ಚೆನ್ನಮ್ಮ ಬೇಕೊ? ಔರಂಗಜೇಬ ಬೇಕೊ? ನೀವೇ ನಿರ್ಧರಿಸಿ : ವಿಸ್ತಾರ ಅಂಕಣ

“ದೇಶದಲ್ಲಿರುವ ಮುಸಲ್ಮಾನರಿಗೆ ನರೇಂದ್ರ ಮೋದಿ ಸರ್ಕಾರ ಬಂದಾಗಿನಿಂದ ಅಸಹನೆ ಉಂಟಾಗಿದೆ. ಅಲ್ಪಸಂಖ್ಯಾತರನ್ನು ಮೋದಿ ತುಳಿಯುತ್ತಿರುವ ಕಾರಣ ಅವರು ಈಗ ರೊಚ್ಚಿಗೆದ್ದು ಸಂಘಟಿತರಾಗಿದ್ದಾರೆ”…. ಹೀಗೆ ದೇಶದ ಮುಸಲ್ಮಾನ್ ಸಮುದಾಯದ ಕೆಲವರು ಅಲ್ಲಲ್ಲಿ ನಡೆಸುತ್ತಿರುವ, ಮೇಲ್ನೋಟಕ್ಕೆ ಅಸಂಘಟಿತ, ಆದರೆ ಗಮನಿಸಿ ನೋಡಿದರೆ ಸಂಘಟಿತ ಗಲಭೆಗಳಿಗೆ ಅನೇಕರು ಸಮಜಾಯಿಷಿ ನೀಡುವುದನ್ನು ಕೇಳಿದ್ದೇವೆ. ಕೋವಿಡ್ ಸಮಯದಲ್ಲಿ ಪಾದರಾಯನಪುರದಲ್ಲಿ ಗಲಭೆ ಆದಾಗ ಕೆಲವು ಕಿಡಿಗೇಡಿಗಳ ಕೆಲಸ ಎನ್ನುವುದು; ಕೆಜಿ ಹಳ್ಳಿ-ಡಿಜೆ ಹಳ್ಳಿಯಲ್ಲಿ ಪೊಲೀಸ್ ಠಾಣೆಗೇ ಬೆಂಕಿ ಇಟ್ಟಾಗ ಕೆಲವು ಕಿಡಿಗೇಡಿಗಳ ಮಂಗಾಟ ಎನ್ನುವುದು; ಶಿವಮೊಗ್ಗದ […]

Read More

ಎಡಬಿಡಂಗಿ ಪಾಕಿಗಳನ್ನು ಕುಣಿಸುತ್ತಿರುವ ಅಮೆರಿಕದ ಬಗ್ಗೆ ಎಚ್ಚರ ವಹಿಸಬೇಕಿದೆ : ವಿಸ್ತಾರ ಅಂಕಣ

ಪಾಕಿಸ್ತಾನದ ಬಲೋಚಿಸ್ತಾನ್ ನಲ್ಲಿರುವ ಗ್ವಾದರ್ ಹಾಗೂ ನಂತರ ಪಾಕ್ ಆಕ್ರಮಿತ ಜಮ್ಮು ಕಾಶ್ಮೀರದ(ಪಿಒಜೆಕೆ) ಪ್ರದೇಶದಲ್ಲಿರುವ ಗಿಲ್ಗಿಟ್-ಬಾಲ್ಟಿಸ್ತಾನಕ್ಕೆ ಪಾಕಿಸ್ತಾನದಲ್ಲಿರುವ ಅಮೆರಿಕ ರಾಯಭಾರಿ ಡೊನಾಲ್ಡ್ ಬ್ಲೋಮ್ ಕಳೆದ ವಾರ ಭೇಟಿ ನೀಡಿದ್ದಾರೆ. ಇದರಲ್ಲಿ ವಿಶೇಷ ಏನು ಎಂದು ಕೇಳಬಹುದು. ಗ್ವಾದರ್ ಬಂದರು ಭೌಗೋಳಿಕವಾಗಿ ಅತ್ಯಂತ ಆಯಕಟ್ಟಿನ ಸ್ಥಳ. ಈ ಬಂದರು, ಹೋರ್ಮಸ್ ಜಲಸಂಧಿಯ ಮಾರ್ಗದಲ್ಲೇ ಇದೆ. ಸ್ಟ್ರೇಟ್ ಆಫ್ ಹೋರ್ಮಸ್ ಎಂದೇ ಪ್ರಸಿದ್ಧವಾದ ಈ ಪ್ರದೇಶದ ಮೂಲಕ ವಿಶ್ವದ ಶೇ.20-30 ಕಚ್ಚಾತೈಲ ಸರಬರಾಜಾಗುತ್ತದೆ. ತೈಲ ಉತ್ಪಾದನೆ ರಾಷ್ಟ್ರಗಳು ಅದನ್ನು ಜಗತ್ತಿಗೆ […]

