• ನಿರಂಜನ ಸಂಗ್ರಹ ನಿರೂಪಣೆ: ಸುಧೀಂದ್ರ ಹಾಲ್ದೊಡ್ಡೇರಿ. ಸುದೀರ್ಘ ಚೀನಾ ಯಾತ್ರೆಯ ನಂತರವೂ ದಲಾಯಿ ಲಾಮರ ‘ಮೆದುಳು’ ಸ್ವಚ್ಛವಾಗದ ಕಾರಣ, ಟಿಬೆಟ್ನಲ್ಲಿ ಠಿಕಾಣಿ ಹೂಡಿದ್ದ ಚೀನೀ ಸೇನಾನಿ ಹೆಚ್ಚು ತಡಮಾಡದೆ ಕಾರ್ಯೋನ್ಮುಖನಾದ. ಪೀಕಿಂಗಿನ ಆಜ್ಞೆಯಂತೆ, ಟಿಬೆಟನ್ನು ಮೂರು ಆಡಳಿತ ಭಾಗಗಳಾಗಿ ಆತ ವಿಂಗಡಿಸಿದ. ಒಂದಕ್ಕೆ ಪಂಚೆನ್ ಲಾಮರನ್ನೂ ಇನ್ನೊಂದಕ್ಕೆ ತನ್ನನ್ನೂ ಲ್ಹಾಸಾ ರಾಜಧಾನಿಯಾಗಿರುವ ಮೂರನೆಯ ಭಾಗಕ್ಕೆ ದಲಾಯಿ ಲಾಮರನ್ನೂ ಆಡಳಿತಗಾರರೆಂದು ನೇಮಿಸಿದ. ಟಿಬೆಟ್ನ ರೈತರನ್ನು ಒಲಿಸಿಕೊಳ್ಳುವುದಕ್ಕಾಗಿ ಭೂಸುಧಾರಣೆಯನ್ನೂ ಮಠಗಳಿಂದಲೂ ಭೂಮಾಲಿಕರಿಂದಲೂ ಕಸಿದುಕೊಂಡ ದನಕರುಗಳನ್ನು ಒಟ್ಟುಗೂಡಿಸಿ ಸಾಮುದಾಯಿಕ ವ್ಯವಸಾಯ […]