೂರಿಯಾದ ಕೊರತೆ ತಲೆದೋರಿದೆ. ಬಯಲುಸೀಮೆಯಲ್ಲಿ ಬೆಳೆಯುವ ಎಲ್ಲ ಬೆಳೆಗಳಿಗೂ ಸಾರಜನಕವನ್ನು ಪೂರೈಸುವ ಏಕೈಕ ರಸಗೊಬ್ಬರ ಎಂದರೆ ಯೂರಿಯಾ. ಮಳೆ ಚೆನ್ನಾಗಿ ಹನಿಯುತ್ತಿರುವ ಈ ಸಂದರ್ಭದಲ್ಲಿಯೇ ಬೆಳೆಗಳಿಗೆ ತಕ್ಕ ಯೂರಿಯಾ ಕೊಡುವುದು ರೈತರ ರೂಢಿ. ಅದನ್ನು ಸಿಂಪಡಿಸದಿದ್ದರೆ ವ್ಯತಿರಿಕ್ತವಾದ […]
Read More
ಹಲವು ಜಿಲ್ಲೆಗಳಲ್ಲಿ ರಸಗೊಬ್ಬರ ಸಿಗದೆ ರೈತರು ಕಂಗಾಲು ಅಗತ್ಯಕ್ಕಿಂತ ಹೆಚ್ಚು ಪೂರೈಕೆ ಎನ್ನುವ ಸರಕಾರ | ಅಂಗಡಿಗಳಲ್ಲಿನೋ ಸ್ಟಾಕ್. ಮಲ್ಲಪ್ಪ ಸಂಕೀನ್, ಯಾದಗಿರಿ. ಜಗನ್ನಾಥ್ ದೇಸಾಯಿ, ರಾಯಚೂರು. ರಾಜ್ಯದಲ್ಲಿ ಬಹುತೇಕ ಜಿಲ್ಲೆಗಳಲ್ಲಿ ಯೂರಿಯಾ ರಸಗೊಬ್ಬರ ಸಿಗದೆ ರೈತರು ಕಂಗಾಲಾಗಿದ್ದಾರೆ. ಉತ್ತಮ ಮಳೆಯಾಗಿದ್ದರಿಂದ ಉತ್ತಮ ಬೆಳೆಯ ನಿರೀಕ್ಷೆಯಲ್ಲಿದ್ದ ಅನ್ನದಾತರಿಗೆ ಗೊಬ್ಬರದ ಅಲಭ್ಯತೆ ಆತಂಕ ಮೂಡಿಸಿದೆ. ಜಿಲ್ಲೆಗಳಿಗೆ ಹಂಚಿಕೆ ಕಡಿತ, ನಿಧಾನಗತಿಯ ಪೂರೈಕೆಯಿಂದ ತೊಂದರೆಯಾಗಿದೆ ಎನ್ನುವುದು ರೈತರ ಆರೋಪ. ಆದರೆ, ಸರಕಾರ ಮಾತ್ರ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದ ರಸಗೊಬ್ಬರ ಪೂರೈಸಲಾಗಿದೆ […]
Read More