ಬದಲಾದ ಕಾಲಘಟ್ಟದಲ್ಲಿ ಜನರ ನಿರೀಕ್ಷೆಗಳು, ಆದ್ಯತೆಗಳು ಬದಲಾಗಿವೆ. ಸರ್ಕಾರದ ಉನ್ನತ ಅಧಿಕಾರಸ್ಥಾನಗಳು ಪ್ರತಿಷ್ಠೆ, ದೌಲತ್ತಿನ ಪ್ರದರ್ಶನದ ಸಾಧನಗಳು ಎಂಬ ಭಾವನೆಗೆ ಈಗ ಮನ್ನಣೆಯಿಲ್ಲ. ಸೇವೆಯ ಅವಕಾಶವನ್ನು ಸದುಪಯೋಗಪಡಿಸಿಕೊಂಡಲ್ಲಿ ಜನರ ಮನಸ್ಸಿನಲ್ಲಿ ನೆಲೆಯಾಗಬಹುದು. ಕರ್ನಾಟಕದ ಅಧಿಕಾರಿಗಳು ಈ ದಾರಿಯಲ್ಲಿ ಸಾಗಲಿ. ಅಚ್ಚ ಕನ್ನಡತಿ ಕೋಲಾರದ ನಂದಿನಿ ಯುಪಿಎಸ್ಸಿ ಟಾಪರ್ ಆಗಿ ಹೊರ ಹೊಮ್ಮಿದ್ದು ಆಕೆಯ ತಂದೆ-ತಾಯಿಗೆ, ಕುಟುಂಬದವರಿಗೆ ಮಾತ್ರವಲ್ಲ ಇಡೀ ಕನ್ನಡ ಕುಲಕೋಟಿ ಹಿರಿಹಿರಿ ಹಿಗ್ಗುವ ವಿಚಾರ. ಇಪ್ಪತ್ತು ವರ್ಷಗಳ ಹಿಂದಿನ ಸ್ಥಿತಿ ಹೇಗಿತ್ತೆಂದರೆ, ಯುಪಿಎಸ್ಸಿ ಪರೀಕ್ಷೆಯಲ್ಲಿ ಆಯ್ಕೆ […]