Read More

ಮಣ್ಣು ಬರೀ ಮಣ್ಣಲ್ಲ, ಅದು ನಮ್ಮ ಭಾವಕೋಶ, ನಾವು ಮಣ್ಣಿನ ಮಕ್ಕಳು ! : ವಿಸ್ತಾರ ಅಂಕಣ

ಅಪಿ ಸ್ವರ್ಣಮಯಿ ಲಂಕಾ ನ ಮೇ ಲಕ್ಷ್ಮಣ ರೋಚತೇ, ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ || ರಾವಣನ ಜತೆಗಿನ ಯುದ್ಧದಲ್ಲಿ ಗೆದ್ದ ನಂತರ ಲಂಕೆಯ ನೆಲದಲ್ಲಿ ನಿಂತು ಶ್ರೀರಾಮ ಈ ಮಾತನ್ನು ಲಕ್ಷ್ಮಣನಿಗೆ ಹೇಳುತ್ತಾನೆ ಎಂಬ ಮಾತಿದೆ. ಇದು ಮೂಲ ವಾಲ್ಮೀಕಿ ರಾಮಾಯಣದಲ್ಲಿ ಇಲ್ಲ ಎಂದೂ ಕೆಲವರು ಹೇಳುತ್ತಾರೆ. ಅದಿರಲಿ, ಇದರ ಅರ್ಥ ಮಾತ್ರ ರಾಮನ ಸ್ವಭಾವಕ್ಕೆ ಸಹಜವಾಗಿಯೇ ಅನುಗುಣವಾಗಿದೆ. ಈ ಲಂಕೆಯು ಚಿನ್ನದಿಂದ ನಿರ್ಮಾಣ ಆಗಿರಬಹುದು, ಆದರೆ ತಾಯಿ ಮತ್ತು ತಾಯಿ ಭೂಮಿಯು ಸ್ವರ್ಗಕ್ಕಿಂತ […]

Read More

ತುರ್ತು ಪರಿಸ್ಥಿತಿ ಕಡೆಗೆ ಹೊರಳುತ್ತಿದೆ ಡಿಜಿಟಲ್ ನೈತಿಕ ಪೊಲೀಸ್ ಗಿರಿ : ವಿಸ್ತಾರ ಅಂಕಣ

ನೈತಿಕ ಪೊಲೀಸ್ ಗಿರಿಯ ಹೆಸರಿನಲ್ಲಿ ಕೇವಲ ಹಿಂದುತ್ವದ ಅಂದರೆ ಸನಾತನ ಧರ್ಮದ ಕುರಿತ ವಿಚಾರಗಳಿಗಷ್ಟೆ ಮೂಲಭೂತವಾದ ಎಂದು ಬ್ರ್ಯಾಂಡ್ ಮಾಡುತ್ತಿರುವುದರ ಕುರಿತು ಕಳೆದ ಎರಡು ವಾರದ ಹಿಂದಿನ ಲೇಖನದಲ್ಲಿ ಚರ್ಚಿಸಿದ್ದೆವು. ಹಿಂದು ಗುಂಪು ಮಾಡುವುದು ಮಾತ್ರ ನೈತಿಕ ಪೊಲೀಸ್ ಗಿರಿ ಎಂದು ಬ್ರ್ಯಾಂಡ್ ಆಗುತ್ತದೆ. ಅದೇ ಮುಸ್ಲಿಂ ಯುವತಿಯೊಬ್ಬಳು ಹಿಂದು ಹುಡುಗನ ಜತೆಗೆ ಬೈಕ್ನಲ್ಲಿ ಹೋಗುತ್ತಿರುವಾಗ ಮುಸ್ಲಿಂ ಯುವಕರ ಗುಂಪು ದಾಳಿ ಮಾಡಿದರೆ ಅದು ಸ್ಥಳೀಯ, ಕೆಲ ಪುಂಡರು ಮಾಡಿದ ಕೃತ್ಯ ಎಂದು ಹೇಳಿ ಸುಮ್ಮನಾಗಲಾಗುತ್ತದೆ. ಸಂವಿಧಾನಬದ್ಧವಾಗಿ […]

