– ಕೇಡರ್ ಬೇಸ್ ಆಗಿ ಪಕ್ಷ ಕಟ್ಟಿ ಬಿಜೆಪಿಗೆ ಸಡ್ಡು ಹೊಡೆಯುವ ಪಣ – ಕೆಪಿಸಿಸಿ ಸಾರಥಿಯಾಗಿ ಡಿಕೆಶಿ | ಕಾಂಗ್ರೆಸ್ ಶಕ್ತಿ ಪ್ರದರ್ಶನಕ್ಕೆ ವೇದಿಕೆ. ವಿಕ ಸುದ್ದಿಲೋಕ ಬೆಂಗಳೂರು. ಕಾರ್ಯಕರ್ತರನ್ನೇ ಆಧಾರವಾಗಿಟ್ಟುಕೊಂಡು ಪಕ್ಷ ಕಟ್ಟುವ ಪ್ರತಿಜ್ಞೆಯೊಂದಿಗೆ ಡಿ.ಕೆ. ಶಿವಕುಮಾರ್ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ್ದಾರೆ. ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೇರಿಸುವ ಅವರ ಪಣಕ್ಕೆ ಇಡೀ ಕಾಂಗ್ರೆಸ್ ಪಕ್ಷ ಒಮ್ಮತದ ಬೆಂಬಲದ ಭರವಸೆ ನೀಡಿದೆ. ಕೆಪಿಸಿಸಿ ನೂತನ ಕಚೇರಿಯಲ್ಲಿ ಗುರುವಾರ ಡಿ.ಕೆ.ಶಿವಕುಮಾರ್ ಮತ್ತು ಮೂವರು ಕಾರ್ಯಾಧ್ಯಕ್ಷರಾದ ಸತೀಶ್ […]
Read More
ಕೊರೊನಾದಿಂದ ಬದಲಾದ ಟ್ರೆಂಡ್: ಯೂಟ್ಯೂಬ್ನಲ್ಲೇ ಪೂಜೆ ನೇರ ಪ್ರಸಾರ, ನಿತ್ಯ ಪ್ರವಚನ, ಸತ್ಸಂಗ – ಗೌರಿಪುರ ಚಂದ್ರು ಬೆಂಗಳೂರು. ಕೊರೊನಾ ಲಾಕ್ಡೌನ್ನಿಂದಾಗಿ ಮಠ, ಮಂದಿರಗಳಿಗೆ ಹೋಗುವುದು ನಿಂತಿದೆ. ಆದರೆ ಆನ್ಲೈನ್ ಮಾರ್ಗದ ಮೂಲಕ ಮನೆಮನೆಗಳಲ್ಲಿ ಭಕ್ತಿ ದಾಸೋಹ ಮುಂದುವರಿದಿದೆ. ಸ್ಕೈಪ್, ಫೇಸ್ಬುಕ್ ಪೇಜ್ ಹಾಗೂ ವಿಡಿಯೊ ಚಾಟಿಂಗ್ ಮೂಲಕ ವೇದ, ಉಪನಿಷತ್, ಸುಧಾಮಂಗಳ ಪಾಠ ಕಲಿಯುವವರ ಸಂಖ್ಯೆ ಹೆಚ್ಚಿದೆ. ಪ್ರವಚನ ಪ್ರಿಯರು, ಅಧ್ಯಾತ್ಮ ಆಸಕ್ತರು ಯೂಟ್ಯೂಬ್ ಮೊರೆ ಹೋಗುತ್ತಿದ್ದಾರೆ. ಫೇಸ್ಬುಕ್ನಲ್ಲೂ ಸ್ಪಿರಿಚುಯಲ್ ಉಪನ್ಯಾಸಗಳು ನಿತ್ಯ ಬಿತ್ತರವಾಗುತ್ತಿವೆ. ಉತ್ತರಾದಿಮಠದ […]
Read More
ಹೊಸದಿಲ್ಲಿ: ಚೀನಾದಲ್ಲಿ ಸರ್ವರ್ ಹೊಂದಿರುವ ಟೆಲಿ ಕಾನರೆನ್ಸಿಂಗ್ ಆ್ಯಪ್ ‘ಜೂಮ್’ ಬಳಕೆ ನಿಷೇಸಿ ಟೆಕ್ ದಿಗ್ಗಜ ‘ಗೂಗಲ್’ ತನ್ನ ಸಿಬ್ಬಂದಿಗೆ ಸೂಚನೆ ರವಾನಿಸಿದ ಬೆನ್ನಲ್ಲೇ, ಕೇಂದ್ರ ಗೃಹ ಸಚಿವಾಲಯವೂ ಅದಕ್ಕೆ ಕಡಿವಾಣ ಹಾಕಲು ನಿರ್ದೇಶನಗಳನ್ನು ಹೊರಡಿಸಿದೆ. ‘ಜೂಮ್’ ಸುರಕ್ಷಿತವಲ್ಲ ಹಾಗೂ ಮಾಹಿತಿಗಳು ಸೈಬರ್ ಖದೀಮರ ಪಾಲಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದೆ. ಕೊರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ‘ವರ್ಕ್ ಫ್ರಮ್ ಹೋಮ್’ನಲ್ಲಿ ನಿರತವಾಗಿರುವ ಮಂದಿ, ತಮ್ಮ ಕಚೇರಿ ಮುಖ್ಯಸ್ಥರು ಹಾಗೂ ಸಹೋದ್ಯೋಗಿಗಳ ಜತೆ ಸಂವಾದ ನಡೆಸಲು ‘ಜೂಮ್’ […]
Read More
ಒಂದು ಕಡೆ ಹೊರಗೆ ಬಂದರೆ ಕೊರೊನಾ ವೈರಸ್ನ ಭಯ. ಇನ್ನೊಂದು ಮನೆಯೊಳಗೇ ಇದ್ದರೂ ಆನ್ಲೈನ್ನಲ್ಲಿ ವಂಚಕರ ಸುಲಿಗೆಗೆ ತುತ್ತಾಗುವ ಆತಂಕ. ಇದು ಪ್ರಜೆಗಳ ಸದ್ಯದ ಸ್ಥಿತಿ! ಚೀನಾ ಮೂಲದ ‘ಜೂಮ್’ ಎಂಬ ಆ್ಯಪ್ ಅನ್ನು ಬಳಸುವವರು ಅದನ್ನು ಕೈಬಿಡುವುದು ಅಥವಾ ಹುಷಾರಾಗಿರುವುದು ಅಗತ್ಯ ಎಂದು ಕೇಂದ್ರ ಸರಕಾರ ಸೂಚಿಸಿದೆ. ಜೂಮ್ನ ಹಲವು ಭಾರತೀಯ ಬಳಕೆದಾರರ ಪಾಸ್ವರ್ಡ್ಗಳು ಹ್ಯಾಕ್ ಆಗಿರುವುದು ಹಾಗೂ ಕಾನ್ಫರೆನ್ಸ್ ಕರೆಯ ನಡುವೆ ಹ್ಯಾಕ್ ಆಗಿರುವುದು ಕಂಡುಬಂದ ನಂತರ ಸರಕಾರದ ಈ ಸೂಚನೆ ಬಂದಿದೆ. ಜೂಮ್ನ […]
Read More