ಸಮರ ವೀರನ ಆಗಮನ, ವಾಯುಪಡೆಗೆ ಭೀಮ ಬಲ

– ಮೊದಲ ಕಂತಿನ ಐದು ರಫೇಲ್ ಜೆಟ್ ಭಾರತದ ತೆಕ್ಕೆಗೆ – ತಂಟೆಕೋರ ಚೀನಾ-ಪಾಕ್ ಜೋಡಿ ಎದೆಯಲ್ಲಿ ನಡುಕ. ಹೊಸದಿಲ್ಲಿ/ಅಂಬಾಲಾ: ಭಾರತೀಯ ರಕ್ಷಣಾ ಸಾಮರ್ಥ್ಯವನ್ನು ಎದುರಾಳಿಗಳ ಎದೆಯಲ್ಲಿ ನಡುಕ ಹುಟ್ಟಿಸುವ ಮಟ್ಟಕ್ಕೆ ಎತ್ತರಿಸಬಲ್ಲ ಯುದ್ಧ ‘ವಿಮಾನಗಳ ರಾಜ’ ರಫೇಲ್ 5 ಜೆಟ್‌ಗಳು ಬುಧವಾರ ಮಧ್ಯಾಹ್ನ ಹರಿಯಾಣದ ಅಂಬಾಲಾ ವಾಯುನೆಲೆಗೆ ಬಂದಿಳಿದಿವೆ. ಒಟ್ಟು 36ರ ಪೈಕಿ ಮೊದಲ ಬ್ಯಾಚ್‌ನ 5 ಯುದ್ಧ ವಿಮಾನಗಳನ್ನು ಫ್ರಾನ್ಸ್ ಸರಕಾರ ಒಪ್ಪಿಸಿದೆ. ಸೋಮವಾರ ಫ್ರಾನ್ಸ್‌ನಿಂದ ಹಾರಿದ್ದ 5 ರಫೇಲ್ ಜೆಟ್‌ಗಳ ಪೈಕಿ ಮೂರು ಸಿಂಗಲ್ […]

Read More

ಭಾರತವೇ ಹುಲಿಗಳ ತವರು

ಇಂದು (ಜುಲೈ 29) ವಿಶ್ವ ಹುಲಿ ದಿನ. ರಷ್ಯಾದ ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ 2010ರ ಜುಲೈ 29ರಂದು ನಡೆದ ‘ಹುಲಿ ಶೃಂಗ’ದಲ್ಲಿ ಮೊದಲ ಬಾರಿ  ‘ವಿಶ್ವ ಹುಲಿ ದಿನ’ ಆಚರಿಸಿ, ಹುಲಿ ಸಂರಕ್ಷ ಣೆ ಜಾಗೃತಿ ಮೂಡಿಸಲು ನಿರ್ಧರಿಸಲಾಯಿತು. ಬೇಟೆ, ಅಂಗಾಂಗಗಳಿಗಾಗಿ ಹುಲಿಗಳ ಹತ್ಯೆಗೆ ತಡೆಯೊಡ್ಡುವುದಲ್ಲದೆ ಹುಲಿಗಳ ನೈಸರ್ಗಿಕ ವಾಸತಾಣಗಳ ರಕ್ಷ ಣೆಯೂ ಕೂಡ ಜಾಗೃತಿಯ ಬಹುಮುಖ್ಯ ಭಾಗವಾಗಿದೆ. ವಿಶ್ವದಲ್ಲೇ ಅತಿ ಹೆಚ್ಚು ಹುಲಿಗಳು (2,967) ಮತ್ತು ಹುಲಿ ರಕ್ಷಿತಾರಣ್ಯ (50) ಗಳನ್ನು ಭಾರತ ಹೊಂದಿದೆ. ಕೇವಲ 12 […]