Read More

ತಮಿಳುನಾಡಿನ ರಾಜಕಾರಣಿಗಳು ಜನರನ್ನು ನಿರಂತರವಾಗಿ ಹೇಗೆ ವಂಚಿಸುತ್ತಿದ್ದಾರೆ ಗೊತ್ತೇ? : ವಿಸ್ತಾರ ಅಂಕಣ

ನಾವು ಯಾವುದನ್ನು ಜೀವಿಸುತ್ತೇವೆಯೋ, ಯಾವ ವ್ಯವಸ್ಥೆಯಲ್ಲಿ ಇರುತ್ತೇವೆಯೋ ಅದರ ಕುರಿತು ನಮಗೆ ತಿಳಿವಳಿಕೆ ಕಡಿಮೆಯಿರುತ್ತದೆ. ಇದಕ್ಕೆ ಸಾಕಷ್ಟು ನಿದರ್ಶನಗಳಿವೆ. ಉದಾಹರಣೆಗೆ ನಮ್ಮ ದೇಹ. ನಾವು ಹೊರಜಗತ್ತಿಗೆ ಕಾಲಿಡುವ ಮುನ್ನವೇ ನಮ್ಮ ದೇಹದೊಂದಿಗೆ ನಾವು ಇದ್ದೇವೆ. ಆದರೆ ಇಂದಿಗೂ ನಮ್ಮ ದೇಹದ ಇತಿ ಮಿತಿ, ಸಾಮರ್ಥ್ಯ ತಿಳಿದೇ ಇರುವುದಿಲ್ಲ. ಎಷ್ಟು ವ್ಯಾಯಾಮ ಮಾಡಿದರೆ, ಎಷ್ಟು ಊಟ ಮಾಡಿದರೆ, ಯಾವ ಆಹಾರ ಸೇವಿಸಿದರೆ, ಯಾವುದನ್ನು ಸೇವಿಸದಿದ್ದರೆ ದೇಹಾರೋಗ್ಯ ಚೆನ್ನಾಗಿರುತ್ತದೆ ಎನ್ನುವುದು 30-40-50 ವರ್ಷವಾದರೂ ಅನೇಕರಿಗೆ ಗೊತ್ತೇ ಇರುವುದಿಲ್ಲ. ಅದೇ ರೀತಿ […]

Read More

ನೈತಿಕ ಪೊಲೀಸ್‌ಗಿರಿಯ ಕುರಿತು ಅನೈತಿಕ ದೃಷ್ಟಿಕೋನ ಯಾಕಪ್ಪ??!! : ವಿಸ್ತಾರ ಅಂಕಣ

“ನೈತಿಕ ಪೊಲೀಸ್‌ಗಿರಿ (Moral policing) ಎನ್ನುವುದು, ಭಾರತದಲ್ಲಿ ನೈತಿಕತೆಯನ್ನು ಅನುಷ್ಠಾನ ಮಾಡಲು ಮುಂದಾಗುವ ಜಾಗರೂಕ (Vigilante) ಗುಂಪುಗಳ ಒಕ್ಕೂಟದ ವರ್ಗ. ಭಾರತ ಕಾನೂನಿನ ಹಾಗೂ ಭಾರತದ ಪೊಲೀಸ್ ಶಕ್ತಿಯ ಕೆಲವು ಕ್ರಿಯೆಗಳನ್ನೂ ನೈತಿಕ ಪೊಲೀಸ್‌ಗಿರಿ ಎನ್ನಲಾಗುತ್ತದೆ. ಜಾಗರೂಕ ಗುಂಪುಗಳು ಅಥವಾ ಸರ್ಕಾರ ಅಥವಾ ಪೊಲೀಸರು ಯಾವುದನ್ನು ʼಅನೈತಿಕʼ (Immoral) ಹಾಗೂ ʼಭಾರತೀಯ ಸಂಸ್ಕೃತಿʼಗೆ (Indian culture) ವಿರುದ್ಧವಾದದ್ದು ಎಂದು ಪರಿಗಣಿಸುತ್ತಾರೆಯೋ ಆ ಎಲ್ಲ ಕ್ರಿಯೆಗಳೂ ನೈತಿಕ ಪೊಲೀಸ್‌ಗಿರಿಯ ಟಾರ್ಗೆಟ್. ತಾವು ಭಾರತೀಯ ಸಂಸ್ಕೃತಿಯನ್ನು ರಕ್ಷಣೆ ಮಾಡುತ್ತೇವೆ ಎನ್ನುವ […]

