– ಡಾ.ಆರತೀ ವಿ.ಬಿ. ಶ್ರಾವಣ ಹುಣ್ಣಿಮೆಯು ಉಪಾಕರ್ಮ, ರಕ್ಷಾಬಂಧನ ಮುಂತಾದ ವೈದಿಕ ಪೌರಾಣಿಕ ಜಾನಪದೀಯ ಆಚರಣೆಗಳ ಸುಂದರ ಸಂಗಮವಷ್ಟೇ ಅಲ್ಲ, ‘ಸಂಸ್ಕೃತದಿನ’ವೆಂದೂ ಮಾನ್ಯ. ಹುಣ್ಣಿಮೆಯನ್ನುಳ್ಳ ಈ ಸಪ್ತಾಹವು ಸಂಸ್ಕೃತಸಪ್ತಾಹವೆಂದೂ ಮಾನ್ಯ. ದೇಶಾದ್ಯಂತವಷ್ಟೇ ಅಲ್ಲ, ವಿದೇಶದಲ್ಲೂ ಸಂಸ್ಕೃತ ಭಾಷಾಸಂಬಂಧಿತವಾದ ಗೋಷ್ಠಿಗಳು ಸಾಂಸ್ಕೃತಿಕ ಕಲಾಪಗಳೂ ಕವಿವಿದ್ವಾಂಸರುಗಳ ಸಮ್ಮಾನ ಪುರಸ್ಕಾರಾದಿಗಳು ಜರುಗುತ್ತವೆ. ಅಷ್ಟಾಧ್ಯಾಯಿಯಂತಹ ಅದ್ಭುತ ವ್ಯಾಕರಣ ಶಾಸ್ತ್ರಗ್ರಂಥವನ್ನು ನಿರ್ಮಿಸಿ ಭಾಷಾಜಗತ್ತಿಗೇ ಅನುಪಮ ಯೋಗದಾನವಿತ್ತ ಪಾಣಿನೀ ಮಹರ್ಷಿಗಳ ಪುಣ್ಯದಿನವೆಂದು ಮಾನ್ಯವಾದ ಶ್ರಾವಣಹುಣ್ಣಿಮೆಯನ್ನು ಸಂಸ್ಕೃತದಿನವೆಂದು ಆಚರಿಸುವುದು ಅರ್ಥಪೂರ್ಣವಾಗಿದೆ. ಸಂಸ್ಕೃತಭಾಷೆಯ ಒಂದು ವೈಶಿಷ್ಟ್ಯವೇನು ಗೊತ್ತೆ? ಅದು […]