ವ್ಯವಸ್ಥೆ ಹಾಳಾಗಿದೆ, ಭ್ರಷ್ಟಾಚಾರ ಮಿತಿಮೀರಿದೆ ಎಂದು ಎಲ್ಲರಿಗೂ ಗೊತ್ತು. ಈ ಬಗ್ಗೆ ಕಿವಿತಮಟೆ ಹರಿದುಹೋಗುವಷ್ಟು ಮಾತುಗಳನ್ನು ಕೇಳಿದ್ದೇವೆ. ಆದರೆ ಎಲ್ಲೋ ಒಂದು ಕಡೆ ಶುದ್ಧೀಕರಣ ಪ್ರಕ್ರಿಯೆ ಆರಂಭವಾಗಲೇಬೇಕಲ್ಲವೆ? ಈಚಿನ ಕೆಲ ನಿದರ್ಶನಗಳನ್ನು ನೋಡಿದರೆ ಆ ಕೆಲಸಕ್ಕೆ ಚಾಲನೆ ದೊರಕಿದಂತಿದೆ. ಆದರೆ ಇದಕ್ಕೂ ಅಪಸ್ವರವೆತ್ತುವವರ ಅಸಲಿಯತ್ತಾದರೂ ಏನು? ಸುಖೀ ಜೀವನದ ಸೂತ್ರ ತಿಳಿದ ಮಹಾನುಭಾವರ ಹಿತವಚನ ಏನೆಂಬುದನ್ನು ನಾವು ಒಮ್ಮೆ ಮೆಲುಕು ಹಾಕುವುದು ಉಚಿತ. ಭಗವದ್ಗೀತೆಯನ್ನು ಉಪದೇಶಿಸಿದ ಶ್ರೀ ಕೃಷ್ಣ ಪರಮಾತ್ಮನಿಂದ ಹಿಡಿದು ಅಸಂಖ್ಯಾತ ಸಾಧು-ಸಂತರು, ದಾಸರು, ಶರಣರವರೆಗೆ, […]