ವಿಕಾಸ್ ದುಬೆ ಎಂಬ ಕುಖ್ಯಾತ ಮಾಫಿಯಾ ದೊರೆಯ ಎನ್ಕೌಂಟರ್ ಮಾಡಿದ್ದಾರೆ ಉತ್ತರಪ್ರದೇಶದ ಪೊಲೀಸರು. ಯೋಗಿ ಆದಿತ್ಯನಾಥ್ ಸರಕಾರ ಆಡಳಿತಕ್ಕೆ ಬಂದ ಬಳಿಕ ಇಲ್ಲಿ 100ಕ್ಕೂ ಹೆಚ್ಚು ಕ್ರಿಮಿನಲ್ಗಳನ್ನು ಗುಂಡಿಕ್ಕಿ ಸಾಯಿಸಲಾಗಿದೆ. ದಶಕಗಳ ಕಾಲ ಮೆರೆದ ನಾನಾ ಗ್ಯಾಂಗ್ಸ್ಟರ್ಗಳಿಗೆ ಈಗ ಪಾಪಕ್ಕೆ ಫಲ ಪಡೆಯುವ ಕಾಲ. ಮೂರು ವರ್ಷಗಳ ಹಿಂದೆ ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಅವರು ಬಿಜೆಪಿ ಪರ ನಡೆಸಿದ ಚುನಾವಣೆ ಪ್ರಚಾರದ ವೇಳೆ, ಅಧಿಕಾರಕ್ಕೆ ಬಂದರೆ ರಾಜ್ಯವನ್ನು ಸಂಘಟಿತ ಅಪರಾಧ ಗ್ಯಾಂಗ್ಗಳಿಂದ ಮುಕ್ತಗೊಳಿಸುವುದಾಗಿ ಹೇಳಿದ್ದರು. ಹೇಳಿದಂತೆಯೇ ಮಾಡಿದ್ದಾರೆ, […]
Read More
ಗೋ ಸಂರಕ್ಷಣೆ, ಗೋಹತ್ಯೆ ನಿಷೇಧ- ಇತ್ಯಾದಿ ಹೆಸರುಗಳಿಂದ ಪ್ರಸ್ತಾವಿತವಾಗುವ ವಿಷಯ ಭಾರತದಲ್ಲಿ ಬಹುತೇಕ ಗೊಂದಲದ ಗೂಡಾಗಿದೆ. ಈ ಬಗ್ಗೆ ಒಂದೊಂದು ರಾಜ್ಯ ಒಂದೊಂದು ಕಾನೂನು ಹೊಂದಿದೆ. ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಅವರ ನೇತೃತ್ವದ ಬಿಜೆಪಿ ಸರಕಾರ, ರಾಜ್ಯದಲ್ಲಿದ್ದ ಗೋ ಹತ್ಯೆ ತಡೆ ಕಾಯಿದೆ-1955ನ್ನು ಮತ್ತಷ್ಟು ಬಿಗಿ ಮಾಡಿದೆ. ಅದರ ಪ್ರಕಾರ, ಇನ್ನು ಮುಂದೆ ಗೋ ಹತ್ಯೆ ಮಾಡುವವರಿಗೆ ಗರಿಷ್ಠ 10 ವರ್ಷ ಜೈಲು. ದಂಡದ ಮೊತ್ತ ಹತ್ತು ಸಾವಿರದಿಂದ 5 ಲಕ್ಷದವರೆಗೆ ಏರಿಕೆ. ಗೋ ಹತ್ಯೆಯಿಂದ […]
Read More
ಸಿದ್ಧಾಂತಗಳನ್ನು ತೇಲಿಬಿಡುವುದು ಸುಲಭ. ಆದರೆ ಅದರ ಉದ್ದೇಶ, ಆಶಯವನ್ನು ಕಾರ್ಯರೂಪಕ್ಕೆ ತರುವಾಗಲೇ ಅಸಲಿಯತ್ತು ಬಹಿರಂಗವಾಗುವುದು. ಆಡಳಿತದ ಸ್ಥಾನಗಳನ್ನು ನಿರ್ಧರಿಸುವಾಗ ಈವರೆಗೆ ಪಾಲಿಸಿಕೊಂಡು ಬಂದ ಸಂಪ್ರದಾಯವನ್ನು ಮೀರಿ ಹೊಸ ಹೆಜ್ಜೆಯಿಡುವ ಧೈರ್ಯ ಮಾಡಿದರೆ ಬದಲಾವಣೆಯನ್ನು ನಿರೀಕ್ಷಿಸಬಹುದು. ಸೋಷಿಯಲ್ ಇಂಜಿನಿಯರಿಂಗ್ ಎನ್ನುವ ಪದ ಇತ್ತೀಚಿನ ವರ್ಷಗಳಲ್ಲಿ ಬಹಳಷ್ಟು ಚರ್ಚೆಯಾಗುತ್ತಿರುವುದನ್ನು ಎಲ್ಲರೂ ಗಮನಿಸಿಯೇ ಇರುತ್ತೀರಿ. ಅದರ ಅರ್ಥ ಬಹಳ ವಿಶಾಲ. ವ್ಯಾಪ್ತಿಯ ಹರವು ಬಹಳ ದೊಡ್ಡದು. ಆದರೆ ಅದರ ಬಳಕೆ ಮಾತ್ರ ರಾಜಕೀಯ ವಲಯದಲ್ಲಿ ಮತ್ತು ಅದಕ್ಕೆ ಪೂರಕವಾದ ಸಾಮಾಜಿಕ ವಲಯದಲ್ಲಿ […]
Read More