ಕೃಷಿಕರಿಗೆ ಬೇಡ ಆತಂಕ – ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಭರವಸೆ. – ರಾಘವೇಂದ್ರ ಭಟ್, ಬೆಂಗಳೂರು. ‘‘ನೆರೆಯ ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶದಲ್ಲಿ ಇಂಥ ಕಾಯಿದೆ ಅಸ್ತಿತ್ವದಲ್ಲೇ ಇಲ್ಲ. ಆದರೆ ಅಲ್ಲಿ ಕೃಷಿ ಭೂಮಿ ಹಾಗೂ ಕೃಷಿಕರು ಇದ್ದಾರೆ. ಮಿತಿ ಸಡಿಲಿಕೆಯಿಂದ ಕೃಷಿ ಭೂಮಿ ಕಾರ್ಪೋರೇಟ್ ಕುಳಗಳ ಪಾಲಾಗುತ್ತದೆ ಎಂಬ ವಾದದಲ್ಲಿ ಅರ್ಥವೇ ಇಲ್ಲ. ನಾವು ಕೃಷಿ ಭೂಮಿ ಖರೀದಿಸುವುದಕ್ಕೆ ಇದ್ದ ಆರ್ಥಿಕ ಮಿತಿ ರದ್ದುಗೊಳಿಸಿದ್ದೇವೆಯೇ ಹೊರತು ಮಿತಿ ಮೀರಿ ಖರೀದಿಸುವುದಕ್ಕೆ ಅವಕಾಶ ನೀಡಿಲ್ಲ. ಒಂದು ಕುಟುಂಬ […]