– ಡಾ.ವಿ.ಬಿ.ಆರತೀ. ಜೀವನವು ಎಲ್ಲ ಮನುಷ್ಯರಿಗೂ ಸುಖದುಃಖಗಳನ್ನು ಒಡ್ಡುತ್ತದೆ. ಈ ಅನುಭವಗಳಿಗೆ ಮನುಷ್ಯರು ಬಗೆಬಗೆಯಾಗಿ ಪ್ರತಿಕ್ರಿಯಿಸುತ್ತಾರೆ! ಕಷ್ಟನಷ್ಟಗಳಿಗೆ ಹೆಚ್ಚು ತಲೆ ಕೆಡಿಸಿಕೊಳ್ಳದೇ ಮುಂದುವರಿಯುವ ಸಕಾರಾತ್ಮಕ ಮನೋಭಾವದವರು ಕೆಲವರಾದರೆ, ಚಿಕ್ಕಪುಟ್ಟ ಕಷ್ಟಗಳಿಗೂ ಅತಿಯಾಗಿ ದುಃಖಿಸಿ ಖಿನ್ನರಾಗುವವರು ಕೆಲವರು. ಜೀವನದ ಸುಖದುಃಖಗಳನ್ನು ಸಮಭಾವದಿಂದ ನೋಡುತ್ತ ಪಕ್ವರಾಗುವವರು ವಿರಳ. ಜೀವನದ ಎಲ್ಲಸಂದರ್ಭಗಳಲ್ಲೂ ಸ್ಥಿತಪ್ರಜ್ಞರಾಗಿರುತ್ತ, ದೇಶಧರ್ಮಗಳಲ್ಲಿ ನಿಷ್ಠರಾಗಿರುವವರು, ತಮ್ಮ ಸುತ್ತಲಿನ ಜನರಲ್ಲೂ ಜಾಗೃತಿ ಮೂಡಿಸುವ ವ್ರತ ತೊಡುವವರು ವಿರಳಾತಿ ವಿರಳರು. ಇಂತಹ ಪುರುಷಸಿಂಹರು ಎಷ್ಟೋ ಮಂದಿ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿ ಮಡಿದಿದ್ದಾರೆ. […]