ಕೋಟ್ಯಂತರ ಭಕ್ತರ ಹಲವು ವರ್ಷಗಳ ಕನಸು ಈಡೇರುವ ಗಳಿಗೆ ಹತ್ತಿರವಾಗಿದೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಬುಧವಾರ(ಜೂ.10)ರಂದು ಶಿಲಾನ್ಯಾಸ ನಡೆಯಲಿದೆ. ರಾಮಜನ್ಮಭೂಮಿ ವ್ಯಾಪ್ತಿಯಲ್ಲೇ ಇರುವ ‘ಕುಬೇರ ತಿಲ’ ಮಂದಿರದಲ್ಲಿ ಶಿವನಿಗೆ ರುದ್ರಾಭಿಷೇಕ ಮಾಡುವುದರೊಂದಿಗೆ ಧಾರ್ಮಿಕ ವಿಧಿವಿಧಾನಗಳು ಆರಂಭವಾಗಲಿವೆ. ‘‘ಲಂಕಾ ಮೇಲಿನ ದಾಳಿಗೂ ಮುನ್ನ ಶ್ರೀರಾಮಚಂದ್ರನು ಶಿವನನ್ನು ಪ್ರಾರ್ಥಿಸಿದ್ದ. ಅದೇ ಸಂಪ್ರದಾಯವನ್ನು ಈಗ ಪಾಲಿಸುತ್ತಿದ್ದೇವೆ. ರುದ್ರಾಭಿಷೇಕದ ಬಳಿಕವೇ ರಾಮ ಮಂದಿರ ಶಿಲಾನ್ಯಾಸದ ಕಾರ್ಯಕ್ರಮಗಳು ಆರಂಭವಾಗಲಿವೆ,’’ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ನ ವಕ್ತಾರರಾದ ಮಹಾಂತ ಕಮಲನಯನ ದಾಸ್ […]