ಕೆಲ ಸಂದರ್ಭಗಳಲ್ಲಿ ವಿನಾಕಾರಣ ಕಿರಿಕಿರಿ, ತೊಂದರೆ ಅನುಭವಿಸಬೇಕಾಗಿ ಬರುತ್ತದೆ. ಕೆಲ ವರ್ಷಗಳ ಹಿಂದಿನ ಅನುಭವ. ಈ ಹಿಂದೆ ನಾನು ವಿಜಯವಾಣಿ, ದಿಗ್ವಿಜಯ ನ್ಯೂಸ್ ಸಂಪಾದಕನಾಗಿದ್ದಾಗ ರಮಜಾನ್ ಹಬ್ಬದಂದು ಓರ್ವ ಪ್ರಬುದ್ಧ ಲೇಖಕರು ಬರೆದ ಉತ್ತಮ ಲೇಖನ ಪ್ರಕಟಿಸಿದ್ದೆವು. ಪುಟ ವಿನ್ಯಾಸ ಮಾಡುವಾಗ ಲೇಖನ ಗಮನ ಸೆಳೆಯುವಂತೆ ಮಾಡಲು, ಪುಟದ ಅಂದ ಹೆಚ್ಚಿಸಲು ನನ್ನ ಆಗಿನ ಸಹೋದ್ಯೋಗಿಗಳು ಒಂದು ಸಾಂದರ್ಭಿಕ ಚಿತ್ರ ಬಳಸಿದ್ದರು. ಹಾಗೆ ದೇವರ ಚಿತ್ರ ಬಳಸುವುದು ನಿಷಿದ್ಧ ಎಂಬ ಮಾಹಿತಿ ಕೊರತೆ ನಮ್ಮ ಸಹೋದ್ಯೋಗಿಗಳಿಗೆ ಇತ್ತು. […]