ವಿಜ್ಞಾನಕ್ಕೆ ಸಾಹಿತ್ಯ ಬೆಸೆದ ಸ್ನೇಹಜೀವಿ

-ದೇಶಿ ವಿಮಾನ ತಂತ್ರಜ್ಞಾನ ವಿನ್ಯಾಸದ ರೂವಾರಿ ನಿನ್ನೆ ನಮ್ಮೊಂದಿಗಿದ್ದ ಸುಧೀಂದ್ರ ಹಾಲ್ದೊಡ್ಡೇರಿ ಇಂದು ನಮ್ಮೊಂದಿಗಿಲ್ಲ.ಇದೇ ಬದುಕಿನ ವಿಸ್ಮಯ.ವಿಜಯ ಕರ್ನಾಟಕದ ಸಂಪಾದಕನಾಗುವವರೆಗೆ ನನಗೂ ಅವರಿಗೂ ಅಂತಹ ಒಡನಾಟ,ಸಂಪರ್ಕವೇನಿರಲಿಲ್ಲ.ಆದರೆ ಅವರ ಸಹೃದಯತೆ ಪರಿಚಯ ಅದಕ್ಕೂ ಮೊದಲೇನನಗಾಗಿತ್ತು.ನಂತರ ಅದು ಗಾಢವಾಯಿತು.ನಾನು ವಿಜಯವಾಣಿ,ದಿಗ್ವಿಜಯ ಚಾನೆಲ್ ನಿಂದ ಹೊರಬಂದ ದಿನ‌ ಸಾಯಂಕಾಲ ಆರು ಗಂಟೆ ಸುಮಾರಿಗೆ ನನಗೊಂದು ಫೋನ್ ಕರೆ ಬಂತು.ರಿಸೀವ್ ಮಾಡಿದಾಗ ನಾನು ಸುಧೀಂದ್ರ ಹಾಲ್ದೊಡ್ಡೇರಿ ಎಂದು ಪರಿಚಯಿಸಿಕೊಂಡರು.ನೇರವಾಗಿ ಮಾತಾಡ್ತೇನೆ ಆಗಬಹುದಾ ಎಂದರು.ಮಾತಾಡಿ ಎಂದೆ.ನೀವು ನಿಮ್ಮ ಸಂಪಾದಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ರಾ ಅಂತ […]

Read More

ಡ್ರೋನ್‌ ಹಾರುಯಂತ್ರದಿಂದ ಮಿಡತೆ ಹಾವಳಿ ನಿಯಂತ್ರಣ – ಬಳಸಿದಷ್ಟೂ ವಿಸ್ತಾರವಾಗುತ್ತಿದೆ ಡ್ರೋನ್‌ಗಳ ಬಳಕೆಯ ಸಾಧ್ಯತೆ

– ಸುಧೀಂದ್ರ ಹಾಲ್ದೊಡ್ಡೇರಿ.  ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಜಗದ್ವಿಖ್ಯಾತ ವಿದ್ಯಾಸಂಸ್ಥೆ ಭಾರತೀಯ ವಿಜ್ಞಾನ ಮಂದಿರ (ಐಐಎಸ್‌ಸಿ) ನಿಮಗೆ ಗೊತ್ತು. ನವೀನ ವಿಜ್ಞಾನ-ತಂತ್ರಜ್ಞಾನ ಕನಸುಗಳನ್ನು ಹೊತ್ತಯುವ ಪ್ರತಿಭಾವಂತರಿಗೆ ಅಗತ್ಯ ಸಂಪನ್ಮೂಲಗಳನ್ನು, ಸಾಧನ-ಸಲಕರಣೆಗಳನ್ನು ಹಾಗೂ ವಿದ್ವಜ್ಜನರ ಮಾರ್ಗದರ್ಶನವನ್ನು ನೀಡಿ, ಸಾರ್ವತ್ರಿಕ ಒಳಿತಿಗೆ ಬಳಕೆಯಾಗಬಲ್ಲ ಉತ್ಪನ್ನಗಳ ಅಭಿವೃದ್ಧಿಗೆ ನೆರವಾಗುವಉದ್ದಿಶ್ಯ ಇಲ್ಲಿನ ‘ಸೊಸೈಟಿ ಫಾರ್‌ ಇನ್ನೋವೇಶನ್‌ ಆ್ಯಂಡ್‌ ಡೆವಲಪ್‌ಮೆಂಟ್‌’ ಒಕ್ಕೂಟದ್ದು. ಕೆಲ ವರ್ಷಗಳ ಹಿಂದೆ ವೈಮಾಂತರಿಕ್ಷ ಕ್ಷೇತ್ರದ ಉತ್ಸಾಹಿ ಸಮೂಹವೊಂದು ದೇಶದ ಹೆಮ್ಮೆಯ ಲಘು ಯುದ್ಧ ವಿಮಾನ ‘ತೇಜಸ್‌’ನ ವಿನ್ಯಾಸಗಾರ ಡಾ.ಕೋಟಾ ಹರಿನಾರಾಯಣ ಅವರ […]