Read More

ಉದ್ಯಮದ ಸವ್ಯಸಾಚಿ ಆಗಿದ್ದ ಕಾಫಿ ಕಿಂಗ್ ವಿ.ಜಿ. ಸಿದ್ಧಾರ್ಥ

– ಕೆ.ಸಿ.ಚಂದ್ರಪ್ಪ. ವಿ.ಜಿ. ಸಿದ್ಧಾರ್ಥ ಕೇವಲ ಎರಡೂವರೆ ಲಕ್ಷ ಹಣವನ್ನು 1985ರಲ್ಲಿ ಷೇರು ಮಾರುಕಟ್ಟೆಯಲ್ಲಿ ತೊಡಗಿಸಿ, ಎಂಟು ವರ್ಷಗಳ ಅಲ್ಪಾವಧಿಯಲ್ಲಿ ನೂರಾರು ಕೋಟಿ ಸಂಪಾದಿಸಿ, ಆ ಹಣವನ್ನು ತನ್ನ ಮೂಲ ಕ್ಷೇತ್ರವಾದ ಕಾಫಿ ತೋಟಗಳಲ್ಲಿ ತೊಡಗಿಸಿ, ಮುಂದೆ ವಿಸ್ತರಿಸುತ್ತಾ ಸುಮಾರು ಹನ್ನೆರಡು ಸಾವಿರ ಎಕರೆ ಕಾಫಿ ತೋಟಗಳ ಒಡೆಯನಾದರು. 1993ರಲ್ಲಿ ಹುಟ್ಟು ಹಾಕಿದ ಅಮಾಲ್ಗಮೇಟೆಡ್ ಬೀನ್ ಕಾಫಿ ಟ್ರೇಡಿಂಗ್ ಕಂಪನಿ ಕೇವಲ ಮೂರು ವರ್ಷಗಳಲ್ಲಿ ದೇಶದ ಅತಿ ದೊಡ್ಡ ಕಾಫಿ ರಫ್ತು ಉದ್ದಿಮೆಯಾಗಿ ಬೆಳೆದಿತ್ತು. 1996ರಲ್ಲಿ ಹುಟ್ಟಿಕೊಂಡ […]

Read More

ರಾಮ ಮಂದಿರ ನಿರ್ಮಾಣ ಎಂದರೆ ರಾಷ್ಟ್ರೀಯ ಹೆಮ್ಮೆ ಮರು ಪ್ರತಿಷ್ಠಾಪನೆ

– ಪ್ರಫುಲ್ಲ ಕೇತ್ಕರ್. ಭಾರತದ ಇತಿಹಾಸದಲ್ಲಿ 2020ರ ಆಗಸ್ಟ್ 5ರಂದು ಹೊಸ ಅಧ್ಯಾಯ ಆರಂಭವಾಗಲಿದೆ. ಜನ್ಮಸ್ಥಳ ಅಯೋಧ್ಯೆಯಲ್ಲಿ ರಾಮ ಮಂದಿರ ಮರು ನಿರ್ಮಾಣದ ಕಾರ್ಯ ಆರಂಭವಾಗಲಿದ್ದು, ಭಿನ್ನ ರೀತಿಯಲ್ಲಿ ಈ ಯುಗದ ಪ್ರಮುಖ ಘಟನೆಯಾಗಿ ದಾಖಲಾಗಲಿದೆ. ಈ ಕೊರೊನಾ ಸಾಂಕ್ರಾಮಿಕದಿಂದಾಗಿ ಭೌತಿಕವಾಗಿ ಬಹಳಷ್ಟು ಜನರಿಗೆ ಈ ಘಟನೆಯಲ್ಲಿ ನೇರವಾಗಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ. ಆದರೆ, ಅನೇಕ ವೇದಿಕೆಗಳ ಮೂಲಕ ಇಡೀ ಜಗತ್ತು ಈ ಕಾರ್ಯಕ್ರಮವನ್ನು ನೇರ ಪ್ರಸಾರದಲ್ಲಿ ನೋಡಲಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ರಾಮಜನ್ಮಭೂಮಿ ಹೋರಾಟಕ್ಕೆ ಮಾರ್ಗದರ್ಶನ […]

Read More

ಅತೃಪ್ತಿ, ಗೊಂದಲ ಸಲ್ಲ – ಅಸಮಾಧಾನಕ್ಕೆ ಕಾರಣವಾದ ನಿಗಮ/ಮಂಡಳಿ ನೇಮಕ

ವಿಚಿತ್ರ ಸಂದರ್ಭದಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದು, ಇದೀಗ ಒಂದು ಸಂವತ್ಸರವನ್ನು ಪೂರೈಸಿ, ಮುನ್ನಡೆಯುತ್ತಿದೆ. ಅನಿರೀಕ್ಷಿತ ಸನ್ನಿವೇಶದಲ್ಲಿ ಅಧಿಕಾರಕ್ಕೆ ಬಂದ ಬಿಎಸ್‌ವೈ ನೇತೃತ್ವದ ಬಿಜೆಪಿ ಸರಕಾರ ಈ ಒಂದು ವರ್ಷದ ಅವಧಿಯಲ್ಲಿ ಅನೇಕ ಸವಾಲುಗಳನ್ನು ಎದುರಿಸಿ ಮುಂದಡಿ ಇಡುತ್ತಿದೆ. ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಅವರು ಅಧಿಕಾರ ಸ್ವೀಕರಿಸುತ್ತಿದ್ದಂತೆ ಕರ್ನಾಟಕದ ಉತ್ತರದ ಕೆಲವು ಜಿಲ್ಲೆಗಳಲ್ಲಿ ಭೀಕರ ಪ್ರವಾಹ ಉಂಟಾಯಿತು. ಅನೇಕರು ಮನೆ ಮಠಗಳನ್ನು ಕಳೆದುಕೊಂಡು ನಿರ್ಗತಿಕರಾದರು. ರಾಜಕೀಯ ಕಾರಣಕ್ಕೆ ಸಂಪುಟ ವಿಸ್ತರಣೆಯಾಗುವುದು ವಿಳಂಬವಾದಾಗ ಸಿಎಂ ಏಕಾಂಗಿಯಾಗಿ […]

Read More

ಕೊರೊನಾ ಲಸಿಕೆಯ ಮೇಲೆ ಸೈಬರ್ ದಗಾಕೋರರ ಕಣ್ಣು

ಸುಧೀಂದ್ರ ಹಾಲ್ದೊಡ್ಡೇರಿ. ಕನ್ನಡದಲ್ಲೊಂದು ಆಡು ಮಾತಿದೆ – ಸಂತೆ ನೆರೆಯುವ ಮುನ್ನವೇ ಗಂಟು ಕಳ್ಳರು ನೆರೆದಿರುತ್ತಾರೆ. ಈ ಮಾತು ಸದ್ಯಕ್ಕೆ ಕೋವಿಡ್-19 ಲಸಿಕೆ ತಯಾರಿಕಾ ಮಾರುಕಟ್ಟೆಗೂ ಅನ್ವಯಿಸುವಂತಿದೆ. ಜನರ ಬಳಕೆಗೆ ಯಾವ ದೇಶದ ಲಸಿಕೆ ಮೊದಲು ಬರಬಹುದೆಂದು ಕಾತುರದಿಂದ ಕಾಯುತ್ತಿರುವಾಗಲೇ ಅಮೆರಿಕ, ಬ್ರಿಟನ್, ಹಾಗೂ ಕೆನಡಾ ದೇಶಗಳಲ್ಲಿನ ಲಸಿಕೆ ಸಂಶೋಧಕರ ಕಂಪ್ಯೂಟರ್‌ಗೆ ಲಗ್ಗೆಯಾಗಿರುವ ಸುದ್ದಿ ಬಂದಿದೆ. ಲಸಿಕೆಗೆ ಯಾವ ರಾಸಾಯನಿಕಗಳು ಬಳಕೆಯಾಗುತ್ತಿವೆ, ಎಷ್ಟು ಪ್ರಮಾಣದಲ್ಲಿ ಅವುಗಳನ್ನು ಬೆರೆಸಲಾಗಿದೆ, ಯಾವ ಅನುಪಾತದಲ್ಲಿ ಬೆರೆಸಿದಾಗ ಉತ್ತಮ ಪರಿಣಾಮ ದೊರೆತಿದೆ, ರಾಸಾಯನಿಕಗಳನ್ನು […]

Read More

ನಿರ್ಧಾರ ಅಚಲವಾಗಿರಲಿ – ಶಾಲೆ ಆರಂಭದ ಬಗ್ಗೆ ಸಚಿವರ ವಿಶಿಷ್ಟ ಕ್ರಮ

ಕೊರೊನಾದಿಂದ ಅಸ್ತವ್ಯಸ್ತಗೊಂಡಿರುವ ಜನಜೀವನವನ್ನು ಮತ್ತೆ ಮೊದಲಿನ ಸ್ಥಿತಿಗೆ ತರುವ ಸಂಬಂಧ ‘ಅನ್‌ಲಾಕ್‌’ ಪ್ರಕ್ರಿಯೆ ಜಾರಿಯಲ್ಲಿದೆ. ಅದೇ ರೀತಿ, ಶಾಲೆಗಳನ್ನು ಆರಂಭಿಸಬೇಕೇ, ಬೇಡವೇ ಎಂಬ ಬಗ್ಗೆ ಚರ್ಚೆಗಳೂ ನಡೆಯುತ್ತಿವೆ. ಶಾಲೆ ಆರಂಭದ ವಿಷಯದಲ್ಲಿ ಪೋಷಕರ ಆತಂಕವೂ ಸಹಜವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್ ಅವರು ಸಮಾಜದ ಎಲ್ಲವರ್ಗದ ತಜ್ಞರೊಂದಿಗೆ ಚರ್ಚೆ ನಡೆಸುತ್ತಿದ್ದಾರೆ. ಅದರಂತೆ, ಸೋಮವಾರ ಸಚಿವರು ‘ವಿಜಯ ಕರ್ನಾಟಕ’ ಸೇರಿದಂತೆ ನಾಡಿನ ಪ್ರಮುಖ ಪತ್ರಿಕೆಗಳ ಸಂಪಾದಕರ ಜತೆ ಚರ್ಚಿಸಿದ್ದಾರೆ. ಕೊರೊನಾ ಮಧ್ಯೆಯೂ […]

Read More

ರಫೇಲ್ ಬಲ

ಫ್ರಾನ್ಸ್‌ನಿಂದ ಹೊರಟಿರುವ ರಫೇಲ್ ಯುದ್ಧವಿಮಾನಗಳು ಯುಎಇನಲ್ಲಿ ಸಿಂಗಲ್ ಸ್ಟಾಪ್ ನೀಡಿ, ಬುಧವಾರ ಭಾರತಕ್ಕೆ ತಲುಪಲಿವೆ. ರಫೇಲ್ ಫೈಟರ್‌ ಜೆಟ್‌ಗಳ ಫುಲ್ ಡಿಟೇಲ್ಸ್ ಇಲ್ಲಿದೆ. ಬಹುದಿನಗಳ ಕನಸು ನನಸಾಗುವ ಕ್ಷಣ ಹತ್ತಿರವಾಗಿದೆ. ಭಾರತೀಯ ವಾಯು ಪಡೆಗೆ ‘ಪವನಶಕ್ತಿ’ ನೀಡಲಿರುವ, ಅತ್ಯಾಧುನಿಕ ‘ರಫೇಲ್ ಯುದ್ಧವಿಮಾನ’ಗಳು ಬುಧವಾರ(ಜು.29) ಭಾರತಕ್ಕೆ ಬರಲಿವೆ. ವಿಶೇಷ ಎಂದರೆ, ಈ ರಫೇಲ್‌ಗಳನ್ನು ಲಡಾಕ್ ಸೆಕ್ಟರ್‌ನಲ್ಲಿ ನಿಯೋಜನೆ ಮಾಡಲು ಯೋಜಿಸಲಾಗಿದೆ! ಎಲ್ಎಸಿ(ವಾಸ್ತವಿಕ ಗಡಿ ರೇಖೆ)ಗೆ ಸಂಬಂಧಿಸಿದಂತೆ ಭಾರತ ಮತ್ತು ಚೀನಾ ಮಧ್ಯೆ ಸಂಘರ್ಷ ಏರ್ಪಟ್ಟಿದ್ದು, ಇಂಥ ಹೊತ್ತಿನಲ್ಲಿ ರಫೇಲ್‌ಗಳು […]

Read More

ಶೈಕ್ಷಣಿಕ ಚಟುವಟಿಕೆ ಶೀಘ್ರ ಆರಂಭಿಸಿ – ಪತ್ರಿಕಾ ಸಂಪಾದಕರ ಜತೆಗಿನ ವೆಬಿನಾರ್‌ನಲ್ಲಿ ಸಚಿವರಿಗೆ ಸಲಹೆ

ವಿಕ ಸುದ್ದಿಲೋಕ ಬೆಂಗಳೂರು. ಕೊರೊನಾ ಸಂಕಷ್ಟ ಸಮಯದಲ್ಲೂ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ತಂತ್ರಜ್ಞಾನ ಸೇರಿದಂತೆ ಲಭ್ಯ ಇರುವ ಎಲ್ಲ ಅವಕಾಶಗಳನ್ನು ಬಳಸಿಕೊಂಡು ಶೈಕ್ಷಣಿಕ ಚಟುವಟಿಕೆಯನ್ನು ಶೀಘ್ರದಲ್ಲೇ ಆರಂಭಿಸಬೇಕು. ಈ ಸಂಬಂಧ ರಾಜ್ಯ ಸರಕಾರ ಸರಕಾರ ದೃಢ ನಿಲುವು ತೆಗೆದುಕೊಳ್ಳಬೇಕು ಎಂದು ಕನ್ನಡದ ಪ್ರಮುಖ ಪತ್ರಿಕೆಗಳ ಸಂಪಾದಕರು ಸರಕಾರಕ್ಕೆ ಸಲಹೆ ನೀಡಿದರು. ಕೋವಿಡ್ ಸಂದರ್ಭದಲ್ಲಿ ಆನ್‌ಲೈನ್‌ ಶಿಕ್ಷ ಣ ಮತ್ತು ಶಾಲಾ ಚಟುವಟಿಕೆಗಳನ್ನು ಯಾವಾಗ ಪ್ರಾರಂಭಿಸಬೇಕು ಕುರಿತು ಅಭಿಪ್ರಾಯ ಸಂಗ್ರಹಿಸಲು ಪ್ರಾಥಮಿಕ ಮತ್ತು ಪ್ರೌಢಶಿಕ್ಷ ಣ ಸಚಿವ ಎಸ್. […]

Read More

ಬ್ಯಾಂಕ್‌ ಗ್ರಾಹಕರ ವಿಶ್ವಾಸಕ್ಕೆ ಗುನ್ನ

– ಪ್ರೊ. ಬಿ.ಎಂ. ಕುಮಾರಸ್ವಾಮಿ. ಬ್ಯಾಂಕಿಂಗ್‌ ವ್ಯವಸ್ಥೆಯ ಅತ್ಯಂತ ಅಮೂಲ್ಯ ಆಸ್ತಿ ಎಂದರೆ, ಗ್ರಾಹಕರು ಅದರ ಮೇಲೆ ಇಟ್ಟಿರುವ ನಂಬಿಕೆ. ತಾವು ಬ್ಯಾಂಕಿನಲ್ಲಿ ಇಟ್ಟಿರುವ ಹಣ ಸುರಕ್ಷಿತವಾಗಿರುತ್ತದೆ ಹಾಗೂ ತಾವು ಕೇಳಿದಾಗ ಅದು ತಮಗೆ ದೊರೆಯುತ್ತದೆ ಎಂಬ ಗ್ರಾಹಕರ ವಿಶ್ವಾಸವೇ ಬ್ಯಾಂಕಿನ ಅಮೂಲ್ಯ ಆಸ್ತಿ. ಗ್ರಾಹಕರ ನಂಬಿಕೆಯನ್ನು ಉಳಿಸಿಕೊಳ್ಳುವುದು ಬ್ಯಾಂಕಿನ ಆದ್ಯ ಕರ್ತವ್ಯ. ಏಕೆಂದರೆ ಗ್ರಾಹಕರ ಠೇವಣಿ ಹಣವೇ ಬ್ಯಾಂಕಿನ ಪ್ರಧಾನ ಬಂಡವಾಳ. ಗ್ರಾಹಕರ ನಂಬಿಕೆಗೆ ಧಕ್ಕೆ ಬಂದಾಗ ಬ್ಯಾಂಕಿನ ಅವನತಿ ಪ್ರಾರಂಭ. ಅಂಥ ದುರ್ಗತಿ ಈಗ […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top