
– ಹರಿಪ್ರಕಾಶ್ ಕೋಣೆಮನೆ. ಬೆಂಗಳೂರಿನಲ್ಲಿ ನಡೆದ ಪ್ರಣಬ್ ಮುಖರ್ಜಿ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿದ್ದ ರಾಜ್ಯದ ಕೆಲವು ಹಿರಿಯ ಕಾಂಗ್ರೆಸ್ ಮುಖಂಡರು, ‘‘ಎಲ್ಲವೂ ಸರಿ. ಆದರೆ, ಪ್ರಣಬ್ ದಾ ಅವರು ಆರ್ಎಸ್ಎಸ್ ಸಭೆಗೆ ಹೋಗಿದ್ದೇಕೆ?,’’ ಎಂಬ ಮಾತನ್ನು ಆಡುವ ಮೂಲಕ, ಪ್ರಣಬ್ ಅವರ ನಿಲುವನ್ನೇ ಅನುಮಾನದಲ್ಲಿ ನೋಡಿದ್ದಾರೆ. ಜೀವನವಿಡಿ ಕಾಂಗ್ರೆಸ್ ಹಾಗೂ ಸಮಾಜವಾದಿ ಸಿದ್ಧಾಂತದ ಕಟ್ಟಾ ಅನುಯಾಯಿಯಾಗಿ ಬಾಳಿ ಬದುಕಿ ಹೋದ ಪ್ರಣಬ್ ಮುಖರ್ಜಿ ರಾಜಕೀಯ ವಲಯದಲ್ಲಿ ಅಜಾತಶತ್ರು ಎಂದೇ ಪರಿಗಣಿತರಾಗಿದ್ದರು. ಸೈದ್ಧಾಂತಿಕ ಭಿನ್ನತೆಯೊಂದಿಗೆ ಬೆರೆಯುವ ಮೂಲಕವೂ […]