Read More

ಲಡಾಖಿನಲ್ಲಿ ನಕಾಶೆ ನೂಕುವ ಯತ್ನ

– ನಿರಂಜನ ಸಂಗ್ರಹ ನಿರೂಪಣೆ: ಸುಧೀಂದ್ರ ಹಾಲ್ದೊಡ್ಡೇರಿ ಉತ್ತರದಲ್ಲಿ ಹಿಮಾಲಯ ಪರ್ವತಶ್ರೇಣಿ ಆವೃತವಾಗಿರುವ ದೇಶ, ಭಾರತ. ಆ ದಿಕ್ಕಿನಲ್ಲಿ ನಮ್ಮ ಸೀಮಾರೇಖೆ ಮೂರು ಸಾವಿರ ವರ್ಷಗಳ ಅವಧಿಯಲ್ಲಿ ಎಂದೂ ಬದಲಾದುದಿಲ್ಲ. ಇದು, ಉತ್ತರದ ಕ್ಯುವೆನ್‌ಲುನ್‌ ಪರ್ವತಗಳಿಂದ ಪೂರ್ವದಿಕ್ಕಿನಲ್ಲಿ ಬರ್ಮವನ್ನು ಸಂಧಿಸುವವರೆಗೆ ಈ ಗಡಿಯು 2500 ಮೈಲುಗಳ ಉದ್ದವಿದೆ. ಪ್ರಾಚೀನಗ್ರಂಥವಾದ ವಿಷ್ಣು ಪುರಾಣದಲ್ಲಿ ಹಿಮಾಲಯವೇ ಭಾರತದ ಉತ್ತರ ಸೀಮೆ ಎಂಬ ಉಲ್ಲೇಖವಿದೆ. ‘‘ಹಿಮಾಲಯದ ದಕ್ಷಿಣಕ್ಕೆ ಹಿಂದೂ ಮಹಾಸಾಗರದ ಉತ್ತರಕ್ಕೆ ಇರುವ ಭೂಭಾಗವೆಲ್ಲ ಭಾರತ’’ ಎನ್ನುತ್ತದೆ ಆ ಪುರಾಣ. ಕ್ರಿಸ್ತಪೂರ್ವ […]

Read More

‘ಪಂಚಶೀಲ’ ಚೌ ಎನ್‌-ಲೇಗೆ ತಮಾಷೆಯೆನಿಸಿತ್ತು

– ನಿರಂಜನ ಸಂಗ್ರಹ ನಿರೂಪಣೆ: ಸುಧೀಂದ್ರ ನಿರೂಪಣೆ 1949ರ ಅಕ್ಟೋಬರ್‌ ತಿಂಗಳಲ್ಲಿ ಮೊದಲ ಬಾರಿ ಅಮೆರಿಕದ ಸಂಯುಕ್ತ ಸಂಸ್ಥಾನಗಳಿಗೆ ಭೇಟಿ ಕೊಟ್ಟಾಗ ಭಾರತ ಪ್ರಧಾನಿ ಜವಾಹರಲಾಲ ನೆಹರೂ ಅವರು ಆಡಿದ ಮಾತು.  ‘‘ನಮಗೆ ಇಷ್ಟವಿರಲಿ, ಇಲ್ಲದೇ ಹೋಗಲಿ, ಪ್ರತ್ಯೇಕತೆಯಲ್ಲಿ ಬದುಕುವುದು ಸಾಧ್ಯವೇ ಇಲ್ಲವೆಂಬುದನ್ನು ನಾವು ಮನಗಂಡಿದ್ದೇವೆ. ಯಾವ ರಾಷ್ಟ್ರವೂ ಹಾಗಿರುವಂತಿಲ್ಲ. ನನಗಂತೂ ಅದು ಶಕ್ಯವೇ ಇಲ್ಲ. ನಮ್ಮ ಭೂಗೋಲ, ನಮ್ಮ ಇತಿಹಾಸ, ಈಗಿನ ಘಟನೆಗಳು ಎಲ್ಲವೂ ಹೆಚ್ಚು ವಿಸ್ತೃತ ಚಿತ್ರದೆಡೆಗೇ ನಮ್ಮನ್ನು ಎಳೆದೊಯ್ಯುತ್ತಿವೆ.’’ ಈ ಮಾತಿನ ಹಿಂದೆ […]

Read More

ಕೊರಿಯಾದಲ್ಲಿ ಮುಖಭಂಗ

– ನಿರಂಜನ ಸಂಗ್ರಹ ನಿರೂಪಣೆ: ಸುಧೀಂದ್ರ ಹಾಲ್ದೊಡ್ಡೇರಿ ಸ್ವಾ ತಂತ್ರ್ಯಾನಂತರ ಮೂರುವರೆ ವರ್ಷಗಳಿಂದ ನಡೆಯುತ್ತಲಿದ್ದ ರಾಜ್ಯಾಂಗ ರಚನೆಯ ಕಾರ್ಯ ಪೂರ್ತಿಗೊಂಡು 1950ರ ಜನವರಿ 26ರಂದು ಭಾರತ ಗಣರಾಜ್ಯವಾಯಿತು. ಅದಕ್ಕೆ ಕೆಲವು ತಿಂಗಳುಗಳ ಹಿಂದೆ 1949ರ ಅಕ್ಟೋಬರ್ 1ರಂದು ಚೀನೀ ಜನತಾ ಗಣರಾಜ್ಯ ಸ್ಥಾಪನೆಯಾಗಿತ್ತು. ಸ್ವತಂತ್ರ ಚೀನಾಕ್ಕೆ ಮೊದಲು ಮನ್ನಣೆ ನೀಡಿದ್ದು ಬರ್ಮಾ. ಚೀನಾಗೆ ಮನ್ನಣೆ ನೀಡುವುದರ ಜತೆಗೆ ರಾಯಭಾರಿಯನ್ನು ಸಹಾ ಕಳುಹಿಕೊಟ್ಟಿದ್ದು ಭಾರತ (1949ರ ಡಿಸೆಂಬರ್ 29). ನಂತರದ ದಿನಗಳಲ್ಲಿ ರಷ್ಯಾ, ಬ್ರಿಟನ್ ಮತ್ತಿತರ ರಾಷ್ಟ್ರಗಳಿಂದಲೂ ಚೀನಕ್ಕೆ […]

Read More

ಲಾಮಾ-ಚೌಎನ್ ಲೇ ಚಕಮಕಿ

• ನಿರಂಜನ ಸಂಗ್ರಹ ನಿರೂಪಣೆ: ಸುಧೀಂದ್ರ ಹಾಲ್ದೊಡ್ಡೇರಿ.  ಸುದೀರ್ಘ ಚೀನಾ ಯಾತ್ರೆಯ ನಂತರವೂ ದಲಾಯಿ ಲಾಮರ ‘ಮೆದುಳು’ ಸ್ವಚ್ಛವಾಗದ ಕಾರಣ, ಟಿಬೆಟ್‌ನಲ್ಲಿ ಠಿಕಾಣಿ ಹೂಡಿದ್ದ ಚೀನೀ ಸೇನಾನಿ ಹೆಚ್ಚು ತಡಮಾಡದೆ ಕಾರ್ಯೋನ್ಮುಖನಾದ. ಪೀಕಿಂಗಿನ ಆಜ್ಞೆಯಂತೆ, ಟಿಬೆಟನ್ನು ಮೂರು ಆಡಳಿತ ಭಾಗಗಳಾಗಿ ಆತ ವಿಂಗಡಿಸಿದ. ಒಂದಕ್ಕೆ ಪಂಚೆನ್ ಲಾಮರನ್ನೂ ಇನ್ನೊಂದಕ್ಕೆ ತನ್ನನ್ನೂ ಲ್ಹಾಸಾ ರಾಜಧಾನಿಯಾಗಿರುವ ಮೂರನೆಯ ಭಾಗಕ್ಕೆ ದಲಾಯಿ ಲಾಮರನ್ನೂ ಆಡಳಿತಗಾರರೆಂದು ನೇಮಿಸಿದ. ಟಿಬೆಟ್‌ನ ರೈತರನ್ನು ಒಲಿಸಿಕೊಳ್ಳುವುದಕ್ಕಾಗಿ ಭೂಸುಧಾರಣೆಯನ್ನೂ ಮಠಗಳಿಂದಲೂ ಭೂಮಾಲಿಕರಿಂದಲೂ ಕಸಿದುಕೊಂಡ ದನಕರುಗಳನ್ನು ಒಟ್ಟುಗೂಡಿಸಿ ಸಾಮುದಾಯಿಕ ವ್ಯವಸಾಯ […]

Read More

ಲಾಮಾ ಬ್ರೇನ್ ವಾಷ್ ವಿಫಲ

– ನಿರಂಜನ ಸಂಗ್ರಹ ನಿರೂಪಣೆ: ಸುಧೀಂದ್ರ ಹಾಲ್ದೊಡ್ಡೇರಿ  ಮಂಚೂ ಸೇನೆಗಳು ಈ ಹಿಂದೆ ಟಿಬೆಟ್‌ಗೆ ಬಂದಿದ್ದಾಗ ಅಧಿಕಾರದಲ್ಲಿದ್ದ ದಲಾಯಿ ಲಾಮಾ ಕಾಲವಾಗಿ, ಹೊಸ ದಲಾಯಿಗಾಗಿ ದೀರ್ಘ ಶೋಧ ನಡೆದಿತ್ತು. ಆಗ ಹುಡುಕಾಟಕ್ಕೆ ಸಿಕ್ಕ ‘ದಲಾಯಿ’ ಮಗುವನ್ನು ಪೊಟಾಲಾ ಅರಮನೆಯಲ್ಲಿ ಪ್ರತಿಷ್ಠಾಪಿಸಲಾಗಿತ್ತು. ದಲಾಯಿ ಲಾಮನ ಹೆಸರಲ್ಲಿ ಟಿಬೆಟಿನ ಮಂತ್ರಿಮಂಡಲ ರಾಜ್ಯಭಾರ ಮಾಡುತ್ತಿತ್ತು. ಚೀನದ ಬಂಧ ವಿಮೋಚನಾ ಪಡೆಗಳು ಟಿಬೆಟಿನ ಗಡಿಯ ಬಳಿಗೆ ಬಂದಾಗ ದಲಾಯಿ ಲಾಮಾಗೆ ಇನ್ನೂ ಹತ್ತು ಹನ್ನೆರಡರ ವಯಸ್ಸು. ಆದರೂ ಆತ ಪರಿಸ್ಥಿತಿಯ ಗಂಭೀರತೆಯನ್ನು ಅರ್ಥ […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top