ದಿನವೂ ಲಕ್ಷಾಂತರ ಜನರಿಗೆ ಸೋಂಕು ತಗಲುವ ಸಾಧ್ಯತೆಯಿಲ್ಲ! – ಊಹಾತ್ಮಕ, ಉತ್ಪ್ರೇಕ್ಷಿತ ಅಂಕಿ ಸಂಖ್ಯೆಗಳಿಗೆ ಕಿವಿಗೊಡಬೇಡಿ, ಅನಗತ್ಯ ಭೀತಿ ಬಿಟ್ಹಾಕಿ

– ಸುಧೀಂದ್ರ ಹಾಲ್ದೊಡ್ಡೇರಿ. ನೀವು ಇತ್ತೀಚಿನ ದಿನಗಳಲ್ಲಿ ‘ಡೇಟಾ ಸೈನ್ಸ್’, ‘ಬಿಗ್‌ ಡೇಟಾ’, ‘ಡೇಟಾ ಅನಾಲಿಟಿಕ್ಸ್’, ‘ಡೇಟಾ ಮೈನಿಂಗ್’ ಮುಂತಾದ ಶಬ್ದಗಳನ್ನು ಕೇಳಿರುತ್ತೀರಿ. ಇವೆಲ್ಲವೂ ಬೃಹತ್ ಪ್ರಮಾಣದ ಅಂಕಿ-ಅಂಶಗಳ ಆಧಾರದ ಮೇಲೆ ಮಾರುಕಟ್ಟೆಯಲ್ಲಿ ಯಾವ ವಸ್ತುವಿಗೆ, ಯಾವ ಸಮಯದಲ್ಲಿ ಎಷ್ಟು ಬೇಡಿಕೆಯಿರುತ್ತದೆಂಬುದನ್ನು ಗಣಿತ ಮಾದರಿಗಳ ಮೂಲಕ ಕಂಡುಕೊಳ್ಳಲು ಬಳಸುತ್ತಿರುವ ಕಂಪ್ಯೂಟರ್ ಕ್ಷೇತ್ರದ ಸಲಕರಣೆಗಳು. ಸದ್ಯದ ಬಳಕೆ, ವರ್ಷದಿಂದ ವರ್ಷಕ್ಕೆ ಬಳಕೆಯಲ್ಲಿನ ಏರಿಕೆಗಳ ಆಧಾರದ ಮೇಲೆ ಮುಂಬರುವ ದಿನಗಳಲ್ಲಿ ಮಾರುಕಟ್ಟೆ ಹೇಗಿರುತ್ತದೆಂಬ ಅಂದಾಜು ನೀಡುವ ಲೆಕ್ಕಾಚಾರವೇ ‘ಪ್ರಿಡಿಕ್ಟಿವ್ ಅನಲಿಟಿಕ್ಸ್’. […]

Read More

ಇವೆಲ್ಲವೂ ಕೋವಿಡ್‌ ಸಾವುಗಳಲ್ಲ – ಕೊರೊನಾ ಸೋಂಕಿನ ಬಗ್ಗೆ ಅತಿಯಾದ ಭಯ ಸಲ್ಲ

ಕೊರೊನಾ ಸೋಂಕು ಪತ್ತೆ ಹಾಗೂ ಸಾವಿನ ಪ್ರಕರಣಗಳಲ್ಲಿ ಕಳೆದ ಹದಿನೈದು ದಿನಗಳಿಂದ ಪ್ರತಿದಿನವೂ ಒಂದೊಂದು ಹೊಸ ದಾಖಲೆ ಸೃಷ್ಟಿಯಾಗುತ್ತಲೇ ಇದೆ. ಬುಧವಾರ ರಾಜ್ಯದಲ್ಲಿ ಒಟ್ಟಾರೆ 87 ಸಾವು ಹಾಗೂ ರಾಜಧಾನಿಯಲ್ಲೇ 60 ಮಂದಿ ಸತ್ತಿರುವುದು ವರದಿಯಾಗಿದೆ. ಈ ಸಾವುಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ, ಇವರಲ್ಲಿ ಎಲ್ಲರೂ ಒಂದಲ್ಲ ಒಂದು ಕೋಮೋರ್ಬಿಡಿಟೀಸ್‌ ಅಥವಾ ಪೂರ್ವಕಾಯಿಲೆಗಳಿಂದ ನರಳುತ್ತಿದ್ದುದು ಖಚಿತವಾಗಿದೆ. ಹೆಚ್ಚಿನ ರಕ್ತದೊತ್ತಡ, ಸಕ್ಕರೆ ಕಾಯಿಲೆ, ಕಿಡ್ನಿ ಸಮಸ್ಯೆ ಮತ್ತು ಉಸಿರಾಟದ ತೊಂದರೆಗಳಿಂದ ಬಳಲುತ್ತಿದ್ದವರಿಗೆ ಕೊರೊನಾ ಸೋಂಕಿನ ಪರಿಣಾಮ ಈ ಕಾಯಿಲೆಗಳು ಉಲ್ಬಣಾವಸ್ಥೆಗೇರಿ […]

Read More

ರಾಜಸ್ಥಾನದಲ್ಲೂ ಅನರ್ಹತೆ ಅಸ್ತ್ರ?

– ವಿಶ್ವಾಸಮತ ಯಾಚನೆಗೆ ಗೆಹ್ಲೋಟ್ ನಿರ್ಧಾರ | ಸರಕಾರ ಉಳಿಸಿಕೊಳ್ಳುವುದೇ ತಕ್ಷಣದ ಆದ್ಯತೆ | ಗುರುವಾರ ಸಂಪುಟ ವಿಸ್ತರಣೆ ಸಾಧ್ಯತೆ ಜೈಪುರ: ಸಚಿನ್ ಪೈಲಟ್ ಬಂಡಾಯದ ನಡುವೆಯೂ ರಾಜಸ್ಥಾನದಲ್ಲಿ ಸರಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಾಂಗ್ರೆಸ್ ಪ್ರಯತ್ನ ಆರಂಭಿಸಿದೆ. ಅದರ ಭಾಗವಾಗಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿಶ್ವಾಸಮತ ಯಾಚನೆಗೆ ನಿರ್ಧರಿಸಿದ್ದಾರೆ. ಜತೆಗೆ, ಪೈಲಟ್ ಬಣದಲ್ಲಿರುವ ಶಾಸಕರನ್ನು ಅನರ್ಹಗೊಳಿಸುವ ನಿಟ್ಟಿನಲ್ಲಿಯೂ ಚಿಂತನೆ ನಡೆಯುತ್ತಿದೆ. ಸದನದಲ್ಲಿ ಒಮ್ಮೆ ವಿಶ್ವಾಸಮತ ಸಾಬೀತುಪಡಿಸಿದರೆ ಆರು ತಿಂಗಳ ಸರಕಾರಕ್ಕೆ ಯಾವ ಆತಂಕವೂ ಇಲ್ಲ. ಹೀಗಾಗಿ ವಿಶ್ವಾಸಮತ […]

Read More

ಇಂಗ್ಲಿಷ್‌ನಲ್ಲೇ ಹೆಚ್ಚು ವಿದ್ಯಾರ್ಥಿಗಳು ಫೇಲ್! – ಕೊರೊನಾ ಲಾಕ್‌ಡೌನ್‌ ಎಫೆಕ್ಟ್, ಗೊಂದಲಕಾರಿ ಪ್ರಶ್ನೆಗಳು ಕಾರಣ

ವಿಕ ಸುದ್ದಿಲೋಕ ಬೆಂಗಳೂರು ಗೊಂದಲಕಾರಿ ಪ್ರಶ್ನೆಗಳು ಹಾಗೂ ಸುಮಾರು ಎರಡು ತಿಂಗಳ ಕಾಲ ಕೋವಿಡ್‌-19 ಲಾಕ್‌ಡೌನ್‌ನಿಂದಾಗಿ ಈ ಬಾರಿ ದ್ವಿತೀಯ ಪಿಯುಸಿ ಇಂಗ್ಲಿಷ್‌ ಭಾಷಾ ವಿಷಯದಲ್ಲಿ ಶೇ.5ರಷ್ಟು ಕಡಿಮೆ ಫಲಿತಾಂಶ ಬಂದಿದೆ ಎನ್ನಲಾಗಿದೆ. ಅದರಲ್ಲೂ ಪ್ರಮುಖವಾಗಿ ಕಲಾ ವಿಭಾಗದ ಹಾಗೂ ಗ್ರಾಮೀಣ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇಂಗ್ಲಿಷ್‌ ವಿಷಯದಲ್ಲಿ ಅನುತ್ತೀರ್ಣಗೊಂಡಿರುವುದು ಕಂಡು ಬಂದಿದೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಕಲಾ ವಿಭಾಗದ ಫಲಿತಾಂಶವು ಶೇ.9.26ರಷ್ಟು ಕುಸಿತಗೊಂಡಿದೆ. ಕಲಾ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾಗಿದ್ದ ಒಟ್ಟು 1,98,875 ವಿದ್ಯಾರ್ಥಿಗಳ […]

Read More

ಉಡುಪಿ ಫಸ್ಟ್, ವಿಜಯಪುರ ಲಾಸ್ಟ್

– ದಕ್ಷಿಣ ಕನ್ನಡ 2, ಕೊಡಗು ಜಿಲ್ಲೆಗೆ 3ನೇ ಸ್ಥಾನ – 88 ಕಾಲೇಜುಗಳು ಝೀರೋ, 92 ಕಾಲೇಜು ಶತಕ ಸಾಧನೆ – ಕೊರೊನಾ ಭಯದ ಮಧ್ಯೆಯೇ ಇಂಗ್ಲಿಷ್ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳು ವಿಕ ಸುದ್ದಿಲೋಕ ಬೆಂಗಳೂರು ಪಿಯು ದ್ವಿತೀಯ ಪರೀಕ್ಷೆಯ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ಜಿಲ್ಲಾವಾರು ಫಲಿತಾಂಶದಲ್ಲಿ ಈ ಬಾರಿಯೂ ಉಡುಪಿ ಶೇ.90.71 ರಿಸಲ್ಟ್ನೊಂದಿಗೆ ಪ್ರಥಮ ಸ್ಥಾನದಲ್ಲಿದ್ದರೆ, ವಿಜಯಪುರ(ಶೇ.54.22) ಕೊನೆಯ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ದಕ್ಷಿಣ ಕನ್ನಡ(ಶೇ.90.71) ಇದ್ದರೆ ಮೂರನೇ ಸ್ಥಾನದಲ್ಲಿ ಕೊಡಗು ಜಿಲ್ಲೆ(ಶೇ.81.53) ಇದೆ. […]

Read More

ಗ್ರಾಮೀಣರ ಸಫಲ ಸಾಧನೆ- ಮುಂದಿನ ಕಲಿಕೆಯತ್ತ ಗಮನ ಬೇಕು

ಪಿಯುಸಿ ದ್ವಿತೀಯ ವರ್ಷದ ಪರೀಕ್ಷೆಯ ಫಲಿತಾಂಶ ಮಂಗಳವಾರ ಪ್ರಕಟವಾಗಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಫಲಿತಾಂಶದಲ್ಲಿ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ವಿಜ್ಞಾನದಲ್ಲಿ ಕಳೆದ ವರ್ಷಕ್ಕಿಂತ ಶೇ.9ರಷ್ಟು ಹೆಚ್ಚಿನ ಹಾಗೂ ಕಲಾ ಮತ್ತು ವಾಣಿಜ್ಯ ವಿಭಾಗದಲ್ಲಿ ಕಡಿಮೆ ಫಲಿತಾಂಶ ಬಂದಿದೆ. ಈ ಬಾರಿ ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಹೆಚ್ಚು ಕಡಿಮೆ ಹತ್ತಿರದಲ್ಲೇ ಗ್ರಾಮೀಣ ವಿದ್ಯಾರ್ಥಿಗಳು ಸಹ ಫಲಿತಾಂಶ ಪಡೆದಿರುವುದು ಒಂದು ಅಚ್ಚರಿಯ ಹಾಗೂ ಶ್ಲಾಘನೀಯ ವಿಚಾರ. ರೂಢಿಯಂತೆ ಕರಾವಳಿಯ ಜಿಲ್ಲೆಗಳು ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದಿವೆ. ಗ್ರಾಮೀಣ […]

Read More

ಬಡತನದಲ್ಲೂ ಅರಳಿದ “ಕಲೆ’

ದ್ವಿತೀಯ ಪಿಯು 61.80% ರಿಸಲ್ಟ್ | ಕಲಾ ವಿಭಾಗದಲ್ಲಿ ಗ್ರಾಮಾಂತರ ವಿದ್ಯಾರ್ಥಿಗಳ ಸಾಧನೆ ಸಾರ್ವಕಾಲಿಕ ಗರಿಷ್ಠ ಫಲಿತಾಂಶ | ಕೊರೊನಾ ಅವಧಿಯ ಇಂಗ್ಲಿಷ್ ಪರೀಕ್ಷೆಯಲ್ಲಿ ಹೆಚ್ಚು ನಪಾಸು. ವಿಕ ಸುದ್ದಿಲೋಕ ಬೆಂಗಳೂರು : ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಈ ಬಾರಿ ಸರಾಸರಿ ಶೇ.61.80ರಷ್ಟು ವಿದ್ಯಾರ್ಥಿಗಳು ಪಾಸಾಗುವ ಮೂಲಕ ಸಾರ್ವಕಾಲಿಕ ದಾಖಲೆ ಫಲಿತಾಂಶ ಪ್ರಕಟವಾಗಿದೆ. ಈ ನಡುವೆ ಕಷ್ಟನಷ್ಟ, ಸೌಕರ್ಯ ಕೊರತೆಗಳನ್ನೂ ಮೀರಿ ಹಲವಾರು ವಿದ್ಯಾರ್ಥಿಗಳು ಟಾಪರ್‌ಗಳಾಗಿ ಹೊರಹೊಮ್ಮಿದ್ದಾರೆ. ಮುಖ್ಯವಾಗಿ ಕಲಾ ವಿಭಾಗದಲ್ಲಿ ಟಾಪ್ ಸ್ಥಾನ ಪಡೆದಿರುವ ಬಹುತೇಕ […]

Read More

ಆರ್ಥಿಕತೆ ಚೇತರಿಕೆಗೆ ಸಾಕ್ಷಿ – ಗೂಗಲ್‌ನಿಂದ 75 ಸಾವಿರ ಕೋಟಿ ರೂ. ಹೂಡಿಕೆ

ಗಡಿಯಲ್ಲಿ ಚೀನಾ ಬೆದರಿಕೆ, ಗಡಿಯೊಳಕ್ಕೆ ಕೊರೊನಾ ವೈರಸ್ ಹಾವಳಿ ಉಂಟು ಮಾಡಿರುವ ನಕಾರಾತ್ಮಕ ಪರಿಣಾಮಗಳ ನಡುವೆಯೇ ಭಾರತದ ಆರ್ಥಿಕತೆಗೆ ಹೊಸ ಹುಮ್ಮಸ್ಸು ತರುವ ಬೆಳವಣಿಗೆ ಕಂಡು ಬಂದಿದೆ. ಜಗತ್ತಿನ ಅತಿದೊಡ್ಡ ಟೆಕ್ ಕಂಪನಿ ಗೂಗಲ್ ಮುಂಬರುವ 5ರಿಂದ 7 ವರ್ಷಗಳಲ್ಲಿ 75 ಸಾವಿರ ಕೋಟಿ ರೂಪಾಯಿ ಹೂಡಿಕೆ ಮಾಡುವ ಘೋಷಣೆ ಮಾಡಿದೆ. ಸೋಮವಾರ ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಮೂಲದವರೇ ಆದ ಗೂಗಲ್ ಸಿಇಒ ಸುಂದರ್ ಪಿಚೈ ಜೊತೆ ನಡೆಸಿದ ಮಾತುಕತೆಯ ಬೆನ್ನೆಲ್ಲೇ ಆ […]

Read More

ಇರಿ ನಿಗೂಢವಾಗಿ ಕತ್ತಲಿನಂತೆ ಎರಗಿ ದಿಡೀರನೆ ಮಿಂಚಿನಂತೆ

– ಹರೀಶ್‌ ಕೇರ. ಎಲ್ಲ ಯುದ್ಧಕಲೆಯೂ ನಿಂತಿರುವುದು ಮೋಸಗೊಳಿಸುವುದು ಹೇಗೆ ಎಂಬುದರ ಮೇಲೆ. ಹೀಗಾಗಿ, ನಾವು ದಾಳಿ ಮಾಡಲು ಸಿದ್ಧರಾಗಿದ್ದಾಗ, ನಾವು ದುರ್ಬಲರಂತೆ ಕಾಣಿಸಬೇಕು. ನಮ್ಮ ಶಕ್ತಿಗಳನ್ನು ಪ್ರಯೋಗಿಸುವಾಗ, ನಾವು ನಿಷ್ಕ್ರಿಯರಂತೆ ಕಾಣಿಸಬೇಕು. ನಾವು ಹತ್ತಿರ ಇರುವಾಗ, ದೂರ ಇದ್ದೇವೆ ಎಂದು ಶತ್ರುವಿಗೆ ಭಾಸವಾಗುವಂತೆ ಇರಬೇಕು; ದೂರವಿದ್ದಾಗ, ನಾವು ಹತ್ತಿರವೇ ಇದ್ದೇವೆ ಎಂದು ಆತ ನಂಬುವಂತಿರಬೇಕು. ಈ ಮಾತುಗಳು ಇರುವುದು ಕ್ರಿಸ್ತಪೂರ್ವ 5ನೇ ಶತಮಾನದ ಸತ್‌ ತ್ಸು ಎಂಬ ಚೀನೀ ಸೇನಾ ತಂತ್ರಗಾರ ಬರೆದ ‘ಆರ್ಟ್‌ ಆಫ್‌ […]

Read More

ವಾವ್ಹ್‌.. ವಾಂಗ್‌ಚುಕ್

54 ವರ್ಷದ ವಾಂಗ್‌ಚುಕ್‌ ಪ್ರತಿಭೆಯ ಖನಿ, ಹಲವು ಸಾಧನೆಗಳ ಸಾರಥಿ, ಬಾಯ್ಕಾಟ್‌ ಚೀನಾ ಅಭಿಯಾನಕ್ಕೆ ವೇಗ ನೀಡಿದ ರೂವಾರಿ. – ಮಲ್ಲಿಕಾರ್ಜುನ ತಿಪ್ಪಾರ. ಗಲ್ವಾನ್‌ ಕಣಿವೆಯಲ್ಲಿ ಚೀನಾ ಅಟ್ಟಹಾಸಕ್ಕೆ ನಮ್ಮ ಯೋಧರು ಹುತಾತ್ಮರಾದರಲ್ಲ ಅದೇ ಕ್ಷ ಣ ದೇಶದಲ್ಲೊಂದು ‘ಬಾಯ್ಕಾಟ್‌ ಚೀನಾ’ ಆಂದೋಲನ ಇದ್ದಕ್ಕಿಂತ ವೇಗ ಪಡೆದುಕೊಂಡಿತು. ಅದರ ಹಿಂದಿನ ಶಕ್ತಿಯೇ ಈ ಸೋನಮ್‌ ವಾಂಗ್‌ಚುಕ್‌. ‘ಚೀನಾ ಕೋ ಜವಾಬ್‌’ ಸರಣಿ ವಿಡಿಯೋಗಳನ್ನು ಹರಿಬಿಟ್ಟ ಈ ಲಡಾಖಿ ವ್ಯಕ್ತಿಯ ಹಿನ್ನೆಲೆಯನ್ನು ತಿಳಿದರೆ ವ್ಯಕ್ತಿಯೊಬ್ಬ ಇಷ್ಟೆಲ್ಲ ಕೆಲಸಗಳನ್ನು ಮಾಡಬಹುದೇ, […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top