Read More

ಎರಡು ಬಾರಿ ಸಂಸದರಾದವರ ವಿಸಿಟಿಂಗ್ ಕಾರ್ಡ್‌ನಲ್ಲಿ ಅದರ ಉಲ್ಲೇಖವೇ ಇರಲಿಲ್ಲ! : ವಿಸ್ತಾರ ಅಂಕಣ

ಸಿಂಗಪುರದ ಅಭಿವೃದ್ಧಿ ಎಂದರೆ ಕಟ್ಟಡ, ರಸ್ತೆ ನಿರ್ಮಾಣ ಅಲ್ಲವೇ ಅಲ್ಲ. ಅದು ಒಂದು ಭಾಗ ಮಾತ್ರ. ಮುಖ್ಯವಾಗಿ ಜನರ ನಡವಳಿಕೆ, ಶಿಸ್ತು ಸಿಂಗಪುರ ಮಾದರಿ. ಭ್ರಷ್ಟಾಚಾರ ಅಲ್ಲಿ ಇಲ್ಲವೇ ಇಲ್ಲ ಎಂದಲ್ಲ. ಆದರೆ ರಾಜಕಾರಣಿಗಳು ತೋರುವ ಪಾರದರ್ಶಕತೆಯ ಕಾರಣಕ್ಕೆ ಜನಸಾಮಾನ್ಯರಲ್ಲೂ ಭ್ರಷ್ಟಾಚಾರದ ಕುರಿತು ತಿರಸ್ಕಾರ ಭಾವನೆಯೇ ಇದೆ. …………………… ಸಂಚಾರ ನಿಯಮ ಪಾಲಿಸಬೇಕು ಎನ್ನುವುದನ್ನು ದಂಡ ವಿಧಿಸಿ ಹೇಳುವ ಪ್ರಮೇಯ ಅತಿ ಕಡಿಮೆ. ಹೋಟೆಲ್ ಉದ್ಯಮ, ಸಾರ್ವಜನಿಕ ಸೇವೆಯಲ್ಲಿರುವವರು ಇತರರನ್ನು ಉಪಚರಿಸುವುದು, ಗೌರವಿಸುವುದು ಸಿಂಗಪುರದ ಅಭಿವೃದ್ಧಿ ಮಾದರಿ. […]

Read More

ಭಾರತದ ಆರ್ಥಿಕತೆ 3ನೇ ಸ್ಥಾನಕ್ಕೇರಲು ಕರ್ನಾಟಕದ ಕೊಡುಗೆ ಎಷ್ಟು ʼಗ್ಯಾರಂಟಿʼ? : ವಿಸ್ತಾರ ಅಂಕಣ

ಯುವ ಜನರಿಗೆ ಕೌಶಲ್ಯ ಕಲಿಸುವ, ಉದ್ಯಮಶೀಲತೆ ಬೆಳೆಸುವ, ಹೆಚ್ಚೆಚ್ಚು ಜನರಿಗೆ ಕೆಲಸ ಕೊಡುವ ಸಾಮರ್ಥ್ಯವನ್ನು ಬೆಳೆಸಿದರೆ ಕರ್ನಾಟಕದ ಆರ್ಥಿಕತೆ ಸಬಲವಾಗುತ್ತದೆಯೇ ವಿನಃ ಕೆಲಸ ಕೊಡದೆ ಮನೆಯಲ್ಲಿ ಕೂರಿಸಿ ತಿಂಗಳಿಗೆ ಮೂರು ಸಾವಿರ ರೂ. ನೀಡುವುದರಿಂದಲ್ಲ. …………,…… “ಭಾರತದ ವಿಕಾಸ ಯಾತ್ರೆಯನ್ನು ಯಾರೂ ತಡೆಯಲು ಸಾಧ್ಯವಿಲ್ಲ. ನಮ್ಮ ಸರ್ಕಾರ ಆಡಳಿತ ಆರಂಭಿಸಿದಾಗ 2014ರಲ್ಲಿ 10ನೇ ಪ್ರಬಲ ಆರ್ಥಿಕತೆಯಾಗಿತ್ತು ಭಾರತ. ನಮ್ಮ ಮೊದಲ ಅವಧಿಯಲ್ಲಿ ಐದನೇ ಅತಿ ದೊಡ್ಡ ಆರ್ಥಿಕತೆ ಆಯಿತು. ನಮ್ಮ ಮೂರನೇ ಅವಧಿಯಲ್ಲಿ ಮೂರನೇ ಅತಿ ದೊಡ್ಡ […]

Read More

ಪ್ರಜಾಪ್ರಭುತ್ವದ ಗುಣ ಭಾರತೀಯರ ಜೀನ್ ನಲ್ಲಿಯೇ ಇದೆ ! : ವಿಸ್ತಾರ ಅಂಕಣ

75 ವರ್ಷದ ವಂಚನೆ, ಆರೋಪಗಳಿಂದ 25 ವರ್ಷದಲ್ಲಿ ಮುಕ್ತರಾಗಿ ಹೊರಬರೋಣ ಪರ್ಷಿಯನ್ನರು, ಗ್ರೀಕರು, ಡಚ್ಚರು, ಫ್ರೆಂಚರ ನಂತರ ಇಸ್ಲಾಮಿಕ್ ಆಕ್ರಮಣಕಾರರು, ಅವರಿರುವಾಗಲೇ ಭಾರತದ ಮೇಲೆ ಕ್ರೈಸ್ತರ (ಬ್ರಿಟಿಷ್) ದಾಳಿಯನ್ನು ಕೊನೆಗೊಳಿಸಲು ಸಾಧ್ಯವಾಗಿದ್ದು 1947ರ ಆಗಸ್ಟ್ 15ರಂದು. ಇನ್ನೇನು ಮತ್ತೊಂದು ಆಗಸ್ಟ್ 15ರ ಸಮೀಪಕ್ಕೆ ಬಂದಿದ್ದೇವೆ. ಇದನ್ನು ಸ್ವಾತಂತ್ರ್ಯ ಉತ್ಸವ ಎನ್ನಬೇಕೆ? ವಿಭಜನೆಯ ಕಹಿ ನೆನಪು ಎನ್ನಬೇಕೆ ಎನ್ನುವುದೇ ಗೊಂದಲ. ಒಂದು ಕಡೆ ನಮ್ಮ ನಾಯಕರು ಯೂನಿಯನ್ ಜಾಕ್ ಕೆಳಗಿಳಿಸಿ ತ್ರಿವರ್ಣ ಹಾರಿಸುತ್ತಿದ್ದರೆ, ಅತ್ತ ನೌಕಾಲಿ ಮತ್ತಿತರ ಭಾಗದಲ್ಲಿ(ಈಗಿನ […]

Read More

ಮುಸ್ಲಿಂ ಮಹಿಳೆಯರೊಂದಿಗಿನ ರಕ್ಷಾ ಬಂಧನ ಹಾಗೂ ಸಂವಿಧಾನದ ಆಶಯ : ವಿಸ್ತಾರ ಅಂಕಣ

ಪ್ರಧಾನಿ ನರೇಂದ್ರ ಮೋದಿಯವರು ಜುಲೈ 31ರಂದು ಪಶ್ಚಿಮ ಬಂಗಾಳ, ಒಡಿಶಾ ಹಾಗೂ ಜಾರ್ಖಂಡ್ ರಾಜ್ಯಗಳ ಎನ್ಡಿಎ ಶಾಸಕರ ಜತೆಗೆ ಸಭೆ ಮಾಡುವ ಸಮಯದಲ್ಲಿ ಹೇಳಿದ ಮಾತು ಈಗ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಇದೇ ಆಗಸ್ಟ್ 30ರಂದು ರಕ್ಷಾ ಬಂಧನ ಉತ್ಸವವಿದೆ. ರಕ್ಷಾ ಬಂಧನವೆಂದರೆ ಸಹೋದರ-ಸಹೋದರಿಯರ ಉತ್ಸವ. ಸಹೋದರನು ಎಲ್ಲ ಸಂದರ್ಭದಲ್ಲೂ ಸಹೋದರಿಯನ್ನು ರಕ್ಷಿಸುತ್ತೇನೆ ಎಂದು ಅಭಯ ನೀಡುವ ದಿನ. ಸಹೋದರಿಯನ್ನು ರಕ್ಷಿಸಲು ಅವನು ಯಾರು? ಹಾಗಾದರೆ ಹೆಣ್ಣು ಅಬಲೆಯೇ? ಅವಳನ್ನು ರಕ್ಷಿಸುವ ನೆಪದಲ್ಲಿ ಕೂಡಿ ಹಾಕುವ ಕೆಲಸ […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top