ಇದುವರೆಗೆ ಸಾಮಾಜಿಕ ಸಾಮರಸ್ಯದ ಮಾತುಗಳು ಕೇಳಿಬರುತ್ತಿದ್ದವು. ಆರ್ಥಿಕ ಸಬಲೀಕರಣದ ಭಾಷಣಗಳು ಕೇಳಿಸುತ್ತಿದ್ದವು. ಈಗ ಅವೆರಡೂ ಒಟ್ಟೊಟ್ಟಿಗೇ ಅದೂ ಮೌನವಾಗಿ ಸಾಕಾರದತ್ತ ಸಾಗುತ್ತಿವೆ ಎಂಬುದು ಯಾರಿಗೆ ತಾನೆ ಖುಷಿ ಮತ್ತು ಸಮಾಧಾನ ತರುವುದಿಲ್ಲ ಹೇಳಿ? ಯಾರು ಒಪ್ಪುತ್ತಾರೋ ಬಿಡುತ್ತಾರೋ ಎನ್ನುವುದು ಬೇರೆ ವಿಚಾರ. ಏಕೆಂದರೆ ಯಾರು ಒಪ್ಪಿದರೂ, ಒಪ್ಪದಿದ್ದರೂ ವಾಸ್ತವವೇನೂ ಬದಲಾಗದು. ಯಾಕೆ ಈ ಪೀಠಿಕೆ ಅನ್ನುವ ಪ್ರಶ್ನೆ ನಿಮ್ಮ ಮನದಲ್ಲಿ ಮೂಡಿರಬಹುದು. ಹೇಳ್ತೀನಿ. ಪ್ರಧಾನಿ ನರೇಂದ್ರ ಮೋದಿ ಈಗ ಬಿಜೆಪಿ, ಸಂಘ ಪರಿವಾರ, ಮಂದಿರ, ಜಾತಿಮತ, ಪಂಥಗಳನ್ನೆಲ್ಲ […]
Read More
ಈಗ ಬೇಕಿರುವುದು ಜಾತಿ, ಮತ, ಪಂಥವನ್ನು ಮೀರಿದ ಸ್ಮಾರ್ಟ್ ನಾಯಕತ್ವ ಮತ್ತು ‘ರೋಟಿ, ಕಪಡಾ ಔರ್ ಮಕಾನ್’ ಘೊಷಣೆಯನ್ನು ಯಥಾರ್ಥದಲ್ಲಿ ಜಾರಿಗೊಳಿಸುವ ಸಮಗ್ರ ವಿಕಾಸದ ರಾಜಕೀಯ ಸಿದ್ಧಾಂತ. ಸೆಕ್ಯುಲರ್ ಅಥವಾ ಕಮ್ಯೂನಲ್ವಾದದ ಚರ್ಚೆಗೆ ಈಗ ಎಲ್ಲಿಯ ಜಾಗ… ಕೆಲವೊಮ್ಮೆ ನಿರೀಕ್ಷೆಗಳೆಲ್ಲ ತಲೆಕೆಳಗಾಗಿಬಿಡುತ್ತವೆ! ಈಗ ಸುಮಾರು ಹತ್ತು ಹನ್ನೆರಡು ದಿನಗಳ ಹಿಂದಿನ ಮಾತು. ಮಹಾರಾಷ್ಟ್ರದ ಹತ್ತು ಪಾಲಿಕೆಗಳಿಗೆ ನಡೆದ ಚುನಾವಣೆ ಫಲಿತಾಂಶ ಹೊರಬರಲು ಕ್ಷಣಗಣನೆ ಶುರುವಾಗಿತ್ತು. ಆ ವೇಳೆ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷ(ಎನ್ಸಿಪಿ)ದ ಮುಖ್ಯಸ್ಥ ಶರದ್ ಪವಾರ್ ಮಾಧ್ಯಮದವರೊಂದಿಗೆ […]
Read More
ಪಿಒಕೆ ಗಡಿದಾಟಿ ಹೋಗಿ ಭಯೋತ್ಪಾದಕರ ನೆಲೆಗಳ ಮೇಲೆ ಭಾರತೀಯ ಸೇನೆ ದಾಳಿ ನಡೆಸಿದ ದಿಟ್ಟಕ್ರಮದಿಂದಾಗಿ ಕೇಂದ್ರ ಸರ್ಕಾರದ ಮೇಲೆ ಜನರಲ್ಲಿ ಮೆಚ್ಚುಗೆ ಮೂಡಿತ್ತು. ಇದೀಗ ಕಪ್ಪುಹಣದ ಮೇಲೆ ನಡೆದ ಸರ್ಜಿಕಲ್ ದಾಳಿ ಸರ್ಕಾರದ ವರ್ಚಸ್ಸನ್ನು ಮತ್ತಷ್ಟು ಹೆಚ್ಚಿಸಿದೆ. ಇದು ವಿಪಕ್ಷಗಳವರ ನಿದ್ದೆಗಡಿಸಿದೆ ಎಂಬುದು ಸ್ಪಷ್ಟ. ಭ್ರಷ್ಟಾಚಾರ ಕುರಿತ ಚರ್ಚೆ ಇಂದು ನಿನ್ನೆಯದಲ್ಲ. ಅದಕ್ಕೊಂದು ಸುದೀರ್ಘ ಇತಿಹಾಸವೇ ಇದೆ. ಅದರ ಸ್ವರೂಪಗಳೂ ಹಲವು. ಆದರೆ ಕಾಲಾಂತರದಲ್ಲಿ ಅದು ಲಂಚಸ್ವೀಕಾರಕ್ಕೆ ಸೀಮಿತವಾಗಿಬಿಟ್ಟಿದೆ ಅಷ್ಟೆ. ವಾಸ್ತವದಲ್ಲಿ ಭ್ರಷ್ಟಾಚಾರ ಎನ್ನುವುದು ಮನುಷ್ಯನ ಮಾನಸಿಕತೆಗೆ […]
Read More
ಯಾರೇ ಭೇಟಿ ಕೊಟ್ಟು ವಿಚಾರಿಸಿದರೂ ಯೋಧ ಹನುಮಂತಪ್ಪ ಬದುಕಿ ಬರುವುದು ಕಷ್ಟದ ಮಾತೇ ಆಗಿತ್ತು. ಆದರೆ ಹಾಗೆ ಮಾಡಿದ್ದರೆ ದೇಶ ಕಾಯುವ ಸೈನಿಕ ಸಮುದಾಯದಲ್ಲಿ ಕನಿಷ್ಠ ವಿಶ್ವಾಸ ತುಂಬುವ ಕೆಲಸ ಮಾಡಿದಂತಾಗುತ್ತಿತ್ತು. ರಾಹುಲ್ರಂಥ ನಾಯಕರು ಅದನ್ನು ಮಾಡಲಿಲ್ಲ ಎಂಬುದೇ ಬೇಸರದ ಸಂಗತಿ. ಯೋಧರು, ಸೇನೆ, ಸಮರ್ಪಣೆ ಅಂದರೇನೆ ಹಾಗೆ. ಅದಕ್ಕೆ ಜಾತಿ, ಧರ್ಮ, ಪ್ರದೇಶದ ಎಲ್ಲೆಗಳು ಇರುವುದಿಲ್ಲ. ಅದಿಲ್ಲ ಅಂದಿದ್ದರೆ ಎಲ್ಲಿಯ ಹುಬ್ಬಳ್ಳಿಯ ಬೆಟದೂರು? ಎಲ್ಲಿಯ ಸಿಯಾಚಿನ್? ಎಲ್ಲಿಯ ದೆಹಲಿ? ಹಿಮಗಡ್ಡೆಯ ಅಡಿಯಿಂದ ಎದ್ದುಬಂದು ಆಸ್ಪತ್ರೆ ಸೇರಿದ […]
Read More
ಬಿಬಿಎ೦ಪಿ ಚುನಾವಣೆಯಲ್ಲಿ ಅಧಿಕ ಸ್ಥಾನ ಗಳಿಸಿದರೂ ಅಧಿಕಾರ ಹಿಡಿಯಲಾಗದ ಪರಿಸ್ಥಿತಿ ಮಾಜಿಡಿಸಿಎ೦ ಅಶೋಕ್ಗೆ ಪೀಕಲಾಟ ತ೦ದಿದೆ. ಅತ್ತ ಬಿಜೆಪಿಯಲ್ಲಿ ಮೂಲೆಗು೦ಪಾದರೆ೦ದೇಭಾವಿಸಲಾಗಿದ್ದ ಯಡಿಯೂರಪ್ಪನವರಿಗೆ ರೈತ ಚೈತನ್ಯ ಯಾತ್ರೆ ವ್ಯಕ್ತಿಗತವಾಗಿಯೂ ಟಾನಿಕ್ ಆಗಿದೆ. ರಾಜಕಾರಣ ಅಂದ್ರೆ ಹಾಗೇನೆ. ಎಷ್ಟು ವಿಚಿತ್ರ ನೋಡಿ. ರಾಜ್ಯ ಬಿಜೆಪಿಗೇ ಸಾಮ್ರಾಟನಾಗುವ ಕನಸು ಕಂಡಿದ್ದ ಆರ್.ಅಶೋಕ್ ಇದೀಗ ಅಕ್ಷರಶಃ ಶೋಕಸಾಗರದಲ್ಲಿ ಮುಳುಗುವ ಹಾಗಾಗಿ ಹೋಯಿತು. ಬಿಬಿಎಂಪಿ ಚುನಾವಣಾ ಫಲಿತಾಂಶದ ಕ್ಷಣಗಳನ್ನೊಮ್ಮೆ ಕಣ್ಣಮುಂದೆ ತಂದುಕೊಳ್ಳಿ. ಮಧ್ಯಾಹ್ನ 12 ಗಂಟೆಯ ಹೊತ್ತಿಗೆ ಫಲಿತಾಂಶದ ಸ್ಪಷ್ಟ ಚಿತ್ರಣ ಸಿಗತೊಡಗಿತ್ತು. ಬಿಜೆಪಿ ಏಕಾಂಗಿಯಾಗಿ ನೂರು ಸ್ಥಾನಗಳನ್ನು ಬುಟ್ಟಿಗೆ ಹಾಕಿಕೊಳ್ಳುವುದೂ ಖಾತ್ರಿ ಆಗಿತ್ತು. ಅದು ಬಿಜೆಪಿ ನಾಯಕರ ಪಾಲಿಗೆ ಅಚ್ಚರಿಯ ಫಲಿತಾಂಶ. ಆ ಪಕ್ಷದ ನಾಯಕರೇ ಹೇಳಿದ ಹಾಗೆ ಬಿಬಿಎಂಪಿಯಲ್ಲಿ ಅಬ್ಬಬ್ಬಾ […]
Read More
ಮೈತ್ರಿ ಆಡಳಿತದ ಅಪಾಯ ಕಾಂಗ್ರೆಸ್ಗೆ ಮಾತ್ರ ಎನ್ನುವ ಹಾಗಿಲ್ಲ. ಮೈತ್ರಿ ರಾಜಕೀಯದ ಫಲವಾಗಿ ವಾಜಪೇಯಿ ಪ್ರಧಾನಿಯಾದರು ನಿಜ. ಉತ್ತಮ ಆಡಳಿತವನ್ನೂ ನೀಡಿದರು. ಆದರೆ ಹೊಂದಾಣಿಕೆ ರಾಜಕಾರಣಕ್ಕಾಗಿ ಮೂಲ ಸಿದ್ಧಾಂತಕ್ಕೆ ತಿಲಾಂಜಲಿ ನೀಡಿದ ಬಿಜೆಪಿ ಭಾರಿ ಬೆಲೆ ತೆರಬೇಕಾಯಿತು. ಕಾಂಗ್ರೆಸ್ ನಾಯಕರು ಪದೇಪದೆ ಯಾಕಿಂಥ ತಪ್ಪು ಮಾಡುತ್ತಿದ್ದಾರೆ ಅನ್ನುವುದೇ ಬಿಡಿಸಲಾಗದ ಒಗಟು. ಈ ಪರಿ ಸ್ವಂತಿಕೆ ಬಿಟ್ಟು ಮೈತ್ರಿ ಮಾಡಿಕೊಂಡು ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಅಧಿಕಾರ ಹಿಡಿದು ತೀರಲೇಬೇಕೆಂಬ ದರ್ದಾದರೂ ಏನಿತ್ತು? ಎಲ್ಲೋ ಒಂದುಕಡೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು […]
Read More
ಗಣಿ ದುಡ್ಡು ಮತ್ತು ರೆಸಾರ್ಟ್ ರಾಜಕಾರಣ ಜನರಲ್ಲಿ ಅಸಹ್ಯ ಹುಟ್ಟಿಸಿದ್ದರಿಂದಲೇ ಬಿಜೆಪಿ ಅಧಿಕಾರ ಕಳೆದುಕೊಂಡು ಕಾಂಗ್ರೆಸ್ ಸರ್ಕಾರ ಸ್ಥಾಪನೆ ಆಗಿರುವುದು. ಈಗ ಅದೇ ರೆಸಾರ್ಟ್ ರಾಜಕಾರಣ ಪಾಲಿಕೆ ಅ ಧಿಕಾರ ಹಿಡಿಯುವುದಕ್ಕೂ ಬಳಕೆಯಾಗುತ್ತಿರುವುದು ಸೋಜಿಗದ ಸಂಗತಿ. ರಾಜಕೀಯ ವ್ಯವಸ್ಥೆಯ ಬಗೆಗೇ ವಾಕರಿಗೆ ಹುಟ್ಟುತ್ತಿರುವ ಕಾಲ ಇದು. ಅಂಥದ್ದರಲ್ಲಿ ಬಿಬಿಎಂಪಿ ಎಂಬ ಸಂಪತ್ತಿನ ಕೋಟೆಗೆ ಲಗ್ಗೆ ಹಾಕಲು ಮೂರೂ ಪಕ್ಷಗಳಲ್ಲಿ ಅದಿನ್ನೆಂತಹ ಅಸಹ್ಯಕರ ಪೈಪೋಟಿ ಶುರುವಾಗಿದೆ ನೋಡಿ. ದೂರ ನಿಂತು ನೋಡುವ ಜನರು ಹಾದಿಬೀದಿಯಲ್ಲಿ ಹಿಡಿಶಾಪ ಹಾಕತೊಡಗಿದ್ದಾರೆ. ಆದರೆ ಲಜ್ಜೆಗೆಟ್ಟು […]
Read More
ಇತ್ತೀಚಿನ ಎರಡು-ಮೂರು ಸಂದರ್ಭಗಳಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ತಾನು ಸಾಗಿ ಬಂದ ಹಾದಿ, ಮುಂದೆ ಸಾಗಬೇಕಾದ ಗುರಿಯೆಡೆಗೆ ಅಲಕ್ಷ್ಯಮಾಡಿ, ಮುಖ್ಯವಾಗಿ ತನ್ನ ಐಡೆಂಟಿಟಿಯನ್ನೇ ಮರೆತಂತೆ ವರ್ತಿಸುತ್ತಿರುವುದನ್ನು ಕಂಡಾಗ ಅಚ್ಚರಿಯಾಗುತ್ತದೆ. ಹೆಸರಾಂತ ಐರಿಷ್ ಸಾಹಿತಿ ಜಾರ್ಜ್ ಬರ್ನಾರ್ಡ್ ಷಾ ಪರಿಚಯ ಎಲ್ಲರಿಗೂ ಇದೆ. ಸಾಹಿತ್ಯ ಕೃಷಿಗಾಗಿ ಪ್ರತಿಷ್ಠಿತ ಅಕಾಡೆಮಿ ಪ್ರಶಸ್ತಿ, ನೊಬೆಲ್ ಪುರಸ್ಕಾರ ಮತ್ತು ಆಸ್ಕರ್ ಅವಾರ್ಡನ್ನು ಪಡೆದ ಏಕೈಕ ಲೇಖಕ ಎಂಬ ದಾಖಲೆ ಇವರ ಹೆಸರಲ್ಲೇ ಇರುವುದು ವಿಶೇಷ. ಷಾ ಕುರಿತು ಹೇಳಲೇಬೇಕಾದ ಮತ್ತೊಂದು ವಿಷಯವಿದೆ. ಅದೇನೆಂದರೆ […]
Read More
ಈ ಫಲಿತಾಂಶವನ್ನು ಪ್ರಜಾತಂತ್ರದ ಸೌಂದರ್ಯ ಮತ್ತು ಶಕ್ತಿ ಎಂದು ಕರೆಯುವುದೇ ಸರಿಯಾದ್ದು. ಎರಡು ವರ್ಷಗಳ ಹಿಂದೆ ಆಮ್ ಆದ್ಮಿ ಪಕ್ಷದ ಅರವಿಂದ ಕೇಜ್ರಿವಾಲ್ ಅವರನ್ನು ಅಧಿಕಾರದ ಹತ್ತಿರಕ್ಕೆ ತಂದು ನಿಲ್ಲಿಸಿದ್ದ ದೆಹಲಿ ಮತದಾರರು ಈ ಬಾರಿ ಪೂರ್ಣ ಅಧಿಕಾರ ನೀಡಿ ಅದೇನು ಮಾಡುತ್ತೀರೋ ಮಾಡಿ ನೋಡೋಣ ಎಂಬ ಸ್ಪಷ್ಟ ಜನಾದೇಶ ಕೊಟ್ಟಿದ್ದಾರೆ. ಒಂದು ಪ್ರಬುದ್ಧ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಮತದಾರರು ಇದಕ್ಕಿಂತ ಉತ್ತಮವಾಗಿ ತಮ್ಮ ಕರ್ತವ್ಯ ನಿರ್ವಹಿಸಬೇಕೆಂದು ನಿರೀಕ್ಷಿಸಲು ಅಸಾಧ್ಯ ಬಿಡಿ. ದೆಹಲಿ ವಿಧಾನಸಭೆ ಚುನಾವಣೆಯ ಈ ಅಭೂತಪೂರ್ವ […]
Read More