– ಅಪಾರ ಬಲವಿದ್ದರೂ ಸ್ವಭಾವತಃ ಸೌಮ್ಯವಾದ ಆನೆ ದೇವರಿಗೆ ಭಾರತೀಯರ ಹೃದಯದಲ್ಲಿ ಅನನ್ಯ ಸ್ಥಾನ. – ಡಾ. ವಿ.ಬಿ. ಆರತೀ. ಕೇರಳದಲ್ಲಿ ಇತ್ತೀಚೆಗೆ, ಗರ್ಭಿಣಿ ಆನೆಗೆ ಬಾಂಬ್ ಹೊಂದಿದ ಹಣ್ಣನ್ನು ತಿನ್ನಿಸಿ, ಸಾಯಿಸಿದ ದುಷ್ಕೃತ್ಯವನ್ನು ದೇಶಕ್ಕೆ ದೇಶವೇ ಖಂಡಿಸಿತು. ಯಾವುದೇ ಪ್ರಾಣಿಯನ್ನು ಇಷ್ಟು ಕ್ರೂರವಾಗಿ ಕೊಂದರೆ ಸಜ್ಜನ ಮನಸ್ಸು ನೊಂದುಕೊಳ್ಳುತ್ತದೆ. ಕಾಡುಗಳ್ಳರ ಪೈಕಿ ವೀರಪ್ಪನ್ ಬಗ್ಗೆ ಹೆಚ್ಚು ಆಕ್ರೋಶವಿದ್ದದ್ದೂ ಆತ ಹಂತಕನೆಂದೇ ಅಲ್ಲವೆ? ಭಾರತೀಯ ಮನದಲ್ಲಿ, ಧರ್ಮ- ಸಂಸ್ಕೃತಿ- ರಾಜಪರಂಪರೆಗಳಲ್ಲಿ ಆನೆಗೆ ಇರುವ ಸ್ನೇಹಾದರಗಳೂ ಪ್ರಾಶಸ್ತ್ಯವೂ ಅಂತಹದ್ದು! […]
Read More
ಇಂದಿನಿಂದ ಟೆಂಪಲ್, ಮಾಲ್, ಹೋಟೆಲ್ ಓಪನ್ | ಷರತ್ತುಗಳು ಅನ್ವಯ. ಎರಡೂವರೆ ತಿಂಗಳ ಬಳಿಕ ಸೃಷ್ಟಿಯಾಗಲಿದೆ ಸಂಚಲನ | ಪ್ರವಾಸಿ ತಾಣಗಳೂ ರೆಡಿ. ವಿಕ ಸುದ್ದಿಲೋಕ ಬೆಂಗಳೂರು. ಕೊರೊನಾದಿಂದಾಗಿ ಅಸ್ತವ್ಯಸ್ತಗೊಂಡಿದ್ದ ವಾಣಿಜ್ಯ ಕ್ಷೇತ್ರ ಮತ್ತು ಜನಜೀವನವನ್ನು ಮರಳಿ ಹಳಿಗೆ ತರುವ ಅತಿ ದೊಡ್ಡ ಕ್ರಮವಾಗಿ ಸೋಮವಾರದಿಂದ ರಾಜ್ಯಾದ್ಯಂತ ದೇವಾಲಯಗಳು, ಹೋಟೆಲ್ಗಳು ಮತ್ತು ವಾಣಿಜ್ಯ ಮಾಲ್ಗಳನ್ನು ಮತ್ತೆ ತೆರೆಯಲಾಗುತ್ತಿದೆ. ಇದರೊಂದಿಗೆ ಸುಮಾರು ಎರಡುವರೆ ತಿಂಗಳಿನಿಂದ ಸ್ಥಗಿತಗೊಂಡಿದ್ದ ಆತಿಥ್ಯ ಕ್ಷೇತ್ರ, ಧಾರ್ಮಿಕ ಮತ್ತು ವ್ಯಾಪಾರಿ ವಲಯದಲ್ಲಿ ಹೊಸ ಸಂಚಲನ ಸೃಷ್ಟಿಯಾಗಲಿದೆ. […]
Read More
– ಸೋಮವಾರ ದೇಗುಲ ತೆರೆದರೂ ಹೆಚ್ಚಿನೆಡೆ ದರುಶನಕ್ಕೆ ಸೀಮಿತ – ಸೇವೆ ಆರಂಭ ಸ್ವಲ್ಪ ವಿಳಂಬ | ಜನದಟ್ಟಣೆ ತಪ್ಪಿಸುವುದು ಉತ್ತಮ ವಿಕ ಸುದ್ದಿಲೋಕ ಬೆಂಗಳೂರು. ಸೋಮವಾರದಿಂದ ಭಕ್ತರ ಪ್ರವೇಶಕ್ಕೆ ಅವಕಾಶ ನೀಡಲು ರಾಜ್ಯದ ಹೆಚ್ಚಿನ ದೇವಾಲಯಗಳಲ್ಲಿ ಭರದ ಸಿದ್ಧತೆ ನಡೆಯುತ್ತಿದೆ. ಆದರೆ, ಬಹುತೇಕ ದೇವಾಲಯಗಳಲ್ಲಿ ಸದ್ಯಕ್ಕೆ ದರ್ಶನಕ್ಕೆ ಮಾತ್ರ ಅವಕಾಶ ನೀಡುವ ಚಿಂತನೆ ನಡೆದಿದ್ದು, ದೇವರ ಸೇವೆಗಳು ಕೆಲವು ದಿನ ಬಿಟ್ಟು ಆರಂಭಗೊಳ್ಳಲಿವೆ. ಕೇಂದ್ರ ಸರಕಾರ ವಿಧಿಸಿರುವ ಮಾರ್ಗದರ್ಶಿ ಸೂತ್ರಗಳ ಅಡಿಯಲ್ಲಿ ದೇವಾಲಯಗಳು ಭಕ್ತರಿಗೆ ಅವಕಾಶ […]
Read More
ವಿಕ ಸುದ್ದಿಲೋಕ ಬೆಂಗಳೂರು: ಸುಮಾರು ಎರಡು ತಿಂಗಳ ಬಳಿಕ ರಾಜ್ಯಾದ್ಯಂತ ಜೂನ್ 1ರಿಂದ ದೇವಸ್ಥಾನಗಳು, ಹೋಟೆಲ್ಗಳು ಪುನರಾರಂಭಗೊಳ್ಳಲಿವೆ. ಮಾಲ್ಗಳೂ ತೆರೆಯುವ ನಿರೀಕ್ಷೆ ಇದೆ. ಕೊರೊನಾ ಸುರಕ್ಷತಾ ವ್ಯವಸ್ಥೆಯೊಂದಿಗೆ, ಸಾಮಾಜಿಕ ಅಂತರದ ಎಚ್ಚರ ಕಾಪಾಡಿಕೊಂಡು ಧಾರ್ಮಿಕ ದತ್ತಿ ಇಲಾಖೆಯ ಎಲ್ಲ ಮಂದಿರಗಳಲ್ಲಿ ಭಕ್ತರಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಮಂಗಳವಾರ ತಿಳಿಸಿದ್ದಾರೆ. ಇದರ ಜತೆಗೆ, ಈ ಹಿಂದೆ ಘೋಷಿಸಿದಂತೆ 52 ದೇವಸ್ಥಾನಗಳಲ್ಲಿ ಆನ್ಲೈನ್ ಸೇವೆ ಮುಂದುವರಿಯಲಿದೆ ಎಂದವರು ಹೇಳಿದ್ದಾರೆ. ಸಿಎಂ ಯಡಿಯೂರಪ್ಪ ಈ […]
Read More