ಭಾರತದ ಮನೋಭೂಮಿಕೆ ಬದಲಿಸುವ ಚೆಲುವ ತರು

– ಅಜ್ಜಂಪುರ ಮಂಜುನಾಥ್‌. ಇತ್ತೀಚಿನ ದಶಕಗಳಲ್ಲಿ ಲಭ್ಯವಾಗಿರುವ ದಾಖಲೆಗಳು ಹಾಗೂ ಕೆಲವು ಮಹತ್ತ್ವದ ಸಾಕ್ಷ್ಯಾಧಾರಗಳು ನಮ್ಮ ಗ್ರಹಿಕೆಗಳನ್ನು ಬದಲಿಸುವಂತಿವೆ. ಅದರಲ್ಲೊಂದು ನಮ್ಮ ಭಾರತೀಯ ಶಿಕ್ಷಣ ಕ್ಷೇತ್ರ ಕುರಿತಾದುದು. ನಾವೆಲ್ಲಾ ನಿಬ್ಬೆರಗಾಗುವಂತಹ ಉಳಿದ ಕ್ಷೇತ್ರಗಳ ಬಗೆಗೆ, ನನ್ನ ಮುಂದಿನ ಅಂಕಣ ಬರೆಹಗಳಲ್ಲಿ ಪ್ರಸ್ತುತ ಪಡಿಸುತ್ತೇನೆ. ಕನಿಷ್ಠ ಕಳೆದ ಐವತ್ತು ವರ್ಷಗಳಿಂದ ಕೆಲವು ಪದ, ಪದಗುಚ್ಛ, ವಾಕ್ಯಗಳನ್ನು ಮತ್ತೆ ಮತ್ತೆ ಕೇಳುತ್ತಿದ್ದೇವೆ. ವಿಶೇಷತಃ ಕಮ್ಯೂನಿಸ್ಟರು- ಸಮಾಜವಾದಿಗಳು ಪ್ರಾರಂಭಿಸಿದ ಈ ‘ಕ್ರುಸೇಡಿಗೆ’ ಎಲ್ಲ ಹುಸಿ-ಸೆಕ್ಯುಲರ್‌ ಪಕ್ಷಗಳೂ ಕೈಜೋಡಿಸಿವೆ. ‘‘ಇಂಡಿಯಾದಲ್ಲಿ ಇಡೀ ಜನಸಮುದಾಯವನ್ನು […]

Read More

ಪುರಿ ಜಗನ್ನಾಥನ ಜಾಗತಿಕ ರಥಯಾತ್ರೆ

– ಡಾ.ಆರತೀ ವಿ.ಬಿ. ಓಡಿಶಾದ ಪುರಿ ಕ್ಷೇತ್ರದ ಜಗನ್ನಾಥ ರಥಯಾತ್ರೆಯು ಜಗದ್ವಿಖ್ಯಾತ. ಭವ್ಯ ಸಾಂಸ್ಕೃತಿಕ ಇತಿಹಾಸವಿರುವ ಈ ರಥಯಾತ್ರೆಯಲ್ಲಿ ನೆರೆಯುವ ಭಕ್ತಸ್ತೋಮದ ಭಕ್ತಿಕ್ತ್ಯುತ್ಸಾಹಗಳಿಗಂತೂ ಎಲ್ಲೆಯೇ ಇರದು! ಯಾವುದೇ ಔಪಚಾರಿಕ ಆಹ್ವಾನವಿಲ್ಲದೆ ಬಂದು ನೆರೆಯುವ ದೇಶವಿದೇಶದ ಲಕ್ಷಗಟ್ಟಲೆ ಜನ ಶ್ರದ್ಧೆಯು ನಮ್ಮನ್ನು ಮೂಕವಿಸ್ಮಿತಗೊಳಿಸುತ್ತದೆ. ರಥಯಾತ್ರೆಯ ಸಂದರ್ಭದಲ್ಲಿ ಓಡಿಶಾದ ಪ್ರಾದೇಶಿಕ ಸಾಹಿತ್ಯ- ಕಲೆ- ಕ್ರೀಡೆಗಳೂ, ಧಾರ್ಮಿಕ ಕಲಾಪಗಳೂ, ವ್ಯಾಪಾರ- ಪ್ರವಾಸೋದ್ಯಮಗಳೂ ಗರಿಗೆದರಿ ನಿಲ್ಲುತ್ತವೆ! ಭಾರತದ ಪ್ರಾಚೀನ ರಥೋತ್ಸವಗಳ ಪೈಕಿ ಒಂದಾದ ಇದು, ವಿಶೇಷವೂ ವಿಭಿನ್ನವೂ ಆದದ್ದು. ಪುರಿ ಕ್ಷೇತ್ರವು ಭಾರತೀಯರು […]

Read More

ಅಗ್ನಿ ‘ಪರೀಕ್ಷೆ’ಯಲ್ಲಿ ಮೊದಲ ಯಶಸ್ಸು

ಕೊರೊನಾ ಒಡ್ಡಿದ ಅಗ್ನಿಪರೀಕ್ಷೆಯನ್ನು ಯಶಸ್ವಿಯಾಗಿ ದಾಟಲಾಗುತ್ತಿದೆ. ರಾಜ್ಯಾದ್ಯಂತ ಗುರುವಾರ ಆರಂಭವಾದ ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಸೂತ್ರವಾಗಿ ನಡೆದಿದೆ. ಸರಕಾರಿ ಯಂತ್ರಾಂಗದ ಕಾಳಜಿ, ಯೋಜನಾಬದ್ಧತೆ, ಕಾರ್ಯ ಸಮನ್ವಯದಿಂದ ವಿದ್ಯಾರ್ಥಿಗಳು ನಿರಾತಂಕವಾಗಿ ಮೊದಲನೇ ದಿನ ಪರೀಕ್ಷೆ ಬರೆದಿದ್ದಾರೆ. ಎಲ್ಲೆಡೆ ‘ಕೋವಿಡ್ ಸಂಹಿತೆ’ಯನ್ನು ಚಾಚೂ ತಪ್ಪದೆ ಪಾಲಿಸಿದ್ದರಿಂದ ಭಯದ ವಾತಾವರಣವಿರಲಿಲ್ಲ. ಸಣ್ಣ ಪುಟ್ಟ ಗೊಂದಲಗಳು, ಒಂದೆರಡು ಅಹಿತಕರ ಘಟನೆಗಳನ್ನು ಹೊರತುಪಡಿಸಿದರೆ ಎಲ್ಲೂ ಕೂಡ ವ್ಯವಸ್ಥೆ ಹಳಿ ತಪ್ಪಿಲ್ಲ. ರಾಜ್ಯ ವ್ಯಾಪಿ ನೋಟ ಇಲ್ಲಿದೆ. ವಿಕ ಬ್ಯೂರೊ ಬೆಂಗಳೂರು ಕೋವಿಡ್-19 ಆತಂಕದ ನಡುವೆ ರಾಜ್ಯಾದ್ಯಂತ […]

Read More

ಕೈಗಾರಿಕೆ ಉತ್ತೇಜನ ಕ್ರಮ – ಉದ್ಯಮ ಕ್ಷೇತ್ರ ನಳನಳಿಸಲು ನೆರವಾಗಲಿ

ಕೈಗಾರಿಕೆಗಳನ್ನು ಆರಂಭಿಸುವುದಕ್ಕೆ ಉತ್ತೇಜನ ನೀಡಲು ಕ್ರಾಂತಿಕಾರಕವಾದ ಕ್ರಮಕ್ಕೆ ರಾಜ್ಯ ಸರಕಾರ ಮುಂದಾಗಿದೆ. ಉದ್ಯಮಿಗಳು ಮೊದಲು ಕೈಗಾರಿಕೆ ಆರಂಭಿಸಿ ಬಳಿಕ ಸಂಬಂಧಿತ ಅನುಮೋದನೆ ಪಡೆಯುವ ಪ್ರಕ್ರಿಯೆಗೆ ಮುಂದಾಗಬಹುದು. ಈ ಸಂಬಂಧ ಕರ್ನಾಟಕ ಇಂಡಸ್ಟ್ರಿಯಲ್‌ ಫೆಸಿಲಿಟೇಷನ್‌ ಕಾಯಿದೆ- 2002ಕ್ಕೆ ತಿದ್ದುಪಡಿ ತರುವ ತೀರ್ಮಾನವನ್ನು ಸಂಪುಟ ಸಭೆ ಕೈಗೊಂಡಿದೆ. ರಾಜ್ಯದ ಉನ್ನತಾಧಿಕಾರ ಸಮಿತಿ ಅನುಮೋದನೆ ಪಡೆದ ಉದ್ಯಮಿಗಳು ಗುರುತಿಸಲಾದ ಭೂಮಿಯಲ್ಲಿ ಕೈಗಾರಿಕೆ ಸ್ಥಾಪನೆ ಚಟುವಟಿಕೆ ಆರಂಭಿಸಬಹುದು. ನಂತರದ 3 ವರ್ಷಗಳಲ್ಲಿ ಕಟ್ಟಡ ನಿರ್ಮಾಣ, ಪರಿಸರ ಮಂಡಳಿ ನಿರಾಕ್ಷೇಪಣ ಪತ್ರ ಸೇರಿ ಸಂಬಂಧಿಸಿದ […]

Read More

ಕೈಗಾರಿಕೋದ್ಯಮಕ್ಕೆ ಟಾನಿಕ್

– ಕೈಗಾರಿಕೆ ಸೌಲಭ್ಯ ಕಾಯಿದೆಗೆ ತಿದ್ದುಪಡಿ, ಸುಗ್ರೀವಾಜ್ಞೆ ಶೀಘ್ರ – ಜಿಲ್ಲಾ ಸಮಿತಿ ಒಪ್ಪಿಗೆ ಸಿಕ್ಕ ಕೂಡಲೇ ಚಟುವಟಿಕೆ ಆರಂಭಕ್ಕೆ ಅಸ್ತು ವಿಕ ಸುದ್ದಿಲೋಕ ಬೆಂಗಳೂರು ಕೊರೊನಾ ಸಂಕಷ್ಟದಿಂದ ನೆಲ ಕಚ್ಚುತ್ತಿರುವ ಆರ್ಥಿಕತೆಗೆ ಕೈಗಾರಿಕೆ ಮೂಲಕ ಪುನಶ್ಚೇತನ ನೀಡಲು ರಾಜ್ಯ ಸಚಿವ ಸಂಪುಟ ಸಭೆ ಮಹತ್ವದ ನಿರ್ಧಾರ ಕೈಗೊಂಡಿದೆ. ಅದರಂತೆ ರಾಜ್ಯ, ಜಿಲ್ಲಾಮಟ್ಟದ ಉನ್ನತಾಧಿಕಾರ ಸಮಿತಿಯಿಂದ ಅನುಧಿಮೋದನೆ ಸಿಕ್ಕ ತಕ್ಷ ಣವೇ ಕಟ್ಟಡ ನಿರ್ಮಾಣ ಸೇರಿ ಮೂಲಸೌಕರ್ಯ ಸಂಬಂಧಿತ ಚಟುವಟಿಕೆಯನ್ನು ಕೈಗಾರಿಕಾ ಸಂಸ್ಥೆಗಳು ಪ್ರಾರಂಭಿಸಬಹುದು. ಈ ಸಂಬಂಧ […]

Read More

ಮೊದಲ ದಿನ ನಿರಾಳ – ಎಸ್ಸೆಸ್ಸೆಲ್ಸಿ ಪರೀಕ್ಷೆ ಶುಭಾರಂಭ | 98.3% ವಿದ್ಯಾರ್ಥಿಗಳು ಹಾಜರು

ವಿಕ ಸುದ್ದಿಲೋಕ ಬೆಂಗಳೂರು.  ಕೊರೊನಾ ಆತಂಕದ ನಡುವೆ ರಾಜ್ಯಾದ್ಯಂತ ಎಸ್ಸೆಸ್ಸೆಲ್ಸಿ ದ್ವಿತೀಯ ಭಾಷೆ ಇಂಗ್ಲಿಷ್ ಹಾಗೂ ಕನ್ನಡ ಪರೀಕ್ಷೆಗಳು ಗುರುವಾರ ಯಶಸ್ವಿಯಾಗಿ ನಡೆದಿದ್ದು, ಶೇ.98.3ರಷ್ಟು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಶಿಕ್ಷಣ ಸಚಿವ ಸುರೇಶ್ ಕುಮಾರ್, ಶಿಕ್ಷಣ ಇಲಾಖೆ ಅಧಿಕಾರಿಗಳು, ಜಿಲ್ಲಾಡಳಿತ, ಪೊಲೀಸರು, ಶಿಕ್ಷಕರು, ಪೋಷಕರು ಮತ್ತು ಸಾರ್ವಜನಿಕರು ಎಲ್ಲರೂ ಸೇರಿ ದೇಶಾದ್ಯಂತ ಕುತೂಹಲ ಕೆರಳಿಸಿದ್ದ, ವ್ಯಾಪಕ ಚರ್ಚೆಗೆ ಗುರಿಯಾಗಿದ್ದ ಪರೀಕ್ಷೆಯನ್ನು ಯಾವುದೇ ದೊಡ್ಡ ಸಮಸ್ಯೆಗಳಿಲ್ಲದೆ ನಡೆಸುವಲ್ಲಿ ಯಶಸ್ವಿಯಾದರು. ರಾಜ್ಯಾದ್ಯಂತ ಒಟ್ಟು 2879 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಜರುಗಿತು. […]

Read More

ನೇಪಾಳ ದೊರೆ ಜತೆ ಸ್ನೇಹ ನಟನೆ

– ನಿರಂಜನ – ಸಂಗ್ರಹ ನಿರೂಪಣೆ: ಸುಧೀಂದ್ರ ಹಾಲ್ದೊಡ್ಡೇರಿ. ಭಾರತದ ಮೇಲೆ ಆಕ್ರಮಣ ಮಾಡುವುದಕ್ಕೆ ಮುನ್ನಒಂದು ಸುಸಜ್ಜಿತ ರಂಗಭೂಮಿಯನ್ನು ಚೀನಾ ಸಿದ್ಧಪಡಿಸಬೇಕಿತ್ತು. ಅದಕ್ಕಾಗಿ ನೆರೆಹೊರೆಯ ರಾಷ್ಟ್ರಗಳನ್ನು ಭಾರತದಿಂದ ಬೇರ್ಪಡಿಸಲು ಅದು ಮುಂದಾಯಿತು. ಮೊದಲನೆಯದಾಗಿ, ಜವಾಹರಲಾಲರ ಮಿತ್ರರಾಗಿದ್ದ ಉ-ನೂ ಅವರ ನಾಯಕತ್ವದಲ್ಲಿದ್ದ ಬರ್ಮಾ, ಚೀನಾ ಗಣರಾಜ್ಯಕ್ಕೆ ಮನ್ನಣೆಕೊಟ್ಟ ಮೊದಲ ರಾಷ್ಟ್ರ. ಆದರೂ ಬರ್ಮಾ ದೇಶದೊಳಗಿನ ಕಮ್ಯೂನಿಸ್ಟ್‌ರ ಮೂಲಕ ಒಂದು ಅಂತರ್ಯುದ್ಧವನ್ನು ಚೀನಾ ಅಲ್ಲಿ ಆರಂಭಿಸಿತು. ಅದು ಅತಿ ಶೀಘ್ರದಲ್ಲಿಯೇ ವಿಫಲವೂ ಆಯಿತು. ತನ್ನ ದೇಶವನ್ನು 1925ರಿಂದ 1947ರವರೆಗೆ ಆಳುತ್ತಿದ್ದ […]

Read More

ಕೋವಿಡ್ ಕಾಲದಲ್ಲಿ ಸೈಬರ್ ವಂಚನೆ ಜಾಲ – [email protected] ನಿಂದ ಮೇಲ್ ಬರಬಹುದು ಹುಷಾರು!

ವಂಚಕರು ಮತ್ತು ಭ್ರಷ್ಟಾಚಾರಿಗಳು ತಮಗೆ ಸಿಗುವ ಯಾವುದೇ ಅವಕಾಶವನ್ನು ಬಿಟ್ಟುಕೊಡುವುದಿಲ್ಲ. ಇದಕ್ಕೆ ಸಾಕ್ಷಿ ಕೊರೊನಾ ಹುಟ್ಟಿಸಿರುವ ಭಯದ ವಾತಾವರಣದಲ್ಲೂ ವಂಚಕರು ತಮ್ಮ ನೈಪುಣ್ಯತೆ ಮೆರೆಯುತ್ತಿರುವುದು! ಆತಂಕದ ಪರಿಸ್ಥಿತಿಯನ್ನು ಮೋಸಗಾರರು ತಮ್ಮ ಲಾಭದ ಅವಕಾಶವಾಗಿ ಬಳಸಿಕೊಳ್ಳುತ್ತಿದ್ದಾರೆ. ಉಚಿತವಾಗಿ ಕೋವಿಡ್ ಟೆಸ್ಟ್ ಮಾಡಲಾಗುವುದು ಎಂದು ನಿಮ್ಮ ಫೋನು, ಮೇಲ್ ಐಡಿ, ವಾಟ್ಸ್ಆ್ಯಪ್‌ಗಳಿಗೆ ಕೆಲವು ಸಂದೇಶಗಳು ಬರುತ್ತಿದ್ದರೆ ಅಂಥವುಗಳನ್ನು ನಂಬಲು ಹೋಗಬೇಡಿ. ಅವು ನಿಮ್ಮ ಹಣವನ್ನು ಲಪಟಾಯಿಸುವ ಸಂದೇಶಗಳಾಗಿರುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಜೂನ್ 21ರಿಂದ ಇಂಥ ಫಿಶ್ಯಿಂಗ್ ಮೇಲ್‌ಗಳು ರವಾನೆಯಾಗುತ್ತಿವೆ. ಮೋಸಗಾರರ […]

Read More

ಜಾರ್ಜ್ ಪ್ರತಿಪಾದಿಸಿದ್ದ ಆತ್ಮನಿರ್ಭರ ಮಂತ್ರ

ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿ ಇಂದಿಗೆ (ಜೂನ್ 25) 45 ವರ್ಷ. ಎಮರ್ಜೆನ್ಸಿ ಹೀರೊ, ಜನನಾಯಕ ಜಾರ್ಜ್ ಫರ್ನಾಂಡಿಸ್ ಅವರು ಪ್ರತಿಪಾದಿಸುತ್ತಿದ್ದ ಸ್ವದೇಶಿ, ಸ್ವಾವಲಂಬನೆ, ಉದ್ಯೋಗ ಸೃಷ್ಟಿ, ಆತ್ಮನಿರ್ಭರ ವಿಚಾರಗಳು ಈಗ ಹೆಚ್ಚು ಪ್ರಸ್ತುತವಾಗಿವೆ. – ಅನಿಲ್ ಹೆಗ್ಡೆ. 1974ರ ಐತಿಹಾಸಿಕ ರೈಲು ಮುಷ್ಕರದ ನೇತೃತ್ವ ವಹಿಸಿದ್ದ ಕರ್ನಾಟಕದ ಹೆಮ್ಮೆಯ ಪುತ್ರ ಜಾರ್ಜ್ ಫರ್ನಾಂಡಿಸ್ ತುರ್ತುಪರಿಸ್ಥಿತಿಯಲ್ಲಿ ಭೂಮಿಗತ ಕ್ರಾಂತಿಕಾರಿ ಆಂದೋಲನ ನಡೆಸಿ ನಂತರ ಬರೋಡಾ ಡೈನಮೈಟ್ ಮೊಕದ್ದಮೆಯಲ್ಲಿ ಬಂಧನಕ್ಕೊಳಗಾಗಿ ಜೈಲಿನಿಂದಲೇ ಬಿಹಾರಿನ ಮುಜಫರ್‌ ಪುರದಿಂದ 3.34 […]

Read More

ವೃತ್ತಿಪರ ಕೋರ್ಸ್ ಪ್ರವೇಶಕ್ಕೆ ವೇದಿಕೆ – ಸಿಇಟಿ, ನೀಟ್, ಡಿಎಸ್ಎಟಿ ಪರೀಕ್ಷೆಗೆ ದಯಾನಂದ ಸಾಗರ ವಿವಿ ಉಚಿತ ಆನ್‌ಲೈನ್‌ ತರಗತಿ

ವಿಕ ಸುದ್ದಿಲೋಕ ಬೆಂಗಳೂರು. ಕೊರೊನಾ ಹಿನ್ನೆಲೆಯಲ್ಲಿ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗದೆ ಚಿಂತಿತರಾಗಿದ್ದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ದಯಾನಂದ ಸಾಗರ್ ವಿಶ್ವವಿದ್ಯಾಲಯ ಸಿಇಟಿ, ನೀಟ್ ಮತ್ತು ಡಿಎಸ್ಎಟಿಗೆ ಸಿದ್ಧತೆ ಮಾಡಿಕೊಳ್ಳಲು ಉಚಿತ ಆನ್‌ಲೈನ್‌ ತರಗತಿಗಳನ್ನು ‘ವಿಜಯ ಕರ್ನಾಟಕ’ ಸಹಯೋಗದಲ್ಲಿ ಪ್ರಾರಂಭಿಸಿದೆ. ನಗರದ ಮಲ್ಲೇಶ್ವರದಲ್ಲಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ)ದ ಸಭಾಂಗಣದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಆನ್‌ಲೈನ್‌ ತರಗತಿಗಳಿಗೆ ಚಾಲನೆ ನೀಡಿದರು. ‘‘ಕೊರೊನಾ ವೈರಸ್ ಸೋಂಕಿನ ಭೀತಿಯಿಂದ ತರಬೇತಿ